Crime News: ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ, ಮೂವರ ಸಾವು

| Updated By: ಆಯೇಷಾ ಬಾನು

Updated on: Aug 20, 2022 | 8:09 AM

ಮುಂದೆ ಚಲಿಸುತ್ತಿದ್ದ ಲಾರಿಗೆ ಸ್ವಿಫ್ಟ್ ಕಾರು ಡಿಕ್ಕಿಯಾಗಿದೆ. ಲಾರಿಗೆ ಸ್ವಿಫ್ಟ್ ಕಾರು ಗುದ್ದಿದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು ಗಾಯಳು ಬಾಲಕಿ ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.

Crime News: ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ, ಮೂವರ ಸಾವು
ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ, ಮೂವರ ಸಾವು
Follow us on

ತುಮಕೂರು: ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿ ಮೂವರು ಮೃತಪಟ್ಟ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ತರೂರು ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ. ಕಾರಿನಲ್ಲಿ ತೆರಳುತ್ತಿದ್ದ ತಂದೆ ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಅವಿನಾಶ್(28), ಪ್ರಣಂತಿ(5), ಸೌಖ್ಯಾ(3) ಮೃತ ದುರ್ದೈವಿಗಳು.

ಮುಂದೆ ಚಲಿಸುತ್ತಿದ್ದ ಲಾರಿಗೆ ಸ್ವಿಫ್ಟ್ ಕಾರು ಡಿಕ್ಕಿಯಾಗಿದೆ. ಲಾರಿಗೆ ಸ್ವಿಫ್ಟ್ ಕಾರು ಗುದ್ದಿದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು ಗಾಯಳು ಬಾಲಕಿ ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಈ ಬಗ್ಗೆ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಶವಂತಪುರ ಫ್ಲೈಓವರ್ ಮೇಲೆ ಆ್ಯಕ್ಸಿಡೆಂಟ್

ಬೆಂಗಳೂರಿನ ಯಶವಂತಪುರ ಫ್ಲೈಓವರ್ ಮೇಲೆ ಭೀಕರ ಅಪಘಾತ ಸಂಭವಿಸಿದೆ. 2 ಕಾರುಗಳು ಮುಖಾಮುಖಿ ಡಿಕ್ಕಿಯಾಗಿ 8 ಜನರಿಗೆ ಗಾಯಗಳಾಗಿವೆ. ಸ್ಥಳೀಯರು ಗಾಯಾಳುಗಳನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಯಶವಂತಪುರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕೋವಿಡ್ನಲ್ಲಿ ಕೆಲಸ ಹೋಯ್ತು ಅಂತ ಕಳ್ಳತನ ದಾರಿ

ಕೋವಿಡ್ನಲ್ಲಿ ಕೆಲಸ ಹೋಯ್ತು ಎಂದು ಹಣ ಮಾಡಲು ಕಳ್ಳತನ ದಾರಿ ಹಿಡಿದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ದೆಹಲಿಯಿಂದ ಬೆಂಗಳೂರಿಗೆ ಫ್ಲೈಟ್ ನಲ್ಲಿ ಬಂದು ಚಿನ್ನ ಕಳವು ಮಾಡ್ತಿದ್ದ ಚಾಲಾಕಿ ಕಳ್ಳ ರಾಹುಲ್ ಯಾದವ್ ಬಂಧಿತ ಆರೋಪಿ.

ಬಿಎಸ್ಸಿ ಪದವೀಧರನಾಗಿರುವ ರಾಹುಲ್ ಆಗಾಗ ಬೆಂಗಳೂರಿಗೆ ಬಂದು ಚಿನ್ನದ ಅಂಗಡಿಗಳಲ್ಲಿ ಕಳ್ಳತನ ಮಾಡ್ತಿದ್ದ. ದೆಹಲಿಗಿಂತ ಬೆಂಗಳೂರಿನಲ್ಲಿ ಕಳ್ಳತನ ಮಾಡೋದು ಸುಲಭ ಅಂತ ಇಲ್ಲಿಗೆ ಬರ್ತಿದ್ದ. ಚಿನ್ನ ಕಳವು ಮಾಡ್ತಿದಂತೆ ದೆಹಲಿ ಫ್ಲೈಟ್ ಹತ್ತಿ ವಾಪಸ್ ಆಗುತ್ತಿದ್ದ. ಕದ್ದ ಚಿನ್ನವನ್ನು ದೆಹಲಿಯಲ್ಲಿ ಮಾರಿ ತನ್ನ ಪತ್ನಿಯ ಅಕೌಂಟ್ ಗೆ ಹಣ ಹಾಕ್ತಿದ್ದ. ಕಡಿಮೆ ಜನ ಹಾಗೂ ಒಬ್ಬರೇ ಸೇಲ್ಸ್ ಬಾಯ್ ಇರುವ ಚಿನ್ನದ ಅಂಗಡಿಗಳನ್ನೇ ಹೆಚ್ಚಾಗಿ ಈಗ ಟಾರ್ಗೆಟ್ ಮಾಡ್ತಿದ್ದ. ಚಿನ್ನ ಖರೀದಿಸುವ ನೆಪದದಲ್ಲಿ ಗ್ರಾಹಕನಂತೆ ನಟಿಸಿ ಅಂಗಡಿಯವರ ಗಮನ ಬೇರೆಡೆ ಸೆಳೆದು ಚಿನ್ನ ಕದ್ದು ಪರಾರಿಯಾಗ್ತಿದ್ದ. ಬೆಂಗಳೂರಿನ ಜಯನಗರ ಹಾಗೂ ಮಲ್ಲೇಶ್ವರದಲ್ಲಿನ ಅಂಗಡಿಗಳಲ್ಲಿ 230 ಗ್ರಾಂ ಚಿನ್ನ ಕಳವು ಮಾಡಿದ್ದ. ಆರೋಪಿ ಕಳವು ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರ ಸಹಾಯದಿಂದ ಪೊಲೀಸರು ಖದೀಮನನ್ನು ಹಿಡಿದಿದ್ದಾರೆ. ಬಂಧಿತನಿಂದ 120 ಗ್ರಾಂ ಚಿನ್ನ ಹಾಗೂ 7 ಲಕ್ಷ ಹಣ ವಶಕ್ಕೆ ಪಡೆಯಲಾಗಿದೆ.

Published On - 8:09 am, Sat, 20 August 22