AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಮೀನಿನಲ್ಲಿ ಸಿಕ್ತು ಮನೆಯಿಂದ ಹೊರ ಹೋದವನ ತಲೆ ಬರುಡೆ; ತನಿಖೆಯಲ್ಲಿ ಬಯಲಾಯ್ತು ಭಯಾನಕ ಸತ್ಯ, ಐವರು ಅರೆಸ್ಟ್​

ಆತ ಮನೆಯಿಂದ ಕಾಣೆಯಾಗಿದ್ದ. ಕಂಡ ಕಂಡಲ್ಲಿ ಆತನಿಗಾಗಿ ಹುಡುಕಾಡಿದ್ದರೂ ಸುಳಿವು ಪತ್ತೆಯೇ ಆಗಿರಲಿಲ್ಲ. ಎಂದಿನಂತೆ ಮಹಾರಾಷ್ಟ್ರಕ್ಕೆ ದುಡಿಯೋಕೆ ಹೋಗಿರಬಹುದು ಎಂದುಕೊಂಡು ಮನೆಯವರೂ ಸಹ ಸುಮ್ಮನಾಗಿ ಬಿಟ್ಟಿದ್ದರು. ಎರಡು ತಿಂಗಳಾದರೂ ಮನೆಯಿಂದ ಹೊರ ಹೋದವ ವಾಪಸ್ ಬಾರದ ಕಾರಣ ಬೇರೆ ದಾರಿ ಕಾಣದೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಶೋಧ ನಡೆಸಿದ ಖಾಕಿ ಪಡೆಗೂ ಕಾಣೆಯಾದವನ ಸುಳಿವು ಸಿಕ್ಕಿರಲಿಲ್ಲ. ಆದರೆ, ಅದೊಂದು ದಿನ ನಾಪತ್ತೆಯಾದವನ ಬೈಕ್ ಬಾವಿಯೊಂದರಲ್ಲಿ ಸಿಕ್ಕಿದ ಮೇಲೆ ಇಡೀ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ನಾಪತ್ತೆಯಾದವ ಕೊಲೆಯಾಗಿರುವ ಸತ್ಯ ಗೊತ್ತಾಗಿದೆ. ಕೊಲೆ ಮಾಡಿದ 5 ಆರೋಪಿತರು ಅರೆಸ್ಟ್​ ಆಗಿದ್ದು, ಮತ್ತೋರ್ವನ ಬಂಧನಕ್ಕೆ ಕುಟುಂಬದವರು ಒತ್ತಾಯ ಮಾಡಿದ್ದಾರೆ.

ಜಮೀನಿನಲ್ಲಿ ಸಿಕ್ತು ಮನೆಯಿಂದ ಹೊರ ಹೋದವನ ತಲೆ ಬರುಡೆ; ತನಿಖೆಯಲ್ಲಿ ಬಯಲಾಯ್ತು ಭಯಾನಕ ಸತ್ಯ, ಐವರು ಅರೆಸ್ಟ್​
ಬಂಧಿತ ಆರೋಪಿಗಳು, ಮೃತ ವ್ಯಕ್ತಿ
ಅಶೋಕ ಯಡಳ್ಳಿ, ವಿಜಯಪುರ
| Edited By: |

Updated on: Jun 14, 2024 | 5:13 PM

Share

ವಿಜಯಪುರ, ಜೂ.14: ತಾಳಿಕೋಟೆ(Talikoti) ತಾಲೂಕಿನ ನೀರಲಗಿ ಗ್ರಾಮದ ದಾವಲಸಾಬ್ ಮುಜಾವರ್ ( 22 ) ಕಳೆದ 2023 ನವೆಂಬರ್​ 8 ರಂದು ಮನೆಯಿಂದ ನಾಪತ್ತೆಯಾಗಿದ್ದ. ಮನೆಯವರು ಕಂಡ ಕಂಡಲ್ಲಿ ಹುಡುಕಾಡಿದ್ದರೂ ಸಿಕ್ಕಿರಲಿಲ್ಲ. ಎಂದಿನಂತೆ ಮಹಾರಾಷ್ಟ್ರಕ್ಕೆ ಕೆಲಸಕ್ಕೆ ಹೋಗಿರಬಹುದು ಎಂದುಕೊಂಡು ಸುಮ್ಮನಾಗಿದ್ದರು. ಆದರೆ, ಬಹಳ ದಿನಗಳ ಬಳಿಕವೂ ದಾವಲಸಾಬ್ ಮನೆಗೆ ಬಾರದಿದ್ದ ಕಾರಣ 2024 ರ ಜನವರಿ 25 ರಂದು ದಾವಲಸಾಬ್ ಮುಜಾವರ ನಾಪತ್ತೆ ಕುರಿತು ಕಲಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಪೊಲೀಸರ ತನಿಖೆಯಲ್ಲೂ ದಾವಲಸಾಬ್ ಪತ್ತೆಯಾಗಿರಲಿಲ್ಲ. ಯಾವುದೋ ಹುಡುಗಿ ಜೊತೆಗೆ ಹೋಗಿರಬಹುದು ಎಂದು ಕುಟುಂಬದವರಿಗೆ ಪೊಲೀಸರು ಹೇಳಿದ್ದರಂತೆ. ಬಳಿಕ ಇಲ್ಲಿಯವರೆಗೆ ಅಂದರೆ ಜೂನ್ 2 ರಂದು ನೀರಲಗಿ ಗ್ರಾಮದ ನಾನಾಗೌಡ ಮುದ್ನೂರ್ ಎಂಬುವವರ ಜಮೀನಿನಲ್ಲಿ ಮನುಷ್ಯನ ತಲೆ ಬುರುಡೆ ಪತ್ತೆಯಾಗಿದ್ದವು.

ಪೂರ್ವಯೋಜಿತ ಕೊಲೆ

ಈ ತಲೆ ಬುರುಡೆ ಹಾಗೂ ಎಲುವುಗಳು ದಾವಲಸಾಬ್​ನದ್ದು ಇರಬಹುದು ಎಂದು ಕಲಕೇರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮಾಹಿತಿ ತಿಳಿಯುತ್ತಿದ್ದಂತೆ ಪರೀಕ್ಷೆ ಮಾಡಿದಾಗ ಇದು ದಾವಲಸಾಬ್ ತಲೆ ಬುರುಡೆ ಹಾಗೂ ಎಲುವು ಎಂಬ ಸಂಶಯದಿಂದ ಮೊಬೈಲ್ ಟವರ್ ಸಿಡಿಆರ್ ಹಾಕಿದಾಗ ಕೆಲವರ ಮೇಲೆ ಪೊಲೀಸರಿಗೆ ಸಂಶಯ ಮೂಡುತ್ತದೆ. ಆಗ ದನೀಪ್ ಭಾಗವಾನ್ ಎಂಬುವವನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗಲೇ ದಾವಲಸಾಬ್ ಮುಜಾವರ ಕೊಲೆಯಾಗಿದ್ದಾನೆಂಬ ಭಯಾನಕ ವಿಚಾರ ಬಹಿರಂಗವಾಗುತ್ತದೆ.

ಇದನ್ನೂ ಓದಿ:ಮದ್ಯದ ನಶೆಯಲ್ಲಿ ಮಗನ ಬಾಯಿಗೆ ಪೇಪರ್​ ತುರುಕಿ ಕೊಲೆ ಮಾಡಿದ ತಂದೆ

ಇದೊಂದು ಪೂರ್ವಯೋಜಿತ ಕೊಲೆ ಎಂದು ಪ್ರಮುಖ ಆರೋಪಿ ದನೀಫ್ ಭಾಗವಾನ್ ಪೊಲೀಸರ ಎದುರು ಬಾಯಿ ಬಿಟ್ಟಿದ್ದಾನೆ. ಕಳೆದ 2023 ರ ನವೆಂಬರ್ 8 ರಂದು ದಾವಲಸಾಬ್ ಮುಜಾವರನನ್ನು ದನೀಪ್ ಭಾಗವಾನ್ ಕರೆದುಕೊಂಡು ಬಂದಿದ್ದಾನೆ. ಗ್ರಾಮದ ಹೊರ ಭಾಗದಲ್ಲಿ ಇಬ್ಬರೂ ಮದ್ಯ ಸೇವನೆ ಮಾಡಿದ್ದಾರೆ. ನಂತರ ದಾವಲಸಾಬ್​ನನ್ನು ಅನತಿ ದೂರದಲ್ಲಿರುವ ಹುಚ್ಚೇಶ್ವರಿ ದೇವಸ್ಥಾನ ಬಳಿ ಕರೆದುಕೊಂಡು ಹೋಗಿದ್ದಾನೆ. ದೇವಸ್ಥಾನದ ಬಳಿ ಅಂದುಕೊಂಡಂತೆ ಅಲ್ಲಿಸಾಬ್ ಮುಜಾವರ್, ಅಜ್ಮೀರ್ ಮುಜಾವರ್, ಸಮೀರ್ ಸೌದಾಗರ್, ಸದ್ದಾಂ ಮುಜಾವರ್ ಜಮಾಯಿಸುತ್ತಾರೆ. ಆಗ ಬಡಿಗೆ ಹಾಗೂ ಸಲಿಕೆಯಿಂದ ದಾವಲಸಾಬ್ ಗೆ ಹಲ್ಲೆ ಮಾಡುತ್ತಾರೆ. ಸ್ಥಳದಲ್ಲೇ ಆತಾ ಮೃತಪಡುತ್ತಾನೆ.

ನಂತರ ಶವವನ್ನು ಸಮೀಪದ ಬಸವಂತರಾಯಗೌಡ ಪಾಟೀಲ್ ಎಂಬುವವರ ಜಮೀನಿನ ಬಳಿ ಹೂತು ಹಾಕುತ್ತಾರೆ. ದಾವಲಸಾಬ್ ತಂದಿದ್ದ KA 33- X 2908 ನಂಬರಿನ ಬೈಕ್​ನನ್ನು ಮತ್ತೊಬ್ಬರ ಬಾವಿಯಲ್ಲಿ ಬಿಸಾಡಿ ಹೋಗಿದ್ದಾಗಿ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದರು. ಇಡೀ ಕೊಲೆಗೆ ದಾವಲಸಾಬ್ ಕೌಟುಂಬಿಕ ಕಲಹ ಹಾಗೂ ಅಕ್ರಮ ಸಂಬಂಧ ಎಂಬ ಮಾಹಿತಿ ಲಭ್ಯವಾಗಿದೆ. ತನಿಖೆ ಇನ್ನೂ ಮುಂದುವರೆದಿರುವ ಕಾರಣ ಪೊಲೀಸರು ಸಹ ಹೆಚ್ಚಿನ ಮಾಹಿತಿ ತನಿಖೆ ಬಳಿಕ ನೀಡುವುದಾಗಿ ಹೇಳಿದ್ಧಾರೆ.

ಇದನ್ನೂ ಓದಿ:6 ದಿನ ಪೊಲೀಸ್​ ಕಸ್ಟಡಿಗೆ ದರ್ಶನ್​, ಪವಿತ್ರಾ ಗೌಡ; ರೇಣುಕಾ ಸ್ವಾಮಿ ಹತ್ಯೆ ತನಿಖೆ ಚುರುಕು

ಕೊಲೆಗೆ ಕಾರಣವೇನು?

ಇಲ್ಲಿ ನಡೆದ ಕೊಲೆಗೆ ಕೌಟುಂಬಿಕ ಕಹಲ ಹಾಗೂ ಅಕ್ರಮ ಸಂಬಂಧ ಕಾರಣ ಎನ್ನಲಾಗಿದೆ. ಕೊಲೆಯಾಗಿರುವ ದಾವಲಸಾಬ್ ಕಳೆದ ಎರಡು ವರ್ಷಗಳ ಹಿಂದೆ ಸಬೀಯಾ ಎಂಬ ಯುವತಿಯೊಂದಿಗೆ ಮದುವೆಯಾಗಿದ್ದ. ಸಬೀಯಾ ಸೋದರ ಮಾವ ಹಾಗೂ ದಾವಲಸಾಬ್ ಕೊಲೆಯ ಎ1 ಆರೋಪಿ ಅಲ್ಲಿಸಾಬ್ ಮುಜಾವರ್ ನೇತೃತ್ವದಲ್ಲಿ ಮದುವೆ ನಡೆದಿತ್ತು. ಅಲ್ಲಿಸಾಬ್ ತನ್ನ ಸಹೋದರಿಯ ಮಗಳಾದ ಸಬೀಯಾಳನ್ನು ದಾವಲಸಾಬ್ ಜೊತೆಗೆ ಮದುವೆ ಮಾಡಿಸಿದ್ದರು. ಆದರೆ, ದಾವಲಸಾಬ್ ಹಾಗೂ ಸಬೀಯಾ ಮದ್ಯೆ ಸಂಸಾರದಲ್ಲಿ ಜಗಳವೇ ಆಗುತ್ತಿತ್ತಂತೆ. ಈ ವಿಚಾರದಲ್ಲಿ ದಾವಲಸಾಬ್ ಹಾಗೂ ಅಲ್ಲಿಸಾಬ್ ಮದ್ಯೆ ಗಲಾಟೆಗಲೂ ಆಗಿದ್ದವಂತೆ, ನನ್ನ ಸೋದರ ಸೊಸೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಅಲ್ಲಿಸಾಬ್ ದಾವಲಸಾಬಗೆ ಎಚ್ಚರಿಕೆ ನೀಡಿದ್ದನಂತೆ.

ಇನ್ನು ಅಲ್ಲಿಸಾಬ್ ಪುತ್ರ ಅಜ್ಮೀರ್ ಮುಜಾವರ ಪತ್ನಿ ತಸ್ಲೀಂ ಜೊತೆಗೆ ದಾವಲಸಾಬ್ ಅಕ್ರಮ ಸಂಬಂಧ ಹೊಂದಿದ್ದನಂತೆ. ಯಾವಾಗ ದಾವಲಸಾಬ್ ಹಾಗೂ ಸಬೀಯಾ ಮದುವೆಯಾಯ್ತೋ ಆಗ ತಸ್ಲೀಂ ದಾವಲಸಾಬ್ ಸಂಬಂಧ ಮುರಿದು ಬಿದ್ದಿದೆ. ಅಷ್ಟೇಯಲ್ಲ ಅದೇ ತಸ್ಲೀಂ ಅದೇ ಗ್ರಾಮದ ದನೀಪ್ ಭಾಗವಾನ್ ಎಂಬುವವನೊಂದಿಗೆ ಸಂಬಂಧ ಇಟ್ಟುಕೊಂಡಿದ್ದಳಂತೆ. ಇದಕ್ಕೆ ದಾವಲಸಾಬ್ ವಿರೋಧಿಸಿದ್ದ. ಇದೇ ವಿಚಾರ ಗ್ರಾಮದ ಜನರ ಮುಂದೆ ಪ್ರಚಾರ ಮಾಡಿದ್ದನಂತೆ. ಇದಕ್ಕೆ ದನೀಪ್ ಬಾಗವಾನ್ ಹಾಗೂ ತಸ್ಲೀಂ ಗಂಡನ ಮನೆಯವರು ಸಿಟ್ಟಾಗಿದ್ದರಂತೆ ಎಂಬ ಮಾಹಿತಿ ಕೆಲ ಮೂಲಗಳಿಂದ ತಿಳಿದು ಬಂದಿದೆ. ಇದೇ ದ್ವೇಷಕ್ಕೆ ದನೀಪ್ ಬಾಗವಾನ್ ಹಾಗೂ ದಾವಲಸಾಬ್ ಪತ್ನಿ ಸಾಬೀಯಾ ಸೋದರ ಮಾವ ಅಲ್ಲಿಸಾಬ್, ಅಜ್ಮೀರ್ ಮುಜಾವರ್, ಸಮೀರ್ ಸೌದಾಗರ್ ಇತರನ್ನು ಜೊತೆಗೂಡಿಸಿಕೊಂಡು ದಾವಲಸಾಬ್​ನನ್ನು ಬಡಿಗೆ ಹಾಗೂ ಸಲಿಕೆಯಿಂದ ಹೊಡೆದು ಕೊಲೆ ಮಾಡಿ ಶವವನ್ನು ಹೂತು ಹಾಕಿ ಸುಮ್ಮನಾಗಿ ಬಿಟ್ಟಿದ್ದರು.

ಇದಕ್ಕೆ ಸದ್ದಾಂ ಮುಜಾವರ ಕುಮ್ಮಕ್ಕು ನೀಡಿದ್ದಾನೆ ಎಂಬುದು ಪೊಳೀಸರಿಗೆ ತಿಳಿದು ಹೋಗಿತ್ತು. ತನಿಖೆ ನಡೆಸಿದ ಪೊಲೀಸರು ಪ್ರಮುಖ ಆರೋಪಿ ದನೀಪ್ ಬಾಗವಾನ್, ಹಾಗೂ ಅಲ್ಲಿಸಾಬ್ ಮುಜಾವರ್, ಅಜ್ಮೀರ್ ಮುಜಾವರ್, ಸಮೀರ್ ಸೌದಾಗರ್ ಎಂಬುವವರನ್ನು ಬಂಧಿಸಿದ್ದಾರೆ. ತಸ್ಲೀಂಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ ಮನೆಗೆ ಕಳುಹಿಸಿದ್ದಾರೆ. ಈ ಕುರಿತು ಮಾತನಾಡಿದ ಮೃತ ಕುಟುಂಬಸ್ಥರು ‘ದಾವಲಸಾಬ್ ಕೊಲೆ ವಿಚಾರದಲ್ಲಿ ಐವರನ್ನು ಬಂಧಿಸಿದ್ದರೂ ಸಹ ತಸ್ಲೀಂ ಮುಜಾವರ್ ಹಾಗೂ ಸಮೀರ್ ಸೌದಾಗರ್ ಎಂಬುವರನ್ನು ವಶಕ್ಕೆ ಪಡೆದು ವಾಸಪ್ ಕಳುಹಿಸಿದ್ದಾರೆ. ಕೊಲೆಗೆ ಕುಮ್ಮಕ್ಕು ನೀಡಿರೋ ಸದ್ದಾಂ ಮುಜಾವರ್ ನನ್ನು ಬಂಧಿಸಿಲ್ಲ. ಈ ಗ್ಯಾಂಗ್ ಜೊತೆಗೆ ಇನ್ನೂ ಮೂರು ಜನ ಆರೋಪಿಗಳಿದ್ಧಾರೆ. ಅವರೂ ದಾವಲಸಾಬ್ ಕೊಲೆಯಲ್ಲಿ ಭಾಗಿಯಾಗಿದ್ದಾರೆ. ಅವರ್ಯಾರನ್ನೂ ಪೊಲೀಸರು ಬಂಧಿಸಿಲ್ಲ. ನಮಗೆ ನ್ಯಾಯ ಬೇಕು. ಸಾವಲಸಾಬ್ ಕೊಲೆ ಮಾಡಿದವರಿಗೆಲ್ಲ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯ ಮಾಡಿದ್ಧಾರೆ.

ಈ ನಿಟ್ಟಿನಲ್ಲಿ ಕೊಲೆಯಾದ ದಾವಲಸಾಬ್ ಕುಟುಂಬಸ್ಥರು ಎಸ್ಪಿ ಕಚೇರಿಗೆ ಆಗಮಿಸಿ ನ್ಯಾಯ ನೀಡಬೇಕೆಂದು ಮನವಿ ಮಾಡಿದ್ದಾರೆ. ದಾವಲಸಾಬ್ ಕೊಲೆ ಆರೋಪಿತರಲ್ಲಿ ಕೆಲವರನ್ನು ಮಾತ್ರ ಬಂಧಿಸಲಾಗಿದೆ. ಇತರೆ ಆರೋಪಿಗಳನ್ನು ಬಂಧಿಸಿ ನಮಗೆ ನ್ಯಾಯ ನೀಡಬೇಕೆಂದು ಒತ್ತಾಯ ಮಾಡಿದ್ದಾರೆ. ಸಂಸಾರದ ಕಹಲ ಮತ್ತು ಅಕ್ರಮ ಸಂಬಂಧ ಇಲ್ಲಿ ಓರ್ವ ಯುವಕನನ್ನೇ ಬಲಿ ತೆಗೆದುಕೊಂಡಿದೆ. ಕೊಲೆಯ ಸಂಚಿನಲ್ಲಿ ಸಂಬಂಧಿಕರೇ ಭಾಗಿಯಾಗಿದ್ದು ದುರಂತವೇ ಸರಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Ashok Yadalli
Ashok Yadalli

ನನ್ನ ಹೆಸರು ಅಶೋಕ ಯಡಳ್ಳಿ, ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಕಳೆದ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಪೀಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಇದು ನನ್ನ ಕೆಲಸದ ಬಗ್ಗೆ ಹೇಳಿರೋ ಮಾಹಿತಿಯಾಗಿದ್ದು ವೈಯುಕ್ತಿಕ ಮಾಹಿತಿ ಬಗ್ಗೆ ಹೇಳದಾದರೆ. ನಾನು ಮೂಲತಃ ಧಾರವಾಡ ಜಿಲ್ಲೆಯವ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ನಮ್ಮೂರು. ತಂದೆ ತಾಯಿ ಸಹೋದರ ಸಹೋದರಿಯರ ತುಂಬು ಕುಟುಂಬ. ಮೂಲತಃ ಕೃಷಿ ಕುಟುಂಬವಾಗಿದ್ದು, ಹಿರಿಯರಿಂದ ಬಂದ ಜಮೀನುಗಳಿವೆ. ಪ್ರಾಥಮಿಕ ಶಿಕ್ಷಣ ನಮ್ಮೂರಲ್ಲೇ ಬಳಿಕ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ ಹೆಮ್ಮೆ ತೃಪ್ತಿ ನನಗಿದೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ. ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆ ಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದೇನೆಂದು ನಂಬಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ - ಆಸಕ್ತಿಯಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ. ಧನ್ಯವಾದಗಳು.......

Read More
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ದಿಲೀಪ್ ರಾಜ್​​ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ
ದಿಲೀಪ್ ರಾಜ್​​ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ