1 ಕೋಟಿ ರೂ. ವಿಮೆ ಹಣಕ್ಕಾಗಿ ತಂಗಿಯನ್ನೇ ಕೊಂದ ಅಣ್ಣ; ಆಂಧ್ರದಲ್ಲೊಂದು ಆಘಾತಕಾರಿ ಘಟನೆ

ಆಂಧ್ರಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. 1 ಕೋಟಿ ರೂ. ವಿಮೆಗಾಗಿ ತನ್ನ ತಂಗಿಯನ್ನೇ ಕೊಂದು ಅದೊಂದು ಕಾರು ಅಪಘಾತವೆಂದು ಬಿಂಬಿಸಿದ್ದ ಅಣ್ಣ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ವಿಮಾ ಪಾವತಿಗಾಗಿ ತನ್ನ ತಂಗಿಯನ್ನು ಕೊಲೆ ಮಾಡಿದ್ದಕ್ಕಾಗಿ ಆಂಧ್ರಪ್ರದೇಶದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಸಾಕಷ್ಟು ಪ್ಲಾನ್ ಮಾಡಿ ಕೊಲೆ ಮಾಡಿದ್ದ ವ್ಯಕ್ತಿ ಸಿಕ್ಕಿಬಿದ್ದಿದ್ದು ಹೇಗೆ? ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

1 ಕೋಟಿ ರೂ. ವಿಮೆ ಹಣಕ್ಕಾಗಿ ತಂಗಿಯನ್ನೇ ಕೊಂದ ಅಣ್ಣ; ಆಂಧ್ರದಲ್ಲೊಂದು ಆಘಾತಕಾರಿ ಘಟನೆ
Murder

Updated on: Jan 29, 2025 | 10:20 PM

ಹೈದರಾಬಾದ್: ಇನ್ಷುರೆನ್ಸ್ ಹಣವನ್ನು ಪಡೆಯಲು ತನ್ನ ತಂಗಿಯನ್ನು ಕೊಂದ ಆಂಧ್ರಪ್ರದೇಶದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಮಾಲಪತಿ ಅಶೋಕ್ ಕುಮಾರ್ ರೆಡ್ಡಿ ಎಂಬಾತ ತಿಂಗಳುಗಟ್ಟಲೆ ಪ್ಲಾನ್ ಮಾಡಿ, ಆಕೆಗೆ 1 ಕೋಟಿ ರೂ. ವಿಮೆ ಮಾಡಿಸಿದ್ದ. ಬಳಿಕ ಆಕೆಯ ಸಾವನ್ನು ಆತ ಅಪಘಾತವೆಂದು ಬಿಂಬಿಸಿದ್ದ. ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಅಶೋಕ್ ಕುಮಾರ್ ರೆಡ್ಡಿ ತನ್ನ ತಂಗಿಯನ್ನು ಕೊಂದು, ಆಕೆಯ ಸಾವನ್ನು ಅಪಘಾತವೆಂದು ಬಿಂಬಿಸಿದ್ದ. 1 ಕೋಟಿ ರೂ. ವಿಮಾ ಹಣವನ್ನು ಪಡೆಯಲು ಈ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು 1 ಕೋಟಿ ರೂ. ವಿಮಾ ಪಾವತಿಯನ್ನು ವಂಚಿಸಲು ತನ್ನ ವಿಚ್ಛೇದಿತ ಮತ್ತು ಮಕ್ಕಳಿಲ್ಲದ ತಂಗಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ. 2024ರ ಫೆಬ್ರವರಿ 2ರಂದು ಪೊಡಿಲಿಯ ಪೆಟ್ರೋಲ್ ಬಂಕ್ ಬಳಿ ನಡೆದ ಈ ಅಪರಾಧಕ್ಕಾಗಿ ಆರೋಪಿಯಾಗಿರುವ 30 ವರ್ಷದ ಮಾಲಪತಿ ಅಶೋಕ್ ಕುಮಾರ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ.

ಇದನ್ನೂ ಓದಿ: ಸೂಟ್‌ಕೇಸ್‌ನಲ್ಲಿ ದೆಹಲಿ ಮಹಿಳೆಯ ಸುಟ್ಟ ಶವ ಪತ್ತೆ; ಒಂದೇ ದಿನದಲ್ಲಿ ಕೊಲೆ ರಹಸ್ಯ ಬಯಲಾಗಿದ್ದು ಹೇಗೆ?

ಭಾರೀ ಸಾಲಗಳಿಂದ ಬಳಲುತ್ತಿದ್ದ ಅಶೋಕ್, ತನ್ನ ತಂಗಿಯ ಜೀವಕ್ಕೆ ವಿಮೆ ಮಾಡಿಸಿ, ಕೊಲೆ ಮಾಡಿ, ಅದನ್ನು ಅಪಘಾತ ಎಂದು ಬಿಂಬಿಸಿ ಹಣ ಪಡೆಯಲು ಪ್ಲಾನ್ ಮಾಡಿದ್ದ ಎನ್ನಲಾಗಿದೆ. ಘಟನೆ ನಡೆದ ದಿನ, ಅಶೋಕ್ ತನ್ನ ತಂಗಿಯನ್ನು ಓಂಗೋಲ್‌ಗೆ ಆಸ್ಪತ್ರೆಗೆ ಭೇಟಿ ನೀಡುವ ನೆಪದಲ್ಲಿ ತನ್ನ ಕಾರಿನೊಳಗೆ ಕೂರಿಸಿಕೊಂಡಿದ್ದ. ಅಲ್ಲಿಂದ ವಾಪಾಸ್ ಬರುವಾಗ ಆಕೆಗೆ ನಿದ್ರೆ ಮಾತ್ರೆಗಳನ್ನು ನೀಡಿ ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. ನಂತರ ಆ ಕೊಲೆಯನ್ನು ಅಪಘಾತ ಎಂದು ಬಿಂಬಿಸಲು ಪ್ರಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us