ಬೆಂಗಳೂರು ಗ್ರಾಮಾಂತರ ಎಸ್ಪಿ ಕೋನವಂಶಿ ಕೃಷ್ಣಗೆ ನೂತನ ಸಚಿವ ಎಂಟಿಬಿ ನಾಗರಾಜ್ ಫುಲ್​ ಕ್ಲಾಸ್

| Updated By: ಸಾಧು ಶ್ರೀನಾಥ್​

Updated on: Aug 06, 2021 | 1:23 PM

ಹೊಸಕೋಟೆ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮಗಳು, ಅಪರಾಧಗಳಿಗೆ ತಕ್ಷಣ ಬ್ರೇಕ್​ ಹಾಕುವಂತೆ ಬೆಂಗಳೂರು ಗ್ರಾಮಾಂತರ  ಪೊಲೀಸ್ ವರಿಷ್ಠಧಿಕಾರಿ  ಕೋನವಂಶಿ ಕೃಷ್ಣ ಅವರಿಗೆ  ಸಚಿವ ಎಂಟಿಬಿ ನಾಗರಾಜ್ ಕ್ಲಾಸ್ ತೆಗೆದುಕೊಂಡು, ಖಡಕ್ ಸೂಚನೆ ನೀಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಎಸ್ಪಿ ಕೋನವಂಶಿ ಕೃಷ್ಣಗೆ ನೂತನ ಸಚಿವ ಎಂಟಿಬಿ ನಾಗರಾಜ್ ಫುಲ್​ ಕ್ಲಾಸ್
ಬೆಂಗಳೂರು ಗ್ರಾಮಾಂತರ ಎಸ್ಪಿ ಕೋನವಂಶಿ ಕೃಷ್ಣಗೆ ನೂತನ ಸಚಿವ ಎಂಟಿಬಿ ನಾಗರಾಜ್ ಫುಲ್​ ಕ್ಲಾಸ್
Follow us on

ಹೊಸಕೋಟೆ: ನೂತನ ಸಚಿವ ಎಂಟಿಬಿ ನಾಗರಾಜ್ ಅವರು ಹೊಸಕೋಟೆ ಕ್ಷೇತ್ರ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಫುಲ್​ ಗರಂ ಆಗಿದ್ದಾರೆ. ಇಲ್ಲಿ ನಡೆಯುತ್ತಿರುವ ಅಕ್ರಮಗಳು, ಅಪರಾಧಗಳಿಗೆ ತಕ್ಷಣ ಬ್ರೇಕ್​ ಹಾಕುವಂತೆ ಬೆಂಗಳೂರು ಗ್ರಾಮಾಂತರ  ಪೊಲೀಸ್ ವರಿಷ್ಠಧಿಕಾರಿ  ಕೋನವಂಶಿ ಕೃಷ್ಣ ಅವರಿಗೆ  ಸಚಿವ ಎಂಟಿಬಿ ನಾಗರಾಜ್ ಕ್ಲಾಸ್ ತೆಗೆದುಕೊಂಡು, ಖಡಕ್ ಸೂಚನೆ ನೀಡಿದ್ದಾರೆ.

ಎರಡನೆಯ ಬಾರಿಗೆ ಸಚಿವನಾದ ನಂತರ ಮೊದಲ ದಿನವೆ ಅಧಿಕಾರಿಗಳಿಗೆ ಕ್ಲಾಸ್:
ಸಚಿವ ಎಂಟಿಬಿ ನಾಗರಾಜ್​ ಇಂದು  ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್​  ಸಭಾಂಗಣದಲ್ಲಿ ಕೊರೊನಾ ಕ್ರಮಗಳ ಪರಿಶೀಲನಾ ಸಭೆ ನಡೆಸಿದರು. ಪೊಲೀಸರು, ಗಣಿ‌ ಮತ್ತು ಭೂ ವಿಜ್ಞಾನ ಇಲಾಖೆ, ಮತ್ತು ಅರಣ್ಯಾಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸುವಂತೆ ಸೂಚಿಸಿದರು. ಸಮರ್ಪಕವಾಗಿ ಕೆಲಸ ಮಾಡದಿದ್ದಲ್ಲಿ ಕ್ರಮ ಕೈಗೊಳ್ಳುವುದಾದಾಗಿ  ಎಚ್ಚರಿಸಿದರು.

ಪೊಲೀಸ್ ಇಲಾಖೆಯಲ್ಲಿಯೇ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ. ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಅಕ್ರಮವಾಗಿ ಬ್ಲಾಸ್ಟಿಂಗ್, ಇಸ್ಪೀಟ್, ಕೋಳಿ ಪಂದ್ಯ, ಗಾಂಜಾ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಸರಗಳ್ಳತನ ಪ್ರಕರಣಗಳು ಜಾಸ್ತಿಯಾಗಿದ್ದು, ಯಾವ ಕ್ರಮ ತೆಗೆದುಕೊಂಡಿದ್ದೀರಾ ಎಂದು ಏರು ದನಿಯಲ್ಲಿ ಜಿಲ್ಲಾ ಕೋವಿಡ್ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಅವರು ಎಸ್ಪಿ ಕೋನವಂಶಿ ಕೃಷ್ಣಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಒಳ್ಳೆಯ ಅಧಿಕಾರಿ ಎಂದು ನಿಮ್ಮನ್ನ ಜಿಲ್ಲೆಗೆ ಹಾಕಿಸಿದ್ದೇನೆ. ಆದರೆ..
ಒಳ್ಳೆಯ ಅಧಿಕಾರಿ ಎಂದು ನಿಮ್ಮನ್ನ ಜಿಲ್ಲೆಗೆ ಹಾಕಿಸಿದ್ದೇನೆ. ಆದರೆ ನೀವು ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದು ಗರಂ ಆದ ಸಚಿವ ಎಂಟಿಬಿ ನಾಗರಾಜ್ ಅವರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕಿ ರೇಣುಕಾ ಅವರನ್ನು ತರಾಟೆಗೆ ತೆಗೆದುಕೊಂಡರು. ಅಧಿಕಾರಿಯಾಗಿ ನೀವು ಸರ್ಕಾರದ ಮುಲಾಜಿನಲ್ಲಿದ್ದೀರಿ. ಸರ್ಕಾರ ಮತ್ತು ಸಾರ್ವಜನಿಕರ ಪರವಾಗಿ ಕೆಲಸ ಮಾಡಿ ಎಂದು ರೇಣುಕಾಗೆ ಸಚಿವ ಎಂಟಿಬಿ ನಾಗರಾಜ್ ತಾಕೀತು ಮಾಡಿದರು.

ಯಾರು ಬದಲಾವಣೆ ಆದ್ರೂ ಮುಂದಿನ 2 ವರ್ಷ ನಾವೇ ಸಚಿವರಾಗಿ ಇರುತ್ತೇವೆ: ಎಂಟಿಬಿ ನಾಗರಾಜ್

(Minister MTB Nagaraj instructs Bangalore Rural SP Kona Vamsi Krishna to take strict action against anti social element)

Published On - 12:52 pm, Fri, 6 August 21