AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBK8: ರಘು ಗೌಡ ಬಿಗ್​ ಬಾಸ್​ನಿಂದ ಹೊರ​ಬಂದಾಗ ಹೆಂಡತಿ ಮನೆಯೊಳಗೆ ಸೇರಿಸೋದು ಅನುಮಾನ

Bigg Boss Kannada: ‘ನನ್ನನ್ನು ಮನೆಯೊಳಗೆ ಸೇರಿಸಿಕೊಳ್ಳುತ್ತಾರೋ ಇಲ್ಲವೋ ಗೊತ್ತಿಲ್ಲ. ನನ್ನ ಕಾರ್ಡ್​, ಅಕೌಂಟ್​​ ಎಲ್ಲವನ್ನೂ ಹೆಂಡತಿಯೇ ಹ್ಯಾಂಡಲ್​ ಮಾಡ್ತಾ ಇದ್ದಾಳೆ. ಹೊರಗಡೆ ನಿಲ್ಲೋದಕ್ಕೂ ನನ್ನ ಹತ್ರ ಕಾಸಿಲ್ಲ’ ಎಂದು ರಘು ಗೌಡ ಹೇಳಿದ್ದಾರೆ.

BBK8: ರಘು ಗೌಡ ಬಿಗ್​ ಬಾಸ್​ನಿಂದ ಹೊರ​ಬಂದಾಗ ಹೆಂಡತಿ ಮನೆಯೊಳಗೆ ಸೇರಿಸೋದು ಅನುಮಾನ
ರಘು ಗೌಡ - ಬಿಗ್​ ಬಾಸ್
ಮದನ್​ ಕುಮಾರ್​
|

Updated on: May 10, 2021 | 8:48 AM

Share

ಕೊರೊನಾ ವೈರಸ್​ ಕಾರಣದಿಂದ ಬಿಗ್​ ಬಾಸ್​ ಅರ್ಧಕ್ಕೆ ನಿಲ್ಲುತ್ತಿದೆ. ಹಾಗಾಗಿ ಎಲ್ಲ 11 ಸ್ಪರ್ಧಿಗಳು ಮನೆಯಿಂದ ಹೊರಬರುವುದು ಅನಿವಾರ್ಯ ಆಗಿದೆ. ಆದರೆ ಬಿಗ್​ ಬಾಸ್​ ಮನೆಯಿಂದ ಆಚೆಗೆ ಕಾಲಿಡುವುದಕ್ಕೂ ಮುನ್ನ ರಘು ಗೌಡ ತಲೆಯಲ್ಲಿ ಒಂದು ಅನುಮಾನ ಕಾಡಿದೆ. ಬಿಗ್​ ಬಾಸ್​ ಬಿಟ್ಟುಬಂದ ಬಳಿಕ ತಮ್ಮನ್ನು ಹೆಂಡತಿ ಮನೆಯೊಳಗೆ ಬಿಟ್ಟುಕೊಳ್ಳುತ್ತಾರೋ ಇಲ್ಲವೋ ಎಂಬ ಸಂಶಯ ಅವರನ್ನು ಕಾಡುತ್ತಿದೆ. ಅದನ್ನು ಮೇ 9ರ ಸಂಚಿಕೆಯಲ್ಲಿ ಅವರು ಹೇಳಿಕೊಂಡಿದ್ದಾರೆ.

ರಘುಗೆ ಮದುವೆ ಆಗಿ ಮಗು ಕೂಡ ಇದೆ. ರಘು ಪತ್ನಿ ಹೆಸರು ವಿದ್ಯಾ. ಆದರೆ ಬಿಗ್​ ಬಾಸ್​ ಮನೆಯೊಳಗೆ ಕಾಲಿಟ್ಟು ಕೆಲವು ವಾರ ಕಳೆದ ಬಳಿಕ ರಘು ಗೌಡ ಸ್ವತಃ ತಮ್ಮ ಹೆಂಡತಿಯ ಹೆಸರನ್ನು ಮರೆತುಬಿಟ್ಟಿದ್ದರು! ಎಷ್ಟೋ ಬಾರಿ ಅವರು ವಿದ್ಯಾ ಎನ್ನುವ ಬದಲು ದಿವ್ಯಾ ಎಂದು ಹೇಳಿದ್ದರು. ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ ಸುರೇಶ್​ ಮತ್ತು ದಿವ್ಯಾ ಉರುಡುಗ ಹೆಸರುಗಳ್ನು ಆಗಾಗ ಕೇಳಿಸಿಕೊಂಡಿದ್ದೇ ಈ ಅಚಾತುರ್ಯಕ್ಕೆ ಕಾರಣ. ಇದರ ಬಗ್ಗೆ ಬಿಗ್​ ಬಾಸ್​ ಮನೆಯಲ್ಲಿ ಚರ್ಚೆ ಆಯಿತು.

ಈ ರೀತಿ ಹೆಂಡತಿಯ ಹೆಸರನ್ನು ತಪ್ಪಾಗಿ ಹೇಳಿದ್ದಕ್ಕಾಗಿ ‘ನಿನ್ನನ್ನು ಮನೆಯೊಳಗೆ ಸೇರಿಸಿಕೊಳ್ಳುತ್ತಾರಾ?’ ಎಂದು ರಘುಗೆ ಪ್ರಶಾಂತ್​ ಸಂಬರಗಿ ಕೇಳಿದರು. ‘ಯಾರಿಗೆ ಗೊತ್ತು. ನನ್ನ ಕಾರ್ಡ್​, ಅಕೌಂಟ್​​ ಎಲ್ಲವನ್ನೂ ಅವಳೇ ಹ್ಯಾಂಡಲ್​ ಮಾಡ್ತಾ ಇದ್ದಾಳೆ. ಹೊರಗಡೆ ನಿಲ್ಲೋದಕ್ಕೂ ನನ್ನ ಹತ್ರ ಕಾಸಿಲ್ಲ’ ಎಂದು ರಘು ಹೇಳಿದ್ದಾರೆ. ‘ಹಂಗೇನಾದರೂ ಆದರೆ ನಮ್ಮ ಮನೆಗೆ ಬಾ’ ಎಂದು ಶುಭಾ ಪೂಂಜಾ ಮತ್ತು ಪ್ರಶಾಂತ್​ ಸಂಬರಗಿ ಕರೆದಿದ್ದಾರೆ.

‘ನಮ್ಮ ಮನೆಗೆ ಬಾ. ಆಫೀಸ್​ ಬಿಟ್ಟುಕೊಡುತ್ತೇನೆ. ಒಂದು ತಿಂಗಳಂತೂ ಖಂಡಿತ ಕೊಡುತ್ತೇನೆ. ನಿನ್ನನ್ನು ನಾನು ಒಂದು ತಿಂಗಳು ಸಹಿಸಿಕೊಳ್ಳಬಹುದು’ ಎಂದು ಪ್ರಶಾಂತ್​ ಸಂಬರಗಿ ತಮಾಷೆ ಮಾಡಿದ್ದಾರೆ. ಇಂಥ ನೂರಾರು ಫನ್ನಿ ಸಂಗತಿಗಳಿಗೆ ಸಾಕ್ಷಿಯಾದ ಬಿಗ್​ ಬಾಸ್​ಗೆ ತೆರೆಬಿದ್ದಿದೆ. ಕೊನೇ ಸಂಚಿಕೆಯ ಎಪಿಸೋಡ್​ಗಳು ಭಾನುವಾರವೇ (ಮೇ 9) ಚಿತ್ರೀಕರಣಗೊಂಡಿದ್ದು, ಅವುಗಳನ್ನು ಮೇ 11 ಮತ್ತು 12ರಂದು ಕಲರ್ಸ್​ ಕನ್ನಡ ವಾಹಿನಿ ಪ್ರಸಾರ ಮಾಡಲಿದೆ.

ಇದನ್ನೂ ಓದಿ:

ವೈಷ್ಣವಿ ಜತೆ ರಘು ಗೌಡ ಕ್ಲೋಸ್​ ಆಗಿರೋ ಬಗ್ಗೆ ಅವರ ಪತ್ನಿ ವಿದ್ಯಾಶ್ರೀ ಹೇಳಿದ್ದೇನು?

Bigg Boss Kannada: ಕೊರೊನಾ ವಿಷಯ ಗೊತ್ತಾಗಿ ಕಣ್ಣೀರು ಹಾಕುತ್ತ ಬಿಗ್​ ಬಾಸ್ ಮನೆಯಿಂದ ಹೊರಬಂದ ಸ್ಪರ್ಧಿಗಳು

Follow Us
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ