AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ ಸೋಮವಾರವೂ ಮುಂದುವರಿಯಲಿದೆ; ಭಾನುವಾರದ ಎಪಿಸೋಡ್​ನಲ್ಲಿತ್ತು ಟ್ವಿಸ್ಟ್​

ಕೊರೊನಾ ವೈರಸ್ ಕಾಟ ಹೆಚ್ಚುತ್ತಿದೆ. ಹೀಗಾಗಿ ಸರ್ಕಾರ 14 ದಿನಗಳ ಲಾಕ್​ಡೌನ್​ ಘೋಷಣೆ ಮಾಡಿದೆ. ಮೇ 10ರಿಂದ 14 ದಿನಗಳ ಕಾಲ ಕರ್ನಾಟಕ ಬಂದ್​ ಆಗುತ್ತಿದೆ.

ಬಿಗ್​ ಬಾಸ್​ ಸೋಮವಾರವೂ ಮುಂದುವರಿಯಲಿದೆ; ಭಾನುವಾರದ ಎಪಿಸೋಡ್​ನಲ್ಲಿತ್ತು ಟ್ವಿಸ್ಟ್​
ಬಿಗ್​ ಬಾಸ್​ ಕನ್ನಡ
ರಾಜೇಶ್ ದುಗ್ಗುಮನೆ
| Edited By: |

Updated on:May 10, 2021 | 12:14 PM

Share

ಸಾಮಾನ್ಯವಾಗಿ ಬಿಗ್​ ಬಾಸ್​ ಆರಂಭವಾಗುವುದು ಹಾಗೂ ಕೊನೆಯಾಗುವುದು ಭಾನುವಾರವೇ. ಇದು ಮೊದಲಿನಿಂದಲೂ ನಡೆದುಕೊಂಡು ಬಂದ ವಾಡಿಕೆ. ಈ ಬಾರಿ ಬಿಗ್​ ಬಾಸ್​ ಅರ್ಧಕ್ಕೆ ನಿಲ್ಲುತ್ತಿದ್ದರೂ ಭಾನುವಾರವೇ ಕೊನೆಯಾಗಲಿದೆ ಎಂದು ಭಾವಿಸಲಾಗಿತ್ತು. ಆದರೆ, ಭಾನುವಾರದ ಎಪಿಸೋಡ್​ನಲ್ಲಿ ಟ್ವಿಸ್ಟ್​ ಒಂದನ್ನು ನೀಡಲಾಗಿದೆ. ಬಿಗ್​ ಬಾಸ್​ ಸೋಮವಾರವೂ ಮುಂದುವರಿಯಲಿದೆ. ಹಾಗಂತ ಶೂಟಿಂಗ್​ ಮುಂದುವರಿಯುತ್ತಿಲ್ಲ. ಭಾನುವಾರ (ಮೇ 9) ಶೂಟ್​ ಮಾಡಲಾದ ಎಪಿಸೋಡ್​ ಮೇ 10, 11 ಮತ್ತು 12ರಂದು ಪ್ರಸಾರವಾಗಲಿದೆ.

ಕೊರೊನಾ ವೈರಸ್ ಕಾಟ ಹೆಚ್ಚುತ್ತಿದೆ. ಹೀಗಾಗಿ ಸರ್ಕಾರ 14 ದಿನಗಳ ಲಾಕ್​ಡೌನ್​ ಘೋಷಣೆ ಮಾಡಿದೆ. ಮೇ 10ರಿಂದ 14 ದಿನಗಳ ಕಾಲ ಕರ್ನಾಟಕ ಬಂದ್​ ಆಗುತ್ತಿದೆ. ಈ ಅವಧಿಯಲ್ಲಿ ಸಿನಿಮಾ, ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳ ಚಿತ್ರೀಕರಣ ನಿಲ್ಲಲಿದೆ. ಇದರಿಂದ ಬಿಗ್​ ಬಾಸ್​ ಶೂಟಿಂಗ್​ ಭಾನುವಾರವೇ ಪೂರ್ಣಗೊಂಡಿದೆ.

ಹೌದು, ಭಾನುವಾರ ಶೂಟಿಂಗ್​ ನಡೆಸಿ ಬಿಗ್​ ಬಾಸ್​ ಸ್ಪರ್ಧಿಗಳನ್ನು ಮನೆಯಿಂದ ಹೊರಗೆ ಕಳುಹಿಸಲಾಗಿದೆ. ಆದರೆ, ಟಿವಿಯಲ್ಲಿ ಪ್ರಸಾರ ಮಾಡುವಾಗ ಕೊಂಚ ವಿಳಂಬ ಮಾಡಲಾಗಿದೆ. ಭಾನುವಾರ ಕೆಲವೇ ಕೆಲವು ವಿಚಾರಗಳನ್ನು ತೋರಿಸಲಾಗಿದೆ. ಮಂಗಳವಾರ ಮತ್ತು ಬುಧವಾರದ ಎಪಿಸೋಡ್​ನಲ್ಲಿ ಬಿಗ್​ ಬಾಸ್ ಸ್ಪರ್ಧಿಗಳು​ ಮನೆಯಿಂದ ಹೊರ ಹೋಗುವುದನ್ನು ತೋರಿಸಲಾಗುತ್ತದೆ.

ಭಾನುವಾರ ಸೀಸನ್​​ ಪೂರ್ಣಗೊಳ್ಳಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಹೀಗಾಗಿ ಎಲ್ಲರೂ ಟಿವಿ ಮುಂದೆ ಕುಳಿತಿದ್ದರು. ಆದರೆ, ಅರ್ಧಕ್ಕೆ ಎಪಿಸೋಡ್​ ಪೂರ್ಣಗೊಂಡಿದೆ. ಬುಧವಾರ ಅಂತಿಮವಾಗಿ ಬಿಗ್​ ಬಾಸ್​ ಮನೆಯಿಂದ ಸ್ಪರ್ಧಿಗಳು ಹೊರ ಹೋಗುವುದನ್ನು ತೋರಿಸಲಾಗುವುದು. ಇದಕ್ಕೂ ಮೊದಲು ಸ್ಪರ್ಧಿಗಳಿಗೆ ವಿಡಿಯೋ ಮೂಲಕ ಹೊರ ಜಗತ್ತಿನಲ್ಲಿ ಏನಾಗುತ್ತಿದೆ ಎಂಬುದನ್ನು ವಿಡಿಯೋ ಮೂಲಕ ತಿಳಿಸಲಾಗುತ್ತದೆ.

2021ರ ಆರಂಭದಲ್ಲಿ ಕರ್ನಾಟಕದಲ್ಲಿ ಕೊರೊನಾ ವೈರಸ್​ ನಿಯಂತ್ರಣದಲ್ಲಿತ್ತು. ಈ ಕಾರಣಕ್ಕೆ ಕಲರ್ಸ್​ ಕನ್ನಡ ವಾಹಿನಿ ಬಿಗ್​ ಬಾಸ್ ಕನ್ನಡ​ ಸೀಸನ್​ 8 ಆರಂಭಿಸಿತ್ತು. ಫೆಬ್ರವರಿ 28ರಂದು ಸೀಸನ್​ 8 ಗ್ರ್ಯಾಂಡ್​ ಓಪನಿಂಗ್​ ಪಡೆದುಕೊಂಡಿತ್ತು. ಆದರೆ, ಮಾರ್ಚ್​​ ನಂತರದಲ್ಲಿ ಕೊರೊನಾ ಕೇಸ್​ ಮಿತಿಮೀರುತ್ತಿದೆ. ಹೀಗಾಗಿ, ಸರ್ಕಾರ ಕಠಿಣ ಲಾಕ್​ಡೌನ್​ ಘೋಷಣೆ ಮಾಡಿದೆ. ಇದರಿಂದ ಬಿಗ್​ ಬಾಸ್​ ಸೀಸನ್​ 8ಅನ್ನು ವಾಹಿನಿ ಅರ್ಧಕ್ಕೆ ನಿಲ್ಲಿಸುವ ನಿರ್ಧಾರ ಕೈಗೊಂಡಿದೆ.

ಇದನ್ನೂ ಓದಿ: Bigg Boss Kannada: ಬಿಗ್​ ಬಾಸ್​ ರದ್ದು; ವಿನ್ನರ್​ ಯಾರು ಎಂದು ತೀರ್ಮಾನ ಮಾಡಿದ ಪ್ರೇಕ್ಷಕರು

Published On - 10:47 pm, Sun, 9 May 21

ಬುದ್ಧಿ ಕಲಿಯುತ್ತಿಲ್ಲ ಗಿಲ್ಲಿ, ಕಾವ್ಯಾಗಾಗಿ ಸ್ಪಂದನಾಗೆ ಅನ್ಯಾಯ
ಬುದ್ಧಿ ಕಲಿಯುತ್ತಿಲ್ಲ ಗಿಲ್ಲಿ, ಕಾವ್ಯಾಗಾಗಿ ಸ್ಪಂದನಾಗೆ ಅನ್ಯಾಯ
ಖಾಸಗಿ ಬಸ್​​ಗಳ ನಡುವೆ ರೇಸ್​​: ಕೂದಲೆಳೆ ಅಂತರದಲ್ಲಿ ತಪ್ಪಿದ ದೊಡ್ಡ ಅನಾಹುತ
ಖಾಸಗಿ ಬಸ್​​ಗಳ ನಡುವೆ ರೇಸ್​​: ಕೂದಲೆಳೆ ಅಂತರದಲ್ಲಿ ತಪ್ಪಿದ ದೊಡ್ಡ ಅನಾಹುತ
ಕೇರಳ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಡಿಸಿಎಂ ಡಿಕೆ ಶಿವಕುಮಾರ್
ಕೇರಳ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಡಿಸಿಎಂ ಡಿಕೆ ಶಿವಕುಮಾರ್
ವಿದ್ಯಾರ್ಥಿಗಳ ಕೈಯಲ್ಲಿ ಕಾರು ತೊಳೆಸಿದ ಶಿಕ್ಷಕ
ವಿದ್ಯಾರ್ಥಿಗಳ ಕೈಯಲ್ಲಿ ಕಾರು ತೊಳೆಸಿದ ಶಿಕ್ಷಕ
ತೆಲಂಗಾಣದ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿಯ ಮೇಲೆ ವಾರ್ಡನ್ ದರ್ಪ
ತೆಲಂಗಾಣದ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿಯ ಮೇಲೆ ವಾರ್ಡನ್ ದರ್ಪ
ಮಾಳು, ಸೂರಜ್ ಎಲಿಮಿನೇಷನ್ ಬಗ್ಗೆ ರಕ್ಷಿತಾಗೆ ಮೊದಲೇ ಗೊತ್ತಿತ್ತು?
ಮಾಳು, ಸೂರಜ್ ಎಲಿಮಿನೇಷನ್ ಬಗ್ಗೆ ರಕ್ಷಿತಾಗೆ ಮೊದಲೇ ಗೊತ್ತಿತ್ತು?
ಹೊಸ ವರ್ಷಕ್ಕೆ ಶುಭಸುದ್ದಿ: ಫಲಾನುಭವಿಗಳ ಖಾತೆಗೆ ಬಂದ ಗೃಹಲಕ್ಷ್ಮಿ
ಹೊಸ ವರ್ಷಕ್ಕೆ ಶುಭಸುದ್ದಿ: ಫಲಾನುಭವಿಗಳ ಖಾತೆಗೆ ಬಂದ ಗೃಹಲಕ್ಷ್ಮಿ
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ