AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking News: ಪರೀಕ್ಷೆಯ ಕಾಪಿ ಚೀಟಿಯನ್ನು ಲವ್ ಲೆಟರ್ ಎಂದುಕೊಂಡ ಬಾಲಕಿ; ನಡೆದೇ ಹೋಯ್ತು ಬರ್ಬರ ಹತ್ಯೆ!

ಬಾಲಕ ಓದುತ್ತಿದ್ದ ತರಗತಿಯಲ್ಲೇ ಆತನ ಕಸಿನ್ ಕೂಡ ಓದುತ್ತಿದ್ದಳು. ಪರೀಕ್ಷೆ ಆರಂಭವಾಗುತ್ತಿದ್ದಂತೆ ತಾನು ತಂದಿದ್ದ ಕಾಪಿ ಚೀಟಿಯನ್ನು ಆ ಬಾಲಕ ಕಸಿನ್ ಕುಳಿತಿದ್ದ ಡೆಸ್ಕ್​ನತ್ತ ಬಿಸಾಡಿದ್ದ. ಆದರೆ, ಅದು ಆತನ ಹಿಂದೆ ಕುಳಿತಿದ್ದ ಇನ್ನೋರ್ವ ಬಾಲಕಿಯ ಬಳಿ ಬಿದ್ದಿತ್ತು.

Shocking News: ಪರೀಕ್ಷೆಯ ಕಾಪಿ ಚೀಟಿಯನ್ನು ಲವ್ ಲೆಟರ್ ಎಂದುಕೊಂಡ ಬಾಲಕಿ; ನಡೆದೇ ಹೋಯ್ತು ಬರ್ಬರ ಹತ್ಯೆ!
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Oct 20, 2022 | 1:20 PM

Share

ಪಾಟ್ನಾ: ಕೆಲವೊಮ್ಮೆ ನಮ್ಮ ಹಣೆಬರಹ ಸರಿಯಿಲ್ಲದಿದ್ದರೆ ಹಗ್ಗವೂ ಹಾವಾಗುತ್ತದಂತೆ. ಮಹಾರಾಷ್ಟ್ರದ ಬಳಿಯ ಪಾಟ್ನಾದ (Patna) ಬಾಲಕನ ಕತೆಯೂ ಹಾಗೇ ಆಗಿದೆ. ಪರೀಕ್ಷೆಯಲ್ಲಿ ಕಾಪಿ ಮಾಡುವ ಸಲುವಾಗಿ ಚೀಟಿ ಬರೆದಿಟ್ಟುಕೊಂಡಿದ್ದ ಆತನ ಆ ಚೀಟಿ ಪರೀಕ್ಷೆಯ ಹಾಲ್​ನಲ್ಲಿ ಹಿಂದಿನ ಡೆಸ್ಕ್​ನಲ್ಲಿ ಕುಳಿತಿದ್ದ ಬಾಲಕಿಯ ಬಳಿ ಹೋಗಿ ಬಿದ್ದಿತ್ತು. ಅದನ್ನು ನೋಡಿದ ಆಕೆ ಲವ್ ಲೆಟರ್ ಎಂದು ತಪ್ಪಾಗಿ ತಿಳಿದುಕೊಂಡು ತನ್ನ ಮನೆಯವರಿಗೆ ವಿಷಯ ತಿಳಿಸಿದ್ದಳು. ತಮ್ಮ ಮಗಳಿಗೆ ಲವ್ ಲೆಟರ್ (Love Letter) ಬರೆದಿದ್ದಾನೆಂದು ಗೊತ್ತಾದ ಕೂಡಲೆ ಆ ಚೀಟಿಯಲ್ಲಿ ಏನಿದೆ ಎಂಬುದನ್ನು ಕೂಡ ನೋಡದೆ ಆಕೆಯ ಮನೆಯವರು ಆ ಬಾಲಕನನ್ನು ಥಳಿಸಿ, ಆತನ ದೇಹವನ್ನು ಕತ್ತರಿಸಿ ಕೊಂದೇ ಹಾಕಿದ್ದಾರೆ! ಪರೀಕ್ಷೆಯ ಕಾಪಿ ಚೀಟಿಯಿಂದಾಗಿ ಆ ಬಾಲಕ ತನ್ನ ಪ್ರಾಣವನ್ನೇ ಕಳೆದುಕೊಂಡ ದುರಂತ ಕತೆಯಿದು!

ತಮ್ಮ ಮಗಳು ಪರೀಕ್ಷೆ ಬರೆದು ಮನೆಗೆ ಬರುತ್ತಿದ್ದಂತೆ ತನಗೆ ಹುಡುಗನೊಬ್ಬ ಲವ್ ಲೆಟರ್ ಬರೆದಿದ್ದಾನೆ ಎಂದು ಹೇಳಿದ್ದಳು. ಇದರಿಂದ ಕೋಪಗೊಂಡ ಆ ಹುಡುಗಿಯ ಅಪ್ಪ, ಅಣ್ಣಂದಿರು ಆ ಬಾಲಕನನ್ನು ಹಿಡಿದು, ಹೊಡೆದು, ಕೊಂದಿದ್ದಾರೆ. ನಂತರ ಆತನ ದೇಹವನ್ನು ಕತ್ತರಿಸಿ ಬಿಸಾಡಿದ್ದಾರೆ. ರೈಲ್ವೆ ಹಳಿಯ ಮೇಲೆ ವ್ಯಕ್ತಿಯ ದೇಹದ ಅಂಗಗಳು ಸಿಕ್ಕಿದ್ದರಿಂದ ತನಿಖೆ ಕೈಗೊಂಡ ಪೊಲೀಸರು ಈ ಪ್ರಕರಣವನ್ನು ಭೇದಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ 9 ಮಂದಿಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ತೆಲಂಗಾಣ: ವಾಮಾಚಾರಕ್ಕೆ ತಂದೆ-ಮಗ ಬಲಿ; ಸಮಸ್ಯೆಗಳಿಗೆ ಅರ್ಚಕನೇ ಕಾರಣ ಎಂದು ಕೊಲೆ ಮಾಡಿದ್ದ ಆರೋಪಿ ಗ್ಯಾಂಗ್ ಅರೆಸ್ಟ್

ಆ ಬಾಲಕ ಓದುತ್ತಿದ್ದ ತರಗತಿಯಲ್ಲೇ ಆತನ ಕಸಿನ್ ಕೂಡ ಓದುತ್ತಿದ್ದಳು. ಪರೀಕ್ಷೆ ಆರಂಭವಾಗುತ್ತಿದ್ದಂತೆ ತಾನು ಬರೆದಿಟ್ಟುಕೊಂಡು ಬಂದಿದ್ದ ಕಾಪಿ ಚೀಟಿಯನ್ನು ಹೊರತೆಗೆದ ಬಾಲಕ ಅದನ್ನು ನೋಡಿ ಪರೀಕ್ಷೆ ಬರೆದಿದ್ದ. ನಂತರ ತನ್ನ ಕಸಿನ್​ಗೂ ಸಹಾಯವಾಗಲೆಂದು ಆ ಚೀಟಿಯನ್ನು ಆಕೆ ಕುಳಿತಿದ್ದ ಡೆಸ್ಕ್​ನತ್ತ ಬಿಸಾಡಿದ್ದ. ಆದರೆ, ಆ ಚೀಟಿ ಆತನ ಹಿಂದೆ ಕುಳಿತಿದ್ದ ಇನ್ನೋರ್ವ ಬಾಲಕಿಯ ಬಳಿ ಹೋಗಿ ಬಿದ್ದಿತ್ತು. ಆ ಬಾಲಕನಾಗಲಿ, ಆತನ ಕಸಿನ್ ಆಗಲಿ ಅದನ್ನು ಗಮನಿಸಿರಲಿಲ್ಲ. ತನ್ನ ಬಳಿ ಬಂದು ಬಿದ್ದ ಚೀಟಿಯನ್ನು ತೆರೆದು ಓದಲೂ ಹೋಗದ ಆ ಬಾಲಕಿ ಅದನ್ನು ಲವ್ ಲೆಟರ್ ಎಂದು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಳು. ಆಕೆಯ ದುಡುಕು ನಿರ್ಧಾರದಿಂದ ಇದೀಗ ಆ ಬಾಲಕನ ಜೀವವೇ ಹೋಗಿದೆ.

ಆ ಬಾಲಕನನ್ನು ಕಿಡ್ನಾಪ್ ಮಾಡಿದ್ದ ಬಾಲಕಿಯ ಪೋಷಕರು ಆತನನ್ನು ಕೊಂದು ರೈಲ್ವೆ ಹಳಿ ಬಳಿ ಬಿಸಾಡಿದ್ದರು. ಅದಾಗಿ 4 ದಿನಗಳ ಬಳಿಕ ಆತನ ಮೃತದೇಹದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ತಾನು ಮಾಡದ ತಪ್ಪಿಗೆ ಬಾಲಕ ಪ್ರಾಣ ಕಳೆದುಕೊಂಡಿದ್ದರೆ, ತಮ್ಮ ತಂಗಿ ಮಾಡಿದ ತಪ್ಪಿಗೆ ಆಕೆಯ ಅಣ್ಣ- ಅಪ್ಪ ಜೈಲು ಸೇರಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Web contact
Web contact

TV9 Kannada

Read More
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ