AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀನಿವಾಸಪುರ: ಮತ್ತೆ ಹೆಣ್ಣು ಮಗು ಹುಟ್ಟಿತೆಂದು ಮನನೊಂದು ನೇಣಿಗೆ ಶರಣಾದ ತಂದೆ

ಮತ್ತೆ ಹೆಣ್ಣು ಮಗು ಹುಟ್ಟಿತೆಂದು ತಂದೆ ನೇಣಿಗೆ ಶರಣಾಗಿರುವಂತಹ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಶ್ರೀನಿವಾಸಪುರ: ಮತ್ತೆ ಹೆಣ್ಣು ಮಗು ಹುಟ್ಟಿತೆಂದು ಮನನೊಂದು ನೇಣಿಗೆ ಶರಣಾದ ತಂದೆ
ಲೋಕೇಶ್(34) ಮೃತ ವ್ಯಕ್ತಿ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Nov 06, 2022 | 7:02 PM

Share

ಕೋಲಾರ: ಹೆಣ್ಣು ಮಕ್ಕಳಾದರೆ ಕಣ್ಣೀರು ಹಾಕುವ ಕಾಲವೊಂದಿತ್ತು. ಆದರೆ ಇವತ್ತು ಹೆಣ್ಣು (girl) ಪ್ರತಿ ಹಂತದಲ್ಲೂ ತಾನು ಗಂಡಿಗಿಂತ ಕಡಿಮೆ ಇಲ್ಲಾ ಅನ್ನೋದನ್ನ ಸಾಬೀತು ಮಾಡುವ ಮೂಲಕ ಗಂಡಿಗೆ ಸರಿಸಮನಾಗಿ ಬೆಳೆದಿದ್ದಾಳೆ. ಎಲ್ಲ ರಂಗದಲ್ಲೂ ತನ್ನ ಸಾಧನೆಯನ್ನು ಸಾಧಿಸಿ ತೋರಿಸಿದ್ದಾಳೆ ಇಂಥ ಕಾಲದಲ್ಲೂ ಇಲ್ಲೊಬ್ಬ ತಂದೆ ತನಗೆ ಹೆಣ್ಣು ಮಕ್ಕಳಾಯ್ತು ಎಂದು ಮನನೊಂದು ಆತ್ಮಹತ್ಯೆಗೆ (suicide) ಶರಣಾಗಿರುವಂತಹ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಶೆಟ್ಟಿಹಳ್ಳಿ ಗ್ರಾಮದಲ್ಲಿ ಡ್ರೈವರ್​ ಕೆಲಸ ಮಾಡಿಕೊಂಡಿದ್ದ ಲೋಕೇಶ್​ಗೆ ಕಳೆದ ಎಂಟು ವರ್ಷಗಳ ಹಿಂದೆ ಆಂಧ್ರ ಪ್ರದೇಶ ಪುಂಗನೂರಿನ ಸಿರಿಶ ಎನ್ನುವವರೊಂದಿಗೆ ಮದುವೆ ಮಾಡಲಾಗಿತ್ತು. ಇದಾದ ನಂತರ ಲೋಕೇಶ್​ಗೆ ಎರಡು ವರ್ಷಗಳ ಅಂತರದಲ್ಲಿ ಮೂರು ಜನ ಹಣ್ಣುಮಕ್ಕಳಾಗಿವೆ. ಇದರಿಂದ ಲೋಕೇಶ್​ ತನಗೆ ಗಂಡು ಮಕ್ಕಳಾಗಿಲ್ಲ ಅನ್ನೋ ಕೊರಗು ಸಾಕಷ್ಟು ಬಾದಿಸುತ್ತಲೇ ಇತ್ತು. ಜೊತೆಗೆ ಸ್ನೇಹಿತರು ಹಾಗೂ ಕೆಲವು ಜೊತೆಗಿದ್ದವರು ಅದೇ ವಿಚಾರವಾಗಿ ಲೋಕೇಶ್​ ಮನಸ್ಸಿಗೆ ನೋವಾಗುವಂತೆ ಮಾತನಾಡಿದ್ದಾರೆ ಎನ್ನಲಾಗಿದೆ.

ಆದರೂ ಕುಟುಂಬಸ್ಥರು ಲೋಕೇಶ್​ಗೆ ಸಮಾಧಾನ ಮಾಡಿ ದೈರ್ಯ ಹೇಳಿದ್ದರು. ಹೀಗಿರುವಾಗಲೇ ನವೆಂಬರ್​ 4 ರಂದು ಲೋಕೇಶ್ ಪತ್ನಿಗೆ ಸಿರಿಶಗೆ ನಾಲ್ಕನೇ ಮಗುವಾಗಿದ್ದು, ಅದೂ ಕೂಡಾ ಹೆಣ್ಣುಮಗುವಾಗಿದೆ. ವಿಷಯ ತಿಳಿದು ಕಣ್ಣೀರು ಹಾಕಿ ತೀವ್ರವಾಗಿ ನೊಂದಿದ್ದ ಲೋಕೇಶ್ ನಿನ್ನೆ ರಾತ್ರಿ ಮನೆಯಲ್ಲಿ ಒಂಟಿಯಾಗಿ ಮಲಗಿದ್ದಾನೆ. ಪ್ರತಿನಿತ್ಯ ತನ್ನ ಮನೆಯಲ್ಲೇ ಮಲಗುತ್ತಿದ್ದ ತನ್ನ ತಾಯಿಯನ್ನು ತನ್ನ ತಮ್ಮನ ಮನೆಗೆ ಕಳಿಸಿ ತಾನೊಬ್ಬನೇ ಮನೆಯಲ್ಲಿ ಮಲಗಿದ್ದಾನೆ. ಮಧ್ಯರಾತ್ರಿ ಸುಮಾರಿಗೆ ಮನೆಯ ಪ್ಯಾನ್​ಗೆ ಲೋಕೇಶ್​ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಷಯ ತಿಳಿದು ಮನೆಗೆ ಬಂದ ಸಂಬಂಧಿಕರು ಹಾಗೂ ಲೋಕೇಶ್​ ಸೋದರಿಯರ ಆಕ್ರಂದನ ಮುಗಿಲು ಮುಟ್ಟಿತ್ತು. ಎಂಥ ಕೆಲಸ ಮಾಡಿಬಿಟ್ಟ ನಮ್ಮಣ್ಣ, ದಯವಿಟ್ಟು ಯಾರೂ ಗಂಡು ಮಕ್ಕಳಾಗಿಲ್ಲ ಎಂದು ಇಂಥ ಕೆಲಸ ಮಾಡಬೇಡಿ ಎಂದು ಕಣ್ಣೀರಾಕುತ್ತಲೇ ಲೋಕೇಶ್ ತಂಗಿಯರಾದ ಉಮಾ ಹಾಗೂ ವಿಮಲಾ ನೋವು ವ್ಯಕ್ತಪಡಿಸಿದರು.

ಇನ್ನು ಎಂದಿನಂತೆ ಲೋಕೇಶ್​ ತಾಯಿ ಮನೆಗೆ ಬಂದು ನೋಡಿದ್ದು, ಲೋಕೇಶ್​ ಆತ್ಮಹತ್ಯೆಗೆ ಶರಣಾಗಿರುವುದು ಕಂಡುಬಂದಿದೆ. ಆಘಾತಗೊಂಡ ತಾಯಿ ತಕ್ಷಣ ತನ್ನ ಇನ್ನೊಬ್ಬ ಮಗ ಮಂಜುನಾಥ್​ನನ್ನು ಕರೆದಿದ್ದಾರೆ. ಎಲ್ಲರೂ ಬಂದು ನೋಡುವಷ್ಟರಲ್ಲಿ ಲೋಕೇಶ್​ ಸತ್ತುಹೋಗಿದ್ದ. ಇನ್ನು ವಿಷಯವನ್ನು ಶ್ರೀನಿವಾಸಪುರ ಪೊಲೀಸ್​ ಠಾಣೆಗೆ ಪೋನ್​ ಮಾಡಿ ತಿಳಿಸಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಕುಟುಂಬಸ್ಥರನ್ನು ವಿಚಾರಣೆ ಮಾಡಿದರು. ಎಲ್ಲರನ್ನೂ ವಿಚಾರ ಮಾಡಿದಾಗ ಲೋಕೇಶ್​ ಡ್ರೈವರ್​ ಕೆಲಸ ಮಾಡಿಕೊಂಡಿದ್ದು ಒಟ್ಟು ಕುಟುಂಬದಲ್ಲಿ ಬದುಕುತ್ತಿದ್ದವನು ತನ್ನಪಾಡಿಗೆ ತಾನು ದುಡಿದು ಬದುಕುತ್ತಿದ್ದ ಯಾವುದೇ ತೊಂದರೆ ಇತರಲಿಲ್ಲ.

ಆದರೆ ಅವನಿಗೆ ಅತಿಯಾಗಿ ಬಾದಿಸುತ್ತಿದ್ದ ವಿಚಾರ ಅಂದರೆ ತನಗೆ ಗಂಡುಮಕ್ಕಳಿಲ್ಲ ಅನ್ನೋದು. ಅದನ್ನು ಸಾಕಷ್ಟು ಬಾರಿ ತನ್ನ ಕುಟುಂಬಸ್ಥರು ಹಾಗೂ ಸ್ನೇಹಿತರ ಜೊತೆಗೆ ಹೇಳಿಕೊಂಡು ಕಣ್ಣೀರಾಕಿದ್ದ. ಅಂತಿಮವಾಗಿ ನಾಲ್ಕನೇ ಮಗುವಾದರೂ ಗಂಡು ಮಗುವಾಗುತ್ತದೆ ಎಂದುಕೊಂಡ ಲೋಕೇಶ್​, ಆದರೂ ನಾಲ್ಕನೇ ಮಗು ಕೂಡಾ ಹೆಣ್ಣಾಗಿದೆ. ಇದರಿಂದ ತೀವ್ರವಾಗಿ ಮನನೊಂದು ಕಳೆದ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಅನ್ನೋದು ಅವರ ತಂದೆ ಆಂಜಿನಪ್ಪ ಅವರ ಮಾತು.

ವರದಿ: ರಾಜೇಂದ್ರ ಸಿಂಹ, ಟಿವಿ9, ಕೋಲಾರ

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:00 pm, Sun, 6 November 22

ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಮಾಳುಗೆ ವಿಚಿತ್ರವಾಗಿ ಹೇರ್​​ಕಟ್ ಮಾಡಿದ ರಜತ್; ಎಲ್ಲರೂ ಶಾಕ್
ಮಾಳುಗೆ ವಿಚಿತ್ರವಾಗಿ ಹೇರ್​​ಕಟ್ ಮಾಡಿದ ರಜತ್; ಎಲ್ಲರೂ ಶಾಕ್