Kangana Ranaut: ‘ಬಾಲಿವುಡ್ ಮಾಫಿಯಾ’ಗೆ ಮತ್ತೆ ಟಾಂಗ್ ನೀಡಿದ ಕಂಗನಾ; ಕಾರಣವೇನು?

Thalaivii: ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತೊಮ್ಮೆ ‘ಬಾಲಿವುಡ್ ಮಾಫಿಯಾ’ಕ್ಕೆ ಟಾಂಗ್ ನೀಡಿದ್ದಾರೆ. ತಲೈವಿ ಚಿತ್ರದ ಒಟಿಟಿ ಬಿಡುಗಡೆಯ ಸಿದ್ಧತೆಯಲ್ಲಿರುವ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ.

Kangana Ranaut: ‘ಬಾಲಿವುಡ್ ಮಾಫಿಯಾ’ಗೆ ಮತ್ತೆ ಟಾಂಗ್ ನೀಡಿದ ಕಂಗನಾ; ಕಾರಣವೇನು?
ಕಂಗನಾ ರಣಾವತ್
Edited By:

Updated on: Sep 29, 2021 | 3:39 PM

ಬಾಲಿವುಡ್ ನಟಿ ಕಂಗನಾ ರಣಾವತ್ ಸದಾ ಒಂದಿಲ್ಲೊಂದು ಕಾರಣದಿಂದ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಅವರ ಅಭಿನಯದ ‘ತಲೈವಿ’ ಚಿತ್ರ ವೀಕ್ಷಕರಿಂದ ಮೆಚ್ಚುಗೆಯನ್ನೂ ಪಡೆದಿತ್ತು. ಇದೀಗ ‘ತಲೈವಿ’ ಒಟಿಟಿಯಲ್ಲಿ ಬಿಡುಗಡೆಯಾಗಲು ಸಿದ್ಧತೆ ನಡೆಸಿದೆ. ನೆಟ್​​ಫ್ಲಿಕ್ಸ್​​ನಲ್ಲಿ ಈ ಚಿತ್ರವು ಬಿಡುಗಡೆಯಾಗುತ್ತಿದ್ದು, ಈ ಕುರಿತು ಕಂಗನಾ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. “ಒಂದು ಚಿತ್ರವು ಉತ್ಸಾಹದಿಂದ ಮತ್ತು ಎಲ್ಲರಿಂದ ಪ್ರೀತಿಸಲ್ಪಡುವುದು ಅಪರೂಪ. ತಲೈವಿ ಅಂತಹ ಒಂದು ಚಿತ್ರವಾಗಿದೆ. ಜನರಿಗೆ ತಲೈವಿ ಡಾ.ಜೆ ಜಯಲಲಿತಾ ಅವರ ಕತೆ ಹಿಡಿಸಿದೆ. ನನ್ನ ವೃತ್ತಿ ಜೀವನದಲ್ಲಿ ಇದೊಂದು ಮರೆಯಲಾಗದ ಪ್ರಮುಖ ಚಿತ್ರವಾಗಿ ರೂಪುಗೊಳ್ಳುವಂತೆ ಮಾಡಿದ ಚಿತ್ರತಂಡಕ್ಕೆ ಧನ್ಯವಾದಗಳು’ ಎಂದು ಅವರು ಬರೆದುಕೊಂಡಿದ್ದಾರೆ.

‘ತಲೈವಿ’ ಚಿತ್ರವು ಮಾಜಿ ನಟಿ ಮತ್ತು ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರ ಜೀವನವನ್ನು ಆಧರಿಸಿದೆ. ಈ ಚಿತ್ರದಲ್ಲಿ ಕಂಗನಾ ಜಯಲಲಿತಾ ಪಾತ್ರವನ್ನು ಮತ್ತು ನಟ ಅರವಿಂದ ಸ್ವಾಮಿ ಎಮ್​.ಜಿ.ರಾಮಚಂದ್ರನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಲನಚಿತ್ರವು ಅಕ್ಟೋಬರ್ 10 ರಂದು ದೇಶದ ಹಲವು ಭಾಗಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದರೂ ಕೂಡ ಮುಂಬೈನಲ್ಲಿ ಬಿಡುಗಡೆಯಾಗಿರಲಿಲ್ಲ. ಪ್ರಸ್ತುತ ನೆಟ್​ಫ್ಲಿಕ್ಸ್​ನಲ್ಲಿ ತೆರೆಗೆ ಬರುತ್ತಿರುವುದರಿಂದ ಹೆಚ್ಚು ಜನರನ್ನು ತಲುಪುವ ಅವಕಾಶವಿದೆ.

ಕಂಗನಾ, ಬಾಲಿವುಡ್​​ನ ಕೆಲವು ತಾರೆಯರನ್ನು ಟೀಕಿಸುವ ಯಾವ ಅವಕಾಶವನ್ನೂ ತಪ್ಪಿಸುವುದಿಲ್ಲ. ‘ತಲೈವಿ’ ಚಿತ್ರವನ್ನು ನೆಟ್​ಫ್ಲಿಕ್ಸ್​ನಲ್ಲಿ ವೀಕ್ಷಿಸಿ ಎಂದು ಅವರು ಕೇಳಿಕೊಳ್ಳುವಾಗಲೂ, ‘ಬಾಲಿವುಡ್ ಮಾಫಿಯಾ’ಕ್ಕೆ ಟಾಂಗ್ ನೀಡಿದ್ದಾರೆ. ‘ಬಾಲಿವುಡ್ ಮಾಫಿಯಾ ಕೂಡ ತಮ್ಮ ಸಿದ್ಧಾಂತ, ಜಗಳಗಳನ್ನು ಬದಿಗಿಟ್ಟು ಕಲೆಯ ಉಳಿವಿಗಾಗಿ ಈ ಚಿತ್ರವನ್ನು ಬೆಂಬಲಿಸುತ್ತಾರೆ ಎಂದು ನಂಬಿದ್ದೇನೆ. ನಾನು ಕೂಡ ಅವರ ಉತ್ತಮ ಚಿತ್ರಗಳನ್ನು ಪ್ರೋತ್ಸಾಹಿಸಿದ್ದೆ. ಅದರಂತೆಯೇ ಅವರೂ ಕೂಡ ಮಾನವ ಸಹಜ ಗುಣಗಳನ್ನು ಬಿಟ್ಟು ಕಲೆಯ ಗೆಲುವಿಗಾಗಿ ಜೊತೆಯಾಗಲಿ. ಕಲೆ ಗೆಲ್ಲಲಿ’ ಎಂದು ಅವರು ಬರೆದುಕೊಂಡಿದ್ದಾರೆ.

ಕಂಗನಾ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದ ಸ್ಟೋರಿ

ತಲೈವಿ ಚಿತ್ರವನ್ನು ಎ.ಎಲ್.ವಿಜಯ್ ನಿರ್ದೇಶಿಸಿದ್ದು, ವಿಜಯೇಂದ್ರ ಪ್ರಸಾದ್ ಕತೆ ಬರೆದಿದ್ದಾರೆ. ಚಿತ್ರದಲ್ಲಿ ನಾಸರ್, ಭಾಗ್ಯಶ್ರೀ, ರಾಜ್ ಅರ್ಜುನ್, ಮಧೂ, ಜಿಸ್ಶು ಸೇನ್‌ಗುಪ್ತಾ, ತಂಬಿ ರಾಮಯ್ಯ, ಶಮ್ನಾ ಕಾಸಿಂ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:

‘ಕೋಟಿಗೊಬ್ಬ 3’ ರಿಲೀಸ್​ಗೂ ಮೊದಲೇ ಪೈರಸಿ ಮಾಡಲು ಕಿಡಿಗೇಡಿಗಳ ಪ್ಲ್ಯಾನ್​; ಇಲ್ಲಿದೆ ಸಾಕ್ಷಿ

ಡ್ರಗ್ ಪೆಡ್ಲಿಂಗ್ ಮಾಡ್ತಿದ್ದ ನೈಜೀರಿಯಾ ನಟನ ಬಂಧನ; ಈತ ಅಣ್ಣಾಬಾಂಡ್, ಪರಮಾತ್ಮ ಸಿನಿಮಾಗಳಲ್ಲೂ ನಟಿಸಿದ್ದ!

ವದಂತಿ ವಿಚಾರದಲ್ಲಿ ಮೌನ ಮುರಿದ ಸಮಂತಾ ಅಕ್ಕಿನೇನಿ; ಅಭಿಮಾನಿಗಳಿಗೆ ಎಲ್ಲವನ್ನೂ ಸ್ಪಷ್ಟಪಡಿಸಿದ ನಟಿ

Published On - 3:33 pm, Wed, 29 September 21

Web contact

TV9 Kannada

Read More
Follow Us