AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಲಗಿದ್ದ ಗೆಳತಿಯ ಕಣ್ಣಿನ ರೆಪ್ಪೆ ಅರಳಿಸಿ ಮೊಬೈಲ್​ ಲಾಕ್​ ಓಪನ್​ ಮಾಡಿ 18 ಲಕ್ಷ ರೂ ದೋಚಿದ ಯುವಕ

ಫೇಸ್​ ಲಾಕ್​ ಇದ್ದರೂ ಮಲಗಿದ್ದ ಗೆಳತಿಯ ಕಣ್ಣು ಓಪನ್​ ಮಾಡಿ ಮೊಬೈಲ್​ ಲಾಕ್​ ಓಪನ್ ತೆಗೆದು ವ್ಯಕ್ತಿಯೊಬ್ಬ ತನ್ನ ಗೆಳತಿಯ ಫೋನಿನಿಂದ ಲಕ್ಷಾಂತರ ರೂ.ಗಳನ್ನು ದೋಚಿದ ಘಟನೆ ನಡೆದಿದೆ.

ಮಲಗಿದ್ದ ಗೆಳತಿಯ ಕಣ್ಣಿನ ರೆಪ್ಪೆ ಅರಳಿಸಿ ಮೊಬೈಲ್​ ಲಾಕ್​ ಓಪನ್​ ಮಾಡಿ 18 ಲಕ್ಷ ರೂ ದೋಚಿದ ಯುವಕ
ಸಾಂಕೇತಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on: Dec 14, 2021 | 12:45 PM

ಫೋನಿನ ಸುರಕ್ಷತೆಗಾಗಿ ಫೇಸ್ ಲಾಕ್​ ಇಟ್ಟುಕೊಳ್ಳುವುದು ಸಾಮಾನ್ಯ. ಆದರೆ ಅದು ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆ ಮೂಡುತ್ತದೆ. ಮೊಬೈಲ್​ಗೆ ಇಟ್ಟುಕೊಳ್ಳುವ ಲಾಕ್​ಗಳು ಸುರಕ್ಷಿತವಲ್ಲ ಎನ್ನುವುದಕ್ಕೆ ಉದಾಹರಣೆ ಎನ್ನುವಂತಹ ಘಟನೆ ಚೀನಾದಲ್ಲಿ ನಡೆದಿದೆ. ಫೇಸ್​ ಲಾಕ್​ ಇದ್ದರೂ ಮಲಗಿದ್ದ ಗೆಳತಿಯ ಕಣ್ಣು ಓಪನ್​ ಮಾಡಿ ಮೊಬೈಲ್​ ಲಾಕ್​  ತೆಗೆದು ವ್ಯಕ್ತಿಯೊಬ್ಬ ತನ್ನ ಗೆಳತಿಯ ಫೋನಿನಿಂದ ಲಕ್ಷಾಂತರ ರೂ.ಗಳನ್ನು ದೋಚಿದ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಗೆಳತಿ ಮಲಗಿದ್ದ ವೇಳೆ ಆಕೆಯ ಕಣ್ಣುಗಳನ್ನು ಓಪನ್​ ಮಾಡಿಕೊಂಡು ಮೊಬೈಲ್​ ಅನ್ನು ಅನ್​ಲಾಕ್​ ಮಾಡಿ ಬರೋಬ್ಬರಿ 18 ಲಕ್ಷ ರೂಗಳನ್ನು ದೋಚಿದ್ದಾನೆ. ಚೀನಾದಲ್ಲಿ ಈ ಘಟನೆ ನಡೆದಿದ್ದು,  ಆರೋಪಿಯನ್ನು ಪೊಲೀಸರು ಬಂಧಿಸಿ, ಕೋರ್ಟ್ ಗೆ ಹಾಜರುಪಡಿಸಿದ್ದು, ನ್ಯಾಯಾಲಯ​ 3 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.

ಹುವಾಂಗ್​ ನಗರದ ವ್ಯಕ್ತಿಯೊಬ್ಬ ಜೂಜಾಟದಲ್ಲಿ ದೊಡ್ಡ ಪ್ರಮಾಣದ ಸಾಲ ಮಾಡಿಕೊಂಡಿದ್ದ ಎನ್ನಲಾಗಿದ್ದು, ಅದನ್ನು ತೀರಿಸಲು ತನ್ನ ಗೆಳತಿಯ ಫೋನ್​ನಿಂದ ಹಣ ಲಪಟಾಯಿಸಿದ್ದಾನೆ. ಗೆಳತಿಯ ಫೊನ್​ನಲ್ಲಿ ಮೊದಲು ಫಿಂಗರ್​ಪ್ರಿಂಟ್​ ಮೂಲಕ ಓಪನ್​ ಮಾಡಲು ಪ್ರಯತ್ನಿಸಿದ್ದಾನೆ. ಬಳಿಕ ಆಕೆಯ ಕಣ್ಣಿನ ರೆಪ್ಪೆಗಳನ್ನು ಬಿಡಿಸಿ ಫೇಸ್​ ಲಾಕ್​ ಓಪನ್​ ಮಾಡಿ ಆನ್ಲೈನ್​ ಹಣ ಪಾವತಿ ಆ್ಯಪ್​ ಅಲಿಪೇಗೆ ಲಾಗ್​ ಇನ್​ ಆಗಿದ್ದಾನೆ. ತಕ್ಷಣ ಪಾಸ್​ವರ್ಡ್​ ಬದಲಿಸಿ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಖಾತೆಯಲ್ಲಿ ಹಣ ಕಾಣೆಯಾಗಿರುವುದನ್ನು ಕಂಡು ಯುವತಿ ಪೊಲೀಸರಿಗೆ ದೂರು ನೀಡಿದ್ದರು ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ಸಾಬೀತಾಗಿದ್ದು, ಯುವಕನನ್ನು ತಪ್ಪಿತಸ್ತ ಎಂದು ಪರಿಗಣಿಸಿ 3 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ.

ಫೋನ್​ನ ಸುರಕ್ಷತೆಗಾಗಿ ಫೇಸ್​ ಲಾಕ್​ ಅಥವಾ ಫಿಂಗರ್​ಪ್ರಿಂಟ್​ ಲಾಕ್​ ಇಡುವುದರ ಬದಲು ಪಿನ್​ ನಂಬರ್​ ಇಡುವುದು ಒಳಿತು. ಈ ರೀತಿಯಲ್ಲಿ ಆನ್ಲೈನ್​ನಲ್ಲಿ ವ್ಯವಹಾರ ನಡೆಸುವಾಗ ಫೋನ್ ಹಾಗೂ ಅದರ ಪಾಸ್ವರ್ಡ್​ಗಳನ್ನು ಸರಿಯಾದ ಕ್ರಮಗಳಲ್ಲಿ ಜೋಡಿಸಿಕೊಂಡಿರುವುದು ಮುಖ್ಯವಾಗಿರುತ್ತದೆ.

ಇದನ್ನೂ ಓದಿ:

ಕಾರಿನಲ್ಲಿ ಹಿಂಬಾಲಿಸಿ ಯುವತಿ ಜತೆ ಅಸಭ್ಯವಾಗಿ ವರ್ತಿಸಿದ್ದ ಎಂಎಸ್ ವಿದ್ಯಾರ್ಥಿ ಅರೆಸ್ಟ್

Supari For Robbery | ದಿಢೀರ್ ದುಡ್ಡು ಮಾಡಲು ಕಳ್ಳದಾರಿ ಹಿಡಿದು ಸುಪಾರಿ ಕೊಟ್ಟು ಚಿನ್ನದ ಗಟ್ಟಿ ದೋಚಿಸಿದ್ದ ಕಿಲಾಡಿ ಅರೆಸ್ಟ್

ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಪಹಲ್ಗಾಮ್ ಉಗ್ರರಿಗೆ ನೆರವಾದ ಇಬ್ಬರು ಸ್ಥಳೀಯ ಕಾಶ್ಮೀರಿಗಳ ಮನೆ ಧ್ವಂಸ!
ಪಹಲ್ಗಾಮ್ ಉಗ್ರರಿಗೆ ನೆರವಾದ ಇಬ್ಬರು ಸ್ಥಳೀಯ ಕಾಶ್ಮೀರಿಗಳ ಮನೆ ಧ್ವಂಸ!
ನನ್ನ ಹೆಗಲ ಮೇಲೆ ಕೂರಿಸಿಕೊಂಡು ಬೆಟ್ಟ ಇಳಿದವರು ಸ್ಥಳೀಯ ಕಾಶ್ಮೀರಿ: ಅಭಿಜಯ್
ನನ್ನ ಹೆಗಲ ಮೇಲೆ ಕೂರಿಸಿಕೊಂಡು ಬೆಟ್ಟ ಇಳಿದವರು ಸ್ಥಳೀಯ ಕಾಶ್ಮೀರಿ: ಅಭಿಜಯ್
Dewald Brevis: ಚೊಚ್ಚಲ ಪಂದ್ಯದಲ್ಲೇ ಡೆವಾಲ್ಡ್ ಬ್ರೆವಿಸ್ ಆರ್ಭಟ
Dewald Brevis: ಚೊಚ್ಚಲ ಪಂದ್ಯದಲ್ಲೇ ಡೆವಾಲ್ಡ್ ಬ್ರೆವಿಸ್ ಆರ್ಭಟ
ಸುಳಿವು ನೀಡಿದ ಕಳ್ಳರ ಕಾರು,  ಚೇಸ್ ಮಾಡಿದಾಗ ಪೊಲೀಸರ ಮೇಲೆ ಹಲ್ಲೆ
ಸುಳಿವು ನೀಡಿದ ಕಳ್ಳರ ಕಾರು,  ಚೇಸ್ ಮಾಡಿದಾಗ ಪೊಲೀಸರ ಮೇಲೆ ಹಲ್ಲೆ