AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IDBI Recruitment 2021: ಐಡಿಬಿಐ ಬ್ಯಾಂಕ್​​ನ ವಿವಿಧ ಶಾಖೆಗಳಲ್ಲಿದೆ ಉದ್ಯೋಗಾವಕಾಶ; ಆಸಕ್ತರು ಅರ್ಜಿ ಸಲ್ಲಿಸಲು ತಡ ಮಾಡ್ಬೇಡಿ

IDBI Bank: ಐಡಿಬಿಐ ಬ್ಯಾಂಕ್​ನ ವಿವಿಧ ಶಾಖೆಗಳಿಂದ ಒಟ್ಟು 920 ಖಾಲಿ ಪೋಸ್ಟ್​​ಗಳು ಇವೆ. 20-25ವರ್ಷದವರೆಗಿನವರು ಅರ್ಜಿ ಸಲ್ಲಿಸಬಹುದು.

IDBI Recruitment 2021: ಐಡಿಬಿಐ ಬ್ಯಾಂಕ್​​ನ ವಿವಿಧ ಶಾಖೆಗಳಲ್ಲಿದೆ ಉದ್ಯೋಗಾವಕಾಶ; ಆಸಕ್ತರು ಅರ್ಜಿ ಸಲ್ಲಿಸಲು ತಡ ಮಾಡ್ಬೇಡಿ
ಐಡಿಬಿಐ ಬ್ಯಾಂಕ್​
TV9 Web
| Edited By: |

Updated on: Aug 16, 2021 | 6:07 PM

Share

ದೆಹಲಿ: ಇಂಡಸ್ಟ್ರಿಯಲ್​ ಡೆವಲಪ್​ಮೆಂಟ್ ಬ್ಯಾಂಕ್​ ಆಫ್​ ಇಂಡಿಯಾ (Industrial Development Bank of India -IDBI)ದಲ್ಲಿ ಖಾಲಿ ಹುದ್ದೆ ಭರ್ತಿ ಪ್ರಕ್ರಿಯೆ ( Recruitment Drive) ನಡೆಯುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಐಡಿಬಿಐ ಬ್ಯಾಂಕ್​ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ವಿವಿಧ ಗುತ್ತಿಗೆ ಆಧಾರಿತ ಕಾರ್ಯನಿರ್ವಾಹಕ ಹುದ್ದೆ (Executive Posts)ಗಳಿಗೆ ನೇಮಕಾತಿ ನಡೆಸಲು ಅರ್ಜಿ ಆಹ್ವಾನಿಸಲಾಗಿದೆ. ಇನ್ನು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆಗಸ್ಟ್​ 4ರಿಂದಲೇ ಪ್ರಾರಂಭವಾಗಿದ್ದು, ಆಗಸ್ಟ್​ 18 ಕೊನೇದಿನ. ಅರ್ಜಿ ಸಲ್ಲಿಸಲು ಇನ್ನೆರಡೇ ದಿನಗಳ ಅವಕಾಶವಿದ್ದು, ಆಸಕ್ತಿ ಇರುವವರು ಕೂಡಲೇ ಸಲ್ಲಿಸಿ.

ಅರ್ಹತೆ ಇರುವ ಆಸಕ್ತರು ಐಡಿಬಿಐ ಬ್ಯಾಂಕ್​​ನ ಅಧಿಕೃತ ವೆಬ್​ಸೈಟ್​ idbibank.in ಮೂಲಕ ತಮ್ಮ ಅರ್ಜಿ ಸಲ್ಲಿಸಬಹುದು. ಇದು ಒಂದು ವರ್ಷದ ಗುತ್ತಿಗೆ ಆಧಾರದ ಮೇಲೆ ನಡೆಯುವ ನೇಮಕಾತಿಯಾಗಿದ್ದು, ಕೆಲಸಕ್ಕೆ ಸೇರಿದ ಮೇಲೆ ಅಭ್ಯರ್ಥಿಗಳ ಕಾರ್ಯಕ್ಷಮತೆಯನ್ನು ನೋಡಿ, ಅದು ತುಂಬ ಚೆನ್ನಾಗಿದ್ದರೆ ಮತ್ತೊಂದು ವರ್ಷಕ್ಕೆ ಗುತ್ತಿಗೆ ಅವಧಿಯನ್ನು ಮುಂದುವರಿಸಲಾಗುತ್ತದೆ ಎಂದು ಐಡಿಬಿಐ ಬ್ಯಾಂಕ್​ ತಿಳಿಸಿದೆ.

ಖಾಲಿಹುದ್ದೆಗಳ ಮಾಹಿತಿ ಹೀಗಿದೆ.. ಐಡಿಬಿಐ ಬ್ಯಾಂಕ್​ನ ವಿವಿಧ ಶಾಖೆಗಳಿಂದ ಒಟ್ಟು 920 ಖಾಲಿ ಪೋಸ್ಟ್​​ಗಳು ಇವೆ. 20-25ವರ್ಷದವರೆಗಿನವರು ಅರ್ಜಿ ಸಲ್ಲಿಸಬಹುದು. ಸಾಮಾನ್ಯ ವರ್ಗಕ್ಕೆ ಸೇರಿದವರು ಪದವಿಯಲ್ಲಿ ಕನಿಷ್ಠ ಶೇ.55ರಷ್ಟಾದರೂ ಅಂಕ ಗಳಿಸಿರಬೇಕು. ಹಾಗೇ, ಎಸ್​ಸಿ/ಎಸ್​ಟಿ/ಪಿಡಬ್ಲ್ಯೂಡಿ/ ವರ್ಗಕ್ಕೆ ಸೇರಿದವರು ಪದವಿಯಲ್ಲಿ ಕನಿಷ್ಠ ಶೇ.50ರಷ್ಟಾದರೂ ಅಂಕ ಗಳಿಸಿರಬೇಕು. ಒಟ್ಟಿನಲ್ಲಿ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ ಪದವೀಧರರಾಗಿರುವುದು ತುಂಬ ಮುಖ್ಯ.

ಶುಲ್ಕವೆಷ್ಟು? ಆಸಕ್ತರು ಅರ್ಜಿ ಸಲ್ಲಿಸಲು ಶುಲ್ಕ ನೀಡಬೇಕು. ಅದರಲ್ಲೂ ಸಾಮಾನ್ಯ ವರ್ಗದವರು 1000 ರೂಪಾಯಿ ತುಂಬಬೇಕು ಮತ್ತು ಎಸ್​ಸಿ/ಎಸ್​ಟಿ/ಪಿಡಬ್ಲ್ಯೂಡಿ ವರ್ಗದವರು 200 ರೂ. ಶುಲ್ಕ ನೀಡಬೇಕು.

ಇದನ್ನೂ ಓದಿ: Afghanistan: 4 ಕಾರ್ ಮತ್ತು ಹೆಲಿಕಾಪ್ಟರ್​ನಲ್ಲಿ ಭರ್ತಿ ಹಣ ತುಂಬಿಕೊಂಡು ಅಶ್ರಫ್ ಘನಿ ದೇಶ ತೊರೆದಿದ್ದಾರೆ!

ಮಸೀದಿ ಮೇಲೆ ರಾಷ್ಟ್ರಧ್ವಜ ಹಾರಿಸಿದ ಬಿಜೆಪಿ ಮುಖಂಡನಿಗೆ ಬೆದರಿಕೆ; ವಿರೋಧಿಸುವವರು ದೇಶ ಬಿಡಲಿ ಎಂದ ಶಿಯಾ ವಕ್ಫ್​ ಮಾಜಿ ಮುಖ್ಯಸ್ಥ

ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?