AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ಬ್ಲ್ಯಾಕ್​ನಲ್ಲಿ ಆರ್​ಸಿಬಿ ಪಂದ್ಯ ಟಿಕೆಟ್​ ಮಾರಾಟ ಆರೋಪ

ಕೆಲ ದುಷ್ಕರ್ಮಿಗಳು ಆನ್​ಲೈನ್​ಲ್ಲಿ ಆರ್​​ಸಿಬಿ ಪಂದ್ಯದ ಟಿಕೆಟ್​ ಖರೀದಿಸಿ, ಬಳಿಕ ಬ್ಲ್ಯಾಕ್​​ನಲ್ಲಿ ನಿಗದಿತ ದರಕ್ಕಿಂತಲೂ ಹೆಚ್ಚಿನ ಬಲೆಯಲ್ಲಿ ಟಿಕೆಟ್​ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಜೋಕ್ಸ್​ ಎಂಬುವರು ಟ್ವೀಟ್​ ಮಾಡಿ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

IPL 2024: ಬ್ಲ್ಯಾಕ್​ನಲ್ಲಿ ಆರ್​ಸಿಬಿ ಪಂದ್ಯ ಟಿಕೆಟ್​ ಮಾರಾಟ ಆರೋಪ
ಜೋಕ್ಸ್​​ ಟ್ವೀಟ್​ (ಎಡಚಿತ್ರ) ಆರ್​​ಸಿಬಿ ಪಂದ್ಯ (ಬಲಚಿತ್ರ)
Shivaprasad B
| Edited By: |

Updated on:Apr 12, 2024 | 11:37 AM

Share

ಬೆಂಗಳೂರು, ಏಪ್ರಿಲ್​ 12: ದೇಶದಲ್ಲಿ 17ನೇ ಆವೃತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​ (IPL) ಆರಂಭವಾಗಿದೆ. ಪ್ರತಿ ಪಂದ್ಯಗಳು ರಣ ರೋಚಕತೆಯಿಂದ ಕೂಡಿರುತ್ತವೆ. ಐಪಿಎಲ್​ ಅಂದ್ರೆ ಕ್ರಿಕೆಟ್​ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ಎಲ್ಲಡೆ ಐಪಿಎಲ್​ನದ್ದೆ ಚರ್ಚೆಯಾಗುತ್ತಿರುತ್ತದೆ. ಅದರಲ್ಲಂತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು (RCB) ಅಂದ್ರೆ ಅತಿ ಹೆಚ್ಚು ಅಭಿಮಾನಗಳನ್ನು ಹೊಂದಿರುವ ತಂಡ ಎನ್ನಬಹುದು. ಆರ್​ಸಿಬಿ ಪಂದ್ಯಗಳನ್ನು ಗ್ರೌಂಡ್​ನಲ್ಲಿ ಕುಳಿತು ನೋಡಲು ಅದೆಷ್ಟೊ ಅಭಿಮಾನಿಗಳು ಕಾತುರರಾಗಿರುತ್ತಾರೆ. ಹೀಗಾಗಿ ಆರ್​ಸಿಬಿ ಪಂದ್ಯದ ಟಿಕೆಟ್​ಗಳು ಬೇಗನೆ ಮಾರಟವಾಗಿ ಬಿಡುತ್ತವೆ. ಅದೆಷ್ಟೊ ಅಭಿಮಾನಿಗಳು ಟಿಕೆಟ್​ ಸಿಗದೆ ನಿರಾಶೆಗೊಳ್ಳುತ್ತಾರೆ. ಇದನ್ನೇ ಲಾಭ ಮಾಡಿಕೊಂಡಿರುವ ಕೆಲವರು ಬ್ಲ್ಯಾಕ್​​ನಲ್ಲಿ ಹೆಚ್ಚಿನ ದರದಲ್ಲಿ ಟಿಕೆಟ್​ ಮಾರಟ ಮಾಡುತ್ತಿದ್ದಾರೆ.

DNA ಎಂಬ ಹೆಸರಿನ ತಂಡ ಆನ್​​ಲೈನ್​​ನಲ್ಲಿ ಬಹಳಷ್ಟು ಟಿಕೆಟ್​​ಗಳನ್ನು ಖರೀದಿಸುತ್ತದೆ. ನಂತರ ಬ್ಯ್ಲಾಕ್​ನಲ್ಲಿ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತದೆ. ಜೋಕ್ಸ್​​ ಎಂಬುವರು DNA ತಂಡದ ವಿನೋದ್​ ಎಂಬುವನಿಂದ ಬ್ಲ್ಯಾಕ್​​ನಲ್ಲಿ ಟಿಕೆಟ್​ ಖರೀದಿಸಲು ಮುಂದಾಗುತ್ತಾರೆ. ಆಗ ವಿನೋದ ನಿಗದಿತ ಬೆಲೆಗಿಂತ ಹೆಚ್ಚಿನ ದರದಲ್ಲಿ ಹೇಳುತ್ತಾರೆ. ಆಗ ಜೋಕ್ಸ್​​ ಹೆಚ್ಚುವರಿ ದರದ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಕಾಲ್​​ ಗರ್ಲ್​ಗಾಗಿ ಕರೆ ಮಾಡಿ ಎಂದು ಫೇಸ್​​ಬುಕ್​ನಲ್ಲಿ ಪತ್ನಿಯ ಫೋಟೊ, ಮೊಬೈಲ್ ನಂಬರ್ ಪೋಸ್ಟ್ ಮಾಡಿದ ವ್ಯಕ್ತಿ!

ಆಗ ವಿನೋದ್​​ “ಏನ್ಮಾಡೋದು ಬ್ರೋ.. ಆನ್ಲೈನ್​ನಲ್ಲಿ ಬಲ್ಕ್ ಆಗಿ ಟಿಕೆಟ್ ಖರೀದಿಸಿ, ಬ್ಲ್ಯಾಕ್​ನಲ್ಲಿ ಮಾರಾಟ ಮಾಡುತ್ತೇವೆ. ಇದು ಬಹಳ ರಿಸ್ಕ್​ ಕೆಲಸ. ಹೀಗಾಗಿ ಹೆಚ್ಚಿನ ದರ” ಅಂತ ಮೆಸೇಜ್​ ಮಾಡಿದ್ದಾನೆ.

ವಿನೋದ್​ ಕಳಸಿರುವ ಮೆಸೇಜ್​ ಚಾಟಿಂಗ್ ಸ್ಕ್ರೀನ್ ಶಾಟ್ ತೆಗೆದು ಜೋಕ್ಸ್​ ಎಕ್ಸ್​ (ಟ್ವಿಟರ್​)ನಲ್ಲಿ ಪೋಸ್ಟ್​ ಮಾಡಿ, ಬೆಂಗಳೂರು ಪೊಲೀಸರಿಗೆ ಟ್ಯಾಗ್​ ಮಾಡಿದ್ದಾರೆ. ಪ್ರಕರಣ ಸಂಬಂಧ ಸ್ಥಳೀಯ ಠಾಣೆಗೆ ಲಿಖಿತ ದೂರು ನೀಡುವಂತೆ ಪೊಲೀಸ್ ಇಲಾಖೆ ಟ್ವೀಟ್​ ಮುಖಾಂತರವೆ ಸೂಚನೆ ನೀಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:36 am, Fri, 12 April 24

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ