AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಕಿ ಒಂಟಿಕಾಲಲ್ಲಿ ಜಿಗಿದುಕೊಂಡು ಶಾಲೆಗೆ ಹೋಗುವ ದೇಶವಿದು! ಹಾಗಾದರೆ ಶಾಲೆಗೆ ನಡೆದುಹೋಗುವ ವಿದ್ಯಾರ್ಥಿಗಳ ಸಂಖ್ಯೆ ಎಷ್ಟು ಗೊತ್ತಾ!? ಇಲ್ಲಿದೆ ಅಂಕಿ ಅಂಶಗಳು

Students Walk To School: ಮೊನ್ನೆ ಬಾಲಕಿಯೊಬ್ಬಳು ಒಂಟಿಕಾಲಲ್ಲಿ ಜಿಗಿದುಕೊಂಡು ಶಾಲೆಗೆ ಹೋಗುವ ದಾರುಣ ದೃಶ್ಯವನ್ನು ಇಡೀ ದೇಶ ಕಂಡಿದೆ. ಈಗಿನ ಇಂಟರ್ನೆಟ್​ ಯುಗದಲ್ಲಿ ಅದನ್ನು ಇಡೀ ಜಗತ್ತೂ ನೋಡಿತು. ಬಹುಶಃ​ ಜಗತ್ತಿನಲ್ಲಿ ಇಂತಹ ದಾರುಣ ಸ್ಥಿತಿ ಯಾವುದೇ ವಿದ್ಯಾರ್ಥಿಗೆ ಬಂದಿಲ್ಲ ಅನ್ನಿಸುತ್ತದೆ. ಹಾಗಾದರೆ ನಮ್ಮ ದೇಶದಲ್ಲಷ್ಟೇ ಈ ಕರುಣಾಜನಕ ಪ್ರಸಂಗ ‘ನಡೆದಿದೆಯಾ?’ ಎಂಬ ಆತಂಕ ಮನೆ ಮಾಡುತ್ತದೆ. ಆದರೆ ಇನ್ನೂ ಆಘಾತವಾದ ಸುದ್ದಿ ಇಲ್ಲಿದೆ.

ಬಾಲಕಿ ಒಂಟಿಕಾಲಲ್ಲಿ ಜಿಗಿದುಕೊಂಡು ಶಾಲೆಗೆ ಹೋಗುವ ದೇಶವಿದು! ಹಾಗಾದರೆ ಶಾಲೆಗೆ ನಡೆದುಹೋಗುವ ವಿದ್ಯಾರ್ಥಿಗಳ ಸಂಖ್ಯೆ ಎಷ್ಟು ಗೊತ್ತಾ!? ಇಲ್ಲಿದೆ ಅಂಕಿ ಅಂಶಗಳು
ದೇಶದಲ್ಲಿ ಶಾಲೆಗೆ ನಡೆದುಕೊಂಡು ಹೋಗುವ ವಿದ್ಯಾರ್ಥಿಗಳ ಸಂಖ್ಯೆ ಎಷ್ಟು ಗೊತ್ತಾ!? ಇಲ್ಲಿದೆ ಅಂಕಿ ಅಂಶಗಳು
TV9 Web
| Edited By: |

Updated on:May 28, 2022 | 3:25 PM

Share

ಮೊನ್ನೆ ಬಾಲಕಿಯೊಬ್ಬಳು ಒಂಟಿಕಾಲಲ್ಲಿ ನಡೆದುಕೊಂಡೇ (ಜಿಗಿದುಕೊಂಡು) ಶಾಲೆಗೆ ಹೋಗುವ ದಾರುಣ ದೃಶ್ಯವನ್ನು ಇಡೀ ದೇಶ ಕಣ್ಣಾರೆ ಕಂಡಿದೆ. ಈಗಿನ ಇಂಟರ್ನೆಟ್​ ಯುಗದಲ್ಲಿ ಅದನ್ನು ಇಡೀ ಜಗತ್ತೂ ನೋಡಿತು. ಬಹುಶಃ​ ಜಗತ್ತಿನಲ್ಲಿ ಇಂತಹ ದಾರುಣ ಸ್ಥಿತಿ ಯಾವುದೇ ವಿದ್ಯಾರ್ಥಿಗೆ ಬಂದಿಲ್ಲ ಅನ್ನಿಸುತ್ತದೆ. ಹಾಗಾದರೆ ನಮ್ಮ ದೇಶದಲ್ಲಷ್ಟೇ ಈ ಕರುಣಾಜನಕ ಪ್ರಸಂಗ ‘ನಡೆದಿದೆಯಾ?’ ಎಂಬ ಆತಂಕ ಮನೆ ಮಾಡುತ್ತದೆ. ಒಂದು ನಿಮಿಷವಿರಿ. ಇನ್ನೂ ಆಘಾತವಾದ ಸುದ್ದಿಯೊಂದು ಇಲ್ಲಿದೆ. ನಮ್ಮ ದೇಶದಲ್ಲಿ ಶಾಲೆಗೆ ನಡೆದುಕೊಂಡು ಹೋಗುವ ವಿದ್ಯಾರ್ಥಿಗಳ ಪ್ರಮಾಣ ಶೇ. 48ರಷ್ಟಿದೆಯಂತೆ! ಏನು ನಮ್ಮ ಕಾಲದಲ್ಲಿ ಕಾಲಿನಲ್ಲಿ, ಅದೂ ಬರಿಗಾಲಿನಲ್ಲಿ ನಡೆದೇ ಹೋಗುತ್ತಿದ್ದೆವಲ್ಲಾ? ಆಗ ನಮ್ಮನ್ನು ಯಾರು ವಿಚಾರಿಸಿಕೊಂಡರು? ಎಂದು ಸಿಟ್ಟಾಗಬೇಡಿ. ಅಂದಿನ ನಿಮ್ಮ ಪರಿಸ್ಥಿತಿ ಅರ್ಥವಾಗುತ್ತದೆ. ಆದರೆ ಈಗ ಕಾಲ ಬದಲಾಗಿದೆ. ಮಕ್ಕಳೂ ಬದಲಾಗಿದ್ದಾರೆ. ಈಗಲೂ ಮಕ್ಕಳು ಶಾಲೆಗೆ ನಡೆದೇ ಹೋಗುತ್ತಾರೆ ಎಂಬುದು (Students Walk To School) ನಾಚಿಕೆಯಿಂದ ತಲೆತಗ್ಗಿಸುವ ಪ್ರಸಂಗವಾಗಿದೆ. ಆದರೆ ಅಂದು ಶಾಲೆಗೆ ನಡೆದುಹೋದ ಮಕ್ಕಳು ಕಾಲಾಂತರದಲ್ಲಿ ತಮ್ಮ ಕಾಲಿನ ಮೇಲೆ ತಾವು ನಿಲ್ಲುವಷ್ಟು ಬಾಲಢ್ಯರಾದ ಮೇಲೆ ಇತರೆ ಮಕ್ಕಳ ಕಡೆಗೆ ಗಮನ ಹರಿಸಿದ್ದರೆ ಬಹುಶಃ ಈ ದಾರುಣ ಪರಿಸ್ಥಿತಿ ಬರುತ್ತಿರಲಿಲ್ಲವೇನೋ… ಇರಲಿ, ತುಸು ವಾಸ್ತವಕ್ಕೆ ಬರೋಣಾ.

ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆ ಅಧೀನದಲ್ಲಿ ನ್ಯಾಷನಲ್ ಅಛೀವ್ಮೆಂಟ್ ಸರ್ವೆ ​​(National Achievement Survey -NAS) ಪ್ರಕಾರ ದೇಶದಾದ್ಯಂತ ಅರ್ಧಕ್ಕರ್ಧ ಶಾಲಾ ಮಕ್ಕಳು (ಶೇ. 48) ಇಂದಿಗೂ ನಡೆದುಕೊಂಡೇ ವಿದ್ಯಾರ್ಜನೆಗೆ ಹೋಗುತ್ತಿದ್ದಾರೆ. ಮಕ್ಕಳು ಶಾಲೆಗೆ ಕುಣಿದುಕುಪ್ಪಳಿಸುತ್ತಾ ಜಿಗಿದುಕೊಂಡು ಹೋಗಬೇಕು, ಅದುಬಿಟ್ಟು ಹೀಗೆಲ್ಲಾ ಜಿಗುದುಕೊಂಡು ಹೋಗುವುದು ನಾಗರಿಕ ಸಮಾಜಕ್ಕೆ ಶೋಭೆ ತರುವಂತರಹುದಲ್ಲ. ಇನ್ನು ಶಾಲಾ ಮಕ್ಕಳು ಶಾಲೆವರೆಗೂ ಸಾಗುವ ವಿಧಾನದ ಬಗ್ಗೆ NAS ನಡೆಸಿರುವ ಅಧ್ಯಯನದ ಪ್ರಕಾರ ಶೇ. 9 ರಷ್ಟು ವಿದ್ಯಾರ್ಥಿ ಗಳು ಶಾಲೆಗಳ ವಾಹನಗಳಲ್ಲಿ, ಶೇ. 9ರಷ್ಟು ಮಂದಿ ಸಾರ್ವಜನಿಕ ಸಾರಿಗೆ ಬಸ್ಸುಗಳಲ್ಲಿ, ಶೇ. 8 ರಷ್ಟು ವಿದ್ಯಾರ್ಥಿ ಗಳು ಸ್ವಂತ ವಾಹನಗಳಲ್ಲಿ ಶಾಲೆಗಳಿಗೆ ತಲುಪುತ್ತಾರೆ.

ಇನ್ನು ಈ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಶಿಕ್ಷಕರು ಅನುಭವಿಸುತ್ತಿರುವ ಪಡಿಪಾಟಿಲಿನ ಬಗ್ಗೆ ಈ ಸಮೀಕ್ಷೆಯಲ್ಲಿ ತಿಳಿದುಬಂದಿರುವ ಅಂಶವೆನೆಂದರೆ ಶೇ. 65 ಮಂದಿ ಶಿಕ್ಷಕರು ಹೆಚ್ಚುವರಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ನಕಾರಾತ್ಮಕ ಸನ್ನಿವೇಶದ ಹೊರತಾಗಿಯೂ ಶೇ. 97 ಮಂದಿ ಶಿಕ್ಷಕರು ತಮ್ಮ ಸೇವೆಯ ಬಗ್ಗೆ ಸಂತೃಪ್ತಿ ಹೊಂದಿದ್ದಾರೆ! ಇನ್ನು ವಿದ್ಯಾರ್ಥಿಗಳ ಹೋಮ್ ವರ್ಕ್ ಮುಂತಾದ ಶೈಕ್ಷಣಿಕ ವಿಚಾರಗಳಲ್ಲಿ ವಿದ್ಯಾರ್ಥಿಗಳ ಪೋಷಕರಿಂದ ಸರಿಯಾದ ಸಹಕಾರ ದೊತೆಯುತ್ತಿಲ್ಲವೆಂದು ಶೇ. 25 ರಷ್ಟು ಶಾಲಾ ಆಡಳಿತ ಮಂಡಳಿಗಳು ಅಲವತ್ತುಕೊಂಡಿವೆ.

ಇದೆಲ್ಲ ಅಪವ್ಯತಸನಗಳ ಮಧ್ಯೆ ರಾಷ್ಟ್ರೀಯ ಶಿಕ್ಷಣ ನೀತಿ (National Education Policy 2020- NEP) ಜಾರಿಗೆ ತರುತ್ತಿರುವುದರಿಂದ ಪಠ್ಯದ ಜೊತೆಗೆ ಶಿಕ್ಷಣ ಪರಿಸ್ಥಿತಿಯೂ ಸುಧಾರಿಸುತ್ತಾದಾ ಕಾದುನೋಡಬೇಕಿದೆ.

To Read in Telugu Click Here

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:22 pm, Sat, 28 May 22

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್