AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀಕಿ ಲ್ಯಾಪ್​ಟಾಪ್ ಸಿಐಡಿಗೆ ರವಾನೆ ಮಾಡಿದ ಜೀವನ್ ಭೀಮಾ ನಗರ ಪೊಲೀಸರು

ಮಾ ನಗರ ಪೊಲೀಸರು ಶ್ರೀಕಿ ಲ್ಯಾಪ್​ಟಾಪ್​ನ ವಶಪಡಿಸಿಕೊಂಡಿದ್ದರು. ಹೋಟೆಲ್​ವೊಂದರಲ್ಲಿ ಗಲಾಟೆ ವೇಳೆ ವಶಪಡಿಸಿಕೊಳ್ಳಲಾಗಿತ್ತು.

ಶ್ರೀಕಿ ಲ್ಯಾಪ್​ಟಾಪ್ ಸಿಐಡಿಗೆ ರವಾನೆ ಮಾಡಿದ ಜೀವನ್ ಭೀಮಾ ನಗರ ಪೊಲೀಸರು
ಶ್ರೀಕೃಷ್ಣ ಅಲಿಯಾಸ್​ ಶ್ರೀಕಿ
TV9 Web
| Edited By: sandhya thejappa|

Updated on: Nov 17, 2021 | 11:55 AM

Share

ಬೆಂಗಳೂರು: ಇಂಟರ್​ನ್ಯಾಶನಲ್​ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಲ್ಯಾಪ್​ಟಾಪ್​ನ ಸಿಐಡಿಗೆ ರವಾನೆ ಮಾಡಲಾಗಿದೆ. ಲ್ಯಾಪ್​ಟಾಪ್​ ಮಿರರ್ ಇಮೇಜ್ ಮಾಡಿ ತನಿಖೆಗೆ ರವಾನಿಸಲಾಗಿದೆ. ಭೀಮಾ ನಗರ ಪೊಲೀಸರು ಶ್ರೀಕಿ ಲ್ಯಾಪ್​ಟಾಪ್​ನ ವಶಪಡಿಸಿಕೊಂಡಿದ್ದರು. ಹೋಟೆಲ್​ವೊಂದರಲ್ಲಿ ಗಲಾಟೆ ವೇಳೆ ವಶಪಡಿಸಿಕೊಳ್ಳಲಾಗಿತ್ತು. ಸಿಐಡಿ ಸೈಬರ್ ತಜ್ಞರು ಲ್ಯಾಪ್​ಟಾಪ್​ ಪರಿಶೀಲನೆ ಮಾಡಲಿದ್ದಾರೆ. ಪ್ರತಿ ಪೇಜ್ ಇಮೇಜ್ ತೆಗೆದು ಪೊಲೀಸರು ತನಿಖೆ ನಡೆಸಲಿದ್ದಾರೆ. ಪರಿಶೀಲನೆ ಬಳಿಕ ಹ್ಯಾಕ್​ಗೆ ಸಂಬಂಧಿಸಿದ ಇನ್ನಷ್ಟು ಮಾಹಿತಿ ಹೊರ ಬೀಳುವ ಸಾಧ್ಯತೆಯಿದೆ.

ಶ್ರೀ ಕೃಷ್ಣ ಜೈಲಿನಲ್ಲಿದ್ದಾಗ ಭಗವದ್ಗೀತೆ ಓದುತ್ತಿದ್ದ ಜೀವನ್ ಭೀಮಾ ನಗರ ಕೇಸ್​ನಲ್ಲಿ ಶ್ರೀಕಿಯನ್ನ ಬಂಧವಾಗಿದ್ದ. ಕೇವಲ ಎರಡು ದಿನ ಜೈಲುವಾಸ ಅನುಭವಿಸಿದ್ದ. ಶ್ರೀಕಿ ಜೈಲಿನಲ್ಲಿ ಇದ್ದಾಗ ಮೂರು ಇಂಗ್ಲಿಷ್ ಭಾಷೆಯ ಆಧ್ಯಾತ್ಮಿಕ ಪುಸ್ತಕಗಳನ್ನ ಪಡೆದಿದ್ದ. ಅದರಲ್ಲಿ ಶ್ರೀ ಕೃಷ್ಣನ ವೇದೋಪದೇಶದ ಒಂದು ಪುಸ್ತಕ ಪಡೆದು ಓದುತ್ತಿದ್ದ. ಸಿಬ್ಬಂದಿ ಮಾತನಾಡಿಸಿದರೂ ಪುಸ್ತಕ ಓದಿನಲ್ಲೇ ಮಗ್ನನಾಗಿ ಇರುತ್ತಿದ್ದ ಶ್ರೀಕಿ, ಪ್ರತೀ ಗಂಟೆಗೆ ಭಗವದ್ಗೀತೆ ಪಠನ ಮಾಡಿಕೊಂಡು ಧ್ಯಾನ ಮಾಡುತ್ತಿದ್ದ.

ಶ್ರೀಕಿ, ರಾಬಿನ್​ಗೆ ವಿದೇಶಿ ಹ್ಯಾಕರ್​ಗಳ ಜೊತೆ ನಂಟಿನ ಶಂಕೆ ಶ್ರೀಕಿ ಮತ್ತು ರಾಬಿನ್​ಗೆ ಇಸ್ರೇಲ್​ನ ಇಬ್ಬರು ಸಹೋದರರ ಜೊತೆ ನಂಟಿರುವ ಅನುಮಾನ ವ್ಯಕ್ತವಾಗಿದೆ. ಎಲಿ ಮತ್ತು ಅಸಾಫ್ ಎಂಬುವವರು 2016ರಲ್ಲಿ ದೊಡ್ಡ ಮೊತ್ತದ ಬಿಟ್ ಕಾಯಿನ್ನ ಕಳವು ಮಾಡಿದ್ದರು. ಇಬ್ಬರು ಸುಮಾರು 1 ಲಕ್ಷ 20 ಸಾವಿರ ಬಿಟ್ ಕಾಯಿನ್ ಕದ್ದಿದ್ದರು. ಕದ್ದ ಬಿಟ್ ಕಾಯಿನ್ ಮೌಲ್ಯ 56 ಸಾವಿರ ಕೋಟಿ ರೂಪಾಯಿ. ಈ ಹ್ಯಾಕರ್ಸ್ ಬ್ರದರ್ಸ್ ಕ್ರಿಪ್ಟೋ ಕರೆನ್ಸಿ ಫೋರಮ್, ರೆಡ್ಡಿಟ್, ಟೆಲಿಗ್ರಾಂ ಲಿಂಕ್​ಗಳನ್ನು ಪೋಸ್ಟ್ ಮಾಡುತ್ತಿದ್ದರು. ಇಂತವರ ಜೊತೆ ಶ್ರೀಕಿ, ರಾಬಿನ್ ನಂಟಿದೆ ಎಂಬ ಶಂಕೆ ಮೂಡಿದೆ.

ಪೊಲೀಸರಿಗೆ ಶ್ರೀಕಿ ಹೇಳಿದ್ದೇನು? ಕರ್ನಾಟಕದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಬಿಟ್ಕಾಯಿನ್ ಹಗರಣದ ಆರೋಪಿ ಆಗಿರುವ 26 ವರ್ಷದ ಆರೋಪಿ ಶ್ರೀಕೃಷ್ಣ ರಮೇಶ್ ಅಲಿಯಾಸ್ ಶ್ರೀಕಿ ಪೊಲೀಸರಿಗೆ ನೀಡಿರುವ ಮಾಹಿತಿಯಂತೆ, ನೆದರ್ಲೆಂಡ್ಸ್ನ ಬಿಟ್ಫಿನೆಕ್ಸ್ ವಿನಿಮಯ ಕೇಂದ್ರವನ್ನು ಎರಡು ಸಲ ಹ್ಯಾಕ್ ಮಾಡಿದ್ದಾನೆ. ಬಿಟ್ಫಿನೆಕ್ಸ್ ನಾನು ಹ್ಯಾಕ್ ಮಾಡಿದ ದೊಡ್ಡ ಬಿಟ್ಕಾಯಿನ್ ವಿನಿಮಯ ಕೇಂದ್ರ. ಆ ಎಕ್ಸ್ಚೇಂಜ್ ಎರಡು ಸಲ ಹ್ಯಾಕ್ ಮಾಡಿದೆ. ಮತ್ತು ಹಾಗೆ ಮಾಡಿದ ಮೊದಲ ವ್ಯಕ್ತಿ ನಾನು. ಎರಡನೇ ಘಟನೆ ಸರಳವಾದ ಫೀಷಿಂಗ್ ದಾಳಿ. ಅದರ ಮೂಲಕ ಸೇನೆಗಾಗಿ ಕೆಲಸ ಮಾಡುವ ಇಬ್ಬರು ಇಸ್ರೇಲಿ ಹ್ಯಾಕರ್ಗಳಿಗೆ. ಉದ್ಯೋಗಿಯೊಬ್ಬರ ಕಂಪ್ಯೂಟರ್​ಗೆ ಸಂಪರ್ಕ ಸಿಗುವಂತಾಯಿತು. ಅದರಿಂದ ಎಡಬ್ಲ್ಯುಎಸ್ ಕ್ಲೌಡ್ ಅಕೌಂಟ್​ಗೆ ಸಂಪರ್ಕ ಸಿಕ್ಕಿತು ಎಂದು ಶ್ರೀಕಿ ತನ್ನ ಹೇಳಿಕೆಯಲ್ಲಿ ಪೊಲೀಸರಿಗೆ ತಿಳಿಸಿದ್ದಾನೆ.

ಇದನ್ನೂ ಓದಿ

ಶಿವಮೊಗ್ಗದಲ್ಲಿ ಪೌರ ಕಾರ್ಮಿಕರ ಮೇಲೆ ಹಲ್ಲೆ ಪ್ರಕರಣ; ಎಸ್​ಪಿ ಕಾಲ್ ಮಾಡಿ ಪೊಲೀಸರು ದನ ಕಾಯುತ್ತಿದ್ರಾ ಎಂದು ಗರಂ ಆದ ಈಶ್ವರಪ್ಪ

ಬೊಂಬೆ ಹೇಳುತೈತೆ ಹಾಡಿನ ಮುಖಾಂತರ ಪುನೀತ್​ಗೆ ನಮನ ಸಲ್ಲಿಸಿದ 50ಕ್ಕೂ ಹೆಚ್ಚು ಪುಟಾಣಿಗಳು; ವಿಡಿಯೋ ನೋಡಿ

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್