‘ಆಸೆ’ ಧಾರಾವಾಹಿ ತಂಡದ ಬಗ್ಗೆ ಗಂಭೀರ ಆರೋಪ ಮಾಡಿದ್ರಾ ಅಮೃತಾ ರಾಮಮೂರ್ತಿ?

ನಟಿ ಅಮೃತಾ ರಾಮಮೂರ್ತಿ ಜನಪ್ರಿಯ ಧಾರಾವಾಹಿಯೊಂದನ್ನು ತೊರೆದ ಕಾರಣ ಬಹಿರಂಗಪಡಿಸಿದ್ದಾರೆ. ಧಾರಾವಾಹಿ ಸೆಟ್‌ನಲ್ಲಿ ಸರಿಯಾದ ಮೂಲಭೂತ ಸೌಕರ್ಯಗಳ ಕೊರತೆ, ಅದರಲ್ಲೂ ಹೆಣ್ಣುಮಕ್ಕಳಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಇಲ್ಲದಿರುವುದು ಇದಕ್ಕೆ ಮುಖ್ಯ ಕಾರಣ. ವಿಲನ್ ಪಾತ್ರದ ವೈಯಕ್ತಿಕ ಪರಿಣಾಮ ಮತ್ತು ಮಾನಸಿಕ ಅಶಾಂತಿಯೂ ಅವರ ನಿರ್ಧಾರಕ್ಕೆ ಕಾರಣವಾಗಿತ್ತು.

‘ಆಸೆ’ ಧಾರಾವಾಹಿ ತಂಡದ ಬಗ್ಗೆ ಗಂಭೀರ ಆರೋಪ ಮಾಡಿದ್ರಾ ಅಮೃತಾ ರಾಮಮೂರ್ತಿ?
ಅಮೃತಾ

Updated on: Apr 30, 2026 | 10:14 AM

ನ್ಯೂಸ್ ಆ್ಯಂಕರ್ ಆಗಿ ವೃತ್ತಿ ಆರಂಭಿಸಿದ ಅಮೃತಾ ರಾಮಮೂರ್ತಿ (Amrutha Ramamoorthy) ಅವರು ನಂತರ ಕಿರುತೆರೆಯಲ್ಲಿ ಮಿಂಚಿದರು. ವಿಲನ್ ಪಾತ್ರಗಳ ಮೂಲಕ ಅವರು ಗಮನ ಸೆಳೆದರು. ಈಗ ಅವರು ಒಂದು ಜನಪ್ರಿಯ ಧಾರಾವಾಹಿ ತೊರೆದ ಬಗ್ಗೆ ಕಾರಣ ನೀಡಿದ್ದಾರೆ. ಧಾರಾವಾಹಿ ಸೆಟ್ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ಥವಾಗಿ ಇರುತ್ತಿತ್ತು ಎಂದು ಹೇಳಿದ್ದಾರೆ. ಅವರು ಧಾರಾವಾಹಿ ಹೆಸರನ್ನು ಎಲ್ಲಿಯೂ ಹೇಳಿಲ್ಲ. ಅನೇಕರು ಇದು ‘ಆಸೆ’ ಧಾರಾವಾಹಿ ಇರಬಹುದು ಎಂದು ಊಹಿಸಿದ್ದಾರೆ. ಅವರು ನೀಡಿರುವ ಮಾಹಿತಿ ‘ಆಸೆ’ ಧಾರಾವಾಹಿಯನ್ನು ಹೋಲುತ್ತಿದೆ ಎಂದಿದ್ದಾರೆ.

ನ್ಯೂಸೋ ನ್ಯೂಸು ಚಾನೆಲ್​​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಮೃತಾ, ‘ಮಗು ಜನಿಸಿದ ಬಳಿಕ ನೆಗೆಟಿವ್ ಪಾತ್ರವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದೆ. ಅದು ಜನಪ್ರಿಯತೆ ತಂದುಕೊಟ್ಟಿದೆ ಎಂಬುದು ನಿಜ. ಆದರೆ, ಆ ಪಾತ್ರ ನನ್ನ ವ್ಯಕ್ತಿತ್ವಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿ ಇರುತ್ತಿತ್ತು. ಒಂದು ಧಾರಾವಾಹಿ ನನ್ನ ಮೇಲೆ ತುಂಬಾನೇ ಪ್ರಭಾವ ಬೀರಿದೆ’ ಎಂದು ಹೇಳಿಕೊಂಡಿದ್ದಾರೆ.

‘ನೀವು ಯಾಕೆ ಅಷ್ಟು ಸುಳ್ಳು ಹೇಳ್ತೀರಾ’ ಎಂದು ಅಮೃತಾ ರಾಮಮೂರ್ತಿ ಅವರಿಗೆ ಯಾರೋ ಬಂದು ಕೇಳಿದ್ದರಂತೆ. ಅದು ಕೂಡ ಮಗುವಿನ ಎದುರಿಗೆ. ಇದು ಅಮೃತಾ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು. ಸೋಶಿಯಲ್ ಮೀಡಿಯಾದಲ್ಲಿ ಅವರ ಮಗುವಿನ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದರಂತೆ. ‘ಇದು ನಿಜಕ್ಕೂ ಮನೋಜನ (ಆಸೆ ಧಾರಾವಾಹಿಯಲ್ಲಿ ಅಮೃತಾ ಮಾಡಿದ್ದ ರೋಹಿಣಿ ಪಾತ್ರಧಾರಿಯ ಪತಿ ಪಾತ್ರದ ಹೆಸರು ಮನೋಜ್) ಮಗುವಾ’ ಎಂದು ಪ್ರಶ್ನೆ ಮಾಡುತ್ತಿದ್ದಂತೆ. ಧಾರಾವಾಹಿ ಪಾತ್ರ ಎಷ್ಟು ಪ್ರಭಾವ ಬೀರುತ್ತಿದೆ ಎಂಬುದು ಅವರಿಗೆ ಆಗ ಅರಿವಾಗಿತ್ತು. ‘ನನಗೂ ವೈಯಕ್ತಿಕ ಜೀವನ ಇದೆ’ ಎಂದು ಅವರು ಹೇಳಿದ್ದಾರೆ.

YouTube video player

‘ಆ ಧಾರಾವಾಹಿಯಲ್ಲಿ ಕಂಫರ್ಟ್ ಇರಲಿಲ್ಲ. ವ್ಯವಸ್ಥೆ ಸರಿ ಇರಲಿಲ್ಲ. ಹೀಗಾಗಿ, ನಾನು ಬಿಡುವ ನಿರ್ಧಾರ ಮಾಡಿದೆ. ಬಿಡಲು ಕಾರಣ ಲಿಸ್ಟ್ ಮಾಡಿದೆ. ಬಿಡಬೇಕು ಎಂಬ ಕಾರಣ ತುಂಬಾನೇ ದೊಡ್ಡದಿತ್ತು. ಕಥೆ ಹೀರೋ ಹಾಗೂ ವಿಲನ್ ಪಾತ್ರದ ಮೇಲೆ ಸಾಗುತ್ತಿತ್ತು. ಆದರೂ ನಾನು ಬಿಡೋಣ ಎಂದು ನಿರ್ಧರಿಸಿದೆ’ ಎಂದಿದ್ದಾರೆ ಅಮೃತಾ.

ಇದನ್ನೂ ಓದಿ: ಅಮೃತಾ ರಾಮಮೂರ್ತಿ ಫಿಟ್ನೆಸ್ ಜರ್ನಿ ಎಷ್ಟು ಟಫಿತ್ತು ನೋಡಿ

‘ಒಂದು ಬಾತ್​​ರೂಂ ಹೆಣ್ಣುಮಕ್ಕಳಿಗೆ ಪ್ರತ್ಯೇಕವಾಗಿ ಕೊಡಿ ಎಂದು ಕೇಳುತ್ತಿದ್ದೆ. ಆದರೆ, ಕೊಡಲಿಲ್ಲ. ಅದು ಪ್ರಮುಖ ಧಾರಾವಾಹಿ ಆಗಿತ್ತು. ಆ ಧಾರಾವಾಹಿ ಆದ ಬಳಿಕ ನಾನು ಕಿರುತೆರೆ ತೊರೆಯುವ ನಿರ್ಧಾರ ಮಾಡಿದ್ದೆ’ ಎಂದು ಹೇಳಿದ್ದಾರೆ. ಸದ್ಯ ಅಮೃತಾ ಅವರು ಉದಯ ಟಿವಿಯಲ್ಲಿ ಧಾರಾವಾಹಿ ಮಾಡುತ್ತಿದ್ದಾರೆ. ಅಲ್ಲಿಯೂ ಅವರದ್ದು ವಿಲನ್ ಪಾತ್ರ ಅನ್ನೋದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us