ಅಯ್ಯೋ ಯಾರೋ ಮೊಬೈಲ್ ಕದ್ಬಿಟ್ರು ಎಂದು ದೂರು ಕೊಡೋಕೆ ಹೊರಟಿದ್ದ ಯುವಕ, ಕೆಲವೇ ನಿಮಿಷಗಳಲ್ಲಿ ಬೈಕ್ ಕೂಡ ಕಳೆದುಕೊಂಡ

ಅದೃಷ್ಟ ಕೆಟ್ಟರೆ ಒಂಟೆಯ ಮೇಲೆ ಕುಳಿತವರಿಗೂ ನಾಯಿ ಕಚ್ಚಬಹುದು ಎನ್ನುವ ಗಾದೆ ಇದೆ, ಹಾಗೆಯೇ ದುರಾದೃಷ್ಟವೆಂದರೆ ಇದೇ ನೋಡಿ, ಮೊಬೈಲ್ ಕಳೆದುಕೊಂಡು ದೂರು ಕೊಡಲು ಹೋಗುತ್ತಿದ್ದ ವ್ಯಕ್ತಿ ಇದೀಗ ಬೈಕ್​ನ್ನು ಕೂಡ ಕಳೆದುಕೊಂಡಿದ್ದಾರೆ.

ಅಯ್ಯೋ ಯಾರೋ ಮೊಬೈಲ್ ಕದ್ಬಿಟ್ರು ಎಂದು ದೂರು ಕೊಡೋಕೆ ಹೊರಟಿದ್ದ ಯುವಕ, ಕೆಲವೇ ನಿಮಿಷಗಳಲ್ಲಿ ಬೈಕ್ ಕೂಡ ಕಳೆದುಕೊಂಡ
ಮೊಬೈಲ್ ಕಳ್ಳತನImage Credit source: Deccan Herald
Follow us
|

Updated on: Jul 28, 2023 | 10:46 AM

ಪುಣೆ, ಜುಲೈ 28:  ಅದೃಷ್ಟ ಕೆಟ್ಟರೆ ಒಂಟೆಯ ಮೇಲೆ ಕುಳಿತವರಿಗೂ ನಾಯಿ ಕಚ್ಚಬಹುದು ಎನ್ನುವ ಗಾದೆ ಇದೆ, ಹಾಗೆಯೇ ದುರಾದೃಷ್ಟವೆಂದರೆ ಇದೇ ನೋಡಿ, ಮೊಬೈಲ್ ಕಳೆದುಕೊಂಡು ದೂರು ಕೊಡಲು ಹೋಗುತ್ತಿದ್ದ ವ್ಯಕ್ತಿ ಇದೀಗ ಬೈಕ್​ನ್ನು ಕೂಡ ಕಳೆದುಕೊಂಡಿದ್ದಾರೆ. ಮೊದಲು ಸಹಾಯ ಕೇಳುವ ನೆಪದಲ್ಲಿ ಬಂದು ವ್ಯಕ್ತಿಯ ಮೊಬೈಲ್ ಅನ್ನು ಕದ್ದು ಪರಾರಿಯಾಗಿದ್ದರು, ಪೊಲೀಸರಿಗೆ ದೂರು ನೀಡಲು ತೆರಳುತ್ತಿದ್ದ ವ್ಯಕ್ತಿಗೆ ಸಹಾಯ ಮಾಡುವ ನೆಪದಲ್ಲಿ ಬಂದು ಮತ್ತೊಬ್ಬ ಬೈಕ್​ ಅನ್ನು ಕೂಡ ಕದ್ದೊಯ್ದಿದ್ದಾನೆ. ಈ ಘಟನೆ ಪುಣೆಯಲ್ಲಿ ನಡೆದಿದೆ.

ಈ ಸಂಬಂಧ ಪುಣೆಯ ಭೋಸಾರಿ ಪೊಲೀಸ್ ಠಾಣೆಯಲ್ಲಿ ಐಪಿಸಿಯ ಸೆಕ್ಷನ್ 406 ಮತ್ತು 420 (ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆ ಜುಲೈ 20 ರಂದು ನಡೆದಿದೆ, ಯಾರಿಗೋ ಕರೆ ಮಾಡಬೇಕು ತನ್ನ ಬಳಿ ಮೊಬೈಲ್ ಇಲ್ಲ ಸ್ವಲ್ಪ ಮೊಬೈಲ್ ಕೊಡ್ತೀರಾ ಎಂದು ಕೇಳಿದ್ದರು, ಇವರು ಮೊಬೈಲ್ ಕೊಟ್ಟ ತಕ್ಷಣ ಆತ ಓಡಿ ಹೋಗಿದ್ದಾನೆ.

ಮತ್ತಷ್ಟು ಓದಿ:ಚಿಕ್ಕಮಗಳೂರು: ತರಕಾರಿ ಅಂಗಡಿಯಿಂದ 40 ಕೆಜಿ ಟೊಮೆಟೊ ಕಳ್ಳತನ

ವ್ಯಕ್ತಿ ಪೊಲೀಸ್ ಠಾಣೆಯ ವಿಳಾಸವನ್ನು ಅಲ್ಲಿದ್ದ ಜನರ ಬಳಿ ಕೇಳುತ್ತಿದ್ದರು, ಆ ಸಂದರ್ಭದಲ್ಲಿ ಪೊಲೀಸ್ ಠಾಣೆಗೆ ಬಂದು ದೂರು ನೀಡಲು ಸಹಾಯ ಮಾಡುವುದಾಗಿ ಹೇಳಿ ಕರೆದೊಯುತ್ತೇನೆ ಆದರೆ ಅದರ ಪ್ರತಿಯಾಗಿ ಸಿಗರೇಟ್ ಕೊಡಿಸಬೇಕು ಎಂದು ಕೇಳಿದ್ದ, ಸಿಗರೇಟ್ ತರಲು ಆತ ಅಂಗಡಿಗೆ ಹೋದಾಗ ಅಪರಿಚಿತ ಬೈಕ್ ಸಮೇತ ಪರಾರಿಯಾಗಿದ್ದಾನೆ. ಸದ್ಯ ಪ್ರಕರಣದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ಬೈಯ್ಯುವ ಬಿಜೆಪಿ ಶಾಸಕ ಹರೀಶ್ ವಿಡಿಯೋ ವೈರಲ್
ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ಬೈಯ್ಯುವ ಬಿಜೆಪಿ ಶಾಸಕ ಹರೀಶ್ ವಿಡಿಯೋ ವೈರಲ್
ಪ್ರತಾಪ್ ಪರಿಸ್ಥಿತಿ ನೋಡಿ ತಪ್ಪಿತಸ್ಥ ಭಾವನೆ ಕಾಡಿದ್ದು ವರ್ತೂರಿಗೆ ಮಾತ್ರ​
ಪ್ರತಾಪ್ ಪರಿಸ್ಥಿತಿ ನೋಡಿ ತಪ್ಪಿತಸ್ಥ ಭಾವನೆ ಕಾಡಿದ್ದು ವರ್ತೂರಿಗೆ ಮಾತ್ರ​
ತುಕಾಲಿಯ ಡ್ಯಾನ್ಸ್​ ನೋಡಿ ಬೆಚ್ಚಿ ಬಿದ್ದ ಮನೆ ಮಂದಿ
ತುಕಾಲಿಯ ಡ್ಯಾನ್ಸ್​ ನೋಡಿ ಬೆಚ್ಚಿ ಬಿದ್ದ ಮನೆ ಮಂದಿ
ಕಾಮಸಮುದ್ರ ಅರಣ್ಯದತ್ತ ಆಗಮಿಸಿದ 50ಕ್ಕೂ ಹೆಚ್ಚು ಕಾಡಾನೆಗಳು
ಕಾಮಸಮುದ್ರ ಅರಣ್ಯದತ್ತ ಆಗಮಿಸಿದ 50ಕ್ಕೂ ಹೆಚ್ಚು ಕಾಡಾನೆಗಳು
ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ
ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ
ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಇಲ್ಲಿದೆ ಮನಕಲುಕುವ ದೃಶ್ಯ
ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಇಲ್ಲಿದೆ ಮನಕಲುಕುವ ದೃಶ್ಯ
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ
1 ಆಧಾರ್​ ಕಾರ್ಡ್​ನ 2 ಪ್ರತಿ ತೋರಿಸಿ KSRTCಯಲ್ಲಿ ಇಬ್ಬರು ಮಹಿಳೆಯರ ಪ್ರಯಾಣ
1 ಆಧಾರ್​ ಕಾರ್ಡ್​ನ 2 ಪ್ರತಿ ತೋರಿಸಿ KSRTCಯಲ್ಲಿ ಇಬ್ಬರು ಮಹಿಳೆಯರ ಪ್ರಯಾಣ
ಭಾರತ-ಆಫ್ರಿಕಾ ಟಿ20 ಟ್ರೋಫಿ ಫೋಟೋ ಶೂಟ್​ನಲ್ಲಿ ಮಿಂಚಿದ ಸೂರ್ಯ: ವಿಡಿಯೋ
ಭಾರತ-ಆಫ್ರಿಕಾ ಟಿ20 ಟ್ರೋಫಿ ಫೋಟೋ ಶೂಟ್​ನಲ್ಲಿ ಮಿಂಚಿದ ಸೂರ್ಯ: ವಿಡಿಯೋ
‘ನನಗೆ ಯುವರಾಜ್​ ಅಂತ ಅವರೇ ಹೆಸರು ಇಟ್ಟಿದ್ದು’: ಲೀಲಾವತಿ ಮೊಮ್ಮಗನ ಮಾತು
‘ನನಗೆ ಯುವರಾಜ್​ ಅಂತ ಅವರೇ ಹೆಸರು ಇಟ್ಟಿದ್ದು’: ಲೀಲಾವತಿ ಮೊಮ್ಮಗನ ಮಾತು