AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈಜು ಕಲಿಯಲು ಕೀಟಗಳನ್ನು ತಿಂದಿದ್ದ ನಟ; ಅಚ್ಚರಿ ವಿಚಾರ ತಿಳಿಸಿದ ಪಂಕಜ್​ ತ್ರಿಪಾಠಿ

ಶಾಲಾ ದಿನಗಳಲ್ಲಿ ಈಜು ಕಲಿಯಬೇಕು ಎಂಬುದು ಪಂಕಜ್​ ತ್ರಿಪಾಠಿ ಅವರ ಗುರಿ ಆಗಿತ್ತು. ಅದಕ್ಕಾಗಿ ಅವರು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದರು. ಒಮ್ಮೆ ಗೆಳೆಯರು ನೀಡಿದ ಸಲಹೆಯನ್ನು ಸ್ವೀಕರಿಸಿ ಅವರು ಕೀಟಗಳನ್ನು ನೀರಿನಲ್ಲಿ ಹಾಕಿಕೊಂಡು ಕುಡಿದಿದ್ದರು. ಆ ಘಟನೆಯನ್ನು ಅವರು ಈಗ ಮೆಲುಕು ಹಾಕಿದ್ದಾರೆ.

ಈಜು ಕಲಿಯಲು ಕೀಟಗಳನ್ನು ತಿಂದಿದ್ದ ನಟ; ಅಚ್ಚರಿ ವಿಚಾರ ತಿಳಿಸಿದ ಪಂಕಜ್​ ತ್ರಿಪಾಠಿ
ಪಂಕಜ್​ ತ್ರಿಪಾಠಿ
ಮದನ್​ ಕುಮಾರ್​
|

Updated on: Jan 09, 2024 | 4:24 PM

Share

ಬಾಲಿವುಡ್​ನಲ್ಲಿ ನಟ ಪಂಕಜ್​ ತ್ರಿಪಾಠಿ (Pankaj Tripathi) ಅವರು ಸಖತ್​ ಜನಪ್ರಿಯತೆ ಗಳಿಸಿದ್ದಾರೆ. ಅವರಿಗೆ ತುಂಬ ಡಿಮ್ಯಾಂಡ್​ ಇದೆ. ಎಲ್ಲ ಬಗೆಯ ಪಾತ್ರಗಳನ್ನು ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ‘ಇಂಡಿಯಾ ಟಿವಿ’ ನಡೆಸಿದ ಸಂದರ್ಶನದಲ್ಲಿ ಪಂಕಜ್​ ತ್ರಿಪಾಠಿ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಬಾಲ್ಯವನ್ನು ಹಳ್ಳಿಯಲ್ಲಿ ಕಳೆದ ಅವರಿಗೆ ಕೆಲವು ವಿಶೇಷ ಅನುಭವಗಳು ಆಗಿದ್ದವು. ಅಚ್ಚರಿ ಏನೆಂದರೆ, ಈಜು ( Swimming) ಕಲಿಯಬೇಕು ಎಂದು ಪಂಕಜ್​ ತ್ರಿಪಾಠಿ ಅವರು ಕೀಟಗಳನ್ನು (Insects) ತಿಂದಿದ್ದರು! ಆ ಘಟನೆಯನ್ನು ಅವರು ಈಗ ಮೆಲುಕು ಹಾಕಿದ್ದಾರೆ.

ಶಾಲಾ ದಿನಗಳಲ್ಲಿ ಈಜು ಕಲಿಯಬೇಕು ಎಂಬುದು ಪಂಕಜ್​ ತ್ರಿಪಾಠಿ ಅವರ ಗುರಿ ಆಗಿತ್ತು. ಅದಕ್ಕಾಗಿ ಅವರು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದರು. ಒಮ್ಮೆ ಗೆಳೆಯರು ನೀಡಿದ ಸಲಹೆಯನ್ನು ಸ್ವೀಕರಿಸಿ ಅವರು ಕೀಟಗಳನ್ನು ನೀರಿನಲ್ಲಿ ಹಾಕಿಕೊಂಡು ಕುಡಿದಿದ್ದರು. ‘ನಮ್ಮ ಮನೆಯ ಹಿಂಬದಿಯಲ್ಲಿ ನದಿ ಇತ್ತು. ಆ ನದಿಯ ನೀರಿನ ಮೇಲೆ ಚಿಕ್ಕ ಕಪ್ಪು ಕೀಟಗಳು ಇರುತ್ತಿದ್ದವು. ಆ ಊರಿನ ಮಕ್ಕಳು ಭಾರಿ ತುಂಟರಾಗಿದ್ದರು. ಆ ಕೀಟಗಳನ್ನು ತಿಂದರೆ ಈಜು ಕಲಿಯಬಹುದು ಅಂತ ಅವರು ಸಲಹೆ ನೀಡಿದರು’ ಎಂದಿದ್ದಾರೆ ಪಂಜಕ್​ ತ್ರಿಪಾಠಿ.

ಇದನ್ನೂ ಓದಿ: Pankaj Tripathi: ಸೌತ್​ ಸಿನಿಮಾ ಒಪ್ಪಿಕೊಳ್ಳದೇ ಇರಲು ಬಹಿರಂಗ ವೇದಿಕೆಯಲ್ಲಿ ಕಾರಣ ತಿಳಿಸಿದ ಪಂಕಜ್​ ತ್ರಿಪಾಠಿ

‘ನಾನು 10-12 ಕೀಟಗಳನ್ನು ಹಿಡಿದು, ನೀರಿನಲ್ಲಿ ಹಾಕಿಕೊಂಡು ಕುಡಿದೆ. ಪುಣ್ಯಕ್ಕೆ ನನ್ನ ಹೊಟ್ಟೆ ಹಾಳಾಗಲಿಲ್ಲ’ ಎಂದು ಆ ದಿನಗಳನ್ನು ಪಂಕಜ್​ ತ್ರಿಪಾಠಿ ನೆನಪಿಸಿಕೊಂಡಿದ್ದಾರೆ. ಇನ್ನೊಂದು ಇಂಟರೆಸ್ಟಿಂಗ್​ ವಿಚಾರ ಏನೆಂದರೆ, ಪಂಕಜ್ ಅವರ ಸರ್​ನೇಮ್​ ತ್ರಿಪಾಠಿ ಆಗಿರಲಿಲ್ಲ. ತಿವಾರಿ ಎಂಬುದು ಅವರ ಸರ್​ನೇಮ್​ ಆಗಿತ್ತು. ಅದನ್ನು ಬದಲಾಯಿಸಿಕೊಂಡಿದ್ದು ಯಾಕೆ ಎಂಬುದನ್ನು ಕೂಡ ಅವರೀಗ ವಿವರಿಸಿದ್ದಾರೆ.

‘ನನ್ನ ರೀತಿ ತಿವಾರಿ ಎಂದು ಹೆಸರು ಇಟ್ಟುಕೊಂಡಿದ್ದವರೆಲ್ಲ ಪೂಜಾರಿ ಆಗಿದ್ದರು ಅಥವಾ ರೈತರಾಗಿದ್ದರು. ನನಗೆ ಆ ವೃತ್ತಿ ಮಾಡಲು ಇಷ್ಟ ಇರಲಿಲ್ಲ. ನನ್ನ ಅಂಕಲ್​ ಸರ್​ನೇಮ್​ ತ್ರಿಪಾಠಿ ಆಗಿತ್ತು. ಅವರು ಸರ್ಕಾರಿ ನೌಕರ ಆಗಿದ್ದರು. ಅದೇ ಹೆಸರಿನ ಇನ್ನೊಬ್ಬರು ಹಿಂದಿ ಪ್ರೊಫೆಸರ್​ ಆಗಿದ್ದರು. ಹಾಗಾಗಿ ನಾನು ಕೂಡ ತ್ರಿಪಾಠಿ ಅಂತ ಸರ್​ನೇಮ್​ ಬದಲಿಸಿಕೊಂಡೆ’ ಎಂದು ಪಂಕಜ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ