AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಕ್ಷೇತರವಾಗಿ ಮಂಡ್ಯ ಜಿಲ್ಲಾ ರಾಜಕೀಯ ಅಖಾಡಕ್ಕಿಳಿದ ಇಬ್ಬರು ಯುವಕರು, ಓರ್ವ ಯುಟ್ಯೂಬರ್​ ಮತ್ತೋರ್ವ ಸಾಫ್ಟ್‌ವೇರ್ ಎಂಜಿನಿಯರ್

ಮಂಡ್ಯದಲ್ಲಿ ಚುನಾವಣೆಯ ರಂಗು ಜೋರಾಗಿಯೇ ಇದೆ. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ರಾಜಕೀಯವು ಹಣಬಲ ಮತ್ತು ಜಾತಿ ಸಮೀಕರಣದತ್ತ ವಾಲುತ್ತಿದೆ. ಇದರ ಮಧ್ಯೆಯೇ ಇಬ್ಬರು ಯುವಕರು ಈ ಬಾರಿ ತಮ್ಮ ಜನಕೇಂದ್ರಿತ ರಾಜಕಾರಣದ ಮೂಲಕ ಚುನಾವಣೆಯ ಸ್ವರೂಪವನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ. ಇವರ ಕಾರ್ಯಕ್ಕೆ ಅಪಾರ ಜನ ಬೆಂಬಲ ದೊರೆಯುತ್ತಿದೆ.

ಪಕ್ಷೇತರವಾಗಿ ಮಂಡ್ಯ ಜಿಲ್ಲಾ ರಾಜಕೀಯ ಅಖಾಡಕ್ಕಿಳಿದ ಇಬ್ಬರು ಯುವಕರು, ಓರ್ವ ಯುಟ್ಯೂಬರ್​ ಮತ್ತೋರ್ವ ಸಾಫ್ಟ್‌ವೇರ್ ಎಂಜಿನಿಯರ್
ಮಂಡ್ಯ ಜಿಲ್ಲೆಯಿಂದ ರಾಜಕೀಯ ಕಣಕ್ಕಿಳಿದ ಇಬ್ಬರು ಯುವಕರು
Follow us
ವಿವೇಕ ಬಿರಾದಾರ
|

Updated on:Mar 07, 2023 | 3:36 PM

ಮಂಡ್ಯ: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Election) ಮೇಲ್ನೋಟಕ್ಕೆ ಪ್ರಮುಖ ಮೂರು ಪಕ್ಷಗಳ ಪ್ರಚಾರ ಕಣ್ಣಿಗೆ ಕಾಣುತ್ತಿದ್ದರೂ, ಪಕ್ಷೇತರವಾಗಿ ಅನೇಕ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ದುಮುಖುತ್ತಿದ್ದಾರೆ. ಈ ಅಭ್ಯರ್ಥಿಗಳು ಈಗಾಗಲೆ ಪ್ರಚಾರದ ಕಾರ್ಯ ಶುರು ಮಾಡಿಕೊಂಡಿದ್ದು, ಮತದಾರನ್ನು ತಮ್ಮತ್ತ ಸೆಳೆದುಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಅದರಂತೆ ಮಂಡ್ಯದಲ್ಲಿ ಚುನಾವಣೆಯ ರಂಗು ಜೋರಾಗಿಯೇ ಇದೆ. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ರಾಜಕೀಯವು ಹಣಬಲ ಮತ್ತು ಜಾತಿ ಸಮೀಕರಣದತ್ತ ವಾಲುತ್ತಿದೆ. ಇದರ ಮಧ್ಯೆಯೇ ಇಬ್ಬರು ಯುವಕರು ಈ ಬಾರಿ ತಮ್ಮ ಜನಕೇಂದ್ರಿತ ರಾಜಕಾರಣದ ಮೂಲಕ ಚುನಾವಣೆಯ ಸ್ವರೂಪವನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ.

27 ವರ್ಷದ ಚಂದನ್​ ಗೌಡ ಕೆ, ಒಬ್ಬ ಯೂಟ್ಯೂಬರ್​ ಆಗಿದ್ದು, ಪಕ್ಷೇತರವಾಗಿ ಕೆ ಆರ್​ ಪೇಟೆ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಈ ನಿಟ್ಟಿನಲ್ಲಿ ತಮ್ಮ ಸ್ವಂತ ಚುನಾವಣಾ ತಂತ್ರಗಳನ್ನು ರೂಪಿಸಿದ್ದಾರೆ. ಚಂದನ್​​ ಗೌಡ ಕಳೆದ ವರ್ಷ 2022ರಲ್ಲಿ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಇವರು ಕೆಆರ್​ ಪೇಟೆ ತಾಲೂಕಿನ ಊಚನಹಳ್ಳಿ ನಿವಾಸಿಯಾಗಿದ್ದು, ಇವರ ತಂದೆ ದಿನಗೂಲಿ ಕೆಲಸ ಮಾಡುತ್ತಿದ್ದು, ತಾಯಿ ಗೃಹಿಣಿ. ಇವರು ಚುನಾವಣೆ ಸಂಬಂಧ 2022ರ ಅಕ್ಟೋಬರ್​ನಿಂದ ಪ್ರಚಾರ ಕಾರ್ಯ ಆರಂಭಿಸಿದ್ದು, ಬೆಳಿಗ್ಗೆ 6:30ಕ್ಕೆ ಪ್ರಚಾರದ ಕಾರ್ಯವನ್ನು ಆರಂಭಿಸಿದರೇ ಮಧ್ಯಾಹ್ನ 12 ಗಂಟೆಯವರೆಗು ಪ್ರಚಾರದಲ್ಲಿ ತೊಡಗುತ್ತಾರೆ. ನಂತರ ಸಾಯಂಕಾಲ 4:30 ಕ್ಕೆ ಪ್ರಚಾರ ಪ್ರಾರಂಭಿಸಿದರೇ ರಾತ್ರಿ 10 ಗಂಟೆಗೆ ಮುಗಿಸುತ್ತಾರೆ. ಹೀಗೆ ಇವರು ತಾಲೂಕಿನ 200 ಹಳ್ಳಿಗಳಿಗೆ ತೆರಳಿ ಪ್ರಚಾರ ಮಾಡುವ ಗುರಿಯನ್ನು ಹೊಂದಿದ್ದು, ಸದ್ಯ 85 ಹಳ್ಳಿಗಳನ್ನು ತಲುಪಿದ್ದಾರೆ.

ನಮ್ಮ ಕ್ಷೇತ್ರ ಎಲ್ಲ ರೀತಿಯ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಹಲವು ಗ್ರಾಮಗಳಲ್ಲಿ ಕಳೆದ 30 ವರ್ಷಗಳಿಂದ ರಸ್ತೆ ಅಭಿವೃದ್ಧಿ ಕಂಡಿಲ್ಲ. ಭ್ರಷ್ಟಾಚಾರ ಜನರ ಮುಂದಿರುವ ದೊಡ್ಡ ಸವಾಲು. ಬದಲಾವಣೆಯನ್ನು ತರಲು ನಾನು ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ ಎಂದು ಚಂದನ್​ ಗೌಡ ಹೇಳಿದ್ದಾರೆ.

“ನಾನು ಯೂಟ್ಯೂಬ್ ಮೂಲಕ ಗಳಿಸುವುದು ನನ್ನ ಪ್ರಚಾರಕ್ಕೆ ಸಾಕು”. ಚಿಕ್ಕಮಗಳೂರಿನ ಡಾ.ರವಿಕುಮಾರ್ ಪ್ರಚಾರಕ್ಕಾಗಿ ಸ್ಪೀಕರ್ ಕೊಡುಗೆ ನೀಡಿದ್ದಾರೆ. “ನನ್ನ ಅಭಿಯಾನವನ್ನು ನೋಡಿದ ಗ್ರಾಮಸ್ಥರೊಬ್ಬರು ವಾಹನವನ್ನು ನೀಡಿದ್ದಾರೆ” ಎಂದು ತಿಳಿಸಿದ್ದಾರೆ.

“ಹಲವು ಹಳ್ಳಿಗಳಲ್ಲಿ, ನಾನು ಪ್ರತಿರೋಧವನ್ನು ಎದುರಿಸುತ್ತೇನೆ. ನನ್ನ ಬೆಂಬಲಕ್ಕೆ ಯಾವಾಗಲೂ ಮಹಿಳೆಯರು ಬರುತ್ತಾರೆ. ಪ್ರಚಾರವನ್ನು ಪ್ರಾರಂಭಿಸಿದ ನಂತರ, ಅದರ ಕುರಿತಾದ ವೀಡಿಯೊಗಳು ಸರಾಸರಿ ವೀಕ್ಷಣೆ ಸಮಯ ಹೆಚ್ಚಾಗಿದೆ ಎಂದರು.

ಮಹಿಳೆಯರು, ಯುವಕರು, ಗ್ರಾಮಸ್ಥರು ಅದರಲ್ಲೂ ರೈತರ ಬೆಂಬಲವನ್ನು ಚಂದನ್ ಗೆಲ್ಲುತ್ತಿದ್ದಾರೆ ಎಂದು ಕೆಆರ್ ಪೇಟೆ ನಿವಾಸಿ, ಸಾಫ್ಟ್ ವೇರ್ ಎಂಜಿನಿಯರ್ ದರ್ಶನ್ ಜಿ.ಬಿ ಎಂಬುವರು ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಹೆಚ್ಚಿನ ಸಂಖ್ಯೆಯ ಜನರು ಅವರನ್ನು ಅನುಸರಿಸುತ್ತಿದ್ದಾರೆ. ನೀರಿನ ಸಮಸ್ಯೆ ಮತ್ತು ಬಸ್ ಸೇವೆಗಳ ಕೊರತೆಯಂತಹ ನಾಗರಿಕ ಸಮಸ್ಯೆಗಳಿಗೆ ಚಂದನ್ ಪರಿಹಾರಗಳನ್ನು ಸೂಚಿಸುತ್ತಾರೆ, ಇದು ಮತದಾರರನ್ನು ತನ್ನತ್ತ ಆಕರ್ಷಿಸುತ್ತದೆ ಎಂದು ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದಾರೆ.

ಮಧುಚಂದನ್ ಎಸ್‌ಸಿ ಸಾಫ್ಟ್‌ವೇರ್ ಎಂಜಿನಿಯರ್

45 ವರ್ಷದ ಮಧುಚಂದನ್ ಎಸ್‌ಸಿ ಸಾಫ್ಟ್‌ವೇರ್ ಎಂಜಿನಿಯರ್ ಮತ್ತು ಉದ್ಯಮಿಯಾಗಿ ಸೇವೆ ಸಲ್ಲಿಸಿದ ಇವರು ಚುನಾವಣೆಗೆ ದುಮುಕಿದ್ದಾರೆ. ಸಾಫ್ಟ್‌ವೇರ್ ಎಂಜಿನಿಯರ್ ಆಗಿ, ಅವರು 15 ವರ್ಷಗಳಲ್ಲಿ 27 ದೇಶಗಳಿಗೆ ಭೇಟಿ ನೀಡಿದ್ದಾರೆ. ಇವರು ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರಾಗಿದ್ದು, ಈಗ ಸರ್ವೋದಯ ಕರ್ನಾಟಕದಿಂದ ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

ಕಳೆದ 8 ದಿನಗಳಲ್ಲಿ 103 ಕಿಲೋಮೀಟರ್‌ಗಳನ್ನು ನಡಿಗೆಯ ಮೂಲಕ ಕ್ರಮಿಸಿದ್ದೇನೆ. ನಾನು ಫೆಬ್ರವರಿ 27 ರಂದು ನನ್ನ ಪ್ರಚಾರವನ್ನು ಪ್ರಾರಂಭಿಸಿದೆ. ಇತರ ನಾಯಕರಿಗೆ, ಒಂದು ದಿನದ ಪ್ರಚಾರ ವೆಚ್ಚ 2 ರಿಂದ 3 ಲಕ್ಷ ರೂ. ಆದರೆ ನನಗೆ ಇದು 1,000 ರೂ. ಅವರ ಪ್ರಕಾರ ಶೇ.95ರಷ್ಟು ಜನ ಉತ್ತಮ ಅಭ್ಯರ್ಥಿಯನ್ನು ಬೆಂಬಲಿಸಲು ಮುಂದಾಗಿದ್ದಾರೆ. ಒಳ್ಳೆಯವರು ರಾಜಕೀಯದಿಂದ ದೂರ ಉಳಿದರೆ ಕೆಟ್ಟ ರಾಜಕೀಯಕ್ಕೆ ಕಾರಣವಾಯಿತು ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:33 pm, Tue, 7 March 23

ಆರ್​ಸಿಬಿ ಫ್ಯಾನ್ಸ್ ಕಾಲ್ತುಳಿತ: ಚಂದನ್​ ಶೆಟ್ಟಿಗೂ ಪೊಲೀಸರ ಲಾಠಿ ಏಟು
ಆರ್​ಸಿಬಿ ಫ್ಯಾನ್ಸ್ ಕಾಲ್ತುಳಿತ: ಚಂದನ್​ ಶೆಟ್ಟಿಗೂ ಪೊಲೀಸರ ಲಾಠಿ ಏಟು
ಆರ್​​​ಸಿಬಿ ಅಭಿಮಾನಿಗಳು ವಿಧಾನಸೌಧ ಬಳಿ ಅವಾಂತರ ಮಾಡಿದ್ದು ಅಷ್ಟಿಷ್ಟಲ್ಲ
ಆರ್​​​ಸಿಬಿ ಅಭಿಮಾನಿಗಳು ವಿಧಾನಸೌಧ ಬಳಿ ಅವಾಂತರ ಮಾಡಿದ್ದು ಅಷ್ಟಿಷ್ಟಲ್ಲ
ವಿಯೆಟ್ನಾಂನ ಬೈಕ್ ಅಪಘಾತದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿ ಸಾವು
ವಿಯೆಟ್ನಾಂನ ಬೈಕ್ ಅಪಘಾತದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿ ಸಾವು
ಆಟೋಚಾಲಕನಿಗೆ ತನ್ನ ಫೋನ್ ಕಳುವು ಗೊತ್ತಾಗಿದ್ದು ಕಳ್ಳನನ್ನು ಹಿಡಿದ ನಂತರ!
ಆಟೋಚಾಲಕನಿಗೆ ತನ್ನ ಫೋನ್ ಕಳುವು ಗೊತ್ತಾಗಿದ್ದು ಕಳ್ಳನನ್ನು ಹಿಡಿದ ನಂತರ!
ಕಾಲ್ತುಳಿತದ ನಡುವೆ ನೂರರು ಮೊಬೈಲ್‌ ಎಗರಿಸಿದ ಕಳ್ಳರು...!
ಕಾಲ್ತುಳಿತದ ನಡುವೆ ನೂರರು ಮೊಬೈಲ್‌ ಎಗರಿಸಿದ ಕಳ್ಳರು...!
ಉಚಿತ ಪಾಸ್​ಗಳನ್ನು ವಿತರಿಸಿದ್ದಕ್ಕೆ ಕಾಲ್ತುಳಿತದ ಘಟನೆ ಸಂಭವಿಸಿದೆ: ವಕೀಲ
ಉಚಿತ ಪಾಸ್​ಗಳನ್ನು ವಿತರಿಸಿದ್ದಕ್ಕೆ ಕಾಲ್ತುಳಿತದ ಘಟನೆ ಸಂಭವಿಸಿದೆ: ವಕೀಲ
ಎರಡೆರಡು ಕಡೆ ಸತ್ಕಾರ ಸಮಾರಂಭ ಏರ್ಪಡಿಸುವ ಅಗತ್ಯವೇನಿತ್ತು? ಚಲವಾದಿ
ಎರಡೆರಡು ಕಡೆ ಸತ್ಕಾರ ಸಮಾರಂಭ ಏರ್ಪಡಿಸುವ ಅಗತ್ಯವೇನಿತ್ತು? ಚಲವಾದಿ
ತಮ್ಮ ಮನೆಯಲ್ಲಿ ಸಿಂಧೂರ ಸಸಿ ನೆಟ್ಟ ಪ್ರಧಾನಿ ಮೋದಿ; ಏನಿದರ ವಿಶೇಷತೆ?
ತಮ್ಮ ಮನೆಯಲ್ಲಿ ಸಿಂಧೂರ ಸಸಿ ನೆಟ್ಟ ಪ್ರಧಾನಿ ಮೋದಿ; ಏನಿದರ ವಿಶೇಷತೆ?
ಅರ್​ಸಿಬಿ ಆಟಗಾರರ ವಿಕ್ಟರಿ ಪರೇಡ್ ನೋಡಲು ಅಕ್ಷತಾರನ್ನು ಕರೆತಂದಿದ್ದ ಪತಿ
ಅರ್​ಸಿಬಿ ಆಟಗಾರರ ವಿಕ್ಟರಿ ಪರೇಡ್ ನೋಡಲು ಅಕ್ಷತಾರನ್ನು ಕರೆತಂದಿದ್ದ ಪತಿ
ಆರ್​ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ: ಚಂದನ್ ಶೆಟ್ಟಿ ಹೇಳಿದ್ದೇನು?
ಆರ್​ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ: ಚಂದನ್ ಶೆಟ್ಟಿ ಹೇಳಿದ್ದೇನು?