AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಬುರಗಿ: ಕಂಠಪೂರ್ತಿ ಕುಡಿದು ರಾತ್ರಿ ಮನೆಗೆ ಹೊರಟವನು ಬೀದಿಯಲ್ಲಿ ಶವವಾಗಿ ಬಿದ್ದಿದ್ದ, ಕೊಲೆ ಎಂದು ಆರೋಪಿಸಿದ ತಾಯಿ

ಆ ವ್ಯಕ್ತಿ ಕಟಿಂಗ್ ಶಾಪ್ ಹೊಂದಿದ್ದ. ಉತ್ತಮ ದುಡಿಮೆ ಇತ್ತು. ಪತ್ನಿ, ಮಕ್ಕಳು ಕೂಡ ಇದ್ದರು. ಆದರೆ ಆತನಿಗೆ ಕುಡಿಯೋ ಚಟ ಕಾಡುತ್ತಿತ್ತು. ಹೀಗಾಗಿ ದಿನವೂ ಕಂಠಪೂರ್ತಿ ಕುಡಿಯದೇ ಮನೆಗೆ ಹೋಗುತ್ತಿರಲಿಲ್ಲ. ಹೀಗೆ ಪ್ರತಿನಿತ್ಯ ಕುಡಿಯೋದನ್ನೇ ತನ್ನ ಕೆಲಸವಾಗಿ ಮಾಡಿಕೊಂಡಿದ್ದ ವ್ಯಕ್ತಿ ಇದೀಗ ಶವವಾಗಿ ಪತ್ತೆಯಾಗಿದ್ದಾನೆ.

ಕಲಬುರಗಿ: ಕಂಠಪೂರ್ತಿ ಕುಡಿದು ರಾತ್ರಿ ಮನೆಗೆ ಹೊರಟವನು ಬೀದಿಯಲ್ಲಿ ಶವವಾಗಿ ಬಿದ್ದಿದ್ದ, ಕೊಲೆ ಎಂದು ಆರೋಪಿಸಿದ ತಾಯಿ
ಎಸ್.​ಪಿ, ಮೃತ ಚನ್ನಬಸಪ್ಪನ
ಕಿರಣ್ ಹನುಮಂತ್​ ಮಾದಾರ್
|

Updated on:Mar 13, 2023 | 9:16 AM

Share

ಕಲಬುರಗಿ: ಮಾರ್ಚ್ 3 ರಂದು ಮುಂಜಾನೆ ನಗರದ ಡಬಾರಾಬಾದ್​ನಲ್ಲಿ ಶಿವಲಿಂಗಪ್ಪ ಎನ್ನುವವರ ಮನೆ ಮುಂದೆ ವ್ಯಕ್ತಿಯೋರ್ವನ ಶವ ಪತ್ತೆಯಾಗಿತ್ತು. ವ್ಯಕ್ತಿಯ ಮೈಮೇಲೆ ಸಣ್ಣಪುಟ್ಟ ಗಾಯಗಳಾಗಿದ್ದು ಬಿಟ್ಟರೆ, ಮಾರಣಾಂತಿಕ ಗಾಯಗಳು ಇರಲಿಲ್ಲ. ಆದರೆ ಮನೆ ಮುಂದಿನ ಜಾಗದಲ್ಲಿ ವ್ಯಕ್ತಿ ಪ್ರಾಣ ಬಿಟ್ಟಿದ್ದ. ಈ ಬಗ್ಗೆ ಸ್ಥಳೀಯರು ಕಲಬುರಗಿ ಗ್ರಾಮೀಣ ಠಾಣೆಯ ಪೊಲೀಸರಿಗೆ ಮಾಹಿತಿ ಮುಟ್ಟಿಸಿದರು. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದರು. ಆಗ ಮೃತ ವ್ಯಕ್ತಿ ಯಾರು, ಇದು ಕೊಲೆಯಾ ಅಥವಾ ಸಹಜ ಸಾವಾ ಅನ್ನೋ ಅನುಮಾನಗಳು ಕೂಡಾ ಮೂಡಿದ್ದವು. ಹೀಗಾಗಿ ಮೊದಲು ಮೃತ ವ್ಯಕ್ತಿಯ ಗುರುತು ಪತ್ತೆ ಮಾಡುವ ಕೆಲಸವನ್ನು ಪೊಲೀಸರು ಆರಂಭಿಸಿದ್ದರು. ಆಗ ಪೊಲೀಸರಿಗೆ ಗೊತ್ತಾಗಿದ್ದು ಮೃತ ವ್ಯಕ್ತಿ ಮೂವತ್ತೊಂದು ವರ್ಷದ ಚನ್ನಬಸಪ್ಪ ಎಂದು. ಹೌದು ನಗರದ ಬಿದ್ದಾಪುರ ಕಾಲೋನಿ ನಿವಾಸಿಯಾಗಿದ್ದ ಚನ್ನಬಸಪ್ಪ ಶವವಾಗಿ ಪತ್ತೆಯಾಗಿದ್ದ.

ಚನ್ನಬಸಪ್ಪ ಕಳೆದ ಕೆಲ ವರ್ಷಗಳಿಂದ ಪತ್ನಿ ಮನೆಯಲ್ಲಿಯೇ ಇದ್ದ. ಕಟಿಂಗ್ ಮಾಡುವ ಕೆಲಸ ಮಾಡುತ್ತಿದ್ದ ಇತ ಈ ಮೊದಲು ಬೇರೆಯವರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನಂತೆ. ಕಳೆದ ಕೆಲ ತಿಂಗಳ ಹಿಂದಷ್ಟೇ ಉಪಜೀವನಕ್ಕಾಗಿ ಡಬರಬಾದ್ ಪ್ರದೇಶದಲ್ಲಿ ಸ್ವಂತ ಕಟಿಂಗ್ ಶಾಪ್ ಹಾಕಿಕೊಂಡಿದ್ದ. ಆದರೆ ಅಂಗಡಿಯಲ್ಲಿ ಸರಿಯಾಗಿ ಕೆಲಸ ಮಾಡದೇ ನಿತ್ಯವೂ ಕಂಠಪೂರ್ತಿ ಕುಡಿದು ಮನೆಗೆ ಹೋಗುತ್ತಿದ್ದನಂತೆ. ಪ್ರತಿ ದಿನ ಕುಡಿಯುವ ಮೂಲಕ ಚನ್ನಬಸಪ್ಪ ದುಶ್ಚಟದ ದಾಸನಾಗಿದ್ದ. ನಿನ್ನೆ ರಾತ್ರಿ ಎಂದಿನಂತೆ ಕುಡಿದು ಮನೆಗೆ ಹೋಗಿದ್ದ ಆದರೆ ಮುಂಜಾನೆ ಅನ್ನುವಷ್ಟರಲ್ಲಿ ಡಬರಬಾದ್ ಜನವಸತಿ ಪ್ರದೇಶದ ಮನೆಯೊಂದರ ಮುಂಬಾಗದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಇದನ್ನೂ ಓದಿ:ಶಿವಮೊಗ್ಗ: ಸ್ನೇಹಿತರ ಜೊತೆ ಪಾರ್ಟಿಗೆ ಹೋಗಿದ್ದ ಯುವಕ ಅನುಮಾನಸ್ಪದ ರೀತಿಯಲ್ಲಿ ಸಾವು

ಮುಂಜಾನೆ ವಿಷಯ ತಿಳಿದು ಸ್ಥಳಕ್ಕೆ ಚನ್ನಬಸಪ್ಪ ತಾಯಿ ಬಂದು ನೋಡಿದಾಗ ತೊಡೆಯ ಬಾಗದಲ್ಲಿ ಕಬ್ಬಿಣದ ರಾಡ್​ನಿಂದ ಹೊಡೆದಿರುವ ಗಾಯಗಳು ಪತ್ತೆಯಾಗಿವೆ. ಈ ಕಾರಣಕ್ಕೆ ತನ್ನ ಮಗನದ್ದು ಸಹಜ ಸಾವಲ್ಲ. ಕೊಲೆಯಾಗಿದೆ ಎಂದು ಆರೋಪಿಸುತ್ತಿದ್ದಾಳೆ. ಆತನ ತಾಯಿ ಹೇಳೋ ಪ್ರಕಾರ ಮಗನಿಗೆ ಕುಡಿಯೋ ಚಟವಿತ್ತು‌. ಕುಡಿದು ಹಣವನ್ನೆಲ್ಲಾ ಹಾಳು ಮಾಡ್ತಿದಿಯಾ ಎಂದು ಚನ್ನಬಸಪ್ಪನ ಪತ್ನಿಯ ಸಹೋದರ ಅನೀಲ್ ಮತ್ತು ಈ ಹಿಂದೆ ಚನ್ನಬಸಪ್ಪ ಕೆಲಸ ಮಾಡುತ್ತಿದ್ದ ಅಂಗಡಿ ಮಾಲೀಕನಾಗಿದ್ದ ಸುಭಾಷ್ ಅಂಗಡಿಗೆ ಬೀಗ ಹಾಕಿ ಚನ್ನಬಸಪ್ಪನನ್ನು ಹೊರಹಾಕಿದ್ದರಂತೆ. ಇದೀಗ ಅವರೇ ಇಬ್ಬರು ಸೇರಿಕೊಂಡು ಮಗನನ್ನ ಕೊಲೆ ಮಾಡಿದ್ದಾರೆಂದು ತಾಯಿ ಶಿವಮ್ಮ ಆರೋಪಿಸುತ್ತಿದ್ದಾಳೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಸಬ್ ಅರ್ಬನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತನಿಖೆ ಬಳಿಕವೇ ಸತ್ಯಾಂಶ ಹೊರಬರಬೇಕಿದೆ.

ಸದ್ಯ ಚನ್ನಬಸಪ್ಪನ ಸಾವಿನ ಬಗ್ಗೆ ಅನೇಕ ಅನುಮಾನಗಳು ಇರೋದರಿಂದ ಪೊಲೀಸರು ಮರಣೋತ್ತರ ವರದಿಗಾಗಿ ಕಾಯುತಿದ್ದಾರೆ. ಮರಣೋತ್ತರ ವರದಿಯಲ್ಲಿ ಹಲ್ಲೆಯಿಂದಲೇ ಸಾವು ಆಗಿದೆ ಅನ್ನೋದು ಸಾಭಿತಾದ್ರೆ, ಆರೋಪಿಗಳನ್ನು ಬಂಧಿಸೋದಾಗಿ ಹೇಳುತ್ತಿದ್ದಾರೆ. ಆದರೆ ದುಡಿಯಲಿಕ್ಕೆ ಕೆಲಸವಿದ್ರು ಕೂಡ ಅದನ್ನು ಸರಿಯಾಗಿ ಮಾಡೋದು ಬಿಟ್ಟು, ಕುಡಿಯೋದೆ ವೃತ್ತಿಯನ್ನಾಗಿ ಮಾಡಿಕೊಂಡು ವ್ಯಕ್ತಿ ಇದೀಗ ಕೊಲೆಯಾಗಿದ್ದು ದುರಂತವೇ ಸರಿ.

ವರದಿ: ಸಂಜಯ್ ಟಿವಿ9 ಕಲಬುರಗಿ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:15 am, Mon, 13 March 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ