AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking News: ಪರೀಕ್ಷೆಯ ಕಾಪಿ ಚೀಟಿಯನ್ನು ಲವ್ ಲೆಟರ್ ಎಂದುಕೊಂಡ ಬಾಲಕಿ; ನಡೆದೇ ಹೋಯ್ತು ಬರ್ಬರ ಹತ್ಯೆ!

ಬಾಲಕ ಓದುತ್ತಿದ್ದ ತರಗತಿಯಲ್ಲೇ ಆತನ ಕಸಿನ್ ಕೂಡ ಓದುತ್ತಿದ್ದಳು. ಪರೀಕ್ಷೆ ಆರಂಭವಾಗುತ್ತಿದ್ದಂತೆ ತಾನು ತಂದಿದ್ದ ಕಾಪಿ ಚೀಟಿಯನ್ನು ಆ ಬಾಲಕ ಕಸಿನ್ ಕುಳಿತಿದ್ದ ಡೆಸ್ಕ್​ನತ್ತ ಬಿಸಾಡಿದ್ದ. ಆದರೆ, ಅದು ಆತನ ಹಿಂದೆ ಕುಳಿತಿದ್ದ ಇನ್ನೋರ್ವ ಬಾಲಕಿಯ ಬಳಿ ಬಿದ್ದಿತ್ತು.

Shocking News: ಪರೀಕ್ಷೆಯ ಕಾಪಿ ಚೀಟಿಯನ್ನು ಲವ್ ಲೆಟರ್ ಎಂದುಕೊಂಡ ಬಾಲಕಿ; ನಡೆದೇ ಹೋಯ್ತು ಬರ್ಬರ ಹತ್ಯೆ!
ಪ್ರಾತಿನಿಧಿಕ ಚಿತ್ರ
TV9 Web
| Updated By: ಸುಷ್ಮಾ ಚಕ್ರೆ|

Updated on: Oct 20, 2022 | 1:20 PM

Share

ಪಾಟ್ನಾ: ಕೆಲವೊಮ್ಮೆ ನಮ್ಮ ಹಣೆಬರಹ ಸರಿಯಿಲ್ಲದಿದ್ದರೆ ಹಗ್ಗವೂ ಹಾವಾಗುತ್ತದಂತೆ. ಮಹಾರಾಷ್ಟ್ರದ ಬಳಿಯ ಪಾಟ್ನಾದ (Patna) ಬಾಲಕನ ಕತೆಯೂ ಹಾಗೇ ಆಗಿದೆ. ಪರೀಕ್ಷೆಯಲ್ಲಿ ಕಾಪಿ ಮಾಡುವ ಸಲುವಾಗಿ ಚೀಟಿ ಬರೆದಿಟ್ಟುಕೊಂಡಿದ್ದ ಆತನ ಆ ಚೀಟಿ ಪರೀಕ್ಷೆಯ ಹಾಲ್​ನಲ್ಲಿ ಹಿಂದಿನ ಡೆಸ್ಕ್​ನಲ್ಲಿ ಕುಳಿತಿದ್ದ ಬಾಲಕಿಯ ಬಳಿ ಹೋಗಿ ಬಿದ್ದಿತ್ತು. ಅದನ್ನು ನೋಡಿದ ಆಕೆ ಲವ್ ಲೆಟರ್ ಎಂದು ತಪ್ಪಾಗಿ ತಿಳಿದುಕೊಂಡು ತನ್ನ ಮನೆಯವರಿಗೆ ವಿಷಯ ತಿಳಿಸಿದ್ದಳು. ತಮ್ಮ ಮಗಳಿಗೆ ಲವ್ ಲೆಟರ್ (Love Letter) ಬರೆದಿದ್ದಾನೆಂದು ಗೊತ್ತಾದ ಕೂಡಲೆ ಆ ಚೀಟಿಯಲ್ಲಿ ಏನಿದೆ ಎಂಬುದನ್ನು ಕೂಡ ನೋಡದೆ ಆಕೆಯ ಮನೆಯವರು ಆ ಬಾಲಕನನ್ನು ಥಳಿಸಿ, ಆತನ ದೇಹವನ್ನು ಕತ್ತರಿಸಿ ಕೊಂದೇ ಹಾಕಿದ್ದಾರೆ! ಪರೀಕ್ಷೆಯ ಕಾಪಿ ಚೀಟಿಯಿಂದಾಗಿ ಆ ಬಾಲಕ ತನ್ನ ಪ್ರಾಣವನ್ನೇ ಕಳೆದುಕೊಂಡ ದುರಂತ ಕತೆಯಿದು!

ತಮ್ಮ ಮಗಳು ಪರೀಕ್ಷೆ ಬರೆದು ಮನೆಗೆ ಬರುತ್ತಿದ್ದಂತೆ ತನಗೆ ಹುಡುಗನೊಬ್ಬ ಲವ್ ಲೆಟರ್ ಬರೆದಿದ್ದಾನೆ ಎಂದು ಹೇಳಿದ್ದಳು. ಇದರಿಂದ ಕೋಪಗೊಂಡ ಆ ಹುಡುಗಿಯ ಅಪ್ಪ, ಅಣ್ಣಂದಿರು ಆ ಬಾಲಕನನ್ನು ಹಿಡಿದು, ಹೊಡೆದು, ಕೊಂದಿದ್ದಾರೆ. ನಂತರ ಆತನ ದೇಹವನ್ನು ಕತ್ತರಿಸಿ ಬಿಸಾಡಿದ್ದಾರೆ. ರೈಲ್ವೆ ಹಳಿಯ ಮೇಲೆ ವ್ಯಕ್ತಿಯ ದೇಹದ ಅಂಗಗಳು ಸಿಕ್ಕಿದ್ದರಿಂದ ತನಿಖೆ ಕೈಗೊಂಡ ಪೊಲೀಸರು ಈ ಪ್ರಕರಣವನ್ನು ಭೇದಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ 9 ಮಂದಿಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ತೆಲಂಗಾಣ: ವಾಮಾಚಾರಕ್ಕೆ ತಂದೆ-ಮಗ ಬಲಿ; ಸಮಸ್ಯೆಗಳಿಗೆ ಅರ್ಚಕನೇ ಕಾರಣ ಎಂದು ಕೊಲೆ ಮಾಡಿದ್ದ ಆರೋಪಿ ಗ್ಯಾಂಗ್ ಅರೆಸ್ಟ್

ಆ ಬಾಲಕ ಓದುತ್ತಿದ್ದ ತರಗತಿಯಲ್ಲೇ ಆತನ ಕಸಿನ್ ಕೂಡ ಓದುತ್ತಿದ್ದಳು. ಪರೀಕ್ಷೆ ಆರಂಭವಾಗುತ್ತಿದ್ದಂತೆ ತಾನು ಬರೆದಿಟ್ಟುಕೊಂಡು ಬಂದಿದ್ದ ಕಾಪಿ ಚೀಟಿಯನ್ನು ಹೊರತೆಗೆದ ಬಾಲಕ ಅದನ್ನು ನೋಡಿ ಪರೀಕ್ಷೆ ಬರೆದಿದ್ದ. ನಂತರ ತನ್ನ ಕಸಿನ್​ಗೂ ಸಹಾಯವಾಗಲೆಂದು ಆ ಚೀಟಿಯನ್ನು ಆಕೆ ಕುಳಿತಿದ್ದ ಡೆಸ್ಕ್​ನತ್ತ ಬಿಸಾಡಿದ್ದ. ಆದರೆ, ಆ ಚೀಟಿ ಆತನ ಹಿಂದೆ ಕುಳಿತಿದ್ದ ಇನ್ನೋರ್ವ ಬಾಲಕಿಯ ಬಳಿ ಹೋಗಿ ಬಿದ್ದಿತ್ತು. ಆ ಬಾಲಕನಾಗಲಿ, ಆತನ ಕಸಿನ್ ಆಗಲಿ ಅದನ್ನು ಗಮನಿಸಿರಲಿಲ್ಲ. ತನ್ನ ಬಳಿ ಬಂದು ಬಿದ್ದ ಚೀಟಿಯನ್ನು ತೆರೆದು ಓದಲೂ ಹೋಗದ ಆ ಬಾಲಕಿ ಅದನ್ನು ಲವ್ ಲೆಟರ್ ಎಂದು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಳು. ಆಕೆಯ ದುಡುಕು ನಿರ್ಧಾರದಿಂದ ಇದೀಗ ಆ ಬಾಲಕನ ಜೀವವೇ ಹೋಗಿದೆ.

ಆ ಬಾಲಕನನ್ನು ಕಿಡ್ನಾಪ್ ಮಾಡಿದ್ದ ಬಾಲಕಿಯ ಪೋಷಕರು ಆತನನ್ನು ಕೊಂದು ರೈಲ್ವೆ ಹಳಿ ಬಳಿ ಬಿಸಾಡಿದ್ದರು. ಅದಾಗಿ 4 ದಿನಗಳ ಬಳಿಕ ಆತನ ಮೃತದೇಹದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ತಾನು ಮಾಡದ ತಪ್ಪಿಗೆ ಬಾಲಕ ಪ್ರಾಣ ಕಳೆದುಕೊಂಡಿದ್ದರೆ, ತಮ್ಮ ತಂಗಿ ಮಾಡಿದ ತಪ್ಪಿಗೆ ಆಕೆಯ ಅಣ್ಣ- ಅಪ್ಪ ಜೈಲು ಸೇರಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು