AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KL Rahul: ಕ್ರಿಕೆಟ್.. ಸುತ್ತಾಟ.. ಆಥಿಯಾ..; 2021ಕ್ಕೆ ಪ್ರೀತಿಯ ಧನ್ಯವಾದ ಹೇಳಿದ ಕೆಎಲ್ ರಾಹುಲ್!

Athiya Shetty: ಕೆ.ಎಲ್ ರಾಹುಲ್ ಹಾಗೂ ಬಾಲಿವುಡ್ ನಟಿ ಆಥಿಯಾ ಶೆಟ್ಟಿ ಜತೆಯಾಗಿ ಸುತ್ತಾಡುತ್ತಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಕ್ರಿಕೆಟ್ ತಾರೆ ರಾಹುಲ್ ಇದೀಗ 2021ರ ವಿಶೇಷ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಆಥಿಯಾ ಜತೆಗಿನ ಅಪರೂಪದ ಚಿತ್ರಗಳೂ ಇವೆ.

KL Rahul: ಕ್ರಿಕೆಟ್.. ಸುತ್ತಾಟ.. ಆಥಿಯಾ..; 2021ಕ್ಕೆ ಪ್ರೀತಿಯ ಧನ್ಯವಾದ ಹೇಳಿದ ಕೆಎಲ್ ರಾಹುಲ್!
ಕೆ.ಎಲ್ ರಾಹುಲ್, ಆಥಿಯಾ ಶೆಟ್ಟಿ
TV9 Web
| Edited By: |

Updated on:Jan 01, 2022 | 2:57 PM

Share

2022 ಆರಂಭವಾಗುತ್ತಿದಂತೆಯೇ ತಾರೆಯರೆಲ್ಲರೂ 2021 ಹೇಗಿತ್ತು ಎಂಬುದನ್ನು ವಿಡಿಯೋ, ಫೋಟೋಗಳ ಮುಖಾಂತರ ಹಂಚಿಕೊಳ್ಳುತ್ತಿದ್ದಾರೆ. ಇದರಲ್ಲಿ ಹಲವು ಅಪರೂಪದ ಚಿತ್ರಗಳೂ ಸೇರಿವೆ. ಪ್ರಸ್ತುತ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಏಕದಿನ ತಂಡವನ್ನು ಮುನ್ನಡೆಸಲಿರುವ ಕ್ರಿಕೆಟಿಗ ಕೆ.ಎಲ್ ರಾಹುಲ್ (KL Rahul) ಕೂಡ ಈ ಟ್ರೆಂಡ್​ನಿಂದ ಹೊರತಾಗಿಲ್ಲ. 2021 ಕೆ.ಎಲ್​ ರಾಹುಲ್​ಗೆ ವೃತ್ತಿ ಜೀವನ ಎಷ್ಟು ದೊಡ್ಡ ಯಶಸ್ಸು ನೀಡಿತೋ ವೈಯಕ್ತಿಕ ಜೀವನ ಅಷ್ಟೇ ಸುದ್ದಿಯಾಗಿತ್ತು. ಹೌದು. ಬಾಲಿವುಡ್ ನಟಿ ಆಥಿಯಾ ಶೆಟ್ಟಿ (Athiya Shetty) ಹಾಗೂ ರಾಹುಲ್ ಜತೆಗೆ ಸುತ್ತಾಡುತ್ತಿದ್ದರೂ ಕೂಡ ಎಲ್ಲೂ ಅಧಿಕೃತವಾಗಿ ಹೇಳಿಕೊಂಡಿರಲಿಲ್ಲ. ಆದರೆ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ ಆಥಿಯಾ ಕೂಡ ರಾಹುಲ್ ಜತೆಯಲ್ಲಿ ತೆರಳಿದ್ದರು. ಅಲ್ಲಿಂದ ಈರ್ವರ ಸಂಬಂಧ ಅಧಿಕೃತವಾಗಿತ್ತು.

ಇತ್ತೀಚೆಗೆ ಆಥಿಯಾ ಸೋದರ ಅಹಾನ್ ಶೆಟ್ಟಿ ಅಭಿನಯದ ‘ತಡಪ್’ ಚಿತ್ರದ ಪ್ರೀಮಿಯರ್​ನಲ್ಲಿ ಈ ಜೋಡಿ ರೆಡ್​ ಕಾರ್ಪೆಟ್​ನಲ್ಲಿ ಮೊದಲ ಬಾರಿಗೆ ಜತೆಯಾಗಿ ಹೆಜ್ಜೆಹಾಕಿತ್ತು. ಈರ್ವರೂ ಅದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಒಟ್ಟಾಗಿ ಕಾಣಿಸಿಕೊಂಡು, ಫೋಟೋಗಳಿಗೆ ಭರ್ಜರಿ ಪೋಸ್ ನೀಡಿದ್ದರು. ಆ ಮೂಲಕ ವದಂತಿಗಳಿಗೆ ಪೂರ್ಣವಿರಾಮ ಹಾಕಿದ್ದರು.

ಇದೀಗ ರಾಹುಲ್ 2021ರ ಎಲ್ಲಾ ಸುಂದರ ಕ್ಷಣಗಳಿರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಆಥಿಯಾ ಹಾಗೂ ರಾಹುಲ್ ಜತೆಯಿರುವ ಹಲವು ಚಿತ್ರಗಳಿವೆ. ವಿಶೇಷವೆಂದರೆ ಅವುಗಳಲ್ಲಿ ಬಹಳಷ್ಟು ಚಿತ್ರಗಳನ್ನು ಈ ಹಿಂದೆ ಎಲ್ಲೂ ಹಂಚಿಕೊಳ್ಳಲಾಗಿಲ್ಲ. ಈ ಮೂಲಕ ಫ್ಯಾನ್ಸ್​​​ಗೆ ರಾಹುಲ್ ಸರ್ಪ್ರೈಸ್ ನೀಡಿದ್ದಾರೆ. ಪೋಸ್ಟ್​ನಲ್ಲಿ ಅವರು ‘ಥ್ಯಾಂಕ್ಯೂ 2021’ ಎಂದು ಬರೆದುಕೊಂಡಿರುವ ರಾಹುಲ್ ಸುಮಧುರ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರ ಕ್ರಿಕೆಟ್​​- ಸುತ್ತಾಟದ ನೆನಪುಗಳು ಹಾಗೂ ಆಥಿಯಾ ಜತೆಗಿರುವ ಅಪರೂಪದ ಚಿತ್ರಗಳಿವೆ. ಇದು ರಾಹುಲ್ ಹಾಗೂ ಆಥಿಯಾ ಅಭಿಮಾನಿಗಳಿಗೆ ಸಖತ್ ಖುಷಿ ನೀಡಿದ್ದು, ವೈರಲ್ ಆಗಿದೆ.

ಕೆ.ಎಲ್​ ರಾಹುಲ್ ಹಂಚಿಕೊಂಡ ವಿಡಿಯೋ ಇಲ್ಲಿದೆ:

View this post on Instagram

A post shared by KL Rahul? (@rahulkl)

ಆಥಿಯಾ ‘ಹೀರೋ’ ಚಿತ್ರದ ಮೂಲಕ ಬಾಲಿವುಡ್​ಗೆ ಪದಾರ್ಪಣೆ ಮಾಡಿದ್ದರು. ಆ ಚಿತ್ರದಲ್ಲಿ ಸೂರಜ್ ಪಾಂಚೋಲಿ ಕಾಣಿಸಿಕೊಂಡಿದ್ದರು. ನಂತರ ಅವರು ‘ಮುಬಾರಕನ್’ ಹಾಗೂ ‘ಮೋತಿಚೋರ್ ಚಕ್ನಾಚೋರ್’ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಅವರು ಯಾವುದೇ ಚಿತ್ರಗಳನ್ನು ಒಪ್ಪಿಕೊಂಡಿಲ್ಲ. ಕೆಲವು ಸಮಯದ ಹಿಂದೆ ಜಾಹಿರಾತೊಂದರಲ್ಲಿ ರಾಹುಲ್ ಹಾಗೂ ಆಥಿಯಾ ಒಟ್ಟಾಗಿ ಕಾಣಿಸಿಕೊಂಡಿದ್ದರು.

ಆಥಿಯಾ ತಂದೆ ಸುನೀಲ್ ಶೆಟ್ಟಿ ಮಗಳಿಗೆ ಸದಾ ಕಾಲ ಬೆಂಬಲವಾಗಿ ನಿಂತಿದ್ದಾರೆ. ಸಂದರ್ಶನಗಳಲ್ಲಿ ರಾಹುಲ್ ಅವರನ್ನು ಸುನೀಲ್ ಹೊಗಳಿದ್ದಾರೆ. ಅಲ್ಲದೇ ರಾಹುಲ್ ಆಥಿಯಾ ಸಂಬಂಧದ ಕುರಿತು ಒಮ್ಮೆ ಹಾಸ್ಯ ಚಟಾಕಿಯನ್ನೂ ಹಾರಿಸಿದ್ದರು. ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ‘ಈರ್ವರೂ ಒಳ್ಳೆಯ ಜೋಡಿ’ ಎಂದಿದ್ದ ಸುನೀಲ್ ಶೆಟ್ಟಿ ನಂತರ ‘ತೆರೆಯ ಮೇಲೆ’ ಎಂದು ನಕ್ಕಿದ್ದರು. ಜನ್ಮದಿನದ ಸಂದರ್ಭಗಳಲ್ಲಿ ರಾಹುಲ್- ಸುನೀಲ್ ಪರಸ್ಪರ ಶುಭಕೋರಿದ್ದು ದೊಡ್ಡ ಸುದ್ದಿಯಾಗಿತ್ತು. 2022ರಲ್ಲಿ ರಾಹುಲ್ ಹಾಗೂ ಆಥಿಯಾ ತಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಬಹುದೇ ಎಂಬುದು ಅಭಿಮಾನಿಗಳ ಸದ್ಯದ ಕುತೂಹಲ!

ಇದನ್ನೂ ಓದಿ:

‘ಜಾಕ್ವೆಲಿನ್​ ಜತೆ ಸಂಬಂಧ ಇದ್ದಿದ್ದು ನಿಜ; ಆದರೆ ನಾನು ವಂಚಕ ಅಲ್ಲ’: ಸುಕೇಶ್​ ಚಂದ್ರಶೇಖರ್​ ಹೊಸ ಪುರಾಣ

RRR Movie: ಮತ್ತೆ ಮುಂದೂಡಲ್ಪಟ್ಟ ‘ಆರ್​ಆರ್​ಆರ್​’ ಸಿನಿಮಾ ಬಿಡುಗಡೆ; ಹೊಸ ರಿಲೀಸ್​ ದಿನಾಂಕ ಯಾವಾಗ?

Published On - 2:57 pm, Sat, 1 January 22

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ