AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking News: ಪರೀಕ್ಷೆಯ ಕಾಪಿ ಚೀಟಿಯನ್ನು ಲವ್ ಲೆಟರ್ ಎಂದುಕೊಂಡ ಬಾಲಕಿ; ನಡೆದೇ ಹೋಯ್ತು ಬರ್ಬರ ಹತ್ಯೆ!

ಬಾಲಕ ಓದುತ್ತಿದ್ದ ತರಗತಿಯಲ್ಲೇ ಆತನ ಕಸಿನ್ ಕೂಡ ಓದುತ್ತಿದ್ದಳು. ಪರೀಕ್ಷೆ ಆರಂಭವಾಗುತ್ತಿದ್ದಂತೆ ತಾನು ತಂದಿದ್ದ ಕಾಪಿ ಚೀಟಿಯನ್ನು ಆ ಬಾಲಕ ಕಸಿನ್ ಕುಳಿತಿದ್ದ ಡೆಸ್ಕ್​ನತ್ತ ಬಿಸಾಡಿದ್ದ. ಆದರೆ, ಅದು ಆತನ ಹಿಂದೆ ಕುಳಿತಿದ್ದ ಇನ್ನೋರ್ವ ಬಾಲಕಿಯ ಬಳಿ ಬಿದ್ದಿತ್ತು.

Shocking News: ಪರೀಕ್ಷೆಯ ಕಾಪಿ ಚೀಟಿಯನ್ನು ಲವ್ ಲೆಟರ್ ಎಂದುಕೊಂಡ ಬಾಲಕಿ; ನಡೆದೇ ಹೋಯ್ತು ಬರ್ಬರ ಹತ್ಯೆ!
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Oct 20, 2022 | 1:20 PM

ಪಾಟ್ನಾ: ಕೆಲವೊಮ್ಮೆ ನಮ್ಮ ಹಣೆಬರಹ ಸರಿಯಿಲ್ಲದಿದ್ದರೆ ಹಗ್ಗವೂ ಹಾವಾಗುತ್ತದಂತೆ. ಮಹಾರಾಷ್ಟ್ರದ ಬಳಿಯ ಪಾಟ್ನಾದ (Patna) ಬಾಲಕನ ಕತೆಯೂ ಹಾಗೇ ಆಗಿದೆ. ಪರೀಕ್ಷೆಯಲ್ಲಿ ಕಾಪಿ ಮಾಡುವ ಸಲುವಾಗಿ ಚೀಟಿ ಬರೆದಿಟ್ಟುಕೊಂಡಿದ್ದ ಆತನ ಆ ಚೀಟಿ ಪರೀಕ್ಷೆಯ ಹಾಲ್​ನಲ್ಲಿ ಹಿಂದಿನ ಡೆಸ್ಕ್​ನಲ್ಲಿ ಕುಳಿತಿದ್ದ ಬಾಲಕಿಯ ಬಳಿ ಹೋಗಿ ಬಿದ್ದಿತ್ತು. ಅದನ್ನು ನೋಡಿದ ಆಕೆ ಲವ್ ಲೆಟರ್ ಎಂದು ತಪ್ಪಾಗಿ ತಿಳಿದುಕೊಂಡು ತನ್ನ ಮನೆಯವರಿಗೆ ವಿಷಯ ತಿಳಿಸಿದ್ದಳು. ತಮ್ಮ ಮಗಳಿಗೆ ಲವ್ ಲೆಟರ್ (Love Letter) ಬರೆದಿದ್ದಾನೆಂದು ಗೊತ್ತಾದ ಕೂಡಲೆ ಆ ಚೀಟಿಯಲ್ಲಿ ಏನಿದೆ ಎಂಬುದನ್ನು ಕೂಡ ನೋಡದೆ ಆಕೆಯ ಮನೆಯವರು ಆ ಬಾಲಕನನ್ನು ಥಳಿಸಿ, ಆತನ ದೇಹವನ್ನು ಕತ್ತರಿಸಿ ಕೊಂದೇ ಹಾಕಿದ್ದಾರೆ! ಪರೀಕ್ಷೆಯ ಕಾಪಿ ಚೀಟಿಯಿಂದಾಗಿ ಆ ಬಾಲಕ ತನ್ನ ಪ್ರಾಣವನ್ನೇ ಕಳೆದುಕೊಂಡ ದುರಂತ ಕತೆಯಿದು!

ತಮ್ಮ ಮಗಳು ಪರೀಕ್ಷೆ ಬರೆದು ಮನೆಗೆ ಬರುತ್ತಿದ್ದಂತೆ ತನಗೆ ಹುಡುಗನೊಬ್ಬ ಲವ್ ಲೆಟರ್ ಬರೆದಿದ್ದಾನೆ ಎಂದು ಹೇಳಿದ್ದಳು. ಇದರಿಂದ ಕೋಪಗೊಂಡ ಆ ಹುಡುಗಿಯ ಅಪ್ಪ, ಅಣ್ಣಂದಿರು ಆ ಬಾಲಕನನ್ನು ಹಿಡಿದು, ಹೊಡೆದು, ಕೊಂದಿದ್ದಾರೆ. ನಂತರ ಆತನ ದೇಹವನ್ನು ಕತ್ತರಿಸಿ ಬಿಸಾಡಿದ್ದಾರೆ. ರೈಲ್ವೆ ಹಳಿಯ ಮೇಲೆ ವ್ಯಕ್ತಿಯ ದೇಹದ ಅಂಗಗಳು ಸಿಕ್ಕಿದ್ದರಿಂದ ತನಿಖೆ ಕೈಗೊಂಡ ಪೊಲೀಸರು ಈ ಪ್ರಕರಣವನ್ನು ಭೇದಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ 9 ಮಂದಿಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ತೆಲಂಗಾಣ: ವಾಮಾಚಾರಕ್ಕೆ ತಂದೆ-ಮಗ ಬಲಿ; ಸಮಸ್ಯೆಗಳಿಗೆ ಅರ್ಚಕನೇ ಕಾರಣ ಎಂದು ಕೊಲೆ ಮಾಡಿದ್ದ ಆರೋಪಿ ಗ್ಯಾಂಗ್ ಅರೆಸ್ಟ್

ಆ ಬಾಲಕ ಓದುತ್ತಿದ್ದ ತರಗತಿಯಲ್ಲೇ ಆತನ ಕಸಿನ್ ಕೂಡ ಓದುತ್ತಿದ್ದಳು. ಪರೀಕ್ಷೆ ಆರಂಭವಾಗುತ್ತಿದ್ದಂತೆ ತಾನು ಬರೆದಿಟ್ಟುಕೊಂಡು ಬಂದಿದ್ದ ಕಾಪಿ ಚೀಟಿಯನ್ನು ಹೊರತೆಗೆದ ಬಾಲಕ ಅದನ್ನು ನೋಡಿ ಪರೀಕ್ಷೆ ಬರೆದಿದ್ದ. ನಂತರ ತನ್ನ ಕಸಿನ್​ಗೂ ಸಹಾಯವಾಗಲೆಂದು ಆ ಚೀಟಿಯನ್ನು ಆಕೆ ಕುಳಿತಿದ್ದ ಡೆಸ್ಕ್​ನತ್ತ ಬಿಸಾಡಿದ್ದ. ಆದರೆ, ಆ ಚೀಟಿ ಆತನ ಹಿಂದೆ ಕುಳಿತಿದ್ದ ಇನ್ನೋರ್ವ ಬಾಲಕಿಯ ಬಳಿ ಹೋಗಿ ಬಿದ್ದಿತ್ತು. ಆ ಬಾಲಕನಾಗಲಿ, ಆತನ ಕಸಿನ್ ಆಗಲಿ ಅದನ್ನು ಗಮನಿಸಿರಲಿಲ್ಲ. ತನ್ನ ಬಳಿ ಬಂದು ಬಿದ್ದ ಚೀಟಿಯನ್ನು ತೆರೆದು ಓದಲೂ ಹೋಗದ ಆ ಬಾಲಕಿ ಅದನ್ನು ಲವ್ ಲೆಟರ್ ಎಂದು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಳು. ಆಕೆಯ ದುಡುಕು ನಿರ್ಧಾರದಿಂದ ಇದೀಗ ಆ ಬಾಲಕನ ಜೀವವೇ ಹೋಗಿದೆ.

ಆ ಬಾಲಕನನ್ನು ಕಿಡ್ನಾಪ್ ಮಾಡಿದ್ದ ಬಾಲಕಿಯ ಪೋಷಕರು ಆತನನ್ನು ಕೊಂದು ರೈಲ್ವೆ ಹಳಿ ಬಳಿ ಬಿಸಾಡಿದ್ದರು. ಅದಾಗಿ 4 ದಿನಗಳ ಬಳಿಕ ಆತನ ಮೃತದೇಹದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ತಾನು ಮಾಡದ ತಪ್ಪಿಗೆ ಬಾಲಕ ಪ್ರಾಣ ಕಳೆದುಕೊಂಡಿದ್ದರೆ, ತಮ್ಮ ತಂಗಿ ಮಾಡಿದ ತಪ್ಪಿಗೆ ಆಕೆಯ ಅಣ್ಣ- ಅಪ್ಪ ಜೈಲು ಸೇರಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೊಲೀಸ್ ಅಧಿಕಾರಿಗಳು ತಪ್ಪಿತಸ್ಥರೆಂದು ಮೇಲ್ನೋಟಕ್ಕೆ ಗೊತ್ತಾಗಿತ್ತು: ಸಿಎಂ
ಪೊಲೀಸ್ ಅಧಿಕಾರಿಗಳು ತಪ್ಪಿತಸ್ಥರೆಂದು ಮೇಲ್ನೋಟಕ್ಕೆ ಗೊತ್ತಾಗಿತ್ತು: ಸಿಎಂ
ಕ್ರೆಡಿಟ್​​ ತೆಗೆದುಕೊಳ್ಳುವ ಚಟ ನಿಮಗೆ: ಡಿಕೆಶಿ​​ ವಿರುದ್ಧ ಜೋಶಿ ಕಿಡಿ
ಕ್ರೆಡಿಟ್​​ ತೆಗೆದುಕೊಳ್ಳುವ ಚಟ ನಿಮಗೆ: ಡಿಕೆಶಿ​​ ವಿರುದ್ಧ ಜೋಶಿ ಕಿಡಿ
ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆಯ ಕಣ್ತುಂಬಿಕೊಂಡ ಮೋದಿ
ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆಯ ಕಣ್ತುಂಬಿಕೊಂಡ ಮೋದಿ
ನನಗಿಂತ ಮುಂಚಿನ ಕಮೀಷನರ್​ಗಳೆಲ್ಲ ಉತ್ತಮ ಕೆಲಸ ಮಾಡಿದ್ದರೆ: ಸೀಮಂತ್ ಸಿಂಗ್
ನನಗಿಂತ ಮುಂಚಿನ ಕಮೀಷನರ್​ಗಳೆಲ್ಲ ಉತ್ತಮ ಕೆಲಸ ಮಾಡಿದ್ದರೆ: ಸೀಮಂತ್ ಸಿಂಗ್
ಜೀನ್ಸ್​ ಪ್ಯಾಂಟ್​ ಧರಿಸಿದ ಯುವತಿಯರ ಮೇಲೆ ಪಾಕ್​ನಲ್ಲಿ ಹಲ್ಲೆ
ಜೀನ್ಸ್​ ಪ್ಯಾಂಟ್​ ಧರಿಸಿದ ಯುವತಿಯರ ಮೇಲೆ ಪಾಕ್​ನಲ್ಲಿ ಹಲ್ಲೆ
Live: ಬಿಜೆಪಿ, ಜೆಡಿಎಸ್​ ಜಂಟಿ ಸುದ್ದಿಗೋಷ್ಠಿ
Live: ಬಿಜೆಪಿ, ಜೆಡಿಎಸ್​ ಜಂಟಿ ಸುದ್ದಿಗೋಷ್ಠಿ
‘ಕ್ವಾಟ್ಲೆ ಕಿಚನ್’ ಆರಂಭಕ್ಕೆ ದಿನಾಂಕ ನಿಗದಿ; ಅಡುಗೆ ಜೊತೆ ನಗುವಿನ ಊಟ
‘ಕ್ವಾಟ್ಲೆ ಕಿಚನ್’ ಆರಂಭಕ್ಕೆ ದಿನಾಂಕ ನಿಗದಿ; ಅಡುಗೆ ಜೊತೆ ನಗುವಿನ ಊಟ
ಪೊಲೀಸರು ಬೇಡವೆಂದ ಮೇಲೆ ಕಾರ್ಯಕ್ರಮ ನಡೆಸಬಾರದು: ಜ್ಯೋತಿಪ್ರಕಾಶ್ ಮಿರ್ಜಿ
ಪೊಲೀಸರು ಬೇಡವೆಂದ ಮೇಲೆ ಕಾರ್ಯಕ್ರಮ ನಡೆಸಬಾರದು: ಜ್ಯೋತಿಪ್ರಕಾಶ್ ಮಿರ್ಜಿ
Daily Devotional: ಭಕ್ತರಲ್ಲಿ ಇರಬೇಕಾದ ಮೂರು ಗುಣಗಳ ಬಗ್ಗೆ ತಿಳಿಯಿರಿ
Daily Devotional: ಭಕ್ತರಲ್ಲಿ ಇರಬೇಕಾದ ಮೂರು ಗುಣಗಳ ಬಗ್ಗೆ ತಿಳಿಯಿರಿ
ಹಸ್ತ ನಕ್ಷತ್ರದಲ್ಲಿ ಚಂದ್ರನ ಸಂಚಾರ: ಈ ರಾಶಿಗಳ ಮೇಲೆ ಪ್ರಭಾವ ಸಾಧ್ಯತೆ
ಹಸ್ತ ನಕ್ಷತ್ರದಲ್ಲಿ ಚಂದ್ರನ ಸಂಚಾರ: ಈ ರಾಶಿಗಳ ಮೇಲೆ ಪ್ರಭಾವ ಸಾಧ್ಯತೆ