Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುತ್ರ ವ್ಯಾಮೋಹದಲ್ಲಿ ವಂಚನೆಗೀಡಾದ ವೃದ್ಧೆ: ಸಂಬಂಧಿ ನಿರ್ದೇಶಕ, ನಿರ್ಮಾಪಕ ಪರಾರಿ

ಬೆಂಗಳೂರು: ಸಂಬಂಧಿಕರ ನಂಬಿ ವೃದ್ಧೆಯೊಬ್ಬರು 10 ಲಕ್ಷ ರೂಪಾಯಿ ಮತ್ತು ಸುಮಾರು ಅರ್ಧ ಕೆಜಿ ಚಿನ್ನ ಕಳೆದುಕೊಂಡು ವಂಚನೆಗೊಳಗಾಗಿದ್ದಾರೆ. ಕೇಸ್‌ವೊಂದರಲ್ಲಿ ವೃದ್ಧೆ ಗಿರಿಜಮ್ಮ ಅವರ ಪುತ್ರನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಪುತ್ರನನ್ನ ಬಿಡಿಸುವುದಾಗಿ ನಂಬಿಸಿ, ಗಿರಿಜಮ್ಮಗೆ ಅವರ ಸಂಬಂಧಿಗಳೇ ಆದ ನಿರ್ದೇಶಕ ಪ್ರಶಾಂತ್ ರಾಜ್ ಮತ್ತು ನಿರ್ಮಾಪಕ ನವೀನ್ ರಾಜ್ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ನಿರ್ದೇಶಕ ಪ್ರಶಾಂತ್ ರಾಜ್, ನಿರ್ಮಾಪಕ ನವೀನ್ ರಾಜ್ ಮತ್ತು ಆತನ ಮಾವ ನಾಗರಾಜ್ ಗಿರಿಜಮ್ಮ ಬಳಿ ₹10 ಲಕ್ಷ, 542 […]

ಪುತ್ರ ವ್ಯಾಮೋಹದಲ್ಲಿ ವಂಚನೆಗೀಡಾದ ವೃದ್ಧೆ: ಸಂಬಂಧಿ ನಿರ್ದೇಶಕ, ನಿರ್ಮಾಪಕ ಪರಾರಿ
Follow us
ಸಾಧು ಶ್ರೀನಾಥ್​
|

Updated on:Dec 15, 2019 | 1:25 PM

ಬೆಂಗಳೂರು: ಸಂಬಂಧಿಕರ ನಂಬಿ ವೃದ್ಧೆಯೊಬ್ಬರು 10 ಲಕ್ಷ ರೂಪಾಯಿ ಮತ್ತು ಸುಮಾರು ಅರ್ಧ ಕೆಜಿ ಚಿನ್ನ ಕಳೆದುಕೊಂಡು ವಂಚನೆಗೊಳಗಾಗಿದ್ದಾರೆ. ಕೇಸ್‌ವೊಂದರಲ್ಲಿ ವೃದ್ಧೆ ಗಿರಿಜಮ್ಮ ಅವರ ಪುತ್ರನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಪುತ್ರನನ್ನ ಬಿಡಿಸುವುದಾಗಿ ನಂಬಿಸಿ, ಗಿರಿಜಮ್ಮಗೆ ಅವರ ಸಂಬಂಧಿಗಳೇ ಆದ ನಿರ್ದೇಶಕ ಪ್ರಶಾಂತ್ ರಾಜ್ ಮತ್ತು ನಿರ್ಮಾಪಕ ನವೀನ್ ರಾಜ್ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ನಿರ್ದೇಶಕ ಪ್ರಶಾಂತ್ ರಾಜ್, ನಿರ್ಮಾಪಕ ನವೀನ್ ರಾಜ್ ಮತ್ತು ಆತನ ಮಾವ ನಾಗರಾಜ್ ಗಿರಿಜಮ್ಮ ಬಳಿ ₹10 ಲಕ್ಷ, 542 ಗ್ರಾಂ ಚಿನ್ನ ಪಡೆದು ವಂಚನೆ ಎಸಗಿದ್ದಾರೆ. ಜೊತೆಗೆ, ಪುತ್ರನನ್ನ ಬಿಡಿಸುವುದಕ್ಕೆ ವೃದ್ಧೆ ಗಿರಿಜಮ್ಮ ಬಳಿ 20 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರಂತೆ. ಗಿರಿಜಮ್ಮಗೆ ಈ ಮೂವರೂ ಹತ್ತಿರ ಸಂಬಂಧಿಗಳು ಎಂದು ತಿಳಿದುಬಂದಿದೆ.

ಮೊದಲು, ಆರೋಪಿಗಳ ಮಾತನ್ನು ನಂಬಿ ಗಿರಿಜಮ್ಮ 10 ಲಕ್ಷ ರೂಪಾಯಿ ನೀಡಿದ್ದರು. ಆದ್ರೆ ಈ ಹಣ ಸಾಕಾಗಲ್ಲ ಅಂದಿದ್ದಕ್ಕೆ 542 ಗ್ರಾಂ ಚಿನ್ನ ಸಹ ನೀಡಿದ್ರು. ಆದ್ರೆ ಕಾನೂನು ಪ್ರಕಾರವೇ ವೃದ್ಧೆ ಗಿರಿಜಮ್ಮ ಅವರ ಪುತ್ರ ಬಿಡುಗಡೆಯಾಗಿದ್ದ. ಪುತ್ರ ಮನೆಗೆ ಬಂದ ಬಳಿಕ ಆರೋಪಿಗಳ ವಂಚನೆ ಬೆಳಕಿಗೆ ಬಂದಿದೆ. ಗಿರಿಜಮ್ಮ, ಕೂಡಲೇ HAL ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿಗಳಿಗಾಗಿ ಹೆಚ್‌ಎಎಲ್ ಠಾಣೆ ಪೊಲೀಸರಿಂದ ಶೋಧ ನಡೆದಿದೆ.

Published On - 10:30 am, Sun, 15 December 19

Weekly Horoscope: ಮಾರ್ಚ್ 30 ರಿಂದ ಏಪ್ರಿಲ್ 6 ರವರೆಗಿನ ವಾರ ಭವಿಷ್ಯ
Weekly Horoscope: ಮಾರ್ಚ್ 30 ರಿಂದ ಏಪ್ರಿಲ್ 6 ರವರೆಗಿನ ವಾರ ಭವಿಷ್ಯ
IPL 2025: ಕನ್ನಡಿಗನ ಕರಾರುವಾಕ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್
IPL 2025: ಕನ್ನಡಿಗನ ಕರಾರುವಾಕ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್
Daily Devotional: ಯುಗಾದಿ ಆಚರಣೆ ಹಾಗೂ ಅದರ ಮಹತ್ವ ತಿಳಿಯಿರಿ
Daily Devotional: ಯುಗಾದಿ ಆಚರಣೆ ಹಾಗೂ ಅದರ ಮಹತ್ವ ತಿಳಿಯಿರಿ
Daily Horoscope: ಯುಗಾದಿಯಂದು ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
Daily Horoscope: ಯುಗಾದಿಯಂದು ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು