AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBK8: ರಘು ಗೌಡ ಬಿಗ್​ ಬಾಸ್​ನಿಂದ ಹೊರ​ಬಂದಾಗ ಹೆಂಡತಿ ಮನೆಯೊಳಗೆ ಸೇರಿಸೋದು ಅನುಮಾನ

Bigg Boss Kannada: ‘ನನ್ನನ್ನು ಮನೆಯೊಳಗೆ ಸೇರಿಸಿಕೊಳ್ಳುತ್ತಾರೋ ಇಲ್ಲವೋ ಗೊತ್ತಿಲ್ಲ. ನನ್ನ ಕಾರ್ಡ್​, ಅಕೌಂಟ್​​ ಎಲ್ಲವನ್ನೂ ಹೆಂಡತಿಯೇ ಹ್ಯಾಂಡಲ್​ ಮಾಡ್ತಾ ಇದ್ದಾಳೆ. ಹೊರಗಡೆ ನಿಲ್ಲೋದಕ್ಕೂ ನನ್ನ ಹತ್ರ ಕಾಸಿಲ್ಲ’ ಎಂದು ರಘು ಗೌಡ ಹೇಳಿದ್ದಾರೆ.

BBK8: ರಘು ಗೌಡ ಬಿಗ್​ ಬಾಸ್​ನಿಂದ ಹೊರ​ಬಂದಾಗ ಹೆಂಡತಿ ಮನೆಯೊಳಗೆ ಸೇರಿಸೋದು ಅನುಮಾನ
ರಘು ಗೌಡ - ಬಿಗ್​ ಬಾಸ್
ಮದನ್​ ಕುಮಾರ್​
|

Updated on: May 10, 2021 | 8:48 AM

Share

ಕೊರೊನಾ ವೈರಸ್​ ಕಾರಣದಿಂದ ಬಿಗ್​ ಬಾಸ್​ ಅರ್ಧಕ್ಕೆ ನಿಲ್ಲುತ್ತಿದೆ. ಹಾಗಾಗಿ ಎಲ್ಲ 11 ಸ್ಪರ್ಧಿಗಳು ಮನೆಯಿಂದ ಹೊರಬರುವುದು ಅನಿವಾರ್ಯ ಆಗಿದೆ. ಆದರೆ ಬಿಗ್​ ಬಾಸ್​ ಮನೆಯಿಂದ ಆಚೆಗೆ ಕಾಲಿಡುವುದಕ್ಕೂ ಮುನ್ನ ರಘು ಗೌಡ ತಲೆಯಲ್ಲಿ ಒಂದು ಅನುಮಾನ ಕಾಡಿದೆ. ಬಿಗ್​ ಬಾಸ್​ ಬಿಟ್ಟುಬಂದ ಬಳಿಕ ತಮ್ಮನ್ನು ಹೆಂಡತಿ ಮನೆಯೊಳಗೆ ಬಿಟ್ಟುಕೊಳ್ಳುತ್ತಾರೋ ಇಲ್ಲವೋ ಎಂಬ ಸಂಶಯ ಅವರನ್ನು ಕಾಡುತ್ತಿದೆ. ಅದನ್ನು ಮೇ 9ರ ಸಂಚಿಕೆಯಲ್ಲಿ ಅವರು ಹೇಳಿಕೊಂಡಿದ್ದಾರೆ.

ರಘುಗೆ ಮದುವೆ ಆಗಿ ಮಗು ಕೂಡ ಇದೆ. ರಘು ಪತ್ನಿ ಹೆಸರು ವಿದ್ಯಾ. ಆದರೆ ಬಿಗ್​ ಬಾಸ್​ ಮನೆಯೊಳಗೆ ಕಾಲಿಟ್ಟು ಕೆಲವು ವಾರ ಕಳೆದ ಬಳಿಕ ರಘು ಗೌಡ ಸ್ವತಃ ತಮ್ಮ ಹೆಂಡತಿಯ ಹೆಸರನ್ನು ಮರೆತುಬಿಟ್ಟಿದ್ದರು! ಎಷ್ಟೋ ಬಾರಿ ಅವರು ವಿದ್ಯಾ ಎನ್ನುವ ಬದಲು ದಿವ್ಯಾ ಎಂದು ಹೇಳಿದ್ದರು. ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ ಸುರೇಶ್​ ಮತ್ತು ದಿವ್ಯಾ ಉರುಡುಗ ಹೆಸರುಗಳ್ನು ಆಗಾಗ ಕೇಳಿಸಿಕೊಂಡಿದ್ದೇ ಈ ಅಚಾತುರ್ಯಕ್ಕೆ ಕಾರಣ. ಇದರ ಬಗ್ಗೆ ಬಿಗ್​ ಬಾಸ್​ ಮನೆಯಲ್ಲಿ ಚರ್ಚೆ ಆಯಿತು.

ಈ ರೀತಿ ಹೆಂಡತಿಯ ಹೆಸರನ್ನು ತಪ್ಪಾಗಿ ಹೇಳಿದ್ದಕ್ಕಾಗಿ ‘ನಿನ್ನನ್ನು ಮನೆಯೊಳಗೆ ಸೇರಿಸಿಕೊಳ್ಳುತ್ತಾರಾ?’ ಎಂದು ರಘುಗೆ ಪ್ರಶಾಂತ್​ ಸಂಬರಗಿ ಕೇಳಿದರು. ‘ಯಾರಿಗೆ ಗೊತ್ತು. ನನ್ನ ಕಾರ್ಡ್​, ಅಕೌಂಟ್​​ ಎಲ್ಲವನ್ನೂ ಅವಳೇ ಹ್ಯಾಂಡಲ್​ ಮಾಡ್ತಾ ಇದ್ದಾಳೆ. ಹೊರಗಡೆ ನಿಲ್ಲೋದಕ್ಕೂ ನನ್ನ ಹತ್ರ ಕಾಸಿಲ್ಲ’ ಎಂದು ರಘು ಹೇಳಿದ್ದಾರೆ. ‘ಹಂಗೇನಾದರೂ ಆದರೆ ನಮ್ಮ ಮನೆಗೆ ಬಾ’ ಎಂದು ಶುಭಾ ಪೂಂಜಾ ಮತ್ತು ಪ್ರಶಾಂತ್​ ಸಂಬರಗಿ ಕರೆದಿದ್ದಾರೆ.

‘ನಮ್ಮ ಮನೆಗೆ ಬಾ. ಆಫೀಸ್​ ಬಿಟ್ಟುಕೊಡುತ್ತೇನೆ. ಒಂದು ತಿಂಗಳಂತೂ ಖಂಡಿತ ಕೊಡುತ್ತೇನೆ. ನಿನ್ನನ್ನು ನಾನು ಒಂದು ತಿಂಗಳು ಸಹಿಸಿಕೊಳ್ಳಬಹುದು’ ಎಂದು ಪ್ರಶಾಂತ್​ ಸಂಬರಗಿ ತಮಾಷೆ ಮಾಡಿದ್ದಾರೆ. ಇಂಥ ನೂರಾರು ಫನ್ನಿ ಸಂಗತಿಗಳಿಗೆ ಸಾಕ್ಷಿಯಾದ ಬಿಗ್​ ಬಾಸ್​ಗೆ ತೆರೆಬಿದ್ದಿದೆ. ಕೊನೇ ಸಂಚಿಕೆಯ ಎಪಿಸೋಡ್​ಗಳು ಭಾನುವಾರವೇ (ಮೇ 9) ಚಿತ್ರೀಕರಣಗೊಂಡಿದ್ದು, ಅವುಗಳನ್ನು ಮೇ 11 ಮತ್ತು 12ರಂದು ಕಲರ್ಸ್​ ಕನ್ನಡ ವಾಹಿನಿ ಪ್ರಸಾರ ಮಾಡಲಿದೆ.

ಇದನ್ನೂ ಓದಿ:

ವೈಷ್ಣವಿ ಜತೆ ರಘು ಗೌಡ ಕ್ಲೋಸ್​ ಆಗಿರೋ ಬಗ್ಗೆ ಅವರ ಪತ್ನಿ ವಿದ್ಯಾಶ್ರೀ ಹೇಳಿದ್ದೇನು?

Bigg Boss Kannada: ಕೊರೊನಾ ವಿಷಯ ಗೊತ್ತಾಗಿ ಕಣ್ಣೀರು ಹಾಕುತ್ತ ಬಿಗ್​ ಬಾಸ್ ಮನೆಯಿಂದ ಹೊರಬಂದ ಸ್ಪರ್ಧಿಗಳು

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ