AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವ್ಯಕ್ತಿಯ ಬರ್ಬರ ಕೊಲೆ, ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಕಾದಿತ್ತು ಆಶ್ಚರ್ಯ! ಅದೇನು ಗೊತ್ತಾ?

ಈತನಿಗೆ ಎರಡು ಮದುವೆಯಾಗಿ ಐವರು ಮಕ್ಕಳಿದ್ದಾರೆ. ಆದರೂ ಈತನೊಂದಿಗೆ ಯಾರೂ ನಿಂತಿಲ್ಲ. ಸಂಜೆಯಾಗುತಲ್ಲೇ ಕುಡಿದು ಮನೆಯಲ್ಲಿ ಒಂಟಿಯಾಗಿದ್ದ ಈತ ಬೆಳಗ್ಗೆ ಬರ್ಬರವಾಗಿ ಕೊಲೆಯಾಗಿದ್ದ.

ವ್ಯಕ್ತಿಯ ಬರ್ಬರ ಕೊಲೆ, ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಕಾದಿತ್ತು ಆಶ್ಚರ್ಯ! ಅದೇನು ಗೊತ್ತಾ?
ಒಂಟಿಯಾಗಿದ್ದ ವೆಂಕಟೇಶಪ್ಪನ ಕೊಲೆ
TV9 Web
| Edited By: |

Updated on: Nov 06, 2022 | 3:55 PM

Share

ಕೋಲಾರ: ವೆಂಕಟೇಶನಿಗೆ ಎರಡು ಮದುವೆಯಾಗಿದ್ದರೂ ಐದು ಜನ ಮಕ್ಕಳಿದ್ದರೂ ಯಾರೂ ಅತನ ಜೊತೆಗೆ ವಾಸವಿರಲಿಲ್ಲ. ಒಂಬ್ಬಂಟಿಯಾಗಿ ಜೀವನ ಮಾಡಿಕೊಂಡಿದ್ದವನು. ಕುಡುಕುತನವನ್ನು ಸಹಿಸದ ಆತನ ಕುಟುಂಬಸ್ಥರು ದೂರವೇ ಉಳಿದುಕೊಂಡಿದ್ದರು. ಹೀಗೆ ಯಾರಿಗೂ ಬೇಡವಾಗಿದ್ದವನು ಬೆಳ್ಳಂಬೆಳಿಗ್ಗೆಯೇ ಬರ್ಬರವಾಗಿ ಕೊಲೆಯಾಗಿ ಬಿದ್ದಿದ್ದನು. ಇಂತಹ ಸ್ಥಿತಿಯಲ್ಲಿ ಈತನಿಗಾಗಿ ಮರುಗುವವರು ಯಾರೂ ಇಲ್ಲ, ಕಣ್ಣೀರು ಸುರಿಸುವವರು ಯಾರೂ ಇಲ್ಲ, ನ್ಯಾಯಕ್ಕಾಗಿ ಅಂಗಲಾಚುವವರೂ ಇಲ್ಲ. ಯಾಕಂದರೆ ಕುಟುಂಬಸ್ಥರನ್ನು ಅಷ್ಟರ ಮಟ್ಟಿಗೆ ಹಿಂಸೆ ನೀಡುತ್ತಿದ್ದನಂತೆ. ಈತನ ಕಾಟಕ್ಕೆ ಕುಟುಂಬವೇ ದೂರ ಹೋಗಿತ್ತು. ಹಾಗಿದ್ದರೆ ಕೊಲೆ ಮಾಡಿದ್ದು ಯಾರು?

ನವೆಂಬರ್ 4ರಂದು ಬೆಳ್ಳಂಬೆಳಿಗ್ಗೆ ವೇಮಗಲ್​ ಪಟ್ಟಣದ ಬಿ2 ಬ್ಲಾಕ್​ನಲ್ಲಿ ವೆಂಕಟೇಶ ಬರ್ಬರ ಕೊಲೆಯಾಗಿ ಹೋಗಿದ್ದ, ಮನೆಯ ಅಕ್ಕಪಕ್ಕದವರು ಅದನ್ನ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಪೊಲೀಸರಿಗೆ ಒಂದು ಆಶ್ಚರ್ಯ ಕಾದಿತ್ತು. ಯಾಕೆಂದರೆ ವಾರದ ಹಿಂದಷ್ಟೇ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ವೆಂಕಟೇಶ್​ ತಮ್ಮ ನಾಗರಾಜ್​ ಕೊಲೆಯಾದಾಗ ಇದೇ ವೆಂಕಟೇಶ್​ನನ್ನು ಪೊಲೀಸರು ಕರೆಸಿ ವಿಚಾರಣೆ ನಡೆಸಿ ಕಳುಹಿಸಿದ್ದರು. ಇದಾಗಿ ಇನ್ನೂ ಆರು ದಿನ ಕಳೆಯುವ ಮುನ್ನವೇ ವೆಂಕಟೇಶ್​ ಕೂಡಾ ಹೀಗೆ ಕೊಲೆಯಾಗಿ ಹೋಗಿದ್ದಾನೆ. ಅಷ್ಟಕ್ಕೂ ಈ ಕೊಲೆಯಾದ ವೆಂಕಟೇಶಪ್ಪನ ಕಥೆ ಏನು ಅಂತ ನೋಡುವುದಾದರೆ ಇವನು ಎರಡು ಮದುವೆಯಾಗಿದ್ದ ಮೊದಲ ಹೆಂಡತಿ ಜಯಮ್ಮರನ್ನು ತಾನೇ ಕೊಲೆ ಮಾಡಿ ಜೈಲಿಗೂ ಹೋಗಿ ಬಂದಿದ್ದ.

ಕೊಲೆಯ ನಂತರ ರತ್ನಮ್ಮ ಎಂಬಾಕೆಯನ್ನು ಎರಡನೇ ಮದುವೆ ಮಾಡಿಕೊಂಡಿದ್ದ. ಇಬ್ಬರು ಹೆಂಡತಿಯರಿಗೂ ಸೇರಿ ಒಟ್ಟು ಐದು ಜನ ಮಕ್ಕಳಿದ್ದರು, ಆದರೆ ಯಾರೂ ಕೂಡಾ ಈತನ ಜೊತೆಗೆ ವಾಸವಿರಲಿಲ್ಲ. ಕುಡಿದು ಬಂದು ಹಿಂಸಿಸುತ್ತಿದ್ದ, ಮನಸ್ಸಿಗೆ ಬಂದಂತೆ ಹೊಡೆಯುವುದು, ಬಡಿಯುವುದು ಮಾಡುತ್ತಿದ್ದ. ಹೀಗಾಗಿ ಯಾರೂ ಈತನ ಜೊತೆಗೆ ಇರಲು ಇಷ್ಟಪಡದೇ ಎಲ್ಲರೂ ಈತನಿಂದ ದೂರವೇ ಇದ್ದರು. ತಾನೊಬ್ಬನೇ ವೇಮಗಲ್​ನ ಬಿ2 ಬ್ಲಾಕ್​ನ ಮನೆಯಲ್ಲಿ ವಾಸವಾಗಿದ್ದ. ಅಲ್ಲಿ ಇಲ್ಲಿ ತಿನ್ನುವುದು ಸಂಜೆಗೆ ಒಂದಷ್ಟು ಕುಡಿದು ಮಲಗುತ್ತಿದ್ದ. ಹೀಗಿರುವಾಗ ಆ ವೆಂಕಟೇಶಪ್ಪನೇ ಕೊಲೆಯಾಗಿ ಹೋಗಿದ್ದಾನೆ.

ವೆಂಕಟೇಶಪ್ಪ ಕೊಲೆಯಾಗಿದ್ದ ಬಗ್ಗೆ ಪೊಲೀಸರು ವಿಷಯ ತಿಳಿಸಿದ ನಂತರವೇ ಕುಟುಂಬಸ್ಥರು ಆಗಮಿಸಿದ್ದರು. ಆದರೆ ಯಾರೊಬ್ಬರಿಗೂ ವೆಂಕಟೇಶಪ್ಪ ಕೊಲೆಯಾಗಿರುವ ಬಗ್ಗೆ ಬೇಸರವಿರಲಿಲ್ಲ, ಯಾಕಂದರೆ ಕುಟುಂಬಸ್ಥರನ್ನು ಅಷ್ಟರ ಮಟ್ಟಿಗೆ ಹಿಂಸೆ ನೀಡುತ್ತಿದ್ದನಂತೆ. ಅಷ್ಟೇ ಅಲ್ಲದೆ ಯಾರನ್ನೂ ಚೆನ್ನಾಗಿ ನೋಡಿಕೊಳ್ಳುತ್ತಿರಲಿಲ್ಲ. ವಿಚಿತ್ರ ವರ್ತನೆಯಿಂದ ತನ್ನ ಕುಟುಂಬಸ್ಥರೆಲ್ಲರಿಂದ ದೂರಾಗಿ ಹೋಗಿದ್ದ. ಅದಕ್ಕಾಗಿಯೇ ಅವನು ಕೊಲೆಯಾಗಿ ಹೋಗಿದ್ದರೂ ಪೊಲೀಸರಿಗೆ ಕೊಲೆ ಆರೋಪಿಗಳನ್ನು ಹುಡುಕಿಕೊಡಿ ನಮಗೆ ಯಾರ ಮೇಲೆ ಅನುಮಾವಿದೆ ಎಂದು ಕೂಡಾ ಹೇಳಲು ಸಿದ್ದವಿರಲಿಲ್ಲ. ಜೊತೆಗೆ ಅವರ್ಯಾರಿಗೂ ವೆಂಕಟೇಶಪ್ಪನ ವ್ಯವಹಾರ ಏನು ಗೊತ್ತಿರಲಿಲ್ಲವಂತೆ. ಇನ್ನು ಪೊಲೀಸರು ನೀಡಿದ ಮಾಹಿತಿ ಮೇರೆಗೆ ಬಂದು ಶವದ ಮರಣೋತ್ತರ ಪರೀಕ್ಷೆ ಸೇರಿದಂತೆ ಕಾರ್ಯಗಳನ್ನು ಮಾಡಲು ಮುಂದಾಗಿದ್ದರು. ಇನ್ನು ವಾರದ ದಿನಗಳ ಹಿಂದೆ ಕೊಲೆಯಾಗಿದ್ದ ನಾಗರಾಜ್​ ಮತ್ತು ವೆಂಕಟೇಶಪ್ಪ ಇಬ್ಬರ ಸಾವಿನಲ್ಲಿ ಏನೋ ಅನುಮಾನವಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಒಟ್ಟಾರೆ ವೆಂಕಟೇಶಪ್ಪ ಬರ್ಬರವಾಗಿ ಕೊಲೆಯಾಗಿ ಹೋಗಿದ್ದಾನೆ. ಆದರೆ ಕೊಲೆಯಾದವನ ಬಗ್ಗೆ ಯಾರೊಬ್ಬರು ತಲೆಕೆಡಿಸಿಕೊಳ್ಳುವವರಿಲ್ಲ, ಕಣ್ಣೀರು ಹಾಕುವವರು ಇಲ್ಲ. ಇಂಥ ಪರಿಸ್ಥಿತಿಯಲ್ಲಿದ್ದವನನ್ನು ಕೊಲೆ ಮಾಡಿದ್ಯಾರು? ಕೊಲೆ ಮಾಡಿದ್ದೇಕೆ? ಅನ್ನೋದನ್ನ ಸದ್ಯ ಪೊಲೀಸರು ತನಿಖೆ ಮಾಡಿದ ನಂತರವಷ್ಟೇ ತಿಳಿದು ಬರಲಿದೆ.

ವರದಿ: ರಾಜೇಂದ್ರಸಿಂಹ ಟಿವಿ9 ಕೋಲಾರ

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Web contact
Web contact

TV9 Kannada

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ