ಗೋರಕ್ಷಕ ಬಿಟ್ಟೂ ಬಜರಂಗಿಯ ಸಹೋದರನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದುಷ್ಕರ್ಮಿಗಳು

|

Updated on: Dec 14, 2023 | 7:36 PM

ನಾಲ್ವರು ಅಪರಿಚಿತ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಘಟನೆಯ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ಸಹಾಯಕ ಪೊಲೀಸ್ ಆಯುಕ್ತ (ಅಪರಾಧ) ಅಮನ್ ಯಾದವ್ ತಿಳಿಸಿದ್ದಾರೆ. 60% ಸುಟ್ಟ ಗಾಯಗಳೊಂದಿಗೆ ಬಿಟ್ಟೂ ಬಜರಂಗಿಯ ಸಹೋದರ ಮಹೇಶ್ ಪಾಂಚಾಲ್ ಅವರನ್ನು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದರು.

ಗೋರಕ್ಷಕ ಬಿಟ್ಟೂ ಬಜರಂಗಿಯ ಸಹೋದರನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದುಷ್ಕರ್ಮಿಗಳು
ಪ್ರಾತಿನಿಧಿಕ ಚಿತ್ರ
Follow us on

ಫರಿದಾಬಾದ್‌ ಡಿಸೆಂಬರ್ 14: ಫರಿದಾಬಾದ್‌ನ (Faridabad) ಬಾಬಾ ಮಂಡಿ ಬಳಿ ಗುರುವಾರ ಮುಂಜಾನೆ ನಾಲ್ವರು ಅಪರಿಚಿತರು ಪೆಟ್ರೋಲ್ (Petrol) ಸುರಿದು ಬೆಂಕಿ ಹಚ್ಚಿದ ನಂತರ ಗೋರಕ್ಷಕ ಬಿಟ್ಟೂ ಬಜರಂಗಿಯ (Bittu Bajrangi) ಸಹೋದರ ಮಹೇಶ್ ಪಾಂಚಾಲ್ (32) 60% ಸುಟ್ಟ ಗಾಯಗಳೊಂದಿಗೆ ಜೀವನ್ಮರಣ ಹೋರಾಟ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ದುಷ್ಕರ್ಮಿಗಳು ಪಾಂಚಾಲ್‌ಗೆ ಬೆಂಕಿ ಹಚ್ಚುವ ಮೊದಲು ಬಜರಂಗಿ ಜೊತೆಗಿನ ಸಂಬಂಧವನ್ನು ಖಚಿತಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

“ನನ್ನ ಸಹೋದರ ಅದನ್ನು ಖಚಿತಪಡಿಸಿದಾಗ, ಅವರು ಅವನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸ್ಥಳದಿಂದ ಓಡಿಹೋದರು” ಎಂದು ಬಜರಂಗಿ ಹೇಳಿದ್ದಾನೆ. ಜುಲೈನಲ್ಲಿ ಹರ್ಯಾಣದ ನುಹ್ ಮತ್ತು ಗುರುಗ್ರಾಮ್‌ನಲ್ಲಿ ನಡೆದ ಕೋಮು ಹಿಂಸಾಚಾರದಲ್ಲಿ ಆರು ಮಂದಿ ಸಾವಿಗೆ ಕಾರಣವಾದ ಆರೋಪದಲ್ಲಿ ಬಜರಂಗಿಯನ್ನು ಬಂಧಿಸಲಾಗಿತ್ತು.

ದಾಳಿಕೋರರು ಕಾರಿನಲ್ಲಿ ಪರಾರಿಯಾಗಿದ್ದು, ಅವರನ್ನು ಗುರುತಿಸಲು ತನಿಖಾಧಿಕಾರಿಗಳು ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾಲ್ವರು ಅಪರಿಚಿತ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಘಟನೆಯ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ಸಹಾಯಕ ಪೊಲೀಸ್ ಆಯುಕ್ತ (ಅಪರಾಧ) ಅಮನ್ ಯಾದವ್ ತಿಳಿಸಿದ್ದಾರೆ. 60% ಸುಟ್ಟ ಗಾಯಗಳೊಂದಿಗೆ ಪಾಂಚಾಲ್ ಅವರನ್ನು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ ಅವರು ಹೇಳಿದರು.

ಬೆಂಕಿ ಹೊತ್ತಿಕೊಂಡಾಗ ಪಾಂಚಾಲ್ ಅವರ ಮನೆಯೊಳಗೆ ಓಡಿದರು. ಅಲ್ಲಿ ಅವರ ಕುಟುಂಬ ಸದಸ್ಯರು ಬೆಂಕಿಯನ್ನು ನಂದಿಸಿದರು. ಆಮೇಲೆ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು ಎಂದು ಯಾದವ್ ಹೇಳಿದರು.

ಬಜರಂಗಿ ಈ ದಾಳಿಯನ್ನು ತಮ್ಮ ವಿರುದ್ಧ ಸೇಡಿನ ಕ್ರಮ ಎಂದು ಕರೆದಿದ್ದಾರೆ. ನಾನು ಗೋವುಗಳ ರಕ್ಷಣೆಗಾಗಿ ಕೆಲಸ ಮಾಡುತ್ತಿರುವುದರಿಂದ ಮತ್ತು ಕಳ್ಳಸಾಗಣೆಯಾದ ಹಸುಗಳನ್ನು ರಕ್ಷಿಸಲು ನನ್ನ ಗುಂಪನ್ನು ನಡೆಸುವುದರಿಂದ, ಕೆಲವರು ನನ್ನ ಸಹೋದರನನ್ನು ಕೊಲ್ಲಲು ಪ್ರಯತ್ನಿಸಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಹೊಸ ವರ್ಷಾಚರಣೆಗೆ ನಶೆ ಏರಿಸಲು 100 ಕೋಟಿ ಮೌಲ್ಯದ ಡ್ರಗ್ಸ್ ಬೆಂಗಳೂರಿಗೆ ಸಪ್ಲೈ! ಸ್ಪೆಷಲ್ ಡ್ರೈವ್​​ಗೆ ಸಜ್ಜಾದ ನಗರ ಪೊಲೀಸರು

ಗೋರಕ್ಷಕ ಬಜರಂಗದಳದ ಮುಖ್ಯಸ್ಥರಾಗಿರುವ ಬಜರಂಗಿ ವಿರುದ್ಧ ಜುಲೈನಲ್ಲಿ ನಡೆದ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಗಲಭೆ, ಹಲ್ಲೆ, ಶಸ್ತ್ರಾಸ್ತ್ರ ಪ್ರದರ್ಶನ ಮತ್ತು ಡಕಾಯಿತಿಗಾಗಿ ಪ್ರಕರಣ ದಾಖಲಿಸಿದ್ದರು. ಹಿಂಸಾಚಾರಕ್ಕಾಗಿ ಬಂಧಿತರಾದ 292 ಜನರ ಪೈಕಿ ಬಜರಂಗಿ ಮತ್ತು ಇನ್ನೊಬ್ಬ ಗೋರಕ್ಷಕ ಮೋಹಿತ್ ಯಾದವ್ ಅಥವಾ ಮೋನು ಮಾನೇಸರ್ ಅವರು ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುವ ಪ್ರಚೋದನಕಾರಿ ವನಿಡಿಯೊಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ