Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ: ಅನೈತಿಕ ಸಂಬಂಧ; ಪ್ರಿಯಕರನ ಜೊತೆಗೂಡಿ ಗಂಡನ ಕೊಲೆ

ತಡರಾತ್ರಿಯಾದರೂ ಅವಳ ಪೋನ್ ಸದ್ದು ಮಾಡುತ್ತಿತ್ತು. ನೋಡಿದ್ರೆ ಮತ್ತೊಬ್ಬನ ಜೊತೆಗೆ ಕನೆಕ್ಟ್ ಆಗಿದ್ದಳು. ಈ ವಿಚಾರ ತಿಳಿದು ಒಂದು ದಿನ ರಾತ್ರಿ ಅವಳ ಬಟ್ಟೆಯನ್ನೆಲ್ಲಾ ಸುಟ್ಟು ಹಾಕಿದ್ದ ಪತಿ. ಜೊತೆಗೆ ತಾನು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಆಗ ಬಚಾವ್ ಆದ ಪತಿ ಮುಂದೆ ಪತ್ನಿಯ ಮಾಸ್ಟರ್ ಪ್ಲಾನ್​ಗೆ ಸಿಕ್ಕು ಕೊಲೆಯಾದ. ಇಲ್ಲಿದೆ ನೋಡಿ ಕಿಲಾಡಿ ಪತ್ನಿ ಸ್ಟೋರಿ.

ದಾವಣಗೆರೆ: ಅನೈತಿಕ ಸಂಬಂಧ; ಪ್ರಿಯಕರನ ಜೊತೆಗೂಡಿ ಗಂಡನ ಕೊಲೆ
ಅನೈತಿಕ ಸಂಬಂಧ ಪ್ರಿಯಕರನ ಜೊತೆಗೂಡಿ ಗಂಡನ ಕೊಲೆ
Follow us
ಕಿರಣ್ ಹನುಮಂತ್​ ಮಾದಾರ್
|

Updated on: Mar 12, 2023 | 10:27 PM

ದಾವಣಗೆರೆ: ಹೀಗೆ ಕಣ್ಣೀರು ಹಾಕುತ್ತಿರುವ ತಾಯಿ. ಹತ್ತಾರು ದೇವರಿಗೆ ಹರಕೆ ಹೊತ್ತ ಮಗನನ್ನ ಕಳೆದುಕೊಂಡು ಮರುಗುತ್ತಿದ್ದಾಳೆ. ಮೇಲಾಗಿ ಒಮ್ಮೆ ರಸ್ತೆ ಅಪಘಾತ ಇನ್ನೊಮ್ಮೆ ಆತ್ಮಹತ್ಯೆಗೆ ಯತ್ನ. ಎರಡು ಪ್ರಕರಣದಲ್ಲಿ ಸಾವಿನ ಹತ್ತಿರಕ್ಕೆ ಹೋಗಿ ಬಂದಿದ್ದ ಮಗ ಮೂರನೇ ಬಾರಿ ಪ್ರಾಣ ಬಿಟ್ಟಿದ್ದ. ಕೋಳಿ ತೋರಿಸುವುದಾಗಿ ಕರೆದುಕೊಂಡು ಹೋದ ಸ್ನೇಹಿತರು ಇತನನ್ನೆ ಕೋಳಿ ರೀತಿ ಕಟ್ ಮಾಡಿ ಬಿಟ್ಟಿದ್ದರು. ಹೌದು ಕಳೆದ ಫೆಬ್ರುವರಿ 28 ರಂದು ದಾವಣಗೆರೆ ನಗರದ ಕಬ್ಬೂರು ಬಸಪ್ಪ ನಗರದಲ್ಲಿ ಪ್ರಶಾಂತ ಎಂಬ ವ್ಯಕ್ತಿಯನ್ನ ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಬಗ್ಗೆ ಸತತ ತನಿಖೆ ನಡೆಸಿದ ಇಲ್ಲಿನ ಆರ್​ಎಂಸಿ ಠಾಣೆ ಪೊಲೀಸರು ಕೊಲೆ ರಹಸ್ಯ ಭೇದಿಸಿದ್ದಾರೆ. ಕೊಲೆಯ ರೂವಾರಿ ಬೇರೆ ಯಾರು ಅಲ್ಲ ಸ್ವತಃ ಅಗ್ನಿ ಸಾಕ್ಷಿಯಾಗಿ ಮದುವೆಯಾದ ಪತ್ನಿ ಎಂಬ ಸತ್ಯ ಕೊಲೆಯಾದ ಒಂಬತ್ತು ದಿನಗಳ ಬಳಿಕ ಗೊತ್ತಾಗಿದೆ.

ಪತ್ನಿ ರೇಣುಕಾ ಇನ್ನೊಬ್ಬನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಇದು ಪತಿಗೆ ಗೊತ್ತಾಗಿತ್ತು. ಈ ವಿಷಯಕ್ಕೆ ಮನೆಯಲ್ಲಿ ಜಗಳ ನಡೆದು ಒಂದು ದಿನ ಪತ್ನಿಯ ಬಟ್ಟೆಗಳಿಗೆ ಬೆಂಕಿ ಇಟ್ಟು ತಾನು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಸ್ಥಳೀಯರು ಸಕಾಲಕ್ಕೆ ಆಸ್ಪತ್ರೆಗೆ ಸೇರಿಸಿದ್ದರಿಂದ ಬಚಾವ್ ಆಗಿದ್ದ. ಹೀಗೆ ಬಜಾವ್ ಆದ ಪ್ರಶಾಂತ್​ ಫೆಬ್ರುವರಿ 28 ರಂದು ಆತನ ಸ್ನೇಹಿತ ರಾಕೇಶ್ ಎಂಬಾತ ಬಂದು ಒಂದು ಕಡೆ ಕೋಳಿ ಚೆನ್ನಾಗಿವೆ ಎಂದು ಹೇಳಿ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದ.

ಇದನ್ನೂ ಓದಿ:15 ಕೋಟಿ ಆಸೆಗೆ ನಟ ಸತೀಶ್ ಕೌಶಿಕ್ ಕೊಲೆ, ಉದ್ಯಮಿ ಪತ್ನಿ ಆರೋಪ, ದೆಹಲಿ ಪೊಲೀಸರಿಂದ ತನಿಖೆ

ಮನೆಯಲ್ಲಿನ ಪ್ರಶಾಂತ್​ ತಾಯಿಗೂ ಸಂಶಯ ಬಂದಿತ್ತು. ರಾತ್ರಿ ಒಂದು ಎರಡು ಗಂಟೆಗೆ ಮೊಬೈಲ್ ಸದ್ದು ಮಾಡುತ್ತಿತ್ತು. ಆದ್ರೆ ಎನು ಹೇಳಿರಲಿಲ್ಲ. ಈ ವಿಚಾರ ಪತಿ ಪ್ರಶಾಂತ್​ಗೆ ಗೊತ್ತಿತ್ತು. ಹೀಗೆ ಹಲವಾರು ಸಲ ಅವಳಿಗೆ ಬುದ್ದಿ ಮಾತು ಹೇಳಿದ್ದ. ಮೇಲಾಗಿ ಪ್ರಶಾಂತ್​ ತಾಯಿ ಸಂಬಂಧದಲ್ಲಿ ಬರುವ ಪತ್ನಿ ರೇಣುಕಾ ದಾವಣಗೆರೆ ತಾಲೂಕಿನ ಹದಡಿ ನಿವಾಸಿ. ಜೊತೆಗೆ ಮೂರು ವರ್ಷದ ಗಂಡು ಮಗ ಕೂಡ ಇದ್ದಾನೆ. ಮದುವೆಯಾಗಿ ನಾಲ್ಕು ವರ್ಷವಾಗಿದೆ. ಪ್ರಶಾಂತ್​ನದ್ದು ಟೈಲ್ಸ್ ಕೆಲ್ಸ. ಕೈ ತುಂಬ ದುಡ್ಡು, ಆದ್ರೆ ಮನೆಯಲ್ಲಿ ನೆಮ್ಮದಿಯಿಲ್ಲ. ಪತ್ನಿ ಪರ ಪರುಷನ ಸಂಘ ಮಾಡಿದ್ದಳು. ವಿಚಿತ್ರ ಎಂದರೆ ಕೊಲೆಯಾದ ದಿನ ತನಗೆ ಎನು ಗೊತ್ತಿಲ್ಲ ಎಂದು ನಾಟಕವಾಡಿದ್ದಳು. ಇದೀಗ ಇದನ್ನ ಪತ್ತೆ ಹಚ್ಚಿದ ಪೊಲೀಸರು ಪ್ರಶಾಂತ್​ ಪತ್ನಿ ರೇಣುಕಾ ಹಾಗೂ ಅವಳ ಪ್ರೀಯಕರ ರಾಕೇಶ್​ನನ್ನ ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.

ಮನೆಯಲ್ಲಿ ಮಗು ಅತ್ತೆ ಮಾವ ಬಾವ ನಾದನಿ ಹೀಗೆ ತುಂಬು ಸಂಸಾರ. ಇದು ಬೇಡ ಎಂದು ಕೆಲ ದಿನ ಪ್ರತ್ಯೇಕ ಮನೆ ಕೂಡ ಮಾಡಿದ್ದಳು ಆರೋಪಿ ರೇಣುಕಾ. ಇಂತಹವಳನ್ನ ನಂಬಿ, ಮತ್ತೆ ತನ್ನ ಮನೆ ಸೇರಿದ್ದ ಪತಿ ಪ್ರಶಾಂತ್​. ಆದ್ರೆ ಅವಳು ತನ್ನ ಪ್ರಿಯಕರನ ಜೊತೆ ಸೇರಿ ತನ್ನನ್ನೆ ಮುಗಿಸುತ್ತಾಳೆ ಎಂದು ಪ್ರಶಾಂತ್​ ಅಂದು ಕೊಂಡಿರಲಿಲ್ಲ. ಪುತ್ರನನ್ನ ಕಳೆದುಕೊಂಡ ತಾಯಿ ಕಣ್ಣೀರು ಹಾಕುತ್ತಿದ್ದಾಳೆ. ಜೊತೆಗೆ ಮೂರು ವರ್ಷದ ಮೊಮ್ಮಗೂ ಅನಾಥವಾಗಿದೆ. ಪತಿ ಸ್ಮಶಾನಕ್ಕೆ ಹೋದರೆ ಪತ್ನಿ ಕೃಷ್ಣ ಜನ್ಮ ಸ್ಥಳಕ್ಕೆ ಹೋಗಿದ್ದು ವಿಧಿಯಾಟ.

ವರದಿ: ಬಸವರಾಜ್ ದೊಡ್ಮನಿ ಟಿವಿ9 ದಾವಣಗೆರೆ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಧನ್ವೀರ್ ಜೊತೆ ಸಿನಿಮಾ ಮಾಡ್ತಾರೆ ದರ್ಶನ್; ಸೂಚನೆ ಕೊಟ್ಟ ದಾಸ
ಧನ್ವೀರ್ ಜೊತೆ ಸಿನಿಮಾ ಮಾಡ್ತಾರೆ ದರ್ಶನ್; ಸೂಚನೆ ಕೊಟ್ಟ ದಾಸ
ಬಸನಗೌಡ ಯತ್ನಾಳ್ ಬಗ್ಗೆ ಮಾತಾಡಲು ಇಚ್ಛಿಸದ ವಿಜಯೇಂದ್ರ
ಬಸನಗೌಡ ಯತ್ನಾಳ್ ಬಗ್ಗೆ ಮಾತಾಡಲು ಇಚ್ಛಿಸದ ವಿಜಯೇಂದ್ರ
ತುಮಕೂರು ಜಿಲ್ಲೆ ನೀರಿನ ಯೋಜನೆಗಳ ಬಗ್ಗೆ ಶ್ರೀಗಳಿಗೆ ವಿವರಿಸಿದ ಪರಮೇಶ್ವರ್
ತುಮಕೂರು ಜಿಲ್ಲೆ ನೀರಿನ ಯೋಜನೆಗಳ ಬಗ್ಗೆ ಶ್ರೀಗಳಿಗೆ ವಿವರಿಸಿದ ಪರಮೇಶ್ವರ್
ಕಾಂಗ್ರೆಸ್ ಅಧಿಕಾರದಲ್ಲಿ 50 ವಸ್ತುಗಳ ಬೆಲೆ ಜಾಸ್ತಿಯಾಗಿದೆ: ಹಿರಿಯ ನಾಗರಿಕ
ಕಾಂಗ್ರೆಸ್ ಅಧಿಕಾರದಲ್ಲಿ 50 ವಸ್ತುಗಳ ಬೆಲೆ ಜಾಸ್ತಿಯಾಗಿದೆ: ಹಿರಿಯ ನಾಗರಿಕ
ತುಮಕೂರು ರೈಲ್ವೆ ನಿಲ್ದಾಣಕ್ಕೆ ಶ್ರೀಗಳ ಹೆಸರು: ಪರಮೇಶ್ವರ್ ಹೇಳಿದ್ದಿಷ್ಟು
ತುಮಕೂರು ರೈಲ್ವೆ ನಿಲ್ದಾಣಕ್ಕೆ ಶ್ರೀಗಳ ಹೆಸರು: ಪರಮೇಶ್ವರ್ ಹೇಳಿದ್ದಿಷ್ಟು
ಧನ್ವೀರ್ ಮದುವೆಗೆ ಯಾವ ಬಟ್ಟೆ ಧರಿಸಬೇಕು? ಪ್ಲ್ಯಾನ್ ರಿವೀಲ್ ಮಾಡಿದ ದಾಸ
ಧನ್ವೀರ್ ಮದುವೆಗೆ ಯಾವ ಬಟ್ಟೆ ಧರಿಸಬೇಕು? ಪ್ಲ್ಯಾನ್ ರಿವೀಲ್ ಮಾಡಿದ ದಾಸ
VIDEO: ರಶೀದ್ ಖಾನ್ ವಿಚಿತ್ರ ಶಾಟ್, ಯಶಸ್ವಿ ಜೈಸ್ವಾಲ್ ಅದ್ಭುತ ಕ್ಯಾಚ್
VIDEO: ರಶೀದ್ ಖಾನ್ ವಿಚಿತ್ರ ಶಾಟ್, ಯಶಸ್ವಿ ಜೈಸ್ವಾಲ್ ಅದ್ಭುತ ಕ್ಯಾಚ್
ಅತಿಥಿಗಳಿಗೆ ನೀಡುವ ಆಹಾರದ ಪುಣ್ಯ ಹೇಗೆ ಸಿಗುತ್ತೆ ಗೊತ್ತಾ?
ಅತಿಥಿಗಳಿಗೆ ನೀಡುವ ಆಹಾರದ ಪುಣ್ಯ ಹೇಗೆ ಸಿಗುತ್ತೆ ಗೊತ್ತಾ?
Daily Horoscope: ಈ ರಾಶಿಯವರಿಗೆ ವಿವಾಹ ಯೋಗ ಕೂಡಿಬರಲಿದೆ
Daily Horoscope: ಈ ರಾಶಿಯವರಿಗೆ ವಿವಾಹ ಯೋಗ ಕೂಡಿಬರಲಿದೆ
ಬೆನ್ನು ನೋವಿದ್ದರೂ ಕುಂಟುತ್ತಾ ಬಂದು ‘ವಾಮನ’ ಸಿನಿಮಾ ನೋಡಿದ ದರ್ಶನ್
ಬೆನ್ನು ನೋವಿದ್ದರೂ ಕುಂಟುತ್ತಾ ಬಂದು ‘ವಾಮನ’ ಸಿನಿಮಾ ನೋಡಿದ ದರ್ಶನ್