AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸತ್ತ ಸ್ನೇಹಿತ ಕರೆ ಮಾಡುತ್ತಿದ್ದಾನೆ..ನಾನು ಹೋಗುತ್ತಿದ್ದೇನೆ..ಎಂದು ಸೆಲ್ ಟವರ್ ಹತ್ತಿದ ಯುವಕ

Crime News: ಸುಮಾರು ಒಂದೂವರೆ ಗಂಟೆಗಳ ಕಾಲ ಟವರ್ ಮೇಲೆ ನಿಂತಿದ್ದ ಡೇವಿಡ್​ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದ. ಆತನನ್ನು ಕೆಳಗಿಳಿಸಲು ಪೊಲೀಸರು ಶತಪ್ರಯತ್ನ ನಡೆಸಿದರು.

ಸತ್ತ ಸ್ನೇಹಿತ ಕರೆ ಮಾಡುತ್ತಿದ್ದಾನೆ..ನಾನು ಹೋಗುತ್ತಿದ್ದೇನೆ..ಎಂದು ಸೆಲ್ ಟವರ್ ಹತ್ತಿದ ಯುವಕ
ಸಾಂದರ್ಭಿಕ ಚಿತ್ರ
TV9 Web
| Updated By: ಝಾಹಿರ್ ಯೂಸುಫ್|

Updated on: Feb 07, 2022 | 9:02 PM

Share

ಪ್ರತಿ ಫ್ರೆಂಡ್ ಬೇಕೇ ಬೇಕು ಕಣೋ…ಜೀವನದಲ್ಲಿ ಎಲ್ಲರಿಗೂ ಒಬ್ಬನಾದರೂ ಫ್ರೆಂಡ್ ಇದ್ದೇ ಇರುತ್ತಾನೆ. ತನ್ನೆಲ್ಲಾ ನೋವು ನಲಿವುಗಳನ್ನು ಹಂಚಿಕೊಳ್ಳಲು ಗೆಳೆತನ ಬೇಕೇ ಬೇಕು. ಗೆಳೆಯನಿಲ್ಲದಿದ್ದರೆ ಸ್ವರ್ಗ ಕೂಡ ನರಕವಾಗುತ್ತೆ ಎಂಬ ಮಾತಿದೆ. ಆದರೆ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಗೆಳೆಯನೊಬ್ಬ ಇದಕ್ಕಿದ್ದಂತೆ ಇಲ್ಲದಾದರೆ ಏನಾಗಬಹುದು? ಅಂತಹದೊಂದು ಸಂದಿಗ್ಧ ಸ್ಥಿತಿಯಲ್ಲಿದ್ದಾನೆ ಪಶ್ಚಿಮ ಗೋದಾವರಿ ಜಿಲ್ಲೆಯ ಉಂದ್ರಜಾವರಂನಲ್ಲಿನ ಯುವಕ ಡೇವಿಡ್. ಡೇವಿಡ್​ಗೂ ಒಬ್ಬ ಗೆಳೆಯನಿದ್ದ ಹೆಸರು ರಂಜಿತ್ ರಮ್ಮ. ಆದರೆ ಕುಚುಕು ಗೆಳೆಯ ಕೆಲ ಮೃತಪಟ್ಟಿದ್ದಾನೆ. ಇತ್ತ ಡೇವಿಡ್​ಗೂ ಗೆಳೆಯನ ನೆನಪುಗಳು ಕಾಡಲಾರಂಭಿಸಿದೆ.

ಅದೆಷ್ಟರ ಮಟ್ಟಿಗೆ ಎಂದರೆ ನನಗೆ ಪ್ರತಿನಿತ್ಯ ಗೆಳೆಯ ರಂಜಿತ್ ರಮ್ಮ ಕರೆ ಮಾಡುತ್ತಿದ್ದಾನೆ ಎಂದು ಕೆಲವರಲ್ಲಿ ಹೇಳಿಕೊಂಡಿದ್ದಾನೆ. ಅಷ್ಟೇ ಅಲ್ಲದೆ ನಾನು ಕೂಡ ಗೆಳೆಯನ ಬಳಿ ಹೋಗುತ್ತಿದ್ದೇನೆ ಎಂದೇಳಿ ನೇರವಾಗಿ ಮೊಬೈಲ್ ಟವರ್ ಹತ್ತಿದ್ದಾನೆ. ನಾವಿಬ್ಬರೂ ಪ್ರತಿನಿತ್ಯ ಮಾಡುತ್ತೇವೆ. ಅವನು ಯಾವಾಗಲೂ ನನಗೆ ಕರೆ ಮಾಡಿ ಬರಲು ಹೇಳುತ್ತಾನೆ. ಹೀಗಾಗಿ ನಾನು ಅವನೊಂದಿಗೆ ಇರುತ್ತೇನೆ ಎಂದು ಡೇವಿಡ್ ಸೆಲ್ ಟವರ್ ಹತ್ತಿದ್ದಾನೆ.

ಸುಮಾರು ಒಂದೂವರೆ ಗಂಟೆಗಳ ಕಾಲ ಟವರ್ ಮೇಲೆ ನಿಂತಿದ್ದ ಡೇವಿಡ್​ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದ. ಆತನನ್ನು ಕೆಳಗಿಳಿಸಲು ಪೊಲೀಸರು ಶತಪ್ರಯತ್ನ ನಡೆಸಿದರು. ಆತನ ಮಗನನ್ನು ತೋರಿಸಿ ಕೆಳಗೆ ಬರುವಂತೆ ತೋರಿಸಲಾಯಿತು. ಮಗನ ಮುಖ ನೋಡಿದ ಬಳಿಕ ಡೇವಿಡ್ ಟವರ್​ನಿಂದ ಕೆಳಗಿಳಿದಿದ್ದ. ಇದಾದ ಬಳಿಕ ವಶಕ್ಕೆ ಪಡೆದ ಪೊಲೀಸರು ಆತನನ್ನು ವಿಚಾರಿಸಿದ್ದಾರೆ. ಈ ವೇಳೆ ಆತ ಹೇಳಿದ್ದ ಪ್ರತಿ ಮಾತುಗಳು ಕೇಳಿ ಪೊಲೀಸರು ದಂಗಾದರು.

ಏಕೆಂದರೆ ಡೇವಿಡ್ ಹೇಳಿದ್ದು ಅದನ್ನೇ, ನನ್ನ ಮೃತ ಸ್ನೇಹಿತ ರಂಜಿತ್ ರಮ್ಮ ಕರೆ ಮಾಡುತ್ತಿದ್ದಾನೆ. ನಾನು ಕೂಡ ಅವನ ಬಳಿ ಹೋಗಬೇಕು. ಅವನನ್ನು ಒಬ್ಬಂಟಿಯಾಗಿ ಬಿಡಬಾರದು ಎಂದೆಲ್ಲಾ ಹೇಳುತ್ತಾ ಕೂತಿದ್ದ. ಇದನ್ನು ಕೇಳಿಸಿಕೊಂಡ ಪೊಲೀಸರಿಗೆ ಯುವಕ ಸ್ಥಿಮಿತ ಕಳೆದುಕೊಂಡಿರುವುದು ಖಚಿತವಾಗಿದೆ. ಗೆಳೆಯ ಅಗಲಿಕೆಯಿಂದಾಗಿ ಡೇವಿಡ್ ಮಾನಸಿಕವಾಗಿ ಸ್ಥಿಮಿತ ಕಳೆದುಕೊಂಡಿದ್ದಾನೆ. ಹೀಗಾಗಿ ಕೂಡಲೇ ಈತನನ್ನು ವೈದ್ಯರ ಬಳಿ ಕೌನ್ಸೆಲಿಂಗ್ ನಡೆಸಿ ಎಂದು ಪಶ್ಚಿಮ ಗೋದಾವರಿ ಜಿಲ್ಲೆಯ ಉಂದ್ರಜಾವರಂ ಪೊಲೀಸ್ ಇನ್​ಸ್ಪೆಕ್ಟರ್ ಡೇವಿಡ್​ನನ್ನು ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: Yuzvendra Chahal: ವಿಕೆಟ್​ಗಳ ಶತಕ ಪೂರೈಸಿದ ಚಹಾಲ್

ಇದನ್ನೂ ಓದಿ: Rohit Sharma: ಸಚಿನ್ ದಾಖಲೆ ಮುರಿದ ಹಿಟ್​ಮ್ಯಾನ್ ರೋಹಿತ್ ಶರ್ಮಾ

ಇದನ್ನೂ ಓದಿ: Lata Mangeshkar: ಎಲ್ಲರೂ ಕೈಬಿಟ್ಟಾಗ ಟೀಮ್ ಇಂಡಿಯಾ ಕೈ ಹಿಡಿದಿದ್ದ ಲತಾ ಮಂಗೇಶ್ಕರ್..!

)

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ