Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸತ್ತ ಸ್ನೇಹಿತ ಕರೆ ಮಾಡುತ್ತಿದ್ದಾನೆ..ನಾನು ಹೋಗುತ್ತಿದ್ದೇನೆ..ಎಂದು ಸೆಲ್ ಟವರ್ ಹತ್ತಿದ ಯುವಕ

Crime News: ಸುಮಾರು ಒಂದೂವರೆ ಗಂಟೆಗಳ ಕಾಲ ಟವರ್ ಮೇಲೆ ನಿಂತಿದ್ದ ಡೇವಿಡ್​ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದ. ಆತನನ್ನು ಕೆಳಗಿಳಿಸಲು ಪೊಲೀಸರು ಶತಪ್ರಯತ್ನ ನಡೆಸಿದರು.

ಸತ್ತ ಸ್ನೇಹಿತ ಕರೆ ಮಾಡುತ್ತಿದ್ದಾನೆ..ನಾನು ಹೋಗುತ್ತಿದ್ದೇನೆ..ಎಂದು ಸೆಲ್ ಟವರ್ ಹತ್ತಿದ ಯುವಕ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಝಾಹಿರ್ ಯೂಸುಫ್

Updated on: Feb 07, 2022 | 9:02 PM

ಪ್ರತಿ ಫ್ರೆಂಡ್ ಬೇಕೇ ಬೇಕು ಕಣೋ…ಜೀವನದಲ್ಲಿ ಎಲ್ಲರಿಗೂ ಒಬ್ಬನಾದರೂ ಫ್ರೆಂಡ್ ಇದ್ದೇ ಇರುತ್ತಾನೆ. ತನ್ನೆಲ್ಲಾ ನೋವು ನಲಿವುಗಳನ್ನು ಹಂಚಿಕೊಳ್ಳಲು ಗೆಳೆತನ ಬೇಕೇ ಬೇಕು. ಗೆಳೆಯನಿಲ್ಲದಿದ್ದರೆ ಸ್ವರ್ಗ ಕೂಡ ನರಕವಾಗುತ್ತೆ ಎಂಬ ಮಾತಿದೆ. ಆದರೆ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಗೆಳೆಯನೊಬ್ಬ ಇದಕ್ಕಿದ್ದಂತೆ ಇಲ್ಲದಾದರೆ ಏನಾಗಬಹುದು? ಅಂತಹದೊಂದು ಸಂದಿಗ್ಧ ಸ್ಥಿತಿಯಲ್ಲಿದ್ದಾನೆ ಪಶ್ಚಿಮ ಗೋದಾವರಿ ಜಿಲ್ಲೆಯ ಉಂದ್ರಜಾವರಂನಲ್ಲಿನ ಯುವಕ ಡೇವಿಡ್. ಡೇವಿಡ್​ಗೂ ಒಬ್ಬ ಗೆಳೆಯನಿದ್ದ ಹೆಸರು ರಂಜಿತ್ ರಮ್ಮ. ಆದರೆ ಕುಚುಕು ಗೆಳೆಯ ಕೆಲ ಮೃತಪಟ್ಟಿದ್ದಾನೆ. ಇತ್ತ ಡೇವಿಡ್​ಗೂ ಗೆಳೆಯನ ನೆನಪುಗಳು ಕಾಡಲಾರಂಭಿಸಿದೆ.

ಅದೆಷ್ಟರ ಮಟ್ಟಿಗೆ ಎಂದರೆ ನನಗೆ ಪ್ರತಿನಿತ್ಯ ಗೆಳೆಯ ರಂಜಿತ್ ರಮ್ಮ ಕರೆ ಮಾಡುತ್ತಿದ್ದಾನೆ ಎಂದು ಕೆಲವರಲ್ಲಿ ಹೇಳಿಕೊಂಡಿದ್ದಾನೆ. ಅಷ್ಟೇ ಅಲ್ಲದೆ ನಾನು ಕೂಡ ಗೆಳೆಯನ ಬಳಿ ಹೋಗುತ್ತಿದ್ದೇನೆ ಎಂದೇಳಿ ನೇರವಾಗಿ ಮೊಬೈಲ್ ಟವರ್ ಹತ್ತಿದ್ದಾನೆ. ನಾವಿಬ್ಬರೂ ಪ್ರತಿನಿತ್ಯ ಮಾಡುತ್ತೇವೆ. ಅವನು ಯಾವಾಗಲೂ ನನಗೆ ಕರೆ ಮಾಡಿ ಬರಲು ಹೇಳುತ್ತಾನೆ. ಹೀಗಾಗಿ ನಾನು ಅವನೊಂದಿಗೆ ಇರುತ್ತೇನೆ ಎಂದು ಡೇವಿಡ್ ಸೆಲ್ ಟವರ್ ಹತ್ತಿದ್ದಾನೆ.

ಸುಮಾರು ಒಂದೂವರೆ ಗಂಟೆಗಳ ಕಾಲ ಟವರ್ ಮೇಲೆ ನಿಂತಿದ್ದ ಡೇವಿಡ್​ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದ. ಆತನನ್ನು ಕೆಳಗಿಳಿಸಲು ಪೊಲೀಸರು ಶತಪ್ರಯತ್ನ ನಡೆಸಿದರು. ಆತನ ಮಗನನ್ನು ತೋರಿಸಿ ಕೆಳಗೆ ಬರುವಂತೆ ತೋರಿಸಲಾಯಿತು. ಮಗನ ಮುಖ ನೋಡಿದ ಬಳಿಕ ಡೇವಿಡ್ ಟವರ್​ನಿಂದ ಕೆಳಗಿಳಿದಿದ್ದ. ಇದಾದ ಬಳಿಕ ವಶಕ್ಕೆ ಪಡೆದ ಪೊಲೀಸರು ಆತನನ್ನು ವಿಚಾರಿಸಿದ್ದಾರೆ. ಈ ವೇಳೆ ಆತ ಹೇಳಿದ್ದ ಪ್ರತಿ ಮಾತುಗಳು ಕೇಳಿ ಪೊಲೀಸರು ದಂಗಾದರು.

ಏಕೆಂದರೆ ಡೇವಿಡ್ ಹೇಳಿದ್ದು ಅದನ್ನೇ, ನನ್ನ ಮೃತ ಸ್ನೇಹಿತ ರಂಜಿತ್ ರಮ್ಮ ಕರೆ ಮಾಡುತ್ತಿದ್ದಾನೆ. ನಾನು ಕೂಡ ಅವನ ಬಳಿ ಹೋಗಬೇಕು. ಅವನನ್ನು ಒಬ್ಬಂಟಿಯಾಗಿ ಬಿಡಬಾರದು ಎಂದೆಲ್ಲಾ ಹೇಳುತ್ತಾ ಕೂತಿದ್ದ. ಇದನ್ನು ಕೇಳಿಸಿಕೊಂಡ ಪೊಲೀಸರಿಗೆ ಯುವಕ ಸ್ಥಿಮಿತ ಕಳೆದುಕೊಂಡಿರುವುದು ಖಚಿತವಾಗಿದೆ. ಗೆಳೆಯ ಅಗಲಿಕೆಯಿಂದಾಗಿ ಡೇವಿಡ್ ಮಾನಸಿಕವಾಗಿ ಸ್ಥಿಮಿತ ಕಳೆದುಕೊಂಡಿದ್ದಾನೆ. ಹೀಗಾಗಿ ಕೂಡಲೇ ಈತನನ್ನು ವೈದ್ಯರ ಬಳಿ ಕೌನ್ಸೆಲಿಂಗ್ ನಡೆಸಿ ಎಂದು ಪಶ್ಚಿಮ ಗೋದಾವರಿ ಜಿಲ್ಲೆಯ ಉಂದ್ರಜಾವರಂ ಪೊಲೀಸ್ ಇನ್​ಸ್ಪೆಕ್ಟರ್ ಡೇವಿಡ್​ನನ್ನು ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: Yuzvendra Chahal: ವಿಕೆಟ್​ಗಳ ಶತಕ ಪೂರೈಸಿದ ಚಹಾಲ್

ಇದನ್ನೂ ಓದಿ: Rohit Sharma: ಸಚಿನ್ ದಾಖಲೆ ಮುರಿದ ಹಿಟ್​ಮ್ಯಾನ್ ರೋಹಿತ್ ಶರ್ಮಾ

ಇದನ್ನೂ ಓದಿ: Lata Mangeshkar: ಎಲ್ಲರೂ ಕೈಬಿಟ್ಟಾಗ ಟೀಮ್ ಇಂಡಿಯಾ ಕೈ ಹಿಡಿದಿದ್ದ ಲತಾ ಮಂಗೇಶ್ಕರ್..!

)

ಪುನೀತ್ ರಾಜ್​ಕುಮಾರ್ ಬಗ್ಗೆ ಅರ್ಧಗಂಟೆ ಮಾತನಾಡಿದ ರಶ್ಮಿಕಾ ಮಂದಣ್ಣ
ಪುನೀತ್ ರಾಜ್​ಕುಮಾರ್ ಬಗ್ಗೆ ಅರ್ಧಗಂಟೆ ಮಾತನಾಡಿದ ರಶ್ಮಿಕಾ ಮಂದಣ್ಣ
ಪತಿಯೊಂದಿಗೆ ಜಗಳವಾಡಿ ವಿದ್ಯುತ್ ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ
ಪತಿಯೊಂದಿಗೆ ಜಗಳವಾಡಿ ವಿದ್ಯುತ್ ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ
ಶಿವಪುರಿಯ ಮಾತಟಿಲಾ ಡ್ಯಾಂನಲ್ಲಿ ಮುಳುಗಿದ ದೋಣಿ; 7 ಜನ ಸಾವನ್ನಪ್ಪಿರುವ ಶಂಕೆ
ಶಿವಪುರಿಯ ಮಾತಟಿಲಾ ಡ್ಯಾಂನಲ್ಲಿ ಮುಳುಗಿದ ದೋಣಿ; 7 ಜನ ಸಾವನ್ನಪ್ಪಿರುವ ಶಂಕೆ
ಕೋರ್ಟ್​ ಆದೇಶ ಹಾಗೂ ವ್ಯಕ್ತಿ ಪ್ರಾಣಕ್ಕೂ ಬೆಲೆ ಕೊಡದ KSRTC, ಬಸ್ ಜಪ್ತಿ!
ಕೋರ್ಟ್​ ಆದೇಶ ಹಾಗೂ ವ್ಯಕ್ತಿ ಪ್ರಾಣಕ್ಕೂ ಬೆಲೆ ಕೊಡದ KSRTC, ಬಸ್ ಜಪ್ತಿ!
ಚಂದನ್ ಶೆಟ್ಟಿ ಜೊತೆ ಮದುವೆ ಗಾಸಿಪ್, ಸ್ಪಷ್ಟನೆ ಕೊಟ್ಟ ಸಂಜನಾ
ಚಂದನ್ ಶೆಟ್ಟಿ ಜೊತೆ ಮದುವೆ ಗಾಸಿಪ್, ಸ್ಪಷ್ಟನೆ ಕೊಟ್ಟ ಸಂಜನಾ
ಕುಮಾರಸ್ವಾಮಿ ನನ್ನನ್ನು ಬಯ್ಯದೆ ಬೇರೆ ಯಾರನ್ನು ಬಯ್ಯಲು ಸಾಧ್ಯ? ಶಿವಕುಮಾರ್
ಕುಮಾರಸ್ವಾಮಿ ನನ್ನನ್ನು ಬಯ್ಯದೆ ಬೇರೆ ಯಾರನ್ನು ಬಯ್ಯಲು ಸಾಧ್ಯ? ಶಿವಕುಮಾರ್
ಜಾರ್ಖಂಡ್‌ನ ದಿಯೋಘರ್‌ನಲ್ಲಿ ಇಂಡಿಯನ್ ಆಯಿಲ್ ಸ್ಥಾವರದಲ್ಲಿ ಬೆಂಕಿ ಅವಘಡ
ಜಾರ್ಖಂಡ್‌ನ ದಿಯೋಘರ್‌ನಲ್ಲಿ ಇಂಡಿಯನ್ ಆಯಿಲ್ ಸ್ಥಾವರದಲ್ಲಿ ಬೆಂಕಿ ಅವಘಡ
ಕರ್ನಾಟಕ ಮೊದಲು ತಮಿಳುನಾಡು ಚರ್ಚೆ ಮಾಡಬೇಕಾದ ಅವಶ್ಯಕತೆ ಸ್ಪಷ್ಟವಾಗುತ್ತಿದೆ
ಕರ್ನಾಟಕ ಮೊದಲು ತಮಿಳುನಾಡು ಚರ್ಚೆ ಮಾಡಬೇಕಾದ ಅವಶ್ಯಕತೆ ಸ್ಪಷ್ಟವಾಗುತ್ತಿದೆ
ಶಿವಲಿಂಗೇಗೌಡರು ಕೋಪದಿಂದ ಕುದಿಯುತ್ತಿದ್ದರೆ ಸಭಾಧ್ಯಕ್ಷರಿಗೆ ನಗು!
ಶಿವಲಿಂಗೇಗೌಡರು ಕೋಪದಿಂದ ಕುದಿಯುತ್ತಿದ್ದರೆ ಸಭಾಧ್ಯಕ್ಷರಿಗೆ ನಗು!
ಕಂದಾಯ ಮತ್ತು ಸರ್ವೇ ಇಲಾಖೆ ಅಧಿಕಾರಿಗಳಿಂದ ಮಾರ್ಕಿಂಗ್ ಕೆಲಸ ಶುರುವಾಗಿದೆ
ಕಂದಾಯ ಮತ್ತು ಸರ್ವೇ ಇಲಾಖೆ ಅಧಿಕಾರಿಗಳಿಂದ ಮಾರ್ಕಿಂಗ್ ಕೆಲಸ ಶುರುವಾಗಿದೆ