Chitradurga News: ಜಮೀನಿನ ದಾರಿ ವಿಚಾರವಾಗಿ ಗಲಾಟೆ: ಮಹಿಳೆಯ ಕೊಲೆ

| Updated By: ವಿವೇಕ ಬಿರಾದಾರ

Updated on: Jun 29, 2023 | 8:09 PM

ಜಮೀನಿನ ದಾರಿ ವಿಚಾರವಾಗಿ ನಡೆದ ಗಲಾಟೆಯಲ್ಲಿ ಮಹಿಳೆಯನ್ನು ಕೊಲೆ ಮಾಡಿರುವ ಘಟನೆ ಹೊಸದುರ್ಗ ತಾಲೂಕಿನ ಲಕ್ಷ್ಮೀದೇವರಹಟ್ಟಿಯಲ್ಲಿ ನಡೆದಿದೆ.

Chitradurga News: ಜಮೀನಿನ ದಾರಿ ವಿಚಾರವಾಗಿ ಗಲಾಟೆ: ಮಹಿಳೆಯ ಕೊಲೆ
ಮೃತ ಪಾಲಾಕ್ಷ್ಮಮ್ಮ
Follow us on

ಚಿತ್ರದುರ್ಗ: ಜಮೀನಿನ ದಾರಿ ವಿಚಾರವಾಗಿ ನಡೆದ ಗಲಾಟೆಯಲ್ಲಿ ಮಹಿಳೆಯನ್ನು (Woman) ಕೊಲೆ (Murder) ಮಾಡಿರುವ ಘಟನೆ ಹೊಸದುರ್ಗ (Hosdurga) ತಾಲೂಕಿನ ಲಕ್ಷ್ಮೀದೇವರಹಟ್ಟಿಯಲ್ಲಿ ನಡೆದಿದೆ. ಮಚ್ಚು, ದೊಣ್ಣೆಯಿಂದ ಪಾಲಾಕ್ಷ್ಮಮ್ಮ (40) ಹಲ್ಲೆ ಮಾಡಿ ಹತ್ಯೆ ಮಾಡಲಾಗಿದೆ. ಪಾಲಾಕ್ಷ್ಮಮ್ಮ ಪತಿ ಪ್ರಸನ್ನಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜಣ್ಣ ಮತ್ತು ಕುಟುಂಬದವರ ವಿರುದ್ಧ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾರಿ, ಬೈಕ್ ಮಧ್ಯೆ​ ಮುಖಾಮುಖಿ ಡಿಕ್ಕಿಯಾಗಿ ಮಹಿಳೆ ಸಾವು

ವಿಜಯಪುರ: ಲಾರಿ, ಬೈಕ್ ಮಧ್ಯೆ​ ಮುಖಾಮುಖಿ ಡಿಕ್ಕಿಯಾಗಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚಡಚಣ ತಾಲೂಕಿನ ಧೂಳಖೇಡ ಬಳಿ ನಡೆದಿದೆ. ಸೊಲ್ಲಾಪುರ ಜಿಲ್ಲೆಯ ಬಂಡರಗವಟ ಗ್ರಾಮದ ಜನಾಬಾಯಿ ಗುಮತಾಪುರೆ (47) ಮೃತ ದುರ್ದೈವಿ. ಬೈಕ್​ ಚಾಲಕನಿಗೆ ಗಂಗಾರಾಮಗೆ ಗಂಭೀರ ಗಾಯಗಳಾಗಿದ್ದು, ಸೊಲ್ಲಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ: ಮದುವೆಯಾಗುವುದಾಗಿ ನಂಬಿಸಿ ನಿರಂತರ ದೈಹಿಕ ಸಂಪರ್ಕ; ಮಂಗಳೂರು ಪೊಲೀಸರಿಂದ ಕಡಬದ ರೆಹಮಾನ್ ಬಂಧನ

ಬೈಕ್​ಗೆ KSRTC ಬಸ್​ ಡಿಕ್ಕಿ

ಬೆಂಗಳೂರು: ಹೊಸಕೋಟೆ ಹೊರವಲಯದ ಟೋಲ್ ಪ್ಲಾಜಾ ಬಳಿ ಬೈಕ್​ಗೆ KSRTC ಬಸ್​ ಡಿಕ್ಕಿಯಾಗಿ ಸವಾರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹೊಸಕೋಟೆ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ