ಬೇರೆ ಯುವಕರೊಂದಿಗೆ ಟಿಕ್ ಟಾಕ್ ಮಾಡುತ್ತಿದ್ದ ಪ್ರಿಯತಮೆಯನ್ನು ಕೊಲೆ ಮಾಡಿದ ಪಾಗಲ್ ಪ್ರೇಮಿ ಅರೆಸ್ಟ್

ಈಕೆ ಇತರ ಯುವಕರೊಂದಿಗೆ ಸೇರಿ ಟಿಕ್ ಟಾಕ್ ಮಾಡುತ್ತಾ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ದಳು. ಇದನ್ನು ಸಹಿಸಲಾಗದ ಪ್ರಿಯಕರ, ಆಕೆಯನ್ನು ಮುಂಬೈನಿಂದ ಯಾದಗಿರಿಗೆ ಕರೆತಂದು ಮೋಜು ಮಸ್ತಿ ಮಾಡಿ ಕೊನೆಗೆ ಕೊಲೆ ಮಾಡಿ ಸುಟ್ಟು ಹಾಕಿದ್ದಾನೆ.

ಬೇರೆ ಯುವಕರೊಂದಿಗೆ ಟಿಕ್ ಟಾಕ್ ಮಾಡುತ್ತಿದ್ದ ಪ್ರಿಯತಮೆಯನ್ನು ಕೊಲೆ ಮಾಡಿದ ಪಾಗಲ್ ಪ್ರೇಮಿ ಅರೆಸ್ಟ್
ಬೇರೆ ಯುವಕರೊಂದಿಗೆ ಟಿಕ್ ಟಾಕ್ ಮಾಡುತ್ತಿದ್ದ ಪ್ರಿಯತಮೆಯನ್ನು ಕೊಲೆ ಮಾಡಿದ ಪ್ರೇಮಿ ಅರೆಸ್ಟ್
Rakesh Nayak Manchi

Updated on: Apr 22, 2023 | 7:11 PM

ಯಾದಗಿರಿ: ಇದು ಮುಂಬೈ ಟು ಯಾದಗಿರಿ ಮರ್ಡರ್ ಮಿಸ್ಟರಿ. ಟಿಕ್ ಟಾಕ್ (Tiktok) ಸ್ಟಾರ್ ಆಗುವ ಕನಸು ಕಾಣುತ್ತಿದ್ದ ಯುವತಿಯೊಬ್ಬಳು ತನ್ನ ಸ್ನೇಹಿತರ ಜೊತೆ ಸೇರಿ ಟಿಕ್ ಟಾಕ್ ವಿಡಿಯೋ ಮಾಡಿ ಸಾಮಾಜಿ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾ ಆಕ್ಟಿವ್ ಆಗಿದ್ದಳು. ಇತ್ತ ಆಕೆಯ ಪ್ರಿಯಕರನಿಗೆ ಇದು ಸಹಿಸಲಾಗದ ಸಂಗತಿಯಾಗಿದೆ. ಒಂದೆಡೆ ಬೇರೆ ಯುವಕರೊಂದಿಗೆ ತನ್ನ ಪ್ರಿಯತಮೆ ಟಿಕ್ ಟಾಕ್ ಮಾಡುತ್ತಿದ್ದಾಳೆ, ಇತ್ತ ತನ್ನ ಮದುವೆಯ ಪ್ರಸ್ತಾಪವನ್ನೂ ನಿರಾಕರಿಸಿದ್ದಾಳೆ. ಇದರಿಂದ ಕುಪಿತನಾದ ಪ್ರಿಯಕರ ಆಕೆಯನ್ನು ಮುಂಬೈನಿಂದ ಯಾದಗಿರಿಗೆ ಕರೆತಂದು ಆಕೆಯೊಂದಿಗೆ ಮೋಜು ಮಸ್ತಿ ಮಾಡಿ ನಂತರ ಕೊಲೆ (Murder) ಮಾಡಿ ಸುಟ್ಟು ಹಾಕಿದ್ದಾನೆ.

ಉತ್ತರ ಪ್ರದೇಶದ ಮೂಲದ ಅಂತಿಮಾ ವರ್ಮಾ (25) ಮುಂಬೈನಲ್ಲಿರುವ ಸಹೋದರನ ಮನೆಯಲ್ಲಿ ನೆಲೆಸಿದ್ದಳು. ಈಕೆ ಟಿಕ್ ಟಾಕ್ ಮಾಡುತ್ತಾ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ದಳು. ಈಕೆ ನೆಲೆಸಿದ್ದ ಮನೆಯ ಪಕ್ಕದ ಮನೆಯಲ್ಲಿ ಯಾದಗಿರಿ ತಾಲೂಕಿನ ಅರಕೇರಾದ ಪಂಚಶೀಲ ನಗರದ ಮೂಲದ ಮಾರುತಿ ರಾಠೋಡ್ ವಾಸವಿದ್ದನು. ಪೇಂಟರ್ ಕೆಲಸ ಮಾಡಿಕೊಂಡಿದ್ದ ಈತನಿಗೆ ಅಂತಿಮಾ ವರ್ಮಾಳ ಮೇಲೆ ಪ್ರೇಮಾಂಕುರವಾಗಿದೆ.

ನಂತರ ಈಕೆಯ ಸಂಪರ್ಕಕ್ಕೆ ಬಂದ ಮಾರುತಿ, ತಾನು ನಿನ್ನನ್ನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದಾನೆ. ಇದಕ್ಕೆ ಆಕೆ ಸಮ್ಮತಿಯೂ ಸೂಚಿಸಿದ್ದಾಳೆ. ಹೀಗೆ ಇಬ್ಬರೂ ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಅಂತಿಮಾ ವರ್ಮಾ ಬೆರೆ ಸ್ನೇಹಿತರ ಜೊತೆ ಸೇರಿ ಟಿಕ್ ಟಾಕ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಳು. ಇದು ಮಾರುತಿಗೆ ಇಷ್ಟವಿರಲಿಲ್ಲ.

ಬೇರೆ ಯುವಕರೊಂದಿಗೆ ಟಿಕ್ ಟಾಕ್ ಮಾಡಿ ಅದನ್ನು ಹಂಚಿಕೊಳ್ಳುತ್ತಾ ಸಮಾಜಿಕ ಜಾಲತಾಣದಲ್ಲಿ ಫುಲ್ ಆ್ಯಕ್ಟಿವ್ ಆಗಿದ್ದ ಅಂತಿಮಾ ವರ್ಮಾ ಎಲ್ಲಿ ತನಗೆ ಕೈ ಕೊಡುತ್ತಾಳೆಯೋ ಎಂಬ ಭಯ ಮಾರುತಿಯನ್ನು ಕಾಡಲು ಆರಂಭಿಸಿದೆ. ಅದರಂತೆ ಆಕೆಯನ್ನು ಪುಸಲಾಯಿಸಿ ಮುಂಬೈನಿಂದ ತನ್ನೂರಿಗೆ ಕರೆತಂದ ಮಾರುತಿ, ಆಕೆಯೊಂದಿಗೆ ಮೋಜು ಮಸ್ತಿ ಮಾಡಿದ್ದಾನೆ.

ಇದನ್ನೂ ಓದಿ: Dangerous Social Media Trend: ಟಿಕ್‌ಟಾಕ್ ಚಾಲೆಂಜ್ ಸ್ವೀಕರಿಸಿ ಸಾವನ್ನಪ್ಪಿದ ಬಾಲಕ

ನಂತರ, ಬೆರೆ ಹುಡುಗನ ಜೊತೆ ಟಿಕ್ ಟಾಕ್ ಮಾಡಿದ್ದಕ್ಕೆ ಆಕ್ಷೇಪ ಎತ್ತಿದ ಮಾರುತಿ ತನ್ನನ್ನು ಮದುವೆ ಮಾಡಿಕೊಳ್ಳುವಂತೆ ಅಂತಿಮಾಳನ್ನು ಒತ್ತಾಯಿಸಿದ್ದಾನೆ. ಆದರೆ ಮಾರುತಿಯನ್ನು ಮದುವೆಯಾಗಲು ಆಕೆ ಒಲ್ಲೆ ಎಂದಿದ್ದಾಳೆ. ಈ ವೇಳೆ ಕೋಪಗೊಂಡ ಮಾರುತಿ, ಅಂತಿಮಾ ವರ್ಮಾಳ ಕತ್ತು ಹಿಸುಕಿ ಕೊಲೆ ಮಾಡಿ ಅನುಮಾನ ಬಾರದಂತೆ ಶವವನ್ನ ಪಂಚಶೀಲ ನಗರ ಗ್ರಾಮದಲ್ಲಿರುವ ತನ್ನದೇ ಜಮೀನಿನಲ್ಲಿ ಪೆಟ್ರೋಲ್ ಹಾಕಿ ಸುಟ್ಟಿದ್ದಾನೆ. ಮಾತ್ರವಲ್ಲದೆ, ಕೊಲೆ ನಂತರ ತಾನೆ ನದಿಗೆ ಹಾರಿ ಸಾಯುತ್ತೆನೆಂದು ವಿಡಿಯೋದಲ್ಲಿ ಅನುಮಾನ ಬರದಂತೆ ಕಥೆ ಕಟ್ಟಿದ್ದಾನೆ.

ಎಪ್ರಿಲ್ 2 ರಂದು ನಡೆದ ಈ ಕೊಲೆ ಪ್ರಕರಣವನ್ನು ದಾಖಲಿಸಿದ್ದ ಗುರುಮಠಕಲ್ ಠಾಣಾ ಪೊಲೀಸರು, ಸದ್ಯ ಪ್ರಕರಣವನ್ನು ಬೇಧಿಸಿದ್ದಾರೆ. ನದಿಗೆ ಹಾರಿ ಸಾಯುತ್ತೇನೆ ಎಂದು ಮಾರುತಿ ಮಾಡಿಕೊಂಡಿದ್ದ ವಿಡಿಯೋದ ಮೂಲ ಜಾಡು ಹತ್ತಿದ ಪೊಲೀಸರು ಮಾರುತಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮಾರುತಿ ತಾನೇ ಕೊಲೆ ಮಾಡಿರುವುದಾಗಿ ಬಾಯಿಬಿಟ್ಟಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡು ಪ್ರೇಯತಮೆಯನ್ನು ಬಲಿ ಪಡೆದ ಪಾಗಲ್ ಪ್ರೇಮಿಯನ್ನು ಬಂಧಿಸಿ ಜೈಲಿಗಟ್ಟಲಾಗಿದೆ.

ಕ್ರೈಂ ನ್ಯೂಸ್​ಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:07 pm, Sat, 22 April 23

Rakesh Nayak Manchi

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್​ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ.

Follow Us