BBK8: ರಘು ಗೌಡ ಬಿಗ್​ ಬಾಸ್​ನಿಂದ ಹೊರ​ಬಂದಾಗ ಹೆಂಡತಿ ಮನೆಯೊಳಗೆ ಸೇರಿಸೋದು ಅನುಮಾನ

Bigg Boss Kannada: ‘ನನ್ನನ್ನು ಮನೆಯೊಳಗೆ ಸೇರಿಸಿಕೊಳ್ಳುತ್ತಾರೋ ಇಲ್ಲವೋ ಗೊತ್ತಿಲ್ಲ. ನನ್ನ ಕಾರ್ಡ್​, ಅಕೌಂಟ್​​ ಎಲ್ಲವನ್ನೂ ಹೆಂಡತಿಯೇ ಹ್ಯಾಂಡಲ್​ ಮಾಡ್ತಾ ಇದ್ದಾಳೆ. ಹೊರಗಡೆ ನಿಲ್ಲೋದಕ್ಕೂ ನನ್ನ ಹತ್ರ ಕಾಸಿಲ್ಲ’ ಎಂದು ರಘು ಗೌಡ ಹೇಳಿದ್ದಾರೆ.

BBK8: ರಘು ಗೌಡ ಬಿಗ್​ ಬಾಸ್​ನಿಂದ ಹೊರ​ಬಂದಾಗ ಹೆಂಡತಿ ಮನೆಯೊಳಗೆ ಸೇರಿಸೋದು ಅನುಮಾನ
ರಘು ಗೌಡ - ಬಿಗ್​ ಬಾಸ್
Follow us
|

Updated on: May 10, 2021 | 8:48 AM

ಕೊರೊನಾ ವೈರಸ್​ ಕಾರಣದಿಂದ ಬಿಗ್​ ಬಾಸ್​ ಅರ್ಧಕ್ಕೆ ನಿಲ್ಲುತ್ತಿದೆ. ಹಾಗಾಗಿ ಎಲ್ಲ 11 ಸ್ಪರ್ಧಿಗಳು ಮನೆಯಿಂದ ಹೊರಬರುವುದು ಅನಿವಾರ್ಯ ಆಗಿದೆ. ಆದರೆ ಬಿಗ್​ ಬಾಸ್​ ಮನೆಯಿಂದ ಆಚೆಗೆ ಕಾಲಿಡುವುದಕ್ಕೂ ಮುನ್ನ ರಘು ಗೌಡ ತಲೆಯಲ್ಲಿ ಒಂದು ಅನುಮಾನ ಕಾಡಿದೆ. ಬಿಗ್​ ಬಾಸ್​ ಬಿಟ್ಟುಬಂದ ಬಳಿಕ ತಮ್ಮನ್ನು ಹೆಂಡತಿ ಮನೆಯೊಳಗೆ ಬಿಟ್ಟುಕೊಳ್ಳುತ್ತಾರೋ ಇಲ್ಲವೋ ಎಂಬ ಸಂಶಯ ಅವರನ್ನು ಕಾಡುತ್ತಿದೆ. ಅದನ್ನು ಮೇ 9ರ ಸಂಚಿಕೆಯಲ್ಲಿ ಅವರು ಹೇಳಿಕೊಂಡಿದ್ದಾರೆ.

ರಘುಗೆ ಮದುವೆ ಆಗಿ ಮಗು ಕೂಡ ಇದೆ. ರಘು ಪತ್ನಿ ಹೆಸರು ವಿದ್ಯಾ. ಆದರೆ ಬಿಗ್​ ಬಾಸ್​ ಮನೆಯೊಳಗೆ ಕಾಲಿಟ್ಟು ಕೆಲವು ವಾರ ಕಳೆದ ಬಳಿಕ ರಘು ಗೌಡ ಸ್ವತಃ ತಮ್ಮ ಹೆಂಡತಿಯ ಹೆಸರನ್ನು ಮರೆತುಬಿಟ್ಟಿದ್ದರು! ಎಷ್ಟೋ ಬಾರಿ ಅವರು ವಿದ್ಯಾ ಎನ್ನುವ ಬದಲು ದಿವ್ಯಾ ಎಂದು ಹೇಳಿದ್ದರು. ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ ಸುರೇಶ್​ ಮತ್ತು ದಿವ್ಯಾ ಉರುಡುಗ ಹೆಸರುಗಳ್ನು ಆಗಾಗ ಕೇಳಿಸಿಕೊಂಡಿದ್ದೇ ಈ ಅಚಾತುರ್ಯಕ್ಕೆ ಕಾರಣ. ಇದರ ಬಗ್ಗೆ ಬಿಗ್​ ಬಾಸ್​ ಮನೆಯಲ್ಲಿ ಚರ್ಚೆ ಆಯಿತು.

ಈ ರೀತಿ ಹೆಂಡತಿಯ ಹೆಸರನ್ನು ತಪ್ಪಾಗಿ ಹೇಳಿದ್ದಕ್ಕಾಗಿ ‘ನಿನ್ನನ್ನು ಮನೆಯೊಳಗೆ ಸೇರಿಸಿಕೊಳ್ಳುತ್ತಾರಾ?’ ಎಂದು ರಘುಗೆ ಪ್ರಶಾಂತ್​ ಸಂಬರಗಿ ಕೇಳಿದರು. ‘ಯಾರಿಗೆ ಗೊತ್ತು. ನನ್ನ ಕಾರ್ಡ್​, ಅಕೌಂಟ್​​ ಎಲ್ಲವನ್ನೂ ಅವಳೇ ಹ್ಯಾಂಡಲ್​ ಮಾಡ್ತಾ ಇದ್ದಾಳೆ. ಹೊರಗಡೆ ನಿಲ್ಲೋದಕ್ಕೂ ನನ್ನ ಹತ್ರ ಕಾಸಿಲ್ಲ’ ಎಂದು ರಘು ಹೇಳಿದ್ದಾರೆ. ‘ಹಂಗೇನಾದರೂ ಆದರೆ ನಮ್ಮ ಮನೆಗೆ ಬಾ’ ಎಂದು ಶುಭಾ ಪೂಂಜಾ ಮತ್ತು ಪ್ರಶಾಂತ್​ ಸಂಬರಗಿ ಕರೆದಿದ್ದಾರೆ.

‘ನಮ್ಮ ಮನೆಗೆ ಬಾ. ಆಫೀಸ್​ ಬಿಟ್ಟುಕೊಡುತ್ತೇನೆ. ಒಂದು ತಿಂಗಳಂತೂ ಖಂಡಿತ ಕೊಡುತ್ತೇನೆ. ನಿನ್ನನ್ನು ನಾನು ಒಂದು ತಿಂಗಳು ಸಹಿಸಿಕೊಳ್ಳಬಹುದು’ ಎಂದು ಪ್ರಶಾಂತ್​ ಸಂಬರಗಿ ತಮಾಷೆ ಮಾಡಿದ್ದಾರೆ. ಇಂಥ ನೂರಾರು ಫನ್ನಿ ಸಂಗತಿಗಳಿಗೆ ಸಾಕ್ಷಿಯಾದ ಬಿಗ್​ ಬಾಸ್​ಗೆ ತೆರೆಬಿದ್ದಿದೆ. ಕೊನೇ ಸಂಚಿಕೆಯ ಎಪಿಸೋಡ್​ಗಳು ಭಾನುವಾರವೇ (ಮೇ 9) ಚಿತ್ರೀಕರಣಗೊಂಡಿದ್ದು, ಅವುಗಳನ್ನು ಮೇ 11 ಮತ್ತು 12ರಂದು ಕಲರ್ಸ್​ ಕನ್ನಡ ವಾಹಿನಿ ಪ್ರಸಾರ ಮಾಡಲಿದೆ.

ಇದನ್ನೂ ಓದಿ:

ವೈಷ್ಣವಿ ಜತೆ ರಘು ಗೌಡ ಕ್ಲೋಸ್​ ಆಗಿರೋ ಬಗ್ಗೆ ಅವರ ಪತ್ನಿ ವಿದ್ಯಾಶ್ರೀ ಹೇಳಿದ್ದೇನು?

Bigg Boss Kannada: ಕೊರೊನಾ ವಿಷಯ ಗೊತ್ತಾಗಿ ಕಣ್ಣೀರು ಹಾಕುತ್ತ ಬಿಗ್​ ಬಾಸ್ ಮನೆಯಿಂದ ಹೊರಬಂದ ಸ್ಪರ್ಧಿಗಳು

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ