AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಮೀರ್ ಅಹ್ಮದ್ ಸಂಧಾನಕ್ಕೂ ಬಗ್ಗದ ರೌಡಿಗಳು: ಫೇಸ್​ಬುಕ್​ನಲ್ಲಿ ಬೆದರಿಕೆ ಹಾಕಿದ್ದವನಿಂದ ನಡೆಯಿತು ಭೀಕರ ಕೊಲೆ

ಬೆಂಗಳೂರಿನಲ್ಲಿ ರೌಡಿಶೀಟರ್ ನಾಗನ ಕೊಲೆಯಾಗಿದೆ. ಈ ಕೊಲೆ ಮಾಡಿದ ಆರೋಪಿ ವೆಂಕಟೇಶ್​​ 8 ತಿಂಗಳ ಹಿಂದೆಯೇ ನಿನ್ನನ್ನು ಕೊಲೆ ಮಾಡುತ್ತೇನೆ ಅಂತ ನಾಗ ಫೇಸ್​ಬುಕ್​ ಲೈವ್​ನಲ್ಲಿ ಬೆದರಿಕೆ ಹಾಕಿದ್ದನು. ಬೆದರಿಕೆ ಬಳಿಕ ಸಚಿವ ಜಮೀರ್​ ಅಹ್ಮದ್​ ನಾಗ ಮತ್ತು ವೆಂಕಟೇಶ್​ನನ್ನು ಕರೆಸಿ ಸಂಧಾನ ಮಾಡಿದ್ದರು. ಆದರೂ ಕೂಡ ಕೊಲೆ ನಡೆದಿದೆ.

ಜಮೀರ್ ಅಹ್ಮದ್ ಸಂಧಾನಕ್ಕೂ ಬಗ್ಗದ ರೌಡಿಗಳು: ಫೇಸ್​ಬುಕ್​ನಲ್ಲಿ ಬೆದರಿಕೆ ಹಾಕಿದ್ದವನಿಂದ ನಡೆಯಿತು ಭೀಕರ ಕೊಲೆ
ಜಮೀರ್​ ಅಹ್ಮದ್​ ನೇತೃತ್ವದಲ್ಲಿ ರೌಡಿಗಳ ಸಂಧಾನ
ಪ್ರಜ್ವಲ್​ ಕುಮಾರ್ ಎನ್​ ವೈ
| Updated By: ಗಂಗಾಧರ​ ಬ. ಸಾಬೋಜಿ|

Updated on:Jun 14, 2024 | 7:09 PM

Share

ಬೆಂಗಳೂರು, ಜೂನ್​ 14: ನಗರದಲ್ಲಿ (Bengaluru)  ರೌಡಿಗಳ ಅಟ್ಟಹಾಸ ಮಿತಿ ಮೀರಿದೆ. ಪೊಲೀಸರು ಕಣ್ಮುಚ್ಚಿ ಕುಳತಿದ್ದಾರೆ ಎಂಬ ಅನುಮಾನ ಶುರುವಾಗಿದೆ. ಓರ್ವ​ ರೌಡಿ ಫೇಸ್​ಬುಕ್​ ಲೈವ್​ನಲ್ಲಿ (Facebook Live) ಕೊಲೆ ಬೆದರಿಕೆ ಹಾಕಿದ 8 ತಿಂಗಳಲ್ಲಿ ಹತ್ಯೆ ಮಾಡಿದ್ದಾನೆ. ಫೇಸ್​ಬುಕ್​ ಲೈವ್​​ ಅಲ್ಲಿ ಕೊಲೆ ಬೆದರಿಕೆ ಹಾಕಿದ್ದ ರೌಡಿ ನಾಗನನ್ನು ರೌಡಿ ವೆಂಕಟೇಶ್ ಹತ್ಯೆ ಮಾಡಿದ್ದಾನೆ. ಗುರುವಾರ (ಜೂ.13) ರಂದು ಜ್ಞಾನ ಭಾರತಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹಳೇ ವೈಷಮ್ಯ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ರೌಡಿ ನಾಗ ಬೈಕ್​ ಚಾಲನೆ ಮಾಡುತ್ತ ಫೇಸ್​ಬುಕ್ ಲೈವ್​ನಲ್ಲಿ “ನಿನ್ನೂ ಕೊಲೆ ಮಾಡುವೆ ಇದ್ನ ಸೇವ್​ ಮಾಡಕೊ ಶಿಷ್ಯ. ಬದುಕಬೇಕೆಂದರೆ ಕ್ಷಮೆ ಕೇಳು. ಇಲ್ಲವಾದರೆ ಕೊಲೆ ಮಾಡುವೆ” ಎಂದು ರೌಡಿ ನಾಗ ವೆಂಕಟೇಶ್​ಗೆ ​​ಬೆದರಿಕೆ ಹಾಕಿದ್ದನು. ಇದಾದ ಬಳಿಕ ಸಚಿವ ಜಮೀರ್ ಅಹ್ಮದ್ ಸಮ್ಮುಖದಲ್ಲಿ ಸಂಧಾನ ನಡೆದಿತ್ತು. ಸಚಿವರ ಬಳಿ ರೌಡಿಗಳ ಸಂಧಾನ ನಡೆದ ಬಳಿಕ ಪೊಲೀಸರು ಸೈಲೆಂಟ್ ಆಗಿದ್ದರು. ಆದರೆ, ಗುರುವಾರ ರೌಡಿ ವೆಂಕಟೇಶ್​ ಏಕಾಏಕಿ ಗ್ಯಾಂಗ್​ ಕಟ್ಟಿಕೊಂಡು ಹೋಗಿ ಅಟ್ಯಾಕ್ ಮಾಡಿ ನಾಗ್​​ನನ್ನು ಕೊಲೆ ಮಾಡಿದ್ದಾನೆ.

ಇದನ್ನೂ ಓದಿ: ಎದೆ ನೋವೆಂದ ಯುವತಿಗೆ ಪರೀಕ್ಷೆಯ ನೆಪದಲ್ಲಿ ಉಡುಪು ಬಿಚ್ಚಿಸಿ ಮುತ್ತಿಟ್ಟ ಬೆಂಗಳೂರಿನ ವೈದ್ಯ! ಹೈಕೋರ್ಟ್​ನಲ್ಲೂ ಸಿಗಲಿಲ್ಲ ರಿಲೀಫ್

ಓರ್ವ ರೌಡಿ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಿದ್ದರೂ, ಪೊಲೀಸರು ಮಾತ್ರ ಕಂಡು ಕಾಣದಂತೆ ಕೂತಿದ್ದು ಮಾತ್ರ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ, ನಗರದಲ್ಲಿನ ಕಾನೂನು ಸುವ್ಯವಸ್ಥೆ ಬಗ್ಗೆ ಅನುಮಾನ ಹುಟ್ಟುವಂತೆ ಮಾಡಿದೆ. ಪೊಲೀಸರ ನಿರ್ಲಕ್ಷ್ಯವೆ ರೌಡಿಶೀಟರ್ ನಾಗನ​​ ಬರ್ಬರವಾಗಿ ಹತ್ಯೆಯಾಗಲು ಕಾರಣವಾಯಿತೇ ಎಂಬ ಪ್ರಶ್ನೆ ಮೂಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:58 pm, Fri, 14 June 24

ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ