AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳೆಯ ಸ್ನೇಹ ಬೆಳೆಸಿದ ಗಾರೆ ಕೆಲಸಗಾರ; ಊರವರ ಮಾತಿಗೆ ಅಂಜಿ ಸ್ನೇಹ ಬೇಡ ಎಂದಿದ್ದಕ್ಕೆ ಎಸಗಿಯೇ ಬಿಟ್ಟ ಹೇಯ ಕೃತ್ಯ

ಗಾರೆ ಕೆಲಸಕ್ಕೆ ಬಂದವನು ಮನೆಯೊಡತಿಯ ಸ್ನೇಹ ಬೆಳಿಸಿ, ಆಕೆ ಸಂಸಾರವನ್ನೇ ನಾಶ ಮಾಡಿರುವ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಕ್ಯಾತನಹಳ್ಳಿಯಲ್ಲಿ ನಡೆದಿದೆ

ಮಹಿಳೆಯ ಸ್ನೇಹ ಬೆಳೆಸಿದ ಗಾರೆ ಕೆಲಸಗಾರ; ಊರವರ ಮಾತಿಗೆ ಅಂಜಿ ಸ್ನೇಹ ಬೇಡ ಎಂದಿದ್ದಕ್ಕೆ ಎಸಗಿಯೇ ಬಿಟ್ಟ ಹೇಯ ಕೃತ್ಯ
ಆರೋಪಿ ಮೂಡ್ಲಗಿರಿ
TV9 Web
| Updated By: ಮದನ್​ ಕುಮಾರ್​|

Updated on:Nov 06, 2022 | 11:35 PM

Share

ಆತನ ತಂದೆ ಮೃತಪಟ್ಟು 12 ದಿನ ಕಳೆದಿತ್ತು, ಹನ್ನೊಂದನೇ ದಿನದ ತಿಥಿಕಾರ್ಯ ಮುಗಿಸಿ ನೆಂಟರಿಷ್ಟರೆಲ್ಲಾ ಊರು ಸೇರಿಕೊಂಡಿದ್ದರು. ಮನೆಯಲ್ಲಿ ಅಪ್ಪ ಸತ್ತ ದುಖಃ ಇನ್ನು ಕಮ್ಮಿ ಆಗಿರಲಿಲ್ಲ, ಇಂತಹ ವೇಳೆಯಲ್ಲಿ ನಿನ್ನೆ ಇದ್ದಕ್ಕಿದ್ದಂತೆ ಮನೆ ಬಳಿ ಬಂದಿದ್ದ ದುರುಳನೊಬ್ಬ ಏಕಾ ಏಕಿ ಮನೆಯೊಡತಿಮೇಲೆ ಅಟ್ಯಾಕ್ ಮಾಡಿದ್ದಾನೆ. ನನ್ನ ಹೆಂಡತಿಗೆ ಏಕೆ ಹೊಡಿತೀಯ ಅಂತಾ ಕೇಳೋಕೆ ಹೋದರೇ ಗಂಡ ಹೆಂಡಿರಿಬ್ಬರ ಮೇಲೂ ಪಾಪಿ ದಾಳಿಮಾಡಿದ್ದನಾಎ. ಇದರಿಂದ ದಂಪತಿಗೆ ತೀವೃ ಗಾಯಗೊಂಡಿದ್ದು,ಗಂಡ ಸ್ಥಳದಲ್ಲೇ ಮೃತಪಟ್ಟರೇ, ಪತ್ನಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ.

ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಕ್ಯಾತನಹಳ್ಳಿಯಲ್ಲಿ ದಂಪತಿಗೆ ವ್ಯಕ್ತಿಯೊಬ್ಬ ಚೂರಿಯಿಂದ ಇರದಿದ್ದಾನೆ. ಇದರಿಂದ ಜವರಯ್ಯ (50) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ತೀವೃವಾಗಿ ಗಾಯಗೊಂಡಿದ್ದ ಜವರಯ್ಯ ಪತ್ನಿ ಮಂಜುಳಾ ಸಾವು ಬದುಕಿನ ನಡುವೆ ಹೋರಾಡುತ್ತಿದ್ದು, ಹಾಸನದ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜವರಯ್ಯ ಇತ್ತೀಚಿಗೆ ತನ್ನ ಮನೆ ನವೀಕರಣ ಕೆಲಸ ಶುರುಮಾಡಿದ್ದರು. ಈ ಹಿನ್ನೆಲೆ ಪಕ್ಕದ ಗ್ರಾಮವಾದ ಮಾಚಗೌಡನಹಳ್ಳಿಯ ಮೂಡ್ಲಗಿರಿ ಎಂಬಾತನಿಗೆ ಮನೆಯ ಗಾರೆ ಕೆಲಸ ಹಾಗು ಎಲೆಕ್ಟ್ರಿಕ್ ಕೆಲಸಕ್ಕೆಂದು ಗುತ್ತಿಗೆ ನೀಡಿದ್ದರು. ಈಗಾಗಲೆ ಇಬ್ಬರು ಪತ್ನಿಯರನ್ನು ಹೊಂದಿರೋ ಮೂಡ್ಲಗಿರಿ ಮಂಜುಳಾ ಜೊತೆ ಸ್ನೇಹ ಬೆಳೆಸಿ ಸಲುಗೆಯಿಂದ ಇರುತ್ತಿದ್ದನು. ಈ ವಿಚಾರ ಊರಿಗೆಲ್ಲಾ ಗೊತ್ತಾಗಿ ಊರಿನ ಜನರು ಏನೇನೋ ಮಾತನಾಡಿಕೊಳ್ಳೋಕೆ ಶುರು ಮಾಡಿದರು. ಈ ವಿಷಯ ಜವರಯ್ಯನ ಕಿವಿಗು ಬಿದ್ದಿತ್ತು, ಇದರಿಂದ ಕುಪಿತನಾದ ಜವರಯ್ಯ ಪತ್ನಿಗೆ ಅವನ ಸ್ನೇಹ ಬಿಟ್ಟುಬಿಡು ಎಂದು ವಾರ್ನ್ ಮಾಡಿದ್ದನು. ಮಂಜುಳಾ ಕೂಡ ಮೂಡ್ಲಗಿರಿಗೆ ನನ್ನ ನಿನ್ನ ಸ್ನೇಹದ ಬಗ್ಗೆ ಊರಿನ ಜನರ ಬೇರೇನೋ ಮಾತನಾಡುತ್ತಿದ್ದಾರೆ, ಇನ್ಮುಂದೆ ನನ್ನ ಮನೆ ಹತ್ತಿರ ಬರಬೇಡ ಎಂದು ಹೇಳಿದ್ದಳು. ಇದರಿಂದ ಸಿಟ್ಟಿಗೆದ್ದಿದ್ದ ಪಾಪಿ ಮೂಡ್ಲಿಗಿರಿ ನಿನ್ನೆ ಬೆಳಿಗ್ಗೆಯೇ ಪಾನಮತ್ತನಾಗಿ ಅವಳಿಗೆ ಬುದ್ದಿ ಕಲಿಸುತ್ತೇನೆ ಎಂದು ಕೈಯಲ್ಲಿ ಚಾಕು ಹಿಡಿದುಕೊಂಡು ಬೈಕ್​ನಲ್ಲಿ ಮನೆ ಬಂದಿದ್ದಾನೆ. ಬಂದವನೇ ಸೀದಾ ಮಂಜುಳಾ ಮೇಲೆ ಹಲ್ಲೆಮಾಡಿದ್ದಾನೆ.

ಆಗ ಜವರಯ್ಯ ನನ್ನ ಹೆಂಡತಿಗೆ ನೀ ಯಾಕೆ ಹೊಡಿತೀಯಾ ಎಂದು ಪ್ರಶ್ನೆ ಮಾಡಿದ್ದಾನೆ. ಇಲ್ಲಿ ಯಾಕೆ ಬಂದ್ದಿದ್ದೀಯಾ ಹೋಗು ಎಂದು ರೇಗಿದ್ದ ಅಷ್ಟೇ, ನೋಡ ನೋಡುತ್ತೆಲೆ ಸೊಂಟದಲ್ಲಿದ್ದ ಚಾಕು ತೆಗೆದು ಮಂಜುಳಾ ಮೇಲೆ ದಾಳಿ ಮಾಡಿದ ಮೂಡ್ಲಗಿರಿ ಕೊಲೆಮಾಡಲು ಮುಂದಾಗಿದ್ದಾನೆ. ಈ ವೇಳೆ ಪತ್ನಿ ರಕ್ಷಣೆಗೆ ಬಂದ ಜವರಯ್ಯನಿಗೂ ಇರಿದಿದ್ದಾನೆ. ಮೂಡ್ಲಗಿರಿ ಕೊಂದವನೇ ಅಲ್ಲಿಂದ ಎಸ್ಕೇಪ್ ಆಗೋಕೆ ಓಡಿದ್ದಾನೆ ಹಿಂಬಾಲಿಸಿ ಹೋದ ಜನರು ಕೂಡಲೆ ಆರೋಪಿಯನ್ನ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.

ಘಟನೆಯಲ್ಲಿ ತೀವೃವಾಗಿ ಗಾಯಗೊಂಡ ಜವರಯ್ಯ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಮಂಜುಳಾ ಹಾಸನದ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಪ್ರಕರಣ ದಾಖಲಿಸಿಕೊಂಡಿರುವ ಹೊಳೆನರಸೀಪುರ ನಗರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದು, ತನಿಖೆ ಬಳಿಕ ಕೊಲೆ ಹಿಂದಿನ ಅಸಲಿ ಸತ್ಯ ಹೊರ ಬರಲಿದೆ.

ಮಂಜುನಾಥ್ ಕೆಬಿ ಟಿವಿ9 ಹಾಸನ

Published On - 8:39 pm, Sun, 6 November 22

ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್