AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾರ್ಟಿ ವೇಳೆ ಪೆಗ್​ ಹಾಕುವ ವಿಚಾರಕ್ಕೆ ಗಲಾಟೆ; ಸ್ನೇಹಿತನಿಂದಲೇ ಕೊಲೆಯಾದ ರಿಟಾಯರ್ಡ್ ಎಎಸ್​ಐ ಪುತ್ರ

ಎಣ್ಣೆ ಪಾರ್ಟಿ ವೇಳೆ ಸರಿಯಾಗಿ ಪೆಗ್ ಹಾಕಲು ಬರಲ್ಲವೆಂದು ನಡೆದ ಗಲಾಟೆಯಲ್ಲಿ ಆತ್ಮೀಯ ಸ್ನೇಹಿತನಿಂದಲೇ ಎಎಸ್​ಐ ಪುತ್ರ ಕೊಲೆಯಾದ ಘಟನೆ ರಾಮನಗರ(Ramanagara)ಜಿಲ್ಲೆಯ ಕನಕಪುರ ತಾಲೂಕಿನ ಕಲ್ಕೆರೆದೊಡ್ಡಿ ಗ್ರಾಮದಲ್ಲಿ ನಡೆದಿದೆ. ದೀಪಕ್(23)​​ ಮೃತ ರ್ದುದೈವಿ.

ಪಾರ್ಟಿ ವೇಳೆ ಪೆಗ್​ ಹಾಕುವ ವಿಚಾರಕ್ಕೆ ಗಲಾಟೆ; ಸ್ನೇಹಿತನಿಂದಲೇ ಕೊಲೆಯಾದ ರಿಟಾಯರ್ಡ್ ಎಎಸ್​ಐ ಪುತ್ರ
ಸ್ನೇಹಿತನಿಂದಲೇ ಕೊಲೆಯಾದ ರಿಟಾಯರ್ಡ್ ಎಎಸ್​ಐ ಪುತ್ರ
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Updated By: ಕಿರಣ್ ಹನುಮಂತ್​ ಮಾದಾರ್|

Updated on:Dec 25, 2023 | 5:13 PM

Share

ರಾಮನಗರ‌, ಡಿ.25: ಎಣ್ಣೆ ಪಾರ್ಟಿ ವೇಳೆ ಸರಿಯಾಗಿ ಪೆಗ್ ಹಾಕಲು ಬರಲ್ಲವೆಂದು ನಡೆದ ಗಲಾಟೆಯಲ್ಲಿ ಆತ್ಮೀಯ ಸ್ನೇಹಿತನಿಂದಲೇ ನಿವೃತ್ತ ಎಎಸ್​ಐ ಪುತ್ರ ಕೊಲೆಯಾದ ಘಟನೆ ರಾಮನಗರ(Ramanagara)ಜಿಲ್ಲೆಯ ಕನಕಪುರ ತಾಲೂಕಿನ ಕಲ್ಕೆರೆದೊಡ್ಡಿ ಗ್ರಾಮದಲ್ಲಿ ನಡೆದಿದೆ. ದೀಪಕ್(23)​​ ಮೃತ ರ್ದುದೈವಿ. ಮನೆ ಕಟ್ಟಿಸುತ್ತಿದ್ದೇನೆ ಪಾರ್ಟಿ ಕೊಡುತ್ತೇನೆ ಬಾ ಎಂದು ಆರೋಪಿ ಪ್ರಸಾದ್ ಕರೆದಿದ್ದ. ಈ ಹಿನ್ನಲೆ ನಿನ್ನೆ(ಡಿ.24) ರಾತ್ರಿ ಭರ್ಜರಿ ಪಾರ್ಟಿ ಮಾಡಿದ್ದಾರೆ. ಈ ವೇಳೆ ಸರಿಯಾಗಿ ಪೆಗ್ ಹಾಕು ಎಂದು ಸ್ನೇಹಿತ ಪ್ರಸಾದ್ ಕೆನ್ನೆಗೆ ದೀಪಕ್ ಹೊಡೆದಿದ್ದಾನೆ. ಸ್ನೇಹಿತ ದೀಪಕ್ ಮಾತಿಗೆ ಆರೋಪಿ ಪ್ರಸಾದ್​ಗೆ ಕೋಪ ಬಂದಿದೆ.

ದೀಪಕ್ ಮಲಗಿದಾಗ ತಲೆಗೆ ಇಟ್ಟಿಗೆ ಎತ್ತಿ ಹಾಕಿ ಬರ್ಬರ ಹತ್ಯೆ

ಇನ್ನು ದೀಪಕ್​ ಕೆನ್ನೆಗೆ ಹೊಡೆಯುತ್ತಿದ್ದಂತೆ ಪ್ರಸಾದ್​ಗೆ ಕೋಪ ಬಂದಿದೆ. ಆದರೂ, ಆ ಕ್ಷಣದಲ್ಲಿ ತಡಕೊಂಡ ಪ್ರಸಾದ್​, ದೀಪಕ್ ಜೊತೆಯೇ ಮಲಗುವ ರೀತಿ ನಾಟಕವಾಡಿದ್ದಾನೆ. ಅದರಂತೆ ದೀಪಕ್ ಮಲಗಿದಾಗ ಪ್ರಸಾದ್​, ತಲೆಗೆ ಇಟ್ಟಿಗೆ ಎತ್ತಿ ಹಾಕಿ ಬರ್ಬರ ಹತ್ಯೆ ಮಾಡಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಪೆಗ್ ವಿಚಾರಕ್ಕಾಗಿಯೇ ಕೊಲೆ ನಡೆದಿದ್ಯಾ ಅಥವಾ ಹಿಂದಿನ‌ ದ್ವೇಷ ಏನಾದ್ರೂ ಇದೆಯಾ ಎಂದು ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಹಾವೇರಿ: ಹೆತ್ತವರ ಕಣ್ಣು ಮುಂದೆಯೇ ಹರಿತು ಮಗಳ ನೆತ್ತರು!ಕೊಲೆ ಮಾಡಿದ ಪತಿಗೆ ಗ್ರಾಮಸ್ಥರಿಂದ ಧರ್ಮದೇಟು

ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ಹೊರವಲಯದಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕಾರು ಸುಟ್ಟು ಭಸ್ಮವಾಗಿದೆ. ಹೊನ್ನಾಳಿ ಮೂಲದ ರಮೇಶಾಚಾರಿಗೆ ಸೇರಿದ ಕಾರು ಇದಾಗಿದ್ದು, ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದಾವಣಗೆರೆಯಿಂದ ಬೆಂಗಳೂರು ಕಡೆ ತೆರಳುವಾಗ ಈ ದುರ್ಟಘನೆ ನಡೆದಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಘಟನೆ ಸಂಬಂಧ ಸ್ಥಳಕ್ಕೆ ಹಿರಿಯೂರು ಟೌನ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:07 pm, Mon, 25 December 23

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ