AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Menstruation: ರಿಯಾದ್‌ನಿಂದ ವಿಮಾನದಲ್ಲಿ ಬಂದ ಕೇರಳದ ಮಹಿಳೆ ಚಿನ್ನ ಅಡಗಿಸಿಟ್ಟುಕೊಂಡು ಕಳ್ಳಸಾಗಣೆ ಮಾಡಿದ್ದು ಹೇಗೆ ಗೊತ್ತಾ!?

ಚಿನ್ನ ಕಳ್ಳಸಾಗಣೆ ಬಗ್ಗೆ ನಿತ್ಯವೂ ಸುದ್ದಿ ನೋಡುತ್ತಿರುತ್ತೇವೆ. ವಿದೇಶದಿಂದ ಅದರಲ್ಲೂ ಅರಬ್ ರಾಷ್ಟ್ರಗಳಿಂದ ಅಕ್ರಮವಾಗಿ ಚಿನ್ನ ಸಾಗಿಸುವಾಗ ಭಾರತದ ಯಾವುದಾದರೂ ವಿಮಾನ ನಿಲ್ದಾಣಕ್ಕೆ ಬಂದು ತಗಲಾಕಿಕೊಳ್ಳುತ್ತಾರೆ. ಕಳ್ಳಸಾಗಣೆದಾರರು ಆಯ್ಕೆ ಮಾಡಿಕೊಳ್ಳುವ ಮಾರ್ಗಗಳು ನಿಜಕ್ಕೂ ಒಮ್ಮೊಮ್ಮೆ ಕುತೂಹಲಕಾರಿಯಾಗಿರುತ್ತದೆ.

Menstruation: ರಿಯಾದ್‌ನಿಂದ ವಿಮಾನದಲ್ಲಿ ಬಂದ ಕೇರಳದ ಮಹಿಳೆ ಚಿನ್ನ ಅಡಗಿಸಿಟ್ಟುಕೊಂಡು ಕಳ್ಳಸಾಗಣೆ ಮಾಡಿದ್ದು ಹೇಗೆ ಗೊತ್ತಾ!?
ಕೇರಳದ ಮಹಿಳೆ ಸ್ಯಾನಿಟರಿ ನ್ಯಾಪ್ಕಿನ್​ನಲ್ಲಿ ಚಿನ್ನ ಅಡಗಿಸಿಟ್ಟುಕೊಂಡು ಕಳ್ಳಸಾಗಣೆ ಮಾಡಿದರು
TV9 Web
| Edited By: ಸಾಧು ಶ್ರೀನಾಥ್​|

Updated on: Feb 10, 2023 | 6:23 AM

Share

ಚಿನ್ನ ಕಳ್ಳಸಾಗಣೆ (Gold Smuggling) ಬಗ್ಗೆ ನಿತ್ಯವೂ ಸುದ್ದಿ ನೋಡುತ್ತಿರುತ್ತೇವೆ. ವಿದೇಶದಿಂದ ಅದರಲ್ಲೂ ದುಬೈ, ರಿಯಾದ್‌ (Riyadh) ಅಂತಹ ಅರಬ್ ರಾಷ್ಟ್ರಗಳಿಂದ ಅಕ್ರಮವಾಗಿ ಚಿನ್ನ ಸಾಗಿಸುವಾಗ ಭಾರತದ ಯಾವುದಾದರೂ ವಿಮಾನ ನಿಲ್ದಾಣಕ್ಕೆ ಬಂದು ತಗಲಾಕಿಕೊಳ್ಳುತ್ತಾರೆ. ಕಳ್ಳಸಾಗಾಣಿಕೆಗಾಗಿ ಕಳ್ಳಸಾಗಣೆದಾರರು ಆಯ್ಕೆ ಮಾಡಿಕೊಳ್ಳುವ ಮಾರ್ಗಗಳು ನಿಜಕ್ಕೂ ಒಮ್ಮೊಮ್ಮೆ ಕುತೂಹಲಕಾರಿಯಾಗಿರುತ್ತದೆ. ಅಧಿಕಾರಿಗಳು ಎಷ್ಟೇ ಕ್ರಮ ಕೈಗೊಂಡರೂ ಚಿನ್ನದ ಮೇಲಿನ ವ್ಯಾಮೋಹವೋ ಏನೋ, ಅಕ್ರಮವಂತೂ ನಿಂತಿಲ್ಲ. ಕಳ್ಳಸಾಗಣೆದಾರರು ತಮ್ಮ ಸಾಹಸ ಜಾರಿಯಲ್ಲಿಟ್ಟಿರುತ್ತಾರೆ. ಇತ್ತೀಚಿಗೆ ಕೇರಳದ ಮಹಿಳೆಯೊಬ್ಬರು (Kerala Woman) ಮಾಡಿದ್ದೇನು ಅಂತ ಗೊತ್ತಾದ್ರೆ ಸ್ವಲ್ಪ ಶಾಕ್ ಆಗುವುದು ಗ್ಯಾರಂಟಿ.

ವಿಷಯ ಏನೆಂದರೆ… ರಿಯಾದ್ ನಿಂದ ಮಹಿಳೆಯೊಬ್ಬರು ಕೊಚ್ಚಿಯ ನೆಡುಂಬಸ್ಸೆರಿ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ವಿಮಾನ ನಿಲ್ದಾಣದಿಂದ ಹೊರಡುವಾಗ ಗ್ರೀನ್ ಚಾನೆಲ್ ಮೂಲಕ ಹಾದುಹೋಗಲು ಪ್ರಯತ್ನಿಸಿದಾಗ, ಕಸ್ಟಮ್ಸ್ ಅಧಿಕಾರಿಗಳು ಅನುಮಾನಗೊಂಡು ಆಕೆಯನ್ನು ಪ್ರಶ್ನಿಸಿದರು. ದೈಹಿಕ ಪರೀಕ್ಷೆ ನಡೆಸಬೇಕು ಎಂದು ಅಧಿಕಾರಿಗಳು ಕೇಳಿದ್ದಾರೆ.

ಆಕೆ ತಾನು ಋತುಮತಿ ಸ್ಥಿತಿಯಲ್ಲಿರುವುದರಿಂದ (Menstruation) ದೈಹಿಕ ಪರೀಕ್ಷೆಗೆ ಸಹಕರಿಸುವುದಿಲ್ಲ ಎಂದು ಉತ್ತರಿಸಿದ್ದಾರೆ. ಆದರೆ ಮಹಿಳಾ ಅಧಿಕಾರಿಗಳು ಆಕೆಯ ಮಾತನ್ನು ನಂಬಿಲ್ಲ. ಪರೀಕ್ಷೆಯಲ್ಲಿ.. ಮಹಿಳೆಯ ಖಾಸಗಿ ಭಾಗದಲ್ಲಿ ಐದು ಚಿನ್ನದ ಬಿಸ್ಕತ್ತುಗಳನ್ನು ತುರುಕಿಕೊಂಡಿರುವುದು ಪತ್ತೆಯಾಗಿದೆ. ಅಲ್ಲಿ ಅಡಗಿಸಿಟ್ಟುಕೊಂಡಿದ್ದ ಚಿನ್ನದ ಬೆಲೆ ಸುಮಾರು ರೂ. 30 ಲಕ್ಷ.

ಇನ್ನೂ ಆಘಾತಕಾರಿ ಸಂಗತಿಯೆಂದರೆ ಅಧಿಕಾರಿಗಳನ್ನು ಮೂರ್ಖರನ್ನಾಗಿಸಲು ಆ ಮಹಿಳೆ ಕೃತಕವಾಗಿ, ತಾನು ಋತುಚಕ್ರ ಅವಸ್ಥೆಯಲ್ಲಿರುವುದಾಗಿ ಸಾಬೀತುಪಡಿಸಲು ಪ್ರಯತ್ನಿಸಿದ್ದಳು ಎಂಬುದು ತನಿಖೆ ವೇಳೆ ಬಟಾಬಯಲಾಗಿದೆ. ಸ್ಯಾನಿಟರಿ ನ್ಯಾಪ್ಕಿನ್‌ನಲ್ಲಿ (Sanitary Napkin) ಚಿನ್ನವನ್ನು ಬಚ್ಚಿಟ್ಟು, ನ್ಯಾಪ್ಕಿನ್‌ಗೆ ಕೆಂಪು ಬಣ್ಣ ಬಳಿದು ಋತುಸ್ರಾವದ ಭಾವನೆ ಮೂಡಿಸಿದ್ದಾಳೆ! ಈ ವಿಷಯ ತಿಳಿದ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ಆದರೆ ಪಟ್ಟುಬಿಡದೆ ಆಕೆಯ ಅಕ್ರಮವನ್ನು ಬಟಾಬಯಲು ಮಾಡಿದ್ದಾರೆ.

ಚಿನ್ನ ಕಳ್ಳಸಾಗಣೆ ರಹದಾರಿಗಳು ನೂರೆಂಟು ಎಂಬುದು ಕಸ್ಟಮ್ಸ್​ ಅಧಿಕಾರಿಗಳಿಗೆ ಆಗಾಗ ಮನದಟ್ಟಾಗುತ್ತಿದ್ದು, ತಮ್ಮ ಕಣ್ಗಾವಲನ್ನು ಮತ್ತಷ್ಟು ಬಿಗಿಗೊಳಿಸಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಇಷ್ಟೆಲ್ಲಾ ಕಡಿವಾಣ ಹಾಕಿದರೂ ಕಳ್ಳಸಾಗಣೆದಾರರು ರಂಗೋಲಿ ಹಾಕುತ್ತಾರಲ್ಲಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ