ಅಖಿಲೇಶ್​ ಸಹವಾಸ ಮಾಡಿದರೆ ಏನಾಗುತ್ತದೆಂದು ಹೇಳಿದ ಅಮಿತ್​ ಶಾ; ಆರ್​ಎಲ್​ಡಿ-ಎಸ್​ಪಿ ಮೈತ್ರಿ ಮುರಿಯಲು ಇನ್ನೊಂದು ಪ್ರಯತ್ನ !

ಬಿಜೆಪಿ ಉತ್ತರಪ್ರದೇಶದಲ್ಲಿ ಜಾಟ್​ ಸಮುದಾಯದ ಮತಗಳನ್ನು ಸೆಳೆಯುವ ಪ್ರಯತ್ನದಲ್ಲಿದೆ. ಅದರ ಒಂದು ಭಾಗವಾಗಿ ಆರ್​ಎಲ್​ಡಿ ಜತೆ ಮೈತ್ರಿಯ ಇಂಗಿತವನ್ನೂ ವ್ಯಕ್ತಪಡಿಸಿತ್ತು. ಆದರೆ ಜಯಂತ್​ ಚೌಧರಿ ಎಸ್​ಪಿ ಪಕ್ಷವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಅಖಿಲೇಶ್​ ಸಹವಾಸ ಮಾಡಿದರೆ ಏನಾಗುತ್ತದೆಂದು ಹೇಳಿದ ಅಮಿತ್​ ಶಾ; ಆರ್​ಎಲ್​ಡಿ-ಎಸ್​ಪಿ ಮೈತ್ರಿ ಮುರಿಯಲು ಇನ್ನೊಂದು ಪ್ರಯತ್ನ !
ಅಮಿತ್ ಶಾ
Follow us
| Updated By: Lakshmi Hegde

Updated on: Jan 29, 2022 | 3:12 PM

ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ (Uttar Pradesh Assembly Election) ಸ್ಪರ್ಧಿಸಲು ಮೈತ್ರಿ ಮಾಡಿಕೊಂಡಿರುವ ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಲೋಕ ದಳ್​ (RLD) ಪಕ್ಷಗಳನ್ನು ಬಿಜೆಪಿ ನಾಯಕ, ಗೃಹ ಸಚಿವ ಅಮಿತ್​ ಶಾ (Amit Shah) ಟೀಕಿಸಿದ್ದಾರೆ. ಅವರಿಬ್ಬರ ಮೈತ್ರಿ ಮತ ಎಣಿಕೆಯವರೆಗೆ ಮಾತ್ರ ಎಂದು ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ರೈತರೇ ಹೆಚ್ಚಾಗಿರುವ  ಮುಜಾಫರ್​ನಗರದಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಒಂದೊಮ್ಮೆ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ, ಅಜಂ ಖಾನ್​ ಸಂಪುಟದಲ್ಲಿ ಸಚಿವರಾಗುತ್ತಾರೆ. ಆದರೆ ಎಸ್​ಪಿ ಜತೆ ಈಗ ಮೈತ್ರಿ ಮಾಡಿಕೊಂಡಿರುವ ಆರ್​ಎಲ್​ಡಿ ಅಧ್ಯಕ್ಷ ಜಯಂತ್​ ಚೌಧರಿ ಹೊರಬೀಳಬೇಕಾಗುತ್ತದೆ ಎಂದು ಹೇಳಿದರು. ಜಯಂತ್​ ಚೌಧರಿಯವರನ್ನು ಉಲ್ಲೇಖಿಸುವಾಗ ಅಮಿತ್​ ಶಾ, ಭಾಯ್​ (ಸಹೋದರ) ಎಂದು ಕರೆದರು. 

ಬಿಜೆಪಿ ಉತ್ತರಪ್ರದೇಶದಲ್ಲಿ ಜಾಟ್​ ಸಮುದಾಯದ ಮತಗಳನ್ನು ಸೆಳೆಯುವ ಪ್ರಯತ್ನದಲ್ಲಿದೆ. ಅದರ ಒಂದು ಭಾಗವಾಗಿ ಆರ್​ಎಲ್​ಡಿ ಜತೆ ಮೈತ್ರಿಯ ಇಂಗಿತವನ್ನೂ ವ್ಯಕ್ತಪಡಿಸಿತ್ತು. ಆದರೆ ಜಯಂತ್​ ಚೌಧರಿ ಎಸ್​ಪಿ ಪಕ್ಷವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅದರ ಬೆನ್ನಲ್ಲೇ ಅಮಿತ್​ ಶಾ ಮಾತನಾಡಿ, ನಿನ್ನೆ ಅಖಿಲೇಶ್ ಯಾದವ್​ ಮತ್ತು ಜಯಂತ್​ ಚೌಧರಿ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿ, ತಾವಿಬ್ಬರೂ ಒಂದಾಗಿರುವುದನ್ನು ಹೇಳಿದರು. ಆದರೆ ಈ ಮೈತ್ರಿ ಇನ್ನೆಷ್ಟು ಕಾಲ ಉಳಿಯುತ್ತದೆ. ಹಾಗೊಮ್ಮೆ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ, ಆಜಮ್​ ಖಾನ್ ವಾಪಸ್ ಬರುತ್ತಾರೆ, ಜಯಂತ್​ ಭಾಯ್​ರನ್ನು ತೆಗೆಯಲಾಗುತ್ತದೆ. ಇಲ್ಲಿಯೇ ಇದ್ದವರು ಇವೆಲ್ಲವನ್ನೂ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಅಂದಹಾಗೆ, ಈ ಆಜಮ್​ ಖಾನ್​ ಸಮಾಜವಾದಿ ಪಕ್ಷದ ಮುಖಂಡರಾಗಿದ್ದು, ಭೂಕಬಳಿಕೆ ಸೇರಿ ಇನ್ನಿತರ ಆರೋಪ ಹೊತ್ತು 2020ರಿಂದಲೂ ಸೀತಾಪುರ ಜೈಲಿನಲ್ಲಿದ್ದಾರೆ. ಹಾಗಿದ್ದಾಗ್ಯೂ ಅವರಿಗೆ ರಾಮಪುರ ಕ್ಷೇತ್ರದಿಂದಲೇ ಅಖಿಲೇಶ್​ ಯಾದವ್ ಟಿಕೆಟ್ ನೀಡಿದ್ದು, ಜೈಲಿನಲ್ಲಿದ್ದುಕೊಂಡೇ ನಾಮಪತ್ರವನ್ನೂ ಸಲ್ಲಿಸಿದ್ದಾರೆ.  ಇನ್ನೊಂದೆಡೆ ಜಾಟ್​ ಸಮುದಾಯದ ಮತ ಬೇಕೆಂದರೆ ಆರ್​ಎಲ್​ಡಿ ಜತೆ ಮೈತ್ರಿ ಮಾಡಿಕೊಳ್ಳಬೇಕು ಎಂದು ಪ್ರಯತ್ನಿಸಿದ್ದ ಬಿಜೆಪಿಗೆ ಜಯಂತ್​ ಚೌಧರಿ ನಡೆಯಿಂದ ನಿರಾಸೆಯಾಗಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಕೃಷಿ ಕಾಯ್ದೆಗಳನ್ನು ತೀವ್ರವಾಗಿ ವಿರೋಧಿಸಿದವರಲ್ಲಿ ಈ ಜಯಂತ್​ ಚೌಧರಿ ಕೂಡ ಒಬ್ಬರಾಗಿದ್ದರು. ಇದೀಗ ಅಮಿತ್ ಶಾ ಪರೋಕ್ಷವಾಗಿ ಎಸ್​ಪಿಯೊಂದಿಗೆ ಮೈತ್ರಿ ಬೇಡ ಎಂಬ ಸಲಹೆ ನೀಡುವುದರ ಜತೆ, ತಮ್ಮ ಪಕ್ಷಕ್ಕೆ ಮತ್ತೊಮ್ಮೆ ಆಹ್ವಾನಿಸಿದ್ದಾರೆ. ಅದಕ್ಕೂ ಮೊದಲು ಅಮಿತ್​ ಶಾ ಉತ್ತರ ಪ್ರದೇಶದ ಜಾಟ್​ ಸಮುದಾಯದ ಮುಖಂಡರೊಂದಿಗೆ ಜನವರಿ 26ರಂದು ಸಭೆಯನ್ನೂ ನಡೆಸಿದ್ದಾರೆ.

ಹಾಗೆ ಇಂದು ಮುಜಾಫರ್​ನಗರದಲ್ಲಿ ಮಾತನಾಡಿದ ಅಮಿತ್​ ಶಾ, ಉತ್ತರಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್​ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇಲ್ಲಿನ ಮಾಫಿಯಾ ಎಂಬುದು ನಿರ್ಮೂಲನವಾಗಿದೆ. ಮತ್ತೇನಾದರೂ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ, ಬಹುಜನ ಸಮಾಜದಂಥ ಪಕ್ಷಗಳು ಅಧಿಕಾರಕ್ಕೆ ಬಂದರೆ, ಇಲ್ಲಿ ಯಥಾಪ್ರಕಾರ ಮಾಫಿಯಾ ಆಡಳಿತ ಹೆಚ್ಚುತ್ತದೆ ಎಂದು ಹೇಳಿದರು.

ಇದನ್ನೂ ಓದಿ: Bank Of India: ಸಿಸ್ಟಮ್​ ಅಪ್​ಡೇಟ್​ ನಂತರ ಬ್ಯಾಂಕ್ ಆಫ್ ಇಂಡಿಯಾದ ನೆಟ್​ ಬ್ಯಾಂಕಿಂಗ್​ ಸೇರಿ ಇತರ ಯಾವುದೂ ನೆಟ್ಟಗಿಲ್ಲ

ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ