AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಳ್ಳು ಹೇಳಿದ್ದಕ್ಕೆ ಅಮಿತಾಬ್ ಬಚ್ಚನ್​ ವಿರದ್ಧ ದೂರು, 10 ಲಕ್ಷ ದಂಡ ವಿಧಿಸುವಂತೆ ಒತ್ತಾಯ

Amitabh Bachchan:ತೆರೆಯ ಮೇಲೆ ತೆರೆಯಾಚೆಯೂ ಶುದ್ಧ ವ್ಯಕ್ತಿತ್ವ ಕಾಪಾಡಿಕೊಂಡಿರುವ ಅಮಿತಾಬ್ ಬಚ್ಚನ್ ಮೇಲೆ ಸುಳ್ಳು ಹೇಳಿರುವ ಆರೋಪ ಹೇರಲಾಗಿದೆ. ಸುಳ್ಳು ಹೇಳಿದ್ದಕ್ಕೆ ನಟನಿಗೆ 10 ಲಕ್ಷ ರೂಪಾಯಿ ದಂಡ ವಿಧಿಸುವಂತೆ ಒತ್ತಾಯಿಸಲಾಗಿದೆ.

ಸುಳ್ಳು ಹೇಳಿದ್ದಕ್ಕೆ ಅಮಿತಾಬ್ ಬಚ್ಚನ್​ ವಿರದ್ಧ ದೂರು, 10 ಲಕ್ಷ ದಂಡ ವಿಧಿಸುವಂತೆ ಒತ್ತಾಯ
ಅಮಿತಾಬ್ ಬಚ್ಚನ್
ಮಂಜುನಾಥ ಸಿ.
|

Updated on: Oct 04, 2023 | 8:20 PM

Share

ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್ (Amitabh Bachchan) ಸಂಕಷ್ಟವೊಂದಕ್ಕೆ ಸಿಲುಕಿದ್ದಾರೆ. ತೆರೆಯ ಮೇಲೆ ತೆರೆಯಾಚೆಯೂ ಶುದ್ಧ ವ್ಯಕ್ತಿತ್ವ ಕಾಪಾಡಿಕೊಂಡಿರುವ ಅಮಿತಾಬ್ ಬಚ್ಚನ್ ಮೇಲೆ ಸುಳ್ಳು ಹೇಳಿರುವ ಆರೋಪ ಹೇರಲಾಗಿದೆ. ಹೌದು, ಜಾಹೀರಾತೊಂದರಲ್ಲಿ ನಟ ಅಮಿತಾಬ್ ಬಚ್ಚನ್ ಸುಳ್ಳು ಹೇಳಿ, ಗ್ರಾಹಕರನ್ನು ದಾರಿತಪ್ಪಿಸುವ ಪ್ರಯತ್ನ ಮಾಡಿದ್ದಾರೆ ಅಲ್ಲದೆ, ಸಣ್ಣ-ಮಧ್ಯಮ ಸಗಟು ವ್ಯಾಪಾರಿಗಳಿಗೆ ನಷ್ಟವಾಗುವ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (CAIT) ಒತ್ತಾಯಿಸಿದೆ.

ಆನ್​ಲೈನ್ ಶಾಪಿಂಗ್ ಮಳಿಗೆ ಫ್ಲಿಪ್​ಕಾರ್ಟ್​ನ ರಾಯಭಾರಿ ಆಗಿರುವ ನಟ ಅಮಿತಾಬ್ ಬಚ್ಚನ್ ಇತ್ತೀಚೆಗಷ್ಟೆ ಫ್ಲಿಪ್​ಕಾರ್ಟ್​ನ ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿದ್ದರು. ಜಾಹೀರಾತು ಫ್ಲಿಪ್​ಕಾರ್ಟ್​ನ ಬಿಗ್​ಬಿಲಿಯನ್​ ಡೇ ಕುರಿತಾದದ್ದಾಗಿತ್ತು. ಜಾಹೀರಾತಿನಲ್ಲಿ ಗುಣಮಟ್ಟದ, ದುಬಾರಿ ಸ್ಮಾರ್ಟ್​ಫೋನ್ ಗಳನ್ನು ಕಡಿಮೆ ಬೆಲೆಗೆ ನೀಡುತ್ತಿರುವ ಆಫರ್​ ಕುರಿತಾದದ್ದಾಗಿತ್ತು. ಈ ಜಾಹೀರಾತಿನಲ್ಲಿ ಅಮಿತಾಬ್ ಬಚ್ಚನ್ ತಪ್ಪು ಮಾಹಿತಿ ನೀಡಿ ಗ್ರಾಹಕರ ದಾರಿ ತಪ್ಪಿಸಿದ್ದಾರೆ ಎಂದು ಸಿಎಐಟಿ ಆರೋಪಿಸಿದ್ದು, ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರಕ್ಕೆ ದೂರು ನೀಡಿದೆ.

ಜಾಹೀರಾತು, ಗ್ರಾಹಕರ ದಿಕ್ಕು ತಪ್ಪಿಸುವಂತಿದ್ದು, ತಪ್ಪು ಮಾಹಿತಿಯನ್ನು ಒಳಗೊಂಡಿದೆ ಹಾಗಾಗಿ ಜಾಹೀರಾತು ನೀಡಿರುವ ಫ್ಲಿಪ್​ಕಾರ್ಟ್​ ಸಂಸ್ಥೆಗೆ ದಂಡ ವಿಧಿಸುವ ಜೊತೆಗೆ ಜಾಹೀರಾತಿನಲ್ಲಿ ನಟಿಸಿ ಗ್ರಾಹಕರಿಗೆ ತಪ್ಪು ಮಾಹಿತಿ ಒದಗಿಸಿರುವ ನಟ ಅಮಿತಾಬ್ ಬಚ್ಚನ್​ಗೆ 10 ಲಕ್ಷ ರೂಪಾಯಿ ದಂಡ ವಿಧಿಸಬೇಕು ಹಾಗೂ ಈ ಕೂಡಲೇ ಜಾಹೀರಾತನ್ನು ಹಿಂಪಡೆಯುವಂತೆ ಫ್ಲಿಪ್​ಕಾರ್ಟ್​ಗೆ ಸೂಚಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ:ರಿಯಲ್ ಎಸ್ಟೇಟ್ ಬ್ಯುಸಿನೆಸ್ ವಿಸ್ತರಿಸಿದ ಅಮಿತಾಬ್ ಬಚ್ಚನ್, ಸಾರಾ-ಕಾರ್ತಿಕ್​ ಸಹ ಹಿಂದುಳಿದಿಲ್ಲ

ಜಾಹೀರಾತಿನಲ್ಲಿ ಕಚೇರಿಯೊಂದರಲ್ಲಿ ನಡೆಯುತ್ತಿರುವ ಮಾತುಕತೆಯ ಸನ್ನಿವೇಶವಿದ್ದು, ವ್ಯಕ್ತಿಯೊಬ್ಬ ಫ್ಲಿಫ್​ಕಾರ್ಟ್​ನ ಬಿಗ್​ಬಿಲಿಯನ್​ ಡೇನಲ್ಲಿ ಪ್ರೀಮಿಯಂ ಸ್ಮಾರ್ಟ್​ಫೋನ್​ಗಳಿಗೆ ಭಾರಿ ಕಡಿಮೆ ಬೆಲೆ ಇದ್ದು ಒಳ್ಳೆಯ ಆಫರ್​ಗಳಿವೆ ಎನ್ನುತ್ತಾನೆ, ಅದಕ್ಕೆ ಮತ್ತೊಬ್ಬ ವ್ಯಕ್ತಿ, ಆ ಆಫರ್​ಗಳನ್ನು ಪಕ್ಕದ ಅಂಗಡಿಯವನೂ ಕೊಡುತ್ತಾನೆ ಎನ್ನುತ್ತಾನೆ. ಕೂಡಲೇ ಪ್ರತ್ಯಕ್ಷವಾಗುವ ಅಮಿತಾಬ್ ಬಚ್ಚನ್, ಫ್ಲಿಪ್​ಕಾರ್ಟ್ ಕೊಡುತ್ತಿರುವ ಆಫರ್​ಗಳನ್ನು ಅಂಗಡಿಯವ ಕೊಡಲು ಸಾಧ್ಯವೇ ಇಲ್ಲ, ಇಂಥಹಾ ಆಫರ್​ಗಳು ಫ್ಲಿಪ್​ಕಾರ್ಟ್​ನ ಬಿಗ್​ಬಿಲಿಯನ್​ ಡೇ ನಲ್ಲಿ ಮಾತ್ರವೇ ಸಿಗುತ್ತವೆ ಎನ್ನುತ್ತಾರೆ.

ಈ ಜಾಹೀರಾತು ಸಗಟು ವ್ಯಾಪಾರಿಗಳ ವಿರುದ್ಧವಾಗಿದೆ. ಆನ್​ಲೈನ್ ಮಳಿಗೆಯಂತೆ ಆಫ್​ಲೈನ್ ಮಳಿಗೆಗಳೂ ಸಹ ಆಫರ್​ಗಳನ್ನು ನೀಡುತ್ತವೆ ಎಂದು ಬಚ್ಚನ್ ವಿರುದ್ಧ ದೂರು ನೀಡಿರುವ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಹೇಳಿದೆ. ಬಚ್ಚನ್​ರ ಜಾಹೀರಾತಿಗೆ ಸಾಮಾಜಿಕ ಜಾಲತಾಣದಲ್ಲಿಯೂ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ