AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಕೆಯ ಉಂಗುರವೇ ಮೂಗಿಗೆ ತಾಗಿ ಗಾಯವಾಗಿದೆ; ನಾನೀಗ ಬಂಧನದಿಂದ ಪಾರಾಗಲು 25 ಸಾವಿರ ರೂ ಖರ್ಚು ಮಾಡಬೇಕು

ಟ್ರಾಫಿಕ್​ ಸಮಸ್ಯೆ ಮತ್ತು ಹದಗೆಟ್ಟ ರಸ್ತೆಯ ಕಾರಣ ಆರ್ಡರ್​ ತಲುಪಿಸುವುದು ತಡವಾಗಿತ್ತು. ಅಲ್ಲಿಗೆ ಹೋದಾಗ ಸಿಟ್ಟಾಗಿದ್ದ ಯುವತಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೇ, ಚಪ್ಪಲಿಯಿಂದ ಹೊಡೆದರು. ಅಂತೆಯೇ, ಹಲ್ಲೆ ಮಾಡಲು ಮುಂದಾದಾಗ ಆಕಸ್ಮಿಕವಾಗಿ ಆಕೆ ತನ್ನ ಮೂಗಿಗೆ ತಾನೇ ಏಟು ಮಾಡಿಕೊಂಡ ಕಾರಣ ಗಾಯವಾಗಿ ರಕ್ತ ಒಸರಲಾರಂಭಿಸಿದೆ: ಕಾಮರಾಜ್​

ಆಕೆಯ ಉಂಗುರವೇ ಮೂಗಿಗೆ ತಾಗಿ ಗಾಯವಾಗಿದೆ; ನಾನೀಗ ಬಂಧನದಿಂದ ಪಾರಾಗಲು 25 ಸಾವಿರ ರೂ ಖರ್ಚು ಮಾಡಬೇಕು
ಡೆಲಿವರಿ ಬಾಯ್​ ಕಾಮರಾಜ್​-ಯುವತಿ ಹಿತೇಶಾ ಚಂದ್ರಾಣಿ
Skanda
| Updated By: ganapathi bhat|

Updated on:Mar 12, 2021 | 3:02 PM

Share

ಬೆಂಗಳೂರು: ಆನ್​ಲೈನ್​ ಮೂಲಕ ಊಟ ಆರ್ಡರ್ ಮಾಡಿದ್ದ ಯುವತಿಗೆ ಡೆಲಿವರ್ ಬಾಯ್​ ಹಲ್ಲೆ ಮಾಡಿದ್ದಾನೆಂಬ ವಿಚಾರ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ. ತನ್ನ ಮೂಗಿನ ಮೇಲಾಗಿದ್ದ ಗಾಯವನ್ನು ತೋರಿಸಿ ವಿಡಿಯೋ ಮೂಲಕ ಯುವತಿ ಅಲವತ್ತುಕೊಂಡಿದ್ದ ಹಿನ್ನೆಲೆಯಲ್ಲಿ ಡೆಲಿವರಿ ಬಾಯ್ ಕಾಮರಾಜ್​ನನ್ನು ಪೊಲೀಸರು ಬಂಧಿಸಿದ್ದರು. ಆದರೆ, ಇದೀಗ ಡೆಲಿವರಿ ಬಾಯ್​ ನೀಡಿರುವ ಹೇಳಿಕೆ ಘಟನೆಗೆ ಇನ್ನೊಂದು ಆಯಾಮ ನೀಡಿದೆ. ಟ್ರಾಫಿಕ್​ ಸಮಸ್ಯೆ ಮತ್ತು ಹದಗೆಟ್ಟ ರಸ್ತೆಯ ಕಾರಣ ಆರ್ಡರ್​ ತಲುಪಿಸುವುದು ತಡವಾಗಿತ್ತು. ಅಲ್ಲಿಗೆ ಹೋದಾಗ ಸಿಟ್ಟಾಗಿದ್ದ ಯುವತಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೇ, ಚಪ್ಪಲಿಯಿಂದ ಹೊಡೆದರು. ಅಂತೆಯೇ, ಹಲ್ಲೆ ಮಾಡಲು ಮುಂದಾದಾಗ ಆಕಸ್ಮಿಕವಾಗಿ ಆಕೆ ತನ್ನ ಮೂಗಿಗೆ ತಾನೇ ಏಟು ಮಾಡಿಕೊಂಡ ಕಾರಣ ಗಾಯವಾಗಿ ರಕ್ತ ಒಸರಲಾರಂಭಿಸಿದೆ ಎಂದು ಕಾಮರಾಜ್ ಹೇಳಿರುವ ಕಾರಣ ಎರಡೂ ಕಡೆಯ ವಾದಗಳನ್ನು ಆಲಿಸಿ ಸತ್ಯಾಂಶ ಕಂಡುಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜೊಮ್ಯಾಟೋ ಕಂಪೆನಿ, ಡೆಲಿವರಿ ಬಾಯ್ ಕಾಮರಾಜ್​ ಬಗ್ಗೆ ಇದುವರೆಗೆ ಗ್ರಾಹಕರು ಉತ್ತಮ ಅಭಿಪ್ರಾಯವನ್ನೇ ವ್ಯಕ್ತಪಡಿಸಿದ್ದಾರೆ. 5ರಲ್ಲಿ 4.7 ಅಂಕ ನೀಡುವ ಮೂಲಕ ಆತನ ಸೇವೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಆದರೂ, ನಾವು ಎರಡೂ ಕಡೆಯ ಅಭಿಪ್ರಾಯಗಳನ್ನು ಆಲಿಸಿದ್ದೇವೆ. ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರಕಿಸಲು ಕೊನೆಯ ತನಕವೂ ಸಹಕರಿಸುತ್ತೇವೆ ಎಂದು ಸ್ಪಷ್ಟನೆ ನೀಡಿದೆ.

ಘಟನೆ ಕುರಿತಂತೆ ವಿಡಿಯೋ ಮಾಡಿದ್ದ ಹಿತೇಶಾ ಚಂದ್ರಾಣಿ, ಡೆಲಿವರಿ ಬಾಯ್​ ಬಗ್ಗೆ ಗಂಭೀರವಾಗಿ ಆರೋಪಿಸಿದ್ದ ಹಿನ್ನೆಲೆಯಲ್ಲಿ ಕಾಮರಾಜ್​ನನ್ನು ತಾತ್ಕಾಲಿಕವಾಗಿ ಸೇವೆಯಿಂದ ವಜಾಗೊಳಿಸಲಾಗಿದೆ. ಇನ್ನು ಈ ಬಗ್ಗೆ ಜೊಮ್ಯಾಟೋ ಸಂಸ್ಥಾಪಕ ದೀಪೆಂದರ್ ಗೋಯಲ್​ ಟ್ವೀಟ್ ಮಾಡಿದ್ದು, ಘಟನೆಯ ಆರಂಭದಿಂದ ಹಿಡಿದು ಸಂಪೂರ್ಣ ತನಿಖೆ ನಡೆದು ಸತ್ಯಾಂಶ ಬೆಳಕಿಗೆ ಬರಬೇಕೆಂಬುದೇ ನಮ್ಮ ಆದ್ಯತೆಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ನಾವು ಕಾನೂನು ಪ್ರಕ್ರಿಯೆಗಳನ್ನು ಪಾಲಿಸಲಿದ್ದು, ತಾರ್ಕಿಕ ಅಂತ್ಯ ಕಾಣುವ ತನಕವೂ ಎರಡೂ ಕಡೆಯವರ ಅಭಿಪ್ರಾಯ ಆಲಿಸಲಿದ್ದೇವೆ ಎಂದು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸ್ಥಾನದಲ್ಲಿ ನಿಂತಿರುವ ಕಾಮರಾಜ್​ ದಿ ನ್ಯೂಸ್​ ಮಿನಿಟ್​ ವೆಬ್​ಸೈಟ್​ ಜೊತೆ ಮಾನಾಡಿದ್ದು ಹಿತೇಶಾ ಚಂದ್ರಾಣಿ ಮಾಡಿದ ಆರೋಪಗಳನ್ನು ಅಲ್ಲಗಳೆದಿದ್ದಾರೆ. ‘ನಾನು ಆಕೆಗೆ ಊಟವನ್ನು ತಲುಪಿಸಿ ಹಣಕ್ಕಾಗಿ ಕಾಯುತ್ತಿದ್ದೆ. ಅಲ್ಲದೇ ಟ್ರಾಫಿಕ್​ ಸಮಸ್ಯೆಯ ಕಾರಣ ಬರುವುದು ತಡವಾಯಿತೆಂದು ಕ್ಷಮೆಯನ್ನೂ ಕೇಳಿದೆ. ಆದರೆ, ಆಕೆ ಹಣವನ್ನು ನೀಡಲು ನಿರಾಕರಿಸಿದರು. ನಂತರ ನಾನು ಜೊಮ್ಯಾಟೋ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಗ್ರಾಹಕರ ಕೋರಿಕೆ ಮೇರೆಗೆ ಆರ್ಡರ್ ಕ್ಯಾನ್ಸಲ್​ ಮಾಡಲಾಗಿದೆ ಎಂದು ಹೇಳಿದರು. ಹೀಗಾಗಿ, ನಾನು ಆಕೆಗೆ ಊಟದ ಪೊಟ್ಟಣವನ್ನು ವಾಪಾಸು ನೀಡುವಂತೆ ಕೇಳಿದೆ. ಆದರೆ, ಅದಕ್ಕೂ ಅವರು ನಿರಾಕರಿಸಿದರು. ಅಷ್ಟಾದ ನಂತರ ನಾನು ಮತ್ತೇನೂ ಕೇಳದೇ ವಾಪಾಸು ಹೊರಡಲು ಮುಂದಾಗಿದ್ದೆ. ಅಷ್ಟರಲ್ಲಿ ಆಕೆ ನನ್ನ ಮೇಲೆ ಹಲ್ಲೆಗೆ ಮುಂದಾಗಿ ಹಿಂದಿಯಲ್ಲಿ ಬೈಯಲಾರಂಭಿಸಿದರು. ಆಕೆ ನನ್ನ ಕೈಯನ್ನು ದೂರಕ್ಕೆ ತಳ್ಳಲು ಯತ್ನಿಸುತ್ತಿದ್ದಾಗ ಅಚಾನಕ್​ ಆಗಿ ಆಕೆ ತನ್ನ ಬೆರಳಲ್ಲಿ ಧರಿಸಿದ್ದ ಉಂಗುರದಿಂದ ಮೂಗಿಗೆ ಹೊಡೆಸಿಕೊಂಡಿದ್ದಾರೆ. ಅದು ಗಾಯವಾಗಿ ರಕ್ತ ಸುರಿಯಲು ಕಾರಣವಾಗಿದೆ. ಆ ಗಾಯವನ್ನು ಯಾರೇ ನೋಡಿದರೂ ಅದು ಗುದ್ದಿದ್ದರಿಂದ ಆಗಿರುವುದಲ್ಲ ಎಂದು ಅರ್ಥವಾಗುತ್ತದೆ. ನಾನು ಉಂಗುರವನ್ನೂ ಧರಿಸುವುದಿಲ್ಲವಾದ್ದರಿಂದ ನನ್ನಿಂದ ಆ ರೀತಿಯ ಏಟು ಆಗುವುದಕ್ಕೆ ಸಾಧ್ಯವೇ ಇಲ್ಲ’ ಎಂದು ತನ್ನ ಅಭಿಪ್ರಾಯವನ್ನು ಹೊರಹಾಕಿದ್ದಾರೆ.

ಇನ್ನು ತನಿಖೆಯ ಬಗ್ಗೆ ಮಾತನಾಡಿರುವ ಕಾಮರಾಜ್​, ಪೊಲೀಸರು ನನ್ನನ್ನು ಅವಮಾನಕರವಾಗಿಯೇನೂ ನಡೆಸಿಕೊಂಡಿಲ್ಲ. ಆದರೆ, ಕಾನೂನು ಪ್ರಕ್ರಿಯೆಗಳನ್ನು ಪೂರೈಸಿ ಬಂಧನದಿಂದ ತಪ್ಪಿಸಿಕೊಳ್ಳಲು ₹25,000 ಖರ್ಚು ಮಾಡಬೇಕಾಗಿದೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ನಿಗದಿತ ಸಮಯಕ್ಕೆ ಬಾರದ ಊಟ; ಪ್ರಶ್ನಿಸಿದ್ದಕ್ಕೆ ಯುವತಿಯ ಮೂಗು ಮುರಿದ ಜೊಮ್ಯಾಟೋ ಡೆಲಿವರಿ ಬಾಯ್​ 

ಊಟ ಕೊಡ್ರಪ್ಪಾ, ಹೊಡೀಬೇಡಿ: ಜೊಮ್ಯಾಟೋಗೆ ಪಾಠ ಹೇಳಿದ ನೆಟ್ಟಿಗರು

Published On - 3:01 pm, Fri, 12 March 21

ಹೇಗೆ ಹೆಣ ಎಸೆದು ಹೋದ ನೋಡಿ ಆಂಬ್ಯುಲೆನ್ಸ್​ ಚಾಲಕ
ಹೇಗೆ ಹೆಣ ಎಸೆದು ಹೋದ ನೋಡಿ ಆಂಬ್ಯುಲೆನ್ಸ್​ ಚಾಲಕ
ಮಗುವಿನ ಮೇಲೆ ನಾಯಿ ದಾಳಿ, ಹೀರೋನಂತೆ ಬಂದು ಕಾಪಾಡಿದ ತಂದೆ
ಮಗುವಿನ ಮೇಲೆ ನಾಯಿ ದಾಳಿ, ಹೀರೋನಂತೆ ಬಂದು ಕಾಪಾಡಿದ ತಂದೆ
ಜಿಪಂ ಕಚೇರಿ ಆವರಣದಲ್ಲಿ ನೇಣು ಬಿಗಿದುಕೊಂಡು ಗುತ್ತಿಗೆ ನೌಕರ ಸಾವಿಗೆ ಶರಣು
ಜಿಪಂ ಕಚೇರಿ ಆವರಣದಲ್ಲಿ ನೇಣು ಬಿಗಿದುಕೊಂಡು ಗುತ್ತಿಗೆ ನೌಕರ ಸಾವಿಗೆ ಶರಣು
ಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಈ ಸಲ ಫ್ಲಾವರ್​ ಶೋ ಥೀಮ್
ಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಈ ಸಲ ಫ್ಲಾವರ್​ ಶೋ ಥೀಮ್
100 ಎಸೆತಗಳ ಪಂದ್ಯ: 99ನೇ ಎಸೆತದಲ್ಲಿ 1 ವಿಕೆಟ್​ನ ರೋಚಕ ಗೆಲುವು..!
100 ಎಸೆತಗಳ ಪಂದ್ಯ: 99ನೇ ಎಸೆತದಲ್ಲಿ 1 ವಿಕೆಟ್​ನ ರೋಚಕ ಗೆಲುವು..!
ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ಜಮೀನಿಗೆ ನುಗ್ಗಿ ರೈತ ರಾಜಣ್ಣ ಕಂಗಾಲು
ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ಜಮೀನಿಗೆ ನುಗ್ಗಿ ರೈತ ರಾಜಣ್ಣ ಕಂಗಾಲು
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್