ಈಜು ಕಲಿಯಲು ಕೀಟಗಳನ್ನು ತಿಂದಿದ್ದ ನಟ; ಅಚ್ಚರಿ ವಿಚಾರ ತಿಳಿಸಿದ ಪಂಕಜ್​ ತ್ರಿಪಾಠಿ

ಶಾಲಾ ದಿನಗಳಲ್ಲಿ ಈಜು ಕಲಿಯಬೇಕು ಎಂಬುದು ಪಂಕಜ್​ ತ್ರಿಪಾಠಿ ಅವರ ಗುರಿ ಆಗಿತ್ತು. ಅದಕ್ಕಾಗಿ ಅವರು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದರು. ಒಮ್ಮೆ ಗೆಳೆಯರು ನೀಡಿದ ಸಲಹೆಯನ್ನು ಸ್ವೀಕರಿಸಿ ಅವರು ಕೀಟಗಳನ್ನು ನೀರಿನಲ್ಲಿ ಹಾಕಿಕೊಂಡು ಕುಡಿದಿದ್ದರು. ಆ ಘಟನೆಯನ್ನು ಅವರು ಈಗ ಮೆಲುಕು ಹಾಕಿದ್ದಾರೆ.

ಈಜು ಕಲಿಯಲು ಕೀಟಗಳನ್ನು ತಿಂದಿದ್ದ ನಟ; ಅಚ್ಚರಿ ವಿಚಾರ ತಿಳಿಸಿದ ಪಂಕಜ್​ ತ್ರಿಪಾಠಿ
ಪಂಕಜ್​ ತ್ರಿಪಾಠಿ
Follow us
|

Updated on: Jan 09, 2024 | 4:24 PM

ಬಾಲಿವುಡ್​ನಲ್ಲಿ ನಟ ಪಂಕಜ್​ ತ್ರಿಪಾಠಿ (Pankaj Tripathi) ಅವರು ಸಖತ್​ ಜನಪ್ರಿಯತೆ ಗಳಿಸಿದ್ದಾರೆ. ಅವರಿಗೆ ತುಂಬ ಡಿಮ್ಯಾಂಡ್​ ಇದೆ. ಎಲ್ಲ ಬಗೆಯ ಪಾತ್ರಗಳನ್ನು ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ‘ಇಂಡಿಯಾ ಟಿವಿ’ ನಡೆಸಿದ ಸಂದರ್ಶನದಲ್ಲಿ ಪಂಕಜ್​ ತ್ರಿಪಾಠಿ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಬಾಲ್ಯವನ್ನು ಹಳ್ಳಿಯಲ್ಲಿ ಕಳೆದ ಅವರಿಗೆ ಕೆಲವು ವಿಶೇಷ ಅನುಭವಗಳು ಆಗಿದ್ದವು. ಅಚ್ಚರಿ ಏನೆಂದರೆ, ಈಜು ( Swimming) ಕಲಿಯಬೇಕು ಎಂದು ಪಂಕಜ್​ ತ್ರಿಪಾಠಿ ಅವರು ಕೀಟಗಳನ್ನು (Insects) ತಿಂದಿದ್ದರು! ಆ ಘಟನೆಯನ್ನು ಅವರು ಈಗ ಮೆಲುಕು ಹಾಕಿದ್ದಾರೆ.

ಶಾಲಾ ದಿನಗಳಲ್ಲಿ ಈಜು ಕಲಿಯಬೇಕು ಎಂಬುದು ಪಂಕಜ್​ ತ್ರಿಪಾಠಿ ಅವರ ಗುರಿ ಆಗಿತ್ತು. ಅದಕ್ಕಾಗಿ ಅವರು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದರು. ಒಮ್ಮೆ ಗೆಳೆಯರು ನೀಡಿದ ಸಲಹೆಯನ್ನು ಸ್ವೀಕರಿಸಿ ಅವರು ಕೀಟಗಳನ್ನು ನೀರಿನಲ್ಲಿ ಹಾಕಿಕೊಂಡು ಕುಡಿದಿದ್ದರು. ‘ನಮ್ಮ ಮನೆಯ ಹಿಂಬದಿಯಲ್ಲಿ ನದಿ ಇತ್ತು. ಆ ನದಿಯ ನೀರಿನ ಮೇಲೆ ಚಿಕ್ಕ ಕಪ್ಪು ಕೀಟಗಳು ಇರುತ್ತಿದ್ದವು. ಆ ಊರಿನ ಮಕ್ಕಳು ಭಾರಿ ತುಂಟರಾಗಿದ್ದರು. ಆ ಕೀಟಗಳನ್ನು ತಿಂದರೆ ಈಜು ಕಲಿಯಬಹುದು ಅಂತ ಅವರು ಸಲಹೆ ನೀಡಿದರು’ ಎಂದಿದ್ದಾರೆ ಪಂಜಕ್​ ತ್ರಿಪಾಠಿ.

ಇದನ್ನೂ ಓದಿ: Pankaj Tripathi: ಸೌತ್​ ಸಿನಿಮಾ ಒಪ್ಪಿಕೊಳ್ಳದೇ ಇರಲು ಬಹಿರಂಗ ವೇದಿಕೆಯಲ್ಲಿ ಕಾರಣ ತಿಳಿಸಿದ ಪಂಕಜ್​ ತ್ರಿಪಾಠಿ

‘ನಾನು 10-12 ಕೀಟಗಳನ್ನು ಹಿಡಿದು, ನೀರಿನಲ್ಲಿ ಹಾಕಿಕೊಂಡು ಕುಡಿದೆ. ಪುಣ್ಯಕ್ಕೆ ನನ್ನ ಹೊಟ್ಟೆ ಹಾಳಾಗಲಿಲ್ಲ’ ಎಂದು ಆ ದಿನಗಳನ್ನು ಪಂಕಜ್​ ತ್ರಿಪಾಠಿ ನೆನಪಿಸಿಕೊಂಡಿದ್ದಾರೆ. ಇನ್ನೊಂದು ಇಂಟರೆಸ್ಟಿಂಗ್​ ವಿಚಾರ ಏನೆಂದರೆ, ಪಂಕಜ್ ಅವರ ಸರ್​ನೇಮ್​ ತ್ರಿಪಾಠಿ ಆಗಿರಲಿಲ್ಲ. ತಿವಾರಿ ಎಂಬುದು ಅವರ ಸರ್​ನೇಮ್​ ಆಗಿತ್ತು. ಅದನ್ನು ಬದಲಾಯಿಸಿಕೊಂಡಿದ್ದು ಯಾಕೆ ಎಂಬುದನ್ನು ಕೂಡ ಅವರೀಗ ವಿವರಿಸಿದ್ದಾರೆ.

‘ನನ್ನ ರೀತಿ ತಿವಾರಿ ಎಂದು ಹೆಸರು ಇಟ್ಟುಕೊಂಡಿದ್ದವರೆಲ್ಲ ಪೂಜಾರಿ ಆಗಿದ್ದರು ಅಥವಾ ರೈತರಾಗಿದ್ದರು. ನನಗೆ ಆ ವೃತ್ತಿ ಮಾಡಲು ಇಷ್ಟ ಇರಲಿಲ್ಲ. ನನ್ನ ಅಂಕಲ್​ ಸರ್​ನೇಮ್​ ತ್ರಿಪಾಠಿ ಆಗಿತ್ತು. ಅವರು ಸರ್ಕಾರಿ ನೌಕರ ಆಗಿದ್ದರು. ಅದೇ ಹೆಸರಿನ ಇನ್ನೊಬ್ಬರು ಹಿಂದಿ ಪ್ರೊಫೆಸರ್​ ಆಗಿದ್ದರು. ಹಾಗಾಗಿ ನಾನು ಕೂಡ ತ್ರಿಪಾಠಿ ಅಂತ ಸರ್​ನೇಮ್​ ಬದಲಿಸಿಕೊಂಡೆ’ ಎಂದು ಪಂಕಜ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?