AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಯಚೂರು: 226 ರೈತರ ಎರಡು ಕೋಟಿ ಬೆಳೆ ವಿಮೆ ಗುಳುಂ! ಕೃತ್ಯದಲ್ಲಿ ಪ್ರಭಾವಿಗಳು ಭಾಗಿ

ರಾಯಚೂರು ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ರೈತರಿಗೆ ಪಾವತಿಸಬೇಕಿದ್ದ ಎರಡು ಕೋಟಿಗೂ ಅಧಿಕ ಬೆಳೆ ವಿಮೆ ಹಣದಲ್ಲಿ ಅಕ್ರಮ ಎಸಗಿರುವ ಆರೋಪ ಕೇಳಿಬಂದಿದೆ. ತಾವೇ ರೈತರಿಂದು ತೋರಿಸಲು ರೈತರ ಒಂದು ತಿಂಗಳ ಕಂತು ಕಟ್ಟಿ ಮಾನ್ವಿ ತಾಲೂಕಿನ ಬೋಗಾವತಿ ಹಾಗೂ ಸುತ್ತಲಿನ ರೈತರಿಗೆ ವಂಚನೆ ಎಸಗಲಾಗಿದ್ದು, ಇದರ ಹಿಂದೆ ಪ್ರಭಾವಿ ವ್ಯಕ್ತಿಗಳು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.

ರಾಯಚೂರು: 226 ರೈತರ ಎರಡು ಕೋಟಿ ಬೆಳೆ ವಿಮೆ ಗುಳುಂ! ಕೃತ್ಯದಲ್ಲಿ ಪ್ರಭಾವಿಗಳು ಭಾಗಿ
ರಾಯಚೂರಿನ 226 ರೈತರ ಎರಡು ಕೋಟಿ ಬೆಳೆ ವಿಮೆ ಗುಳುಂ! ಕೃತ್ಯದಲ್ಲಿ ಪ್ರಭಾವಿಗಳು ಭಾಗಿ
ಭೀಮೇಶ್​​ ಪೂಜಾರ್
| Updated By: Rakesh Nayak Manchi|

Updated on: Feb 15, 2024 | 3:37 PM

Share

ರಾಯಚೂರು, ಫೆ.15: ಜಿಲ್ಲೆಯಲ್ಲಿ (Raichur) 200ಕ್ಕೂ ಹೆಚ್ಚು ರೈತರಿಗೆ ಪಾವತಿಸಬೇಕಿದ್ದ ಎರಡು ಕೋಟಿಗೂ ಅಧಿಕ ಬೆಳೆ ವಿಮೆ (Crop Insurance) ಹಣದಲ್ಲಿ ಅಕ್ರಮ ಎಸಗಿರುವ ಆರೋಪ ಕೇಳಿಬಂದಿದೆ. ತಾವೇ ರೈತರಿಂದು ತೋರಿಸಲು ರೈತರ ಒಂದು ತಿಂಗಳ ಕಂತು ಕಟ್ಟಿ ಮಾನ್ವಿ ತಾಲೂಕಿನ ಬೋಗಾವತಿ ಹಾಗೂ ಸುತ್ತಲಿನ ರೈತರಿಗೆ ವಂಚನೆ ಎಸಗಲಾಗಿದ್ದು, ಇದರ ಹಿಂದೆ ಪ್ರಭಾವಿ ವ್ಯಕ್ತಿಗಳು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.

ತಾವೇ ರೈತರ ಒಂದು ತಿಂಗಳ ಕಂತು ಕಟ್ಟಿ ಮಾನ್ವಿ ತಾಲೂಕಿನ ಬೋಗಾವತಿ ಹಾಗೂ ಸುತ್ತಲಿನ 226 ಜನ ರೈತರ ಸುಮಾರು‌ 2 ಕೋಟಿ ರೂಪಾಯಿಯಷ್ಟು ಬೆಳೆ ವಿಮೆ ಹಣವನ್ನು ವಂಚಿಸಿ ರೈತರಿಗೆ ಹಾಗೂ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಲಾಗಿದೆ. ಪ್ರಕರಣ ಸಂಬಂಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ದೊಡ್ಡಬಸಪ್ಪ, ಅನ್ನಪೂರ್ಣ, ದೀಪಾ ಸೇರಿದಂತೆ ಒಟ್ಟು 22 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಇದನ್ನೂ ಓದಿ: ಯಾದಗಿರಿ: ರೈತರ ಬೆಳೆ ರಕ್ಷಣೆಗೆ ಸಾಥ್ ನೀಡಿವೆ ಬಿಯರ್ ಬಾಟಲ್​​ಗಳು! ಹೇಗೆಂಬುದು ಇಲ್ಲಿದೆ ನೋಡಿ

ರೈತರ ಬೆಳೆನಷ್ಠ ಪರಿಹಾರದ ಫಸಲ್ ಭೀಮಾ ವಿಮೆ ಹಣದಲ್ಲಿ ನಡೆದ ಈ ಗೋಲ್ಮಾಲ್​ ಕೃತ್ಯದಲ್ಲಿ ಪ್ರಭಾವಿಗಳು, ಕೆಲ ಕೃಷಿ ಅಧಿಕಾರಿಗಳು ಭಾಗಿಯಾಗಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳದೇ ಕೃಷಿ ಜಂಟಿ ನಿರ್ದೇಶಕಿ ದೇವಿಕಾ ಬೇಜವಾಬ್ದಾರಿತನ ತೋರಿಸುತ್ತಿದ್ದಾರೆ ಎನ್ನುವ ಆರೋಪವೂ ಕೇಳಿಬಂದಿದೆ/

2022ರ ಜುಲೈ-ಆಗಸ್ಟ್ ತಿಂಗಳ ರೈತರ ಕಂತನ್ನ ಆರೋಪಿಗಳೇ ಕಟ್ಟಿಕಟ್ಟಿದ್ದರು. ಆ ಮೂಲಕ ರೈತರಿಗೆ ತಿಳಿಯದೇ ಎರಡು ಕೋಟಿಯಷ್ಟು ಬೆಳೆ ವೀಮೆ ಹಣವನ್ನು ತಮ್ಮ ಜೇಬಿಗೆ ಹಾಕಿಕೊಂಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್