ಹುಚ್ಚನಂತೆ ನಟಿಸಿ ಬೈಕ್ ಕಳ್ಳತನ ಮಾಡ್ತಿದ್ದ ಖದೀಮ ಲಾಕ್, ಎಲ್ಲಿ?

ರಾಯಚೂರು: ಹುಚ್ಚನಂತೆ ನಟಿಸಿ ಮನೆ ಮುಂದೆ ನಿಂತಿದ್ದ ಬೈಕ್ ಕಳ್ಳತನಕ್ಕೆ ಯತ್ನಿಸಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ. ತಾಯಪ್ಪ ಬಂಧಿತ ಆರೋಪಿ. ಈತ ಬೈಕ್​ಗಳನ್ನು ಕದ್ದು ಹಣ ಮಾಡುತ್ತಿದ್ದ. ರಾಯಚೂರಿನ ನೇತಾಜಿನಗರ ಠಾಣೆ ಪೊಲೀಸರು ದಾಳಿ ನಡೆಸಿ ಬಂಧಿತನಿಂದ 3.40 ಲಕ್ಷ ರೂಪಾಯಿ ಮೌಲ್ಯದ 15 ಬೈಕ್ ಜಪ್ತಿ ಮಾಡಿದ್ದಾರೆ. ರಾಯಚೂರು ನಗರದ ಮಾಣಿಕ್ ಪ್ರಭು ಲೇಔಟ್​ನ ವಿದ್ಯಾನಿಧಿ ಕಾಲೇಜು ಬಳಿ ಹುಚ್ಚನಂತೆ ನಟಿಸಿ ಬೈಕ್ ಕಳ್ಳತನ‌ ಮಾಡಲು ಯತ್ನಿಸಿದ್ದಾಗ ಪೊಲೀಸರು ತಾಯಪ್ಪನನ್ನು ವಶಕ್ಕೆ ಪಡೆದಿದ್ದಾರೆ. ನಂತರ ದಾಳಿ ನಡೆಸಿ […]

ಹುಚ್ಚನಂತೆ ನಟಿಸಿ ಬೈಕ್ ಕಳ್ಳತನ ಮಾಡ್ತಿದ್ದ ಖದೀಮ ಲಾಕ್, ಎಲ್ಲಿ?
ಆಯೇಷಾ ಬಾನು Edited By: ಸಾಧು ಶ್ರೀನಾಥ್​

Updated on: Jun 28, 2020 | 8:26 AM

ರಾಯಚೂರು: ಹುಚ್ಚನಂತೆ ನಟಿಸಿ ಮನೆ ಮುಂದೆ ನಿಂತಿದ್ದ ಬೈಕ್ ಕಳ್ಳತನಕ್ಕೆ ಯತ್ನಿಸಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ. ತಾಯಪ್ಪ ಬಂಧಿತ ಆರೋಪಿ. ಈತ ಬೈಕ್​ಗಳನ್ನು ಕದ್ದು ಹಣ ಮಾಡುತ್ತಿದ್ದ.

ರಾಯಚೂರಿನ ನೇತಾಜಿನಗರ ಠಾಣೆ ಪೊಲೀಸರು ದಾಳಿ ನಡೆಸಿ ಬಂಧಿತನಿಂದ 3.40 ಲಕ್ಷ ರೂಪಾಯಿ ಮೌಲ್ಯದ 15 ಬೈಕ್ ಜಪ್ತಿ ಮಾಡಿದ್ದಾರೆ. ರಾಯಚೂರು ನಗರದ ಮಾಣಿಕ್ ಪ್ರಭು ಲೇಔಟ್​ನ ವಿದ್ಯಾನಿಧಿ ಕಾಲೇಜು ಬಳಿ ಹುಚ್ಚನಂತೆ ನಟಿಸಿ ಬೈಕ್ ಕಳ್ಳತನ‌ ಮಾಡಲು ಯತ್ನಿಸಿದ್ದಾಗ ಪೊಲೀಸರು ತಾಯಪ್ಪನನ್ನು ವಶಕ್ಕೆ ಪಡೆದಿದ್ದಾರೆ. ನಂತರ ದಾಳಿ ನಡೆಸಿ ಆತನ ಕದ್ದ ಬೈಕ್​ಗಳನ್ನು ಜಪ್ತಿ ಮಾಡಿದ್ದಾರೆ.

Published On - 8:07 am, Sun, 28 June 20

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us