ಪಂಜಾಬ್​​ನಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ; ಒಂದು ಲಕ್ಷ ಸರ್ಕಾರಿ ಉದ್ಯೋಗ, ವರ್ಷಕ್ಕೆ 8 ಉಚಿತ ಅಡುಗೆ ಅನಿಲ ಸಿಲಿಂಡರ್‌ ಭರವಸೆ

TV9 Digital Desk

| Edited By: Rashmi Kallakatta

Updated on:Feb 18, 2022 | 6:37 PM

Punjab Election 2022 ಕಾಂಗ್ರೆಸ್ ಪಕ್ಷದ 13 ಅಂಶಗಳ ಕಾರ್ಯಸೂಚಿಯು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ದೂರದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ ಎಂದು ಸಿಧು ಹೇಳುವ ಮೂಲಕ ವಿಧಾನಸಭೆ ಚುನಾವಣೆಯ ಪ್ರಚಾರದ ಕೊನೆಯ ದಿನದಂದು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದೆ.

ಪಂಜಾಬ್​​ನಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ; ಒಂದು ಲಕ್ಷ ಸರ್ಕಾರಿ ಉದ್ಯೋಗ, ವರ್ಷಕ್ಕೆ 8 ಉಚಿತ ಅಡುಗೆ ಅನಿಲ ಸಿಲಿಂಡರ್‌ ಭರವಸೆ
ಚುನಾವಣಾ ರ್ಯಾಲಿಯಲ್ಲಿ ಪಂಜಾಬ್ ಸಿಎಂ ಚನ್ನಿ

ದೆಹಲಿ: ಪಂಜಾಬ್ ವಿಧಾನಸಭೆ ಚುನಾವಣೆಗೆ (Punjab polls)  ಕಾಂಗ್ರೆಸ್ (Congress) ಶುಕ್ರವಾರ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಒಂದು ಲಕ್ಷ ಸರ್ಕಾರಿ ಉದ್ಯೋಗ, ಮಹಿಳೆಯರಿಗೆ ತಿಂಗಳಿಗೆ 1,100 ರೂ., ವರ್ಷಕ್ಕೆ 8 ಉಚಿತ ಅಡುಗೆ ಅನಿಲ ಸಿಲಿಂಡರ್‌ಗಳನ್ನು ನೀಡುವುದಾಗಿ ಭರವಸೆ ನೀಡಿದೆ. ಎಣ್ಣೆಬೀಜ, ಬೇಳೆಕಾಳು ಮತ್ತು ಜೋಳವನ್ನು ಸರ್ಕಾರಿ ಸಂಸ್ಥೆಗಳಿಂದ ಸಂಗ್ರಹಿಸುವುದಾಗಿ ಪಕ್ಷ ಭರವಸೆ ನೀಡಿದೆ. “ಸಮುದ್ರ ಶಾಂತವಾಗಿರುವಾಗ ಯಾರಾದರೂ ನಾವಿಕ ಆಗಬಹುದು, ಆದರೆ ಚಂಡಮಾರುತ ಬಂದಾಗ, ನಾವು ಪ್ರತಿಕೂಲತೆಯನ್ನು ಅವಕಾಶವಾಗಿ ಪರಿವರ್ತಿಸಲು ಸಾಧ್ಯವಾಗುತ್ತದೆ. ಇದು ಈ ಪ್ರಣಾಳಿಕೆಯ ಉದ್ದೇಶವಾಗಿದೆ ಎಂದು ನವಜೋತ್ ಸಿಂಗ್ ಸಿಧು ಹೇಳಿದರು. ಕಾಂಗ್ರೆಸ್ ಪಕ್ಷದ 13 ಅಂಶಗಳ ಕಾರ್ಯಸೂಚಿಯು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ದೂರದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ ಎಂದು ಸಿಧು ಹೇಳುವ ಮೂಲಕ ವಿಧಾನಸಭೆ ಚುನಾವಣೆಯ ಪ್ರಚಾರದ ಕೊನೆಯ ದಿನದಂದು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಎಲ್ಲಾ ನಿರ್ಗತಿಕ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಮತ್ತು ರಾಜ್ಯದ ಜನರಿಗೆ 170 ಸೇವೆಗಳನ್ನು ಆನ್‌ಲೈನ್‌ನಲ್ಲಿ ತರುವ ಬಗ್ಗೆಯೂ ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಪಂಜಾಬ್ ಮಾದರಿಯ ಅಡಿಯಲ್ಲಿ ಸಿಧು ಅವರು ಪಟ್ಟಿ ಮಾಡಿರುವ ಹಲವು ಭರವಸೆಗಳಾದ ಯುವಕರು, ಕೌಶಲ್ಯ ಮತ್ತು ಉದ್ಯಮಶೀಲತೆಯ ಮೇಲೆ ಪ್ರಣಾಳಿಕೆ ಕೇಂದ್ರೀಕರಿಸಿದೆ. “ಪಂಜಾಬ್ ಮಾದರಿಯು ಕೇವಲ ಚುನಾವಣಾ ಮಾದರಿಯಲ್ಲ, ಆದರೆ ಪಂಜಾಬ್‌ನ ಜನರಿಗೆ ರಚಿಸಲಾದ ಭೌಗೋಳಿಕ, ಸಾಮಾಜಿಕ ಮತ್ತು ಆರ್ಥಿಕ ಅಂಶಗಳ ಆಧಾರದ ಮೇಲೆ ಉತ್ತಮವಾಗಿ ಸಂಶೋಧಿಸಲಾದ ಪರಿಹಾರ-ಮಾದರಿಯಾಗಿದೆ” ಎಂದು ಸಿಧು ಕಳೆದ ತಿಂಗಳು ಹೇಳಿದ್ದರು.

ಮುಂದಿನ ಐದು ವರ್ಷಗಳಲ್ಲಿ ನಗರ ಉದ್ಯೋಗ ಖಾತ್ರಿ ಮಿಷನ್ ಮೂಲಕ 5 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಭರವಸೆ ನೀಡಿದ ಸಿಧು, ವ್ಯಸನಮುಕ್ತ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಘೋಷಿಸಿದರು. ಯುವಜನರಿಗೆ ವ್ಯಾಪಾರ, ಕ್ರೀಡೆಗೆ ಉತ್ತೇಜನ ನೀಡಿ ರಾಜ್ಯದ ಭವಿಷ್ಯದ ನಾಯಕರನ್ನಾಗಿ ಮಾಡಲಾಗುವುದು ಎಂದು ಸಿಧು ಹೇಳಿದ್ದಾರೆ.

“ಯುವ, ಕೌಶಲ್ಯ ಮತ್ತು ಉದ್ಯಮಶೀಲತೆ ಕಾರ್ಯಕ್ರಮವು ರಾಜ್ಯದ ಮುಖವನ್ನು ಬದಲಾಯಿಸಬಹುದು. ಈ ಬದಲಾವಣೆಯ ಭಾಗವಾಗಲು ಮತ್ತು ಮುಂದಿನ ಪೀಳಿಗೆ ಬದುಕಲು ನಾವು ಬಯಸುವ ಭವಿಷ್ಯವನ್ನು ಸೃಷ್ಟಿಸಲು ಇದು ಸಮಯ ”ಎಂದು ಅವರು ಹೇಳಿದರು.

ಕಾಂಗ್ರೆಸ್ ಚುನಾವಣಾ ಭರವಸೆಗಳು ಎಲ್ಲಾ ನಿರ್ಗತಿಕ ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಉಚಿತ ಶಿಕ್ಷಣ. ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲರಿಗೂ ಉಚಿತ ಆರೋಗ್ಯ ಸೇವೆ ಅಗತ್ಯವಿರುವ ಮಹಿಳೆಯರಿಗೆ ಮಾಸಿಕ 1100 ರೂ ವರ್ಷಕ್ಕೆ ಎಂಟು ಸಿಲಿಂಡರ್‌ಗಳು ಉಚಿತ ವರ್ಷಕ್ಕೆ ಒಂದು ಲಕ್ಷ ಸರ್ಕಾರಿ ಉದ್ಯೋಗಗಳು ಸ್ಟಾರ್ಟಪ್‌ಗಳಿಗೆ 1000 ಕೋಟಿ ರೂ.ಗಳ ಹೂಡಿಕೆ ನಿಧಿ MGNREGA ವೇತನವನ್ನು 350 ರೂ.ಗೆ ಏರಿಕೆ ವೃದ್ಧಾಪ್ಯ ವೇತನ 3,100 ರೂ.ಗೆ ಏರಿಕೆ ಸ್ಟಾರ್ಟ್‌ಅಪ್‌ಗಳಿಗೆ ರೂ 2 ಲಕ್ಷ ಬಡ್ಡಿ ರಹಿತ ಸಾಲ ಆರು ತಿಂಗಳಲ್ಲಿ ನಿರ್ಮಾಣ ಹಂತದಲ್ಲಿರುವ ಮನೆ ಪೂರ್ಣವಾಗುತ್ತದೆ

ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

ಇದನ್ನೂ ಓದಿ: ಯುಪಿ, ಬಿಹಾರ್ ಭಯ್ಯಾ ಹೇಳಿಕೆ ತಿರುಚಲಾಗಿದೆ: ಪಂಜಾಬ್ ಸಿಎಂ ಚರಣ್​ಜಿತ್ ಸಿಂಗ್ ಚನ್ನಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada