ನನಗೂ ಮುಖ್ಯಮಂತ್ರಿ ಆಗುವ ಎಲ್ಲಾ ಅರ್ಹತೆಯಿದೆ, ಸಿಎಂ ಆಗುವ ಕನಸು ಬಿಚ್ಚಿಟ್ಟ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​

ನಾನಂತೂ ವೈಯಕ್ತಿಕವಾಗಿ ಮುಖ್ಯಮಂತ್ರಿ ಆಗಬೇಕು ಅನ್ನೋ ಸ್ಪರ್ಧೆಯಲಿಲ್ಲಾ‌. ನನಗೆ ಮುಖ್ಯಮಂತ್ರಿ ಆಗುವ ಎಲ್ಲಾ ಅರ್ಹತೆ ಇದೆ ಎಂದು ಸಿಎಂ ಆಗುವ ಆಸೆಯನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಹೊರಹಾಕಿದ್ದಾರೆ.

ನನಗೂ ಮುಖ್ಯಮಂತ್ರಿ ಆಗುವ ಎಲ್ಲಾ ಅರ್ಹತೆಯಿದೆ, ಸಿಎಂ ಆಗುವ ಕನಸು ಬಿಚ್ಚಿಟ್ಟ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

Updated on: Apr 30, 2023 | 5:23 PM

ಬೆಳಗಾವಿ: ರಾಜಕಾರಣದಲ್ಲಿ ಸಿಎಂ ಆಗಲಿ ಅಂತಾ ಜನರು ಹೇಳುತ್ತಿರುತ್ತಾರೆ. ಆದರೆ ಪಕ್ಷ ನಿರ್ಣಯ ಮಾಡುತ್ತೆ. ನಾನಂತೂ ವೈಯಕ್ತಿಕವಾಗಿ ಮುಖ್ಯಮಂತ್ರಿ ಆಗಬೇಕು ಅನ್ನೋ ಸ್ಪರ್ಧೆಯಲಿಲ್ಲಾ‌. ನನಗೆ ಮುಖ್ಯಮಂತ್ರಿ ಆಗುವ ಎಲ್ಲಾ ಅರ್ಹತೆ ಇದೆ ಎಂದು ಸಿಎಂ ಆಗುವ ಆಸೆಯನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal)​ ಹೊರಹಾಕಿದ್ದಾರೆ. ಜಿಲ್ಲೆಯ ರಾಮದುರ್ಗದಲ್ಲಿ ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದು, ಮಂತ್ರಿಯಾಗಬೇಕು ಅಂತಾ ಯಾವತ್ತೂ ಹೋರಾಟ ಮಾಡಿಲ್ಲ. ಸಿಎಂ ಮಾಡಿ ಅಂತಾ ಜನರ ಕಡೆಯಿಂದ ಲಾಬಿ ಮಾಡುವುದಿಲ್ಲ. ಅವಕಾಶ ಕೊಟ್ಟರೆ ಯುಪಿ ಸರ್ಕಾರದ ಮಾದರಿ ಅಧಿಕಾರ ಮಾಡುತ್ತೇನೆ ಎಂದು ತಮ್ಮ ಇಂಗಿತ ವ್ಯಕ್ತಪಡಿಸಿದರು.

ಸಿಎಂ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತೇನೆ

ಮುಂದಿನ ಸಿಎಂ ಬಸವರಾಜ ಬೊಮ್ಮಾಯಿ ಎಂಬ ಜೆಪಿ ನಡ್ಡಾ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಬೊಮ್ಮಾಯಿ ಅವರನ್ನ ಮಾಡುತ್ತಾರೋ, ಯಾರನ್ನ ಮಾಡುತ್ತಾರೋ ಅದು ಪಕ್ಷದ ಹೈಕಮಾಂಡ್‌ಗೆ ಬಿಟ್ಟಿದ್ದು. ಅಂತಿಮವಾಗಿ ಸಿಎಂ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತೇನೆ. ಯಾರನ್ನೇ ಮುಖ್ಯಮಂತ್ರಿ ಮಾಡಿದರೂ ನಾವು ಒಪ್ಪಿಕೊಳ್ಳುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ವಿಜಯಪುರದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ: ತಲೆಕೆಳಗಾದ ಬಿಜೆಪಿ ಅಭ್ಯರ್ಥಿ ಯತ್ನಾಳ್​ ಲೆಕ್ಕಾಚಾರ

ಕಾಂಗ್ರೆಸ್ ವಾರಂಟಿನೇ ಮುಗಿದಿದೆ, ಗ್ಯಾರಂಟಿ ಕೊಡಲು ಆಗಲ್ಲ

ಕಾಂಗ್ರೆಸ್​​ನ ಗ್ಯಾರಂಟಿಗೆ ಯಾವುದೇ ಅರ್ಥ ಇಲ್ಲ. ಕಾಂಗ್ರೆಸ್ ವಾರಂಟಿನೇ ಮುಗಿದಿದೆ, ಗ್ಯಾರಂಟಿ ಕೊಡಲು ಆಗಲ್ಲ. ಗಾಂಧಿ ಮನೆತನದ ಎಲ್ಲರೂ ಇಂದು ಜಾಮೀನಿನ ಮೇಲಿದ್ದಾರೆ. ರಾಜಕೀಯ ಹೋರಾಟ, ಸಂಘರ್ಷದಿಂದ ಜಾಮೀನಿನ ಮೇಲಿಲ್ಲ.

ಭ್ರಷ್ಟಾಚಾರದ ಆರೋಪ ಪ್ರಕರಣದಲ್ಲಿ ಜಾಮೀನು ಪಡೆದಿದ್ದಾರೆ. ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ, ಡಿ.ಕೆ ಶಿವಕುಮಾರಗೆ ನೈತಿಕತೆ ಇಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಗೌರವ ಇತ್ತು. ಕರ್ನಾಟಕದಲ್ಲಿ ಗೆಲ್ಲಲ್ಲ ಅಂತಾ ಏನೇನೋ ಮಾತನಾಡುತ್ತಿದ್ದಾರೆ. ಪ್ರಧಾನಿ ಬಗ್ಗೆ ಮಾತಾಡಿದ್ರೆ ಅದೇ ಭಾಷೆಯಲ್ಲಿ ಉತ್ತರ ಕೊಡ್ತೀವಿ ಎಂದು ಕಿಡಿಕಾರಿದರು.

ಕಾಂಗ್ರೆಸ್​ಗೆ ಪ್ರಧಾನಿ ಮೋದಿ ಭಯ ಶುರುವಾಗಿದೆ

ಪ್ರಧಾನಿ ಮೋದಿಗೆ 91ಬೈಗುಳ ಕಾಂಗ್ರೆಸ್ ಬೈಯ್ದ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಹತಾಶೆ ಆಗಿದೆ. ನರೇಂದ್ರ ಮೋದಿ ಅಂದರೆ ಭಯ ಶುರುವಾಗಿದೆ. ಇವರೇ ಮುಂದುವರೆದರೆ ಮುಂದಿನ ದಿನಗಳಲ್ಲಿ ನಮ್ಮನ್ನ ಜೈಲಿಗೆ ಕಳಿಸುತ್ತಾರೆ ಅಂತಾ ಭಯ. ಸಾವಿರಾರು ಕೋಟಿ ಲೂಟಿ ಮಾಡಿದ್ದು ಸರ್ಕಾರದ ಖಜಾನೆ ಸೇರುತ್ತೆ ಅಂತಾ ಹತಾಶರಾಗಿದ್ದಾರೆ ವಾಗ್ದಾಳಿ ಮಾಡಿದರು.

ಇದನ್ನೂ ಓದಿ: ಇವರೆಲ್ಲಾ ಲಂಚ ಕೊಟ್ಟು ಬಂದಿದ್ದಾರೆ ಎಂದು ಪೊಲೀಸರ ಕಡೆ ಕೈ ಮಾಡಿ ಸರ್ಕಾರದ ವಿರುದ್ಧ ಸಿದ್ಧರಾಮಯ್ಯ ಕಿಡಿ

Yatnal: ಕಾಂಗ್ರೆಸ್ ಭರವಸೆಗಳು ಜನರನ್ನ ಮೋಸ ಮಾಡುವ ತಂತ್ರ ಎಂದು ಯತ್ನಾಳ್ ಆರೋಪ|#TV9B

ಬಿಜೆಪಿ ಬಹುಮತ ಬರದಿದ್ದರೆ ಜೆಡಿಎಸ್‌ ಜತೆಗೆ ಕೈಜೋಡಿಸುತ್ತಿರಾ ಎಂಬ ಪ್ರಶ್ನೆಗೆ ಉತ್ತಿರಿಸಿದ ಅವರು, ಪ್ರಧಾನಿ ಆಗಮನದಿಂದ ಕರ್ನಾಟಕದಲ್ಲಿ ಬಹುಮತ ಸರ್ಕಾರ ಬರಲಿದೆ. ಕರ್ನಾಟಕದಲ್ಲಿ ಈ ಬಾರಿ ಬಹುಮತ ಪಡೆದೇ ಪಡೆಯುತ್ತೇವೆ ಎಂದು ಹೇಳಿದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us