Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೋತ್ತನ್​​ಕೋಡ್ ಸುಧೀಶ್ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಒಟ್ಟಕಂ ರಾಜೇಶ್ ಬಂಧನ

Pothencode Sudheesh murder case ಡಿ.11ರಂದು ಪೋತ್ತನ್​​ಕೋಡ್ ಕಾಲೇಜಿನಲ್ಲಿ ಬೈಕ್‌ ಮತ್ತು ಆಟೋದಲ್ಲಿ ಬಂದಿದ್ದ ವ್ಯಕ್ತಿಗಳ ತಂಡ ಸುಧೀಶ್‌ನನ್ನು ಕಡಿದು ಹತ್ಯೆ ಮಾಡಿತ್ತು. ಗುಂಪಿನಿಂದ ತಪ್ಪಿಸಿಕೊಳ್ಳಲು ಮನೆಯೊಂದಕ್ಕೆ ಓಡಿಹೋದ ಜನರ ಗುಂಪು ಸುಧೀಶ್ ಅವರನ್ನು ಬೆನ್ನಟ್ಟಿದ್ದು, ದೇಹಕ್ಕೆ ಇರಿದು ಎರಡೂ ಕಾಲುಗಳನ್ನು ಕತ್ತರಿಸಿತ್ತು.

ಪೋತ್ತನ್​​ಕೋಡ್ ಸುಧೀಶ್ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಒಟ್ಟಕಂ ರಾಜೇಶ್ ಬಂಧನ
ಒಟ್ಟಕಂ ರಾಜೇಶ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Dec 20, 2021 | 3:22 PM

ತಿರುವನಂತಪುರಂ: ಪೋತ್ತನ್​​ಕೋಡ್ ಸುಧೀಶ್ ಹತ್ಯೆ ಪ್ರಕರಣದ (Pothencode Sudheesh murder case) ಎರಡನೇ ಆರೋಪಿ ಒಟ್ಟಕಂ ರಾಜೇಶ್‌ನನ್ನು(‘Ottakam’ Rajesh) ಪೋತ್ತನ್​​ಕೋಡ್ ಪೊಲೀಸ್ ಠಾಣೆಗೆ ಕರೆತರಲಾಗಿದೆ. ಸೋಮವಾರ ಬೆಳಗ್ಗೆ 11.30ರ ಸುಮಾರಿಗೆ ರಾಜೇಶ್‌ನನ್ನು ಪೋತೆನ್‌ಕೋಡ್‌ಗೆ ಕರೆತರಲಾಗಿತ್ತು. ಭದ್ರತೆಯ ದೃಷ್ಟಿಯಿಂದ ಹೆಚ್ಚಿನ ಪೊಲೀಸರನ್ನು ಇಲ್ಲಿ ನಿಯೋಜಿಸಲಾಗಿತ್ತು. ಬಂಧನವನ್ನು ದಾಖಲಿಸಿ ಸೋಮವಾರವೇ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಪೊಲೀಸರ ಪ್ರಕಾರ ಸುಧೀಶ್​​ನನ್ನು ಕೊಂದು ನಾಪತ್ತೆಯಾಗಿದ್ದ ರಾಜೇಶ್ ಕೊಲ್ಲಂನಿಂದ ಪೊಲೀಸರು ಸೆರೆ ಹಿಡಿದಿದ್ದಾರೆ. ಪೊಲೀಸರ ಪ್ರಕಾರ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ವ್ಯಕ್ತಿ ಕೇರಳಕ್ಕೆ(Kerala) ಮರಳುತ್ತಿದ್ದಾಗ ಕೊಲ್ಲಂ ಬಸ್ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾನೆ.  ಡಿ.11ರಂದು ಪೋತ್ತನ್​​ಕೋಡ್ ಕಾಲೇಜು ಬಳಿ ಬೈಕ್‌ ಮತ್ತು ಆಟೋದಲ್ಲಿ ಬಂದಿದ್ದ ವ್ಯಕ್ತಿಗಳ ತಂಡ ಸುಧೀಶ್‌ನನ್ನು ಕಡಿದು ಹತ್ಯೆ ಮಾಡಿತ್ತು. ಗುಂಪಿನಿಂದ ತಪ್ಪಿಸಿಕೊಳ್ಳಲು ಮನೆಯೊಂದಕ್ಕೆ ಓಡಿಹೋದ ಜನರ ಗುಂಪು ಸುಧೀಶ್ ಅವರನ್ನು ಬೆನ್ನಟ್ಟಿದ್ದು, ದೇಹಕ್ಕೆ ಇರಿದು ಎರಡೂ ಕಾಲುಗಳನ್ನು ಕತ್ತರಿಸಿತ್ತು. ದಾಳಿಕೋರರು ಈ ಕಾಲುಗಳಲ್ಲಿ ಒಂದನ್ನು ಒಯ್ದಿದ್ದು, ನಂತರ ತುಂಡರಿಸಿದ ಕಾಲನ್ನು ರಸ್ತೆಯಲ್ಲಿ ಬಿಸಾಡಿದ್ದಾರೆ.

ಪ್ರಕರಣದಲ್ಲಿ ಒಟ್ಟು 11 ಆರೋಪಿಗಳಿದ್ದಾರೆ. ಈ ಪೈಕಿ ಹತ್ತು ಮಂದಿಯನ್ನು ಕಳೆದ ಕೆಲ ದಿನಗಳಲ್ಲಿ ಪೊಲೀಸರು ಬಂಧಿಸಿದ್ದರು. ಆದರೆ ಎರಡನೇ ಆರೋಪಿ ಒಟ್ಟಕಂ ರಾಜೇಶನನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಈತನಿಗಾಗಿ ಪೊಲೀಸರು ತಿರುವನಂತಪುರ ಮತ್ತು ಕೊಲ್ಲಂ ಜಿಲ್ಲೆಗಳಲ್ಲಿ ವ್ಯಾಪಕ ಶೋಧ ನಡೆಸಿದ್ದರು. ಒಟ್ಟಕಂ ರಾಜೇಶ್‌ಗಾಗಿ ಹುಡುಕಾಟ ನಡೆಸುತ್ತಿದ್ದ ವೇಳೆ ಬೋಟ್‌ ಮುಳುಗಿ ಪೊಲೀಸ್‌ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ. ವರ್ಕಳ ಕ್ಯಾಶ್ ರಿಜಿಸ್ಟರ್ ಬಳಿ ಬೋಟ್ ಮಗುಚಿ ಬಿದ್ದಿದ್ದು, ಎಸ್.ಎ.ಪಿ. ಶಿಬಿರದಲ್ಲಿದ್ದ ಪೊಲೀಸ್ ಬಾಲು ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟಕಂ ರಾಜೇಶ್ ದ್ವೀಪವೊಂದರಲ್ಲಿ ಅಡಗಿ ಕುಳಿತಿರುವ ಮಾಹಿತಿ ಪಡೆದ ಪೊಲೀಸ್ ತಂಡ ದೋಣಿ ಶೋಧಕ್ಕೆ ತೆರಳಿತ್ತು. ಅದೇ ವೇಳೆಗೆ ಕಳೆದ ಕೆಲ ದಿನಗಳಿಂದ ರಾಜೇಶ್ ಬಗ್ಗೆ ಪೊಲೀಸರಿಗೆ ಬಂದಿರುವ ಹಲವು ಮಾಹಿತಿಗಳು ತಪ್ಪು ಎಂಬುದು ತನಿಖೆಯಿಂದ ತಿಳಿದುಬಂದಿದೆ.

ವೈರತ್ವದಿಂದಾಗಿ ಚೆಂಬಕಮಂಗಲಂ ಪುನ್ನೈಕ್ಕುನ್ನಂ ಉರುಕೋಣಂ ಲಕ್ಷಂವೀಡು ಕಾಲೋನಿಯಲ್ಲಿ ಹಾಡಹಗಲೇ ಸುಧೀಶ್ (32) ಎಂಬಾತನನ್ನು ಕೊಲೆಗೈದ ಪ್ರಕರಣದ ಹಿಂದೆ ಸಂಚು ಇದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಡಿಐಜಿ ಸಂಜಯ್ ಕುಮಾರ್ ಗುರುದಿನ್ ಹೇಳಿದ್ದಾರೆ. ರಾಜೇಶ್ ಬಂಧನದ ನಂತರ ಪ್ರಕರಣದ ಎಲ್ಲಾ 11 ಆರೋಪಿಗಳನ್ನು ಬಂಧಿಸಲಾಗಿದೆ. ಭೀಕರ ಹತ್ಯೆ ನಡೆದ ಹತ್ತು ದಿನಗಳಲ್ಲೇ ಎಲ್ಲ ಆರೋಪಿಗಳನ್ನು ಬಂಧಿಸಲಾಗಿತ್ತು. ಮೊದಲನೇ ಆರೋಪಿ ಸುಧೀಶ ಉಣ್ಣಿ ಎಂಬಾತನನ್ನು ಊರುಪೊಯ್ಕ ಮಂಕಟ್ಟುಮುಳ ಸ್ನೇಹಪುರಂ ಎಸ್‌ಎಸ್ ಭವನದಲ್ಲಿ ಹಾಗೂ ಮೂರನೇ ಆರೋಪಿ ಚೆಂಬಕಮಂಗಲಂ ಉರುಕೋಣಂ ಲಕ್ಷಂವೀಡು ಮುಠಾಯಿ ಶ್ಯಾಮಕುಮಾರ್​​ನ್ನುಭಾನುವಾರ ಬಂಧಿಸಲಾಗಿದೆ.

ಇದನ್ನೂ ಓದಿ: Omicron ದೆಹಲಿ, ಕರ್ನಾಟಕ, ಕೇರಳದಲ್ಲಿ ಮತ್ತಷ್ಟು ಒಮಿಕ್ರಾನ್ ಪ್ರಕರಣ ಪತ್ತೆ, ದೇಶದಲ್ಲಿ ಪ್ರಕರಣಗಳ ಸಂಖ್ಯೆ 167ಕ್ಕೆ ಏರಿಕೆ

Published On - 2:30 pm, Mon, 20 December 21

ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ