ಬಿಗ್​ ಬಾಸ್ ಸ್ಪರ್ಧಿಗಳಿಗೆ​ ಚಿತ್ರ-ವಿಚಿತ್ರ ಅವಾರ್ಡ್​; ಚಕ್ರವರ್ತಿಗೆ ಬ್ಲೇಡ್​ ರಾಜ ಪ್ರಶಸ್ತಿ

Bigg Boss Kannada: ಬಿಗ್​ ಬಾಸ್​ ಮನೆಯಲ್ಲಿ ಸದಾ ಕಾಲ ಮಿಂಚುತ್ತಲೇ ಇರುವವರು ಯಾರು ಎಂಬ ಪ್ರಶ್ನೆಗೆ ಹೆಚ್ಚು ಜನರು ದಿವ್ಯಾ ಸುರೇಶ್​ ಹೆಸರನ್ನು ಸೂಚಿಸಿದರು. ಹಾಗಾಗಿ ಅವರಿಗೆ ಮಿಂಚಿಂಗ್​ ಸ್ಟಾರ್​ ಪ್ರಶಸ್ತಿ ನೀಡಲಾಯಿತು.

ಬಿಗ್​ ಬಾಸ್ ಸ್ಪರ್ಧಿಗಳಿಗೆ​ ಚಿತ್ರ-ವಿಚಿತ್ರ ಅವಾರ್ಡ್​; ಚಕ್ರವರ್ತಿಗೆ ಬ್ಲೇಡ್​ ರಾಜ ಪ್ರಶಸ್ತಿ
ರಘು ಗೌಡ-ಚಕ್ರವರ್ತಿ ಚಂದ್ರಚೂಡ್

Updated on: May 10, 2021 | 7:11 AM

ಸತತ 70 ದಿನಗಳ ಕಾಲ ಪ್ರೇಕ್ಷಕರನ್ನು ರಂಜಿಸಿದ್ದ ‘ಬಿಗ್​ ಬಾಸ್​ ಕನ್ನಡ ಸೀಸನ್​ 8’ಕ್ಕೆ ತೆರೆಬೀಳುತ್ತಿದೆ. ಫಿನಾಲೆಗಾಗಿ ಕಾಯುತ್ತಿದ್ದ ಪ್ರೇಕ್ಷಕರಿಗೆ ನಿಜಕ್ಕೂ ಬೇಸರ ಆಗಿದೆ. 11 ಜನರು ಒಂದೇ ಬಾರಿಗೆ ದೊಡ್ಮನೆಯಿಂದ ಹೊರಬರಬೇಕಾದ ಪರಿಸ್ಥಿತಿ ಬಂದಿದೆ. ಕೊರೊನಾ ವೈರಸ್​ ಮಿತಿಮೀರಿ ಹರಡುತ್ತಿರುವುದರಿಂದ ಸರ್ಕಾರ ಕಠಿಣ ಲಾಕ್​ಡೌನ್​ ಜಾರಿ ಮಾಡಿದ್ದು ಅನಿವಾರ್ಯವಾಗಿ ಶೋ ಅರ್ಧಕ್ಕೆ ನಿಲ್ಲಿಸಲಾಗುತ್ತಿದೆ. ಅದರ ನಡುವೆಯೂ ಬಿಗ್​ ಬಾಸ್ ಕಡೆಯಿಂದ ಕೆಲವು ಫನ್ನಿ ಅವಾರ್ಡ್​ಗಳನ್ನು ನೀಡಲಾಗಿದೆ.​

ಬ್ಲೇಡ್​ ರಾಜ ಅವಾರ್ಡ್​

ಪದೇಪದೇ ಅತಿಯಾಗಿ ಮಾತನಾಡುತ್ತಾರೆ ಎಂಬ ಕಾರಣಕ್ಕೆ ಚಕ್ರವರ್ತಿ ಚಂದ್ರಚೂಡ್​ ಅವರ ಹೆಸರನ್ನು​ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಮಂಜು ಪಾವಗಡ, ಪ್ರಿಯಾಂಕಾ ತಿಮ್ಮೇಶ್​ ಸೇರಿದಂತೆ 9 ಜನರು ಚಕ್ರವರ್ತಿ ಹೆಸರನ್ನು ಶಿಫಾರನ್ನು ಮಾಡಿದ್ದರಿಂದ ಬ್ಲೇಡ್​ ರಾಜ ಪ್ರಶಸ್ತಿಯು ಚಕ್ರವರ್ತಿ ಚಂದ್ರಚೂಡ್​ ಪಾಲಾಯಿತು. ಅತಿ ಕಡಿಮೆ ಮಾತನಾಡುವ ಪ್ರಿಯಾಂಕಾ ತಿಮ್ಮೇಶ್​ ಅವರಿಂದ ಈ ಪ್ರಶಸ್ತಿಯನ್ನು ಕೊಡಿಸಲಾಯಿತು.

ಸ್ಲೋ ಮೋಷನ್​ ಸುಂದ್ರ​ ಯಾರು?

ಶಮಂತ್​, ನಿಧಿ ಮತ್ತು ರಘು ಗೌಡ ಹೆಸರು ಈ ಪ್ರಶಸ್ತಿಗೆ ನಾಮಿನೇಟ್​ ಆದವು. ಆದರೆ ರಘು ಗೌಡಗೆ ಹೆಚ್ಚು ಸ್ಪರ್ಧಿಗಳು ವೋಟ್​ ಮಾಡಿದ್ದರಿಂದ ಅವರಿಗೆ ಸ್ಲೋ ಮೋಷನ್​ ಸುಂದ್ರ ಎಂಬ ಪ್ರಶಸ್ತಿ ನೀಡಲಾಯಿತು. ಟಾಸ್ಕ್​ ಮಾಡುವಾಗ, ಮನೆ ಕೆಲಸ ಮಾಡುವಾಗ ಮತ್ತು ಮಾತನಾಡುವಾಗ ಕೂಡ ರಘು ಸಿಕ್ಕಾಪಟ್ಟೆ ಸ್ಲೋ ಎಂಬುದನ್ನು ಎಲ್ಲರೂ ಒತ್ತಿ ಹೇಳಿದರು. ಮನೆಯಲ್ಲಿ ಅತಿ ಸ್ಪೀಡ್​ ಆಗಿರುವ ಪ್ರಶಾಂತ್​ ಸಂಬರಗಿ ಅವರು ಈ ಪ್ರಶಸ್ತಿಯನ್ನು ರಘುಗೆ ಪ್ರದಾನ ಮಾಡಿದರು.

ಮಿಂಚಿಂಗ್​ ಸ್ಟಾರ್​ ದಿವ್ಯಾ

ಬಿಗ್​ ಬಾಸ್​ ಮನೆಯಲ್ಲಿ ಸದಾ ಕಾಲ ಮಿಂಚುತ್ತಲೇ ಇರುವವರು ಯಾರು ಎಂಬ ಪ್ರಶ್ನೆಗೆ ಹೆಚ್ಚು ಜನರು ದಿವ್ಯಾ ಸುರೇಶ್​ ಹೆಸರನ್ನು ಸೂಚಿಸಿದರು. ಹಾಗಾಗಿ ಅವರಿಗೆ ಮಿಂಚಿಂಗ್​ ಸ್ಟಾರ್​ ಪ್ರಶಸ್ತಿ ನೀಡಲಾಯಿತು. ಇನ್ನೂ ಕೆಲವು ಅವಾರ್ಡ್​ಗಳು ಕಾಯುತ್ತಿವೆ. ಮೇ 10ರ ಎಪಿಸೋಡ್​ನಲ್ಲಿ ಆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.

ಇದನ್ನೂ ಓದಿ: 

ಚಕ್ರವರ್ತಿ ತೆಗೆದುಕೊಂಡ ಆ ಒಂದು ನಿರ್ಧಾರ ಅವರ ಬಿಗ್​ ಬಾಸ್​ ಜರ್ನಿಯನ್ನೇ ಬದಲಾಯಿಸಿತು

ನನ್ನನ್ನು ವೇಶ್ಯೆ ಮನೆಯಲ್ಲಿ ಕೆಲಸಕ್ಕೆ ಬಿಟ್ಟಿದ್ದರು; ಭಯಾನಕ ಘಟನೆ ಬಗ್ಗೆ ಹೇಳಿಕೊಂಡ ಚಕ್ರವರ್ತಿ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us