AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಚ್ಛೇದನ ವಿಚಾರ ಹಳೆಯದಾಯ್ತು, ಅಭಿಷೇಕ್-ಐಶ್ವರ್ಯಾ ಬಗ್ಗೆ ಕೇಳಿಬರ್ತಿದೆ ಹೊಸ ಅಪ್​​ಡೇಟ್

2007ರಲ್ಲಿ ಅಭಿಷೇಕ್ ಹಾಗೂ ಐಶ್ವರ್ಯಾ ರೈ ಅವರು ‘ಗುರು’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದರು. ಇವರ ಮದುವೆಗೂ ಕೆಲವೇ ತಿಂಗಳು ಮೊದಲು ಈ ಚಿತ್ರವನ್ನು ನೋಡಿ ಫ್ಯಾನ್ಸ್ ಥ್ರಿಲ್ ಆದರು. ಮಣಿರತ್ನಂ ಈ ಜೋಡಿಯನ್ನು ಮತ್ತೆ ‘ರಾವಣ್’ ಸಿನಿಮಾದಲ್ಲಿ ತೆರೆಮೇಲೆ ತಂದರು. ಈಗ ಈ ಜೋಡಿಗೆ ಹೊಂದಿಕೆ ಆಗುವ ಮತ್ತೊಂದು ಕಥೆಯೊಂದಿಗೆ ಅವರು ಬಂದಿದ್ದಾರೆ ಎನ್ನಲಾಗಿದೆ.

ವಿಚ್ಛೇದನ ವಿಚಾರ ಹಳೆಯದಾಯ್ತು, ಅಭಿಷೇಕ್-ಐಶ್ವರ್ಯಾ ಬಗ್ಗೆ ಕೇಳಿಬರ್ತಿದೆ ಹೊಸ ಅಪ್​​ಡೇಟ್
ಅಭಿಷೇಕ್-ಐಶ್ವರ್ಯಾ
ರಾಜೇಶ್ ದುಗ್ಗುಮನೆ
|

Updated on: Nov 07, 2024 | 10:51 AM

Share

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಬಚ್ಚನ್ ವಿಚ್ಛೇದನ ಪಡೆಯುತ್ತಾರೆ ಎನ್ನುವ ಸುದ್ದಿ ಹಳೆಯದಾಗುತ್ತಾ ಬಂದಿದೆ. ಒಂದೊಮ್ಮೆ ಅವರು ವಿಚ್ಛೇದನ ಪಡೆದರೂ ಯಾರಿಗೂ ಅಚ್ಚರಿ ಎನಿಸುವುದಿಲ್ಲ. ಈಗ ಈ ದಂಪತಿ ಬಗ್ಗೆ ಮತ್ತೊಂದು ಸುದ್ದಿ ಹರಿದಾಡಿದೆ. ‘ಗುರು’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದ ಈ ಜೋಡಿ ಈಗ ಮತ್ತೆ ತೆರೆಹಂಚಿಕೊಳ್ಳಲು ರೆಡಿ ಆಗಿದೆ ಎನ್ನಲಾಗಿದೆ. ಇವರಿಬ್ಬರ ಫೇವರಿಟ್ ನಿರ್ದೇಶಕ ಮಣಿರತ್ನಂ ಅವರು ಈ ಸಿನಿಮಾನ ನಿರ್ದೇಶನ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದನ್ನು ಕೇಳಿ ಅಭಿಷೇಕ್ ಅಭಿಮಾನಿಗಳು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.

2007ರಲ್ಲಿ ಅಭಿಷೇಕ್ ಹಾಗೂ ಐಶ್ವರ್ಯಾ ರೈ ಅವರು ‘ಗುರು’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದರು. ಇವರ ಮದುವೆಗೂ ಕೆಲವೇ ತಿಂಗಳು ಮೊದಲು ಈ ಚಿತ್ರವನ್ನು ನೋಡಿ ಫ್ಯಾನ್ಸ್ ಥ್ರಿಲ್ ಆದರು. ಮಣಿರತ್ನಂ ಮಾಡಿದ ಅತ್ಯುತ್ತಮ ಸಿನಿಮಾಗಳಲ್ಲಿ ಇದು ಕೂಡ ಒಂದು. ಮಣಿರತ್ನಂ ಈ ಜೋಡಿಯನ್ನು ಮತ್ತೆ ‘ರಾವಣ್’ ಸಿನಿಮಾದಲ್ಲಿ ತೆರೆಮೇಲೆ ತಂದರು. ಈಗ ಈ ಜೋಡಿಗೆ ಹೊಂದಿಕೆ ಆಗುವ ಮತ್ತೊಂದು ಕಥೆಯೊಂದಿಗೆ ಅವರು ಬಂದಿದ್ದಾರೆ ಎನ್ನಲಾಗಿದೆ.

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ಇಬ್ಬರಿಗೂ ಮಣಿರತ್ನಂ ಫೇವರಿಟ್ ನಿರ್ದೇಶಕ. ಅಭಿಷೇಕ್ ನಟನೆಯ ‘ಯುವ’ ಸಿನಿಮಾಗೆ ಮಣಿರತ್ನಂ ಅವರದ್ದೇ ನಿರ್ದೇಶನ ಇತ್ತು. ಆ ಬಳಿಕ ‘ಗುರು’ ಹಾಗೂ ‘ರಾವಣ್’ ಸಿನಿಮಾದಲ್ಲಿ ಇವರು ಒಟ್ಟಾಗಿ ಕೆಲಸ ಮಾಡಿದರು. ಈಗ ಈ ಸುದ್ದಿ ನಿಜವೇ ಆದಲ್ಲಿ ನಾಲ್ಕನೇ ಬಾರಿಗೆ ಇವರು ಒಂದಾದಂತೆ ಆಗಲಿದೆ.

ಈ ಮೊದಲು ಅಭಿಷೇಕ್ ಅವರು ಮಣಿರತ್ನಂ ಬಗ್ಗೆ ಮಾತನಾಡಿದ್ದರು. ‘ಯುವ’ ಸಿನಿಮಾದ ಕಥೆ ಹೇಳಲು ಅಭಿಷೇಕ್ ಮನೆಗೆ ಮಣಿರತ್ನಂ ಬಂದಿದ್ದರು. ತಂದೆಗೆ ಕಥೆ ಹೇಳಲು ಬಂದಿರಬಹುದು ಎಂದು ಅಭಿಷೇಕ್ ಭಾವಿಸಿದ್ದರು. ಆದರೆ, ನಂತರ ಮಣಿರತ್ನಂ ಸಿನಿಮಾ ಮಾಡೋಕೆ ಬಂದಿದ್ದು ತಮಗೆ ಎಂಬ ವಿಚಾರ ತಿಳಿದು ಅವರಿಗೆ ಖುಷಿ ಆಯಿತು.

ಇದನ್ನೂ ಓದಿ: ‘ದುರ್ಬಲ ಪುರುಷ ಪ್ರಬಲ ಮಹಿಳೆಯನ್ನು ಹ್ಯಾಂಡಲ್ ಮಾಡಲಾರ’; ಅಭಿಷೇಕ್ ಬಚ್ಚನ್ ಬಗ್ಗೆ ಟೀಕೆ

ಅಭಿಷೇಕ್-ಐಶ್ವರ್ಯಾ ವಿಚ್ಛೇದನ ವಿಚಾರ ಈ ಮೊದಲು ಕೂಡ ಚರ್ಚೆ ಆಗಿತ್ತು. 2014ರಲ್ಲಿ ಈ ಬಗ್ಗೆ ವದಂತಿ ಹಬ್ಬಿದ್ದವು. ಆ ಬಳಿಕ ಅವರು ಸ್ಪಷ್ಟನೆ ಕೊಟ್ಟಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.