Rahul Dravid: ವೆಂಕಟೇಶ್​ ಪ್ರಸಾದ್​ ಕೂಡ ಇಂದಿರಾ ನಗರದ ಗೂಂಡಾ! ದ್ರಾವಿಡ್​ ಬಳಿಕ ಇನ್ನೊಂದು ವಿಡಿಯೋ ವೈರಲ್​

|

Updated on: Apr 11, 2021 | 1:13 PM

ವೆಂಕಟೇಶ್​ ಪ್ರಸಾದ್​ ಒಂದು ಹಳೇ ಮಾಹಿತಿ ಶೇರ್​ ಮಾಡಿಕೊಂಡಿದ್ದಾರೆ. ಪಾಕಿಸ್ತಾನಿ ಬ್ಯಾಟ್ಸ್​ಮನ್​ ಆಮೇರ್​ ಸೊಹೇಲ್ ಅವರಿಗೆ 1996ರ ವಿಶ್ವಕಪ್​ ಪಂದ್ಯದ ವೇಳೆ ವೆಂಕಟೇಶ್​ ಪ್ರಸಾದ್​ ನೀಡಿದ ಖಡಕ್​ ತಿರುಗೇಟಿನ ದೃಶ್ಯ ಈ ಪೋಸ್ಟ್​ನಲ್ಲಿದೆ.

Rahul Dravid: ವೆಂಕಟೇಶ್​ ಪ್ರಸಾದ್​ ಕೂಡ ಇಂದಿರಾ ನಗರದ ಗೂಂಡಾ! ದ್ರಾವಿಡ್​ ಬಳಿಕ ಇನ್ನೊಂದು ವಿಡಿಯೋ ವೈರಲ್​
ರಾಹುಲ್​ ದ್ರಾವಿಡ್​ - ವೆಂಕಟೇಶ್​ ಪ್ರಸಾದ್​
Follow us on

‘ಇಂದಿರಾನಗರ್​ ಕಾ ಗೂಂಡಾ ಹೂ ಮೈ’ ಎಂಬ ಡೈಲಾಗ್​ ಈಗ ಎಲ್ಲೆಲ್ಲೂ ಫೇಮಸ್​ ಆಗಿದೆ. ಕ್ರೆಡಿಟ್​ ಕಾರ್ಡ್​ ಬಿಲ್​ ಪಾವತಿ ಮಾಡುವ ಖಾಸಗಿ ಕಂಪನಿಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ರಾಹುಲ್​ ದ್ರಾವಿಡ್​ ಅವರು ಈ ಡೈಲಾಗ್​ ಹೇಳಿರುವುದು ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಅದೇ ರೀತಿಯ ಅನೇಕ ಸಂಗತಿಗಳಿಗೆ ಈ ಡೈಲಾಗ್​ ಬಳಕೆ ಆಗುತ್ತಿದೆ. ಇತ್ತೀಚೆಗಷ್ಟೇ ನಟಿ ದೀಪಿಕಾ ಪಡುಕೋಣೆ ಅವರು ತಮ್ಮ ಬಾಲ್ಯದ ಫೋಟೋಗೆ ಇಂಥ ಕ್ಯಾಪ್ಷನ್​ ನೀಡಿದ್ದರು. ಈಗ ಮಾಜಿ ಕ್ರಿಕೆಟರ್​ ವೆಂಕಟೇಶ್​ ಪ್ರಸಾದ್​ ‘ನಾನು ಸಹ ಇಂದಿರಾ ನಗರದ ಗೂಂಡಾ’ ಎಂದು ಹೇಳುತ್ತಿದ್ದಾರೆ!

ವೆಂಕಟೇಶ್​ ಪ್ರಸಾದ್​ ಅವರು ಟ್ವಿಟರ್​ನಲ್ಲಿ ಒಂದು ಹಳೇ ಮಾಹಿತಿ ಶೇರ್​ ಮಾಡಿಕೊಂಡಿದ್ದಾರೆ. ಪಾಕಿಸ್ತಾನಿ ಬ್ಯಾಟ್ಸ್​ಮನ್​ ಆಮೇರ್​ ಸೊಹೇಲ್ ಅವರಿಗೆ 1996ರ ವಿಶ್ವಕಪ್​ ಪಂದ್ಯದ ವೇಳೆ ವೆಂಕಟೇಶ್​ ಪ್ರಸಾದ್​ ನೀಡಿದ ಖಡಕ್​ ತಿರುಗೇಟಿನ ದೃಶ್ಯ ಈ ಪೋಸ್ಟ್​ನಲ್ಲಿದೆ. ಅದನ್ನು ಕಂಡು ಕ್ರಿಕೆಟ್​ಪ್ರಿಯರು ಆ ಕಾಲದ ನೆನಪುಗಳಿಗೆ ಜಾರಿದ್ದಾರೆ.

ಇಂಡಿಯಾ ವರ್ಸಸ್​ ಪಾಕಿಸ್ತಾನದ ಆ ಪಂದ್ಯ ಬೆಂಗಳೂರಿನಲ್ಲಿ ನಡೆದಿತ್ತು. 15ನೇ ಓವರ್​ನಲ್ಲಿ ವೆಂಕಟೇಶ್​ ಪ್ರಸಾದ್​ ಬೌಲಿಂಗ್​ ಮಾಡುತ್ತಿದ್ದರು. ಆ ಓವರ್​ನ 5ನೇ ಬಾಲ್​ಗೆ ಆಮೇರ್​ ಸೊಹೇಲ್​ ಬೌಂಡರಿ ಬಾರಿಸಿದರು. ಅಲ್ಲದೆ, ‘ನಿಮ್ಮನ್ನೂ ಅಲ್ಲಿಗೆ ಕಳಿಸಿಬಿಡುತ್ತೇನೆ’ ಎಂಬ ಅರ್ಥದಲ್ಲಿ ವೆಂಕಟೇಶ್​ ಪ್ರಸಾದ್​ಗೆ ದಾರಿ ತೋರಿಸಿದರು! ಇಬ್ಬರ ನಡುವಿನ ಕ್ಲ್ಯಾಶ್​ಗೆ ಇದು ಕಾರಣ ಆಯಿತು. ಆದರೇ ಅದೇ ಓವರ್​ನ ನೆಕ್ಸ್ಟ್​​ ಬಾಲ್​ಗೆ ಆಮೇರ್​ ಸೊಹೇಲ್​ರನ್ನು ವೆಂಕಟೇಶ್​ ಪ್ರಸಾದ್​ ಕ್ಲೀನ್​ ಬೌಲ್ಡ್​ ಮಾಡಿದರು! ಆ ಮೂಲಕ ಆಮೇರ್​ ಸೊಹೇಲ್​ನ ಪೊಗರಿಗೆ ವೆಂಕಟೇಶ್​ ಪ್ರಸಾದ್​ ಖಾರವಾದ ತಿರುಗೇಟು ನೀಡಿದ್ದರು!

ಆ ಘಟನೆಯನ್ನು ಮತ್ತೆ ನೆನಪಿಸಿಕೊಳ್ಳುವ ಮೂಲಕ ‘ನಾನು ಕೂಡ ಇಂದಿರಾನಗರದ ಗೂಂಡಾ’ ಎಂದು ವೆಂಕಟೇಶ್​ ಪ್ರಸಾದ್​ ಟ್ವೀಟ್​ ಮಾಡಿದ್ದಾರೆ. ಇದಕ್ಕೆ ನೆಟ್ಟಿಗರು ಹಲವು ಬಗೆಯಲ್ಲಿ ಕಾಮೆಂಟ್​ ಮಾಡುತ್ತಿದ್ದಾರೆ.

‘ಆ ಘಟನೆ ನಡೆದ ಬಳಿಕ ಆಮೇರ್​ ಸೊಹೇಲ್ ಅವರು ಯಾರಿಗೂ ಈ ರೀತಿ ದಾರಿ ತೋರಿಸುವ ಧೈರ್ಯ ಮಾಡಲಿಲ್ಲ. ಒಂದು ವೇಳೆ ಯಾರಿಗಾದರೂ ಅಡ್ರೆಸ್​ ಹೇಳುವುದಿದ್ದರೂ ಕೂಡ ಅವರು ಹಿಂದೇಟು ಹಾಕಲು ಶುರು ಮಾಡಿದರು. ಯಾಕೆಂದರೆ ಕಳೆದ ಬಾರಿ ತಾವು ವೆಂಕಟೇಶ್​ ಪ್ರಸಾದ್​ಗೆ ದಾರಿ ತೋರಿಸಿದ್ದಕ್ಕೆ ತಮಗೆ ಎಂಥ ಗತಿ ಬಂತು ಎಂಬುದು ಅವರಿಗೆ ಪದೇಪದೇ ನೆನಪಾಗುತ್ತಿತ್ತು’ ಎಂದು ಜನರು ಕಾಮೆಂಟ್​ ಮಾಡಿದ್ದಾರೆ.

ಇನ್ನು, ವೆಂಕಟೇಶ್​ ಪ್ರಸಾದ್​ ಅವರ ಈ ಟ್ವೀಟ್​ಗೆ ಕೆಲವರು ಕುಹಕ ಮಾಡಿದ್ದಾರೆ. ‘ವೆಂಕಟೇಶ್​ ಪ್ರಸಾದ್​ ಅವರು ತಮ್ಮ ಕರಿಯರ್​ನಲ್ಲಿ ಮಾಡಿದ ಸಾಧನೆ ಇದೊಂದೇ’ ಎಂದು ನಜೀಬ್​ ಎನ್ನುವವರು ಕಾಮೆಂಟ್​ ಮಾಡಿದ್ದರು. ಅದಕ್ಕೂ ಕೂಡ ವೆಂಕಟೇಶ್​ ಪ್ರಸಾದ್​ ಸೂಕ್ತ ತಿರುಗೇಟು ನೀಡಿದ್ದಾರೆ. ‘ಅಷ್ಟೇ ಅಲ್ಲ ನಜೀವ್​ ಭಾಯ್​… ಆ ಬಳಿಕ ಇನ್ನಷ್ಟು ಸಾಧನೆ ಮಾಡಿದ್ದೇನೆ. ಇಂಗ್ಲೆಂಡ್​ನಲ್ಲಿ ನಡೆದ 1999ರ ವರ್ಲ್ಡ್​ ಕಪ್​ನಲ್ಲಿ ಪಾಕಿಸ್ತಾನದ ವಿರುದ್ಧದ ಮ್ಯಾಚ್​ನಲ್ಲಿ 27 ರನ್​ಗೆ 5 ವಿಕೆಟ್​ ಪಡೆದಿದ್ದೆ. ಅವರಿಗೆ 228 ರನ್​ ಚೇಸ್​ ಮಾಡಲು ಸಾಧ್ಯವಾಗಿರಲಿಲ್ಲ. ದೇವರು ನಿಮಗೆ ಒಳ್ಳೆಯದು ಮಾಡಲಿ’ ಎಂದು ವೆಂಕಟೇಶ್​ ಪ್ರಸಾದ್​ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: Rahul Dravid: ದ್ರಾವಿಡ್​ ನಟಿಸಬಹುದಾದ 8 ಕನ್ನಡ ಸಿನಿಮಾಗಳು! ಟೈಟಲ್​ ಕೇಳಿ ನಗುತ್ತಿರುವ ನೆಟ್ಟಿಗರು

Indira Nagar Ka Gunda: ದ್ರಾವಿಡ್​​ ಬಳಿಕ ನಾನೇ ಇಂದಿರಾ ನಗರದ ಗೂಂಡಾ ಎನ್ನುತ್ತಿದ್ದಾರೆ ದೀಪಿಕಾ ಪಡುಕೋಣೆ!

(After Rahul Dravid now Venkatesh Prasad says Indira Nagar Ka Gunda Hu Mai and one more video goes Viral)