AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಯಾಂಗನೆಯ ಊಸರವಳ್ಳಿ ಆಟ, ಜಿದ್ದಿಗೆ ಬಿದ್ದವರಲ್ಲಿ ಒಬ್ಬ ಮಸಣ ಸೇರಿದ.. ಏನೀ ಪ್ರೇಮ್​ ಕಹಾನಿ?

ಕೊಂದ ಬಳಿಕ ಕೊಲೆಯಾದವನ ಮನೆಗೆ ಬಂದಿದ್ದ ಹಂತಕರ ಟೀಂ, ಹುಡುಕಾಡುವ ಹೈಡ್ರಾಮ ನಡೆಸಿ. ಅದೇ ದಿನ ಕೊಲೆಯಾದವನ ಮನೆಯಲ್ಲೇ ಊಟ ಮಾಡಿದ್ದಾರೆ.

ಮಾಯಾಂಗನೆಯ ಊಸರವಳ್ಳಿ ಆಟ, ಜಿದ್ದಿಗೆ ಬಿದ್ದವರಲ್ಲಿ ಒಬ್ಬ ಮಸಣ ಸೇರಿದ.. ಏನೀ ಪ್ರೇಮ್​ ಕಹಾನಿ?
ಕೊಲೆಯಾದ ರವಿಕುಮಾರ್​
ಪೃಥ್ವಿಶಂಕರ
| Edited By: |

Updated on: Nov 27, 2020 | 5:04 PM

Share

ಬೆಂಗಳೂರು: ಪ್ರೀತಿಸಿದ ಹುಡುಗಿ ಮೇಲೆ ಕಣ್ಣಾಕಿದ ಟಿಟಿ ವಾಹನದ ಮಾಲೀಕನನ್ನ ಪ್ರಿಯಕರನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಬನ್ನೇರುಘಟ್ಟದ ಕೋಳಿ ಫಾರಂ ಬಳಿ ನಡೆದಿದೆ.

ರವಿಕುಮಾರ್ ಕೊಲೆಯಾದ ಟಿಟಿ ವಾಹನದ ಮಾಲೀಕನಾಗಿದ್ದು, ಖಾಸಗಿ ಕಂಪನಿ ಜೊತೆ ಟೈ ಅಪ್ ಆಗಿ ಕೆಲಸ ಮಾಡ್ತಿದ್ದ ಎಂಬುದು ತಿಳಿದುಬಂದಿದೆ. ಈ ವೇಳೆ ಲೋಕೇಶ್ ಎಂಬ ವ್ಯಕ್ತಿ ರವಿಕುಮಾರ್ ಜತೆ ಸೇರಿಕೊಂಡಿದ್ದ ನಂತರ ಲೋಕೇಶ್, ರವಿಕುಮಾರ್ ಒಡೆತನದ ಟಿಟಿ ವಾಹನವನ್ನು ಓಡಿಸಲು ಕೆಲಸಕ್ಕೆ ಸೇರಿಕೊಂಡಿದ್ದ. ಈ ವೇಳೆ ರವಿಕುಮಾರ್ ಮೂಲಕವೇ ಲೋಕೇಶ್​ಗೆ ಹುಡುಗಿಯೊಬ್ಬಳು ಪರಿಚಯವಾಗಿದ್ದಳು. ಕೆಲ ದಿನಗಳ ನಂತರ ಪರಿಚಯ ಪ್ರೇಮವಾಗಿ ಬದಲಾಗಿದೆ. ಇದಾದ ಬಳಿಕ ರವಿಕುಮಾರ್ ಕೂಡ ಹುಡುಗಿ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ.

ಆರೋಪಿ ಹಂತಕ ಲೋಕೇಶ್​

ರವಿಕುಮಾರ್​ನನ್ನು ಲೋಕೇಶ್​ ಅಲ್ಲಿಂದ ಕಿಡ್ನ್ಯಾಪ್ ಮಾಡಿಸಿದ್ದ.. ಈ ವೇಳೆ ಆ ಯುವತಿ ಲೋಕೇಶ್​ಗೆ ಗೊತ್ತಾಗದಂತೆ ಇಬ್ಬರೊಂದಿಗೂ ಸ್ನೇಹ ಬೆಳೆಸಿದ್ದಳು. ಸ್ವಲ್ಪ ದಿನಗಳ ನಂತರ ಲೋಕೇಶ್​ಗೆ ಈ ಮಾಹಿತಿ ಗೊತ್ತಾಗಿದೆ. ಇದರಿಂದ ಕೋಪಗೊಂಡ ಲೋಕೇಶ್​ ಇದೇ ತಿಂಗಳು 20 ರಂದು ರವಿಕುಮಾರ್ ಒಡಿಸುತ್ತಿದ್ದ ಟಿಟಿ ವಾಹನವನ್ನು ಅಡ್ಡ ಹಾಕಿದ್ದಾನೆ.

ತದ ನಂತರ ತನ್ನ ಮೂವರು ಸ್ನೇಹಿತರನ್ನ ಕರೆಸಿ ರವಿಕುಮಾರ್​ನನ್ನು ಲೋಕೇಶ್​ ಅಲ್ಲಿಂದ ಕಿಡ್ನ್ಯಾಪ್ ಮಾಡಿಸಿದ್ದ. ಬಳಿಕ ರವಿಕುಮಾರ್​ನನ್ನು ಬನ್ನೇರುಘಟ್ಟದ ಕೋಳಿ ಫಾರಂ ಬಳಿ ಕರೆದೊಯ್ದಿದ್ದ. ಈ ವೇಳೆ ಮಾತನಾಡಿಸಿ ತನ್ನ ಹುಡುಗಿಯನ್ನ ಬಿಡಲು ಹೇಳಿದ್ದ. ಆದರೆ ರವಿಕುಮಾರ್ ಯಾವುದೇ ಕಾರಣಕ್ಕೂ ಬಿಡಲ್ಲ ಎಂದು ಜಗಳವಾಡಿದ್ದಾನೆ.

ಹೀಗಾಗಿ ಕೋಪಗೊಂಡ ಲೋಕೇಶ್​, ರವಿಕುಮಾರ್​ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ನಂತರ ಯಾರಿಗೂ ಗೊತ್ತಾಗದಂತೆ ಬನ್ನೇರುಘಟ್ಟದ ಗುಡ್ಡದ ಒಂದರ ಪೊದೆಯಲ್ಲಿ ಶವ ಎಸೆದು ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ರವಿಕುಮಾರ್ ಕಾಣದದಾಗ ಆತನ ಮನೆಯವರು ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ನೀಡಿದ್ದರು.

ಅದೇ ದಿನ ಕೊಲೆಯಾದವನ ಮನೆಯಲ್ಲೇ ಊಟ ಮಾಡಿದ್ದಾರೆ.. ಈ ವೇಳೆ ಬೈಯ್ಯಪ್ಪನಹಳ್ಳಿ ಪೊಲೀಸರು ತನಿಖೆಗಿಳಿದಿದ್ದಾರೆ. ತನಿಖೆ ವೇಳೆ ಪ್ರಕರಣದ ಅಸಲಿಯತ್ತು ಹೊಬಂದಿದ್ದು, ರವಿಕುಮಾರ್ ಶವ ಪತ್ತೆಯಾಗಿದೆ. ಕೊಂದ ಬಳಿಕ ಕೊಲೆಯಾದವನ ಮನೆಗೆ ಬಂದಿದ್ದ ಹಂತಕರ ಟೀಂ, ಹುಡುಕಾಡುವ ಹೈಡ್ರಾಮ ನಡೆಸಿ. ಅದೇ ದಿನ ಕೊಲೆಯಾದವನ ಮನೆಯಲ್ಲೇ ಊಟ ಮಾಡಿದ್ದಾರೆ. ಅಂತಿಮವಾಗಿ ಆರೋಪಿಗಳಾದ ಲೋಕೇಶ್, ಸಚಿನ್,ರಂಜಿತ್​ನನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

Follow Us
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಬೈಕ್​​ ತಪ್ಪಿಸಲು ಹೋಗಿ ಖಾಸಗಿ ಬಸ್​​ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ
ಬೈಕ್​​ ತಪ್ಪಿಸಲು ಹೋಗಿ ಖಾಸಗಿ ಬಸ್​​ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ