AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​​ಬಾಸ್ ಕನ್ನಡ 12: ಉತ್ತಮ ಸ್ಪರ್ಧಿಯೇ ಹೊರಕ್ಕೆ, ಒಳ್ಳೆಯವರಿಗಿದು ಕಾಲವಲ್ಲ ಬಿಡಿ

Bigg Boss Kannada 12: ಬಿಗ್​​ಬಾಸ್ ಮನೆ ಒಳ್ಳೆಯವರಿಗಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇತರರಿಗೆ ಮನನೋಯಿಸದೆ, ಅನವಶ್ಯಕ ಮಾತುಗಳನ್ನಾಡದೆ, ಅನವಶ್ಯಕ ಜಗಳ ಮಾಡದೆ, ಎಲ್ಲರನ್ನೂ ಗೌರವಿಸುತ್ತಾ, ನಾಟಕೀಯತೆ ಪ್ರದರ್ಶಿಸದೆ ಜಂಟಲ್​​ಮನ್ ಗೇಮ್ ಆಡುತ್ತಿದ್ದ ಒಳ್ಳೆಯ ಸ್ಪರ್ಧಿ ಈ ವಾರ ಮನೆಯಿಂದ ಹೊರಗೆ ಹೋಗಿದ್ದಾರೆ.

ಬಿಗ್​​ಬಾಸ್ ಕನ್ನಡ 12: ಉತ್ತಮ ಸ್ಪರ್ಧಿಯೇ ಹೊರಕ್ಕೆ, ಒಳ್ಳೆಯವರಿಗಿದು ಕಾಲವಲ್ಲ ಬಿಡಿ
Bigg Boss Kannada 12
ಮಂಜುನಾಥ ಸಿ.
|

Updated on: Dec 07, 2025 | 10:52 PM

Share

ಜೋರಾಗಿ ಗದ್ದಲ ಮಾಡುವವರಿಗೆ, ಸುಖಾ ಸುಮ್ಮನೆ ಜಗಳ ಮಾಡುವವರಿಗೆ, ನಾಟಕೀಯತೆ ಪ್ರದರ್ಶಿಸುವವರಿಗೆ, ಎಲ್ಲ ಭಾವನೆಗಳನ್ನು ಅತಿಯಾಗಿ ತೋರ್ಪಡಿಸಿಕೊಳ್ಳುವವರಿಗೆ, ಸುಖಾ ಸುಮ್ಮನೆ ಮಾತನಾಡುವವರಿಗಷ್ಟೆ ಬಿಗ್​​ಬಾಸ್ (Bigg Boss) ಮನೆಯಲ್ಲಿ ಪ್ರಾಮುಖ್ಯತೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಶಾಂತವಾಗಿದ್ದು, ಪರಿಸ್ಥಿತಿಗೆ ತಕ್ಕಂತೆ ವರ್ತಿಸುತ್ತಾ, ಇತರರಿಗೆ ಮನನೋಯಿಸದೆ, ಅನವಶ್ಯಕ ಮಾತುಗಳನ್ನಾಡದೆ, ಅನವಶ್ಯಕ ಜಗಳ ಮಾಡದೆ, ಎಲ್ಲರಿಗೂ ಗೌರವಿಸುತ್ತಾ, ನಾಟಕೀಯತೆ ಪ್ರದರ್ಶಿಸದೆ ಜಂಟಲ್​​ಮನ್ ಗೇಮ್ ಆಡುತ್ತಿದ್ದ ಒಳ್ಳೆಯ ಸ್ಪರ್ಧಿ ಈ ವಾರ ಮನೆಯಿಂದ ಹೊರಗೆ ಹೋಗಿದ್ದಾರೆ. ಆ ಮೂಲಕ ಬಿಗ್​​ಬಾಸ್ ಮನೆ ಒಳ್ಳೆಯವರಿಗಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಆರಂಭದಿಂದಲೂ ತಮ್ಮ ಒಳ್ಳೆಯತನದಿಂದ ಸೆಳೆದಿದ್ದ ಅಭಿಷೇಕ್ ಅವರು ಈ ವಾರ ಬಿಗ್​​ಬಾಸ್ ಮನೆಯಿಂದ ಹೊರಗೆ ಹೋಗಿದ್ದಾರೆ. ಅಭಿಷೇಕ್ ಅವರು ಈ ವಾರ ಚೆನ್ನಾಗಿ ಆಟವಾಡಿ ಎರಡನೇ ಬಾರಿ ಕ್ಯಾಪ್ಟನ್ ಸಹ ಆಗಿದ್ದರು. ಆದರೆ ಗಿಲ್ಲಿ ಮಾಡಿದ ತರ್ಲೆ ಕೆಲಸದಿಂದ ಅವರ ಕ್ಯಾಪ್ಟೆನ್ಸಿ ಹೋಗಿದ್ದು ಮಾತ್ರವಲ್ಲದೆ. ಈಗ ಅವರು ಬಿಗ್​​ಬಾಸ್ ಮನೆಯಿಂದಲೇ ಹೊರಗೆ ಹೋಗಿದ್ದಾರೆ.

ಈ ವಾರ ಸಾಕಷ್ಟು ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಗಿಲ್ಲಿ, ಕಾವ್ಯಾ, ಅಶ್ವಿನಿ, ಧ್ರುವಂತ್, ಧನುಶ್, ಸೂರಜ್, ಮಾಳು, ರಾಶಿಕಾ, ಸ್ಪಂದನಾ ಅವರುಗಳು ಈ ವಾರ ನಾಮಿನೇಟ್ ಆಗಿದ್ದರು. ಎಲ್ಲರೂ ಸೇಫ್ ಆಗಿ ಕೊನೆಯದಾಗಿ ಸೂರಜ್, ಮಾಳು ಮತ್ತು ಅಭಿಷೇಕ್ ಮಾತ್ರವೇ ಉಳಿದುಕೊಂಡರು. ಅವರು ಮೂವರನ್ನೂ ಆಕ್ಟಿವಿಟಿ ರೂಂಗೆ ಕಳಿಸಲಾಯ್ತು. ಮೂವರ ಮುಂದೆ ಸೂಟ್​ಕೇಸ್ ಇಡಲಾಗಿತ್ತು. ಸೂಟ್​​ಕೇಸ್​​ನಲ್ಲಿ ಅವರ ಎವಿಕ್ಷನ್​​ಗೆ ಸಂಬಂಧಿಸಿದ ಬೋರ್ಡ್ ಇಡಲಾಗಿತ್ತು. ಅಭಿಷೇಕ್ ಅವರ ಸೂಟ್​ಕೇಸ್​​ನಲ್ಲಿ ‘ದಿ ಎಂಡ್’ ಎಂದು ಬರೆದಿತ್ತು. ಅಲ್ಲಿಗೆ ಅಭಿಷೇಕ್ ಅವರ ಆಟ ಅಂತ್ಯವಾಯ್ತು.

ಇದನ್ನೂ ಓದಿ:ಆ ಒಂದು ಆರೋಪಕ್ಕೆ ಬಿಗ್​​ಬಾಸ್ ವೇದಿಕೆ ಮೇಲೆ ಉತ್ತರ ನೀಡಿದ ಕಿಚ್ಚ

ಅಭಿಷೇಕ್ ಅವರು ಬಿಗ್​​ಬಾಸ್ ಸೀಸನ್ 12ರ ಜಂಟಲ್​​ಮ್ಯಾನ್ ಆಗಿದ್ದರು. ಚೆನ್ನಾಗಿ ಟಾಸ್ಕ್ ಆಡುತ್ತಿದ್ದರು. ಮನೆಯ ನಿಯಮಗಳನ್ನು ಮೀರುತ್ತಿರಲಿಲ್ಲ. ಯಾರೊಟ್ಟಿಗೂ ಜಗಳ ಮಾಡುತ್ತಿರಲಿಲ್ಲ. ಯಾರ ಬಗ್ಗೆಯೂ ವಿನಾ ಕಾರಣ ಮಾತನಾಡುತ್ತಿರಲಿಲ್ಲ. ಯಾರ ಬೆನ್ನ ಹಿಂದೆಯೂ ನಿಂದನೆ ಮಾಡುತ್ತಿರಲಿಲ್ಲ. ದರ್ಪ ತೋರಿಸುತ್ತಿರಲಿಲ್ಲ, ಹಾಸ್ಯದ ಹೆಸರಲ್ಲಿ ತೇಜೋವಧೆ ಮಾಡುತ್ತಿರಲಿಲ್ಲ. ಒಟ್ಟಾರೆ ಒಬ್ಬ ಜಂಟಲ್​​ಮ್ಯಾನ್ ರೀತಿ ಬಿಗ್​​ಬಾಸ್ ಮನೆಯಲ್ಲಿದ್ದರು. ಆದರೆ ಅದೇ ಅವರಿಗೆ ಮುಳುವಾಯ್ತು. ಅಭಿಷೇಕ್ ಅವರು ಹೊರಗೆ ಬಂದ ಮೇಲೂ ಸಹ ಸುದೀಪ್ ಅವರು, ‘ನೀವೊಬ್ಬ ಒಳ್ಳೆಯ ವ್ಯಕ್ತಿ’ ಎಂದು ಬೆನ್ನುತಟ್ಟಿದರು. ಅಲ್ಲದೆ, ನೀವು ಹೊರಗೆ ಇದ್ದಂತೆ ಬಿಗ್​​ಬಾಸ್ ಮನೆಯಲ್ಲಿ ಇದ್ದಿರಿ ಬಹುಷಃ ಹಾಗೆ ಇರಬಾರದಿತ್ತೇನೋ ಎಂದರು. ಏನೇ ಆಗಲಿ ಒಬ್ಬ ಒಳ್ಳೆಯ ಸ್ಪರ್ಧಿ ಬಿಗ್​​ಬಾಸ್ ಮನೆಯಿಂದ ಹೊರಗೆ ಹೋಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ