ಪಾಪರಾಜಿಗಳ ಮೇಲೆ ರಣಬೀರ್ ಕಪೂರ್ ಕೆಂಡಾಮಂಡಲ; ವಿಡಿಯೋ ವೈರಲ್

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರು ಕಾರಿನಿಂದ ಇಳಿಯುವಾಗ ಈ ಘಟನೆ ನಡೆದಿದೆ. ಫೋಟೋ, ವಿಡಿಯೋ ತೆಗೆಯುವ ಸಲುವಾಗಿ ಮುಗಿಬಿದ್ದ ಪಾಪರಾಜಿಗಳಿಗೆ ರಣಬೀರ್ ಕಪೂರ್ ಅವರು ಎಚ್ಚರಿಕೆ ನೀಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಪಾಪರಾಜಿಗಳ ವರ್ತನೆಗೆ ಸೋಶಿಯಲ್ ಮೀಡಿಯಾದಲ್ಲೂ ಟೀಕೆ ವ್ಯಕ್ತವಾಗುತ್ತಿದೆ.

ಪಾಪರಾಜಿಗಳ ಮೇಲೆ ರಣಬೀರ್ ಕಪೂರ್ ಕೆಂಡಾಮಂಡಲ; ವಿಡಿಯೋ ವೈರಲ್
Ranbir Kapoor

Updated on: May 06, 2026 | 12:48 PM

ಬಾಲಿವುಡ್‌ನ ಸ್ಟಾರ್ ದಂಪತಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮಂಗಳವಾರ (ಮೇ 6) ಸಂಜೆ ಕುಟುಂಬದ ಜೊತೆ ಸಮಯ ಕಳೆಯಲು ಹೊರಬಂದಿದ್ದರು. ಆದರೆ, ಈ ವೇಳೆ ಪಾಪರಾಜಿಗಳ ವರ್ತನೆಯಿಂದ ರಣಬೀರ್ ಕಪೂರ್ (Ranbir Kapoor) ಅವರು ನೇರವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಈ ಮೊದಲು ಕೂಡ ರಣಬೀರ್ ಕಪೂರ್ ಅವರು ಇದೇ ರೀತಿ ಕೋಪ ಮಾಡಿಕೊಂಡಿದ್ದರು. ಆದರೂ ಕೂಡ ಪಾಪರಾಜಿಗಳ (Paparazzi) ವರ್ತನೆ ಸುಧಾರಿಸಿಲ್ಲ.

1. ಪಾಪರಾಜಿಗಳ ವರ್ತನೆ ಕಂಡು ತಾಳ್ಮೆ ಕಳೆದುಕೊಂಡ ರಣಬೀರ್ ಕಪೂರ್.

2. ‘ಹಿಂದಕ್ಕೆ ಸರಿಯಿರಿ’ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ ಬಾಲಿವುಡ್ ನಟ.

3. ಸೋಶಿಯಲ್ ಮೀಡಿಯಾದಲ್ಲಿ ರಣಬೀರ್ ಕಪೂರ್ ಅವರ ವಿಡಿಯೋ ವೈರಲ್.

ರಣಬೀರ್ ಅವರ ತಾಯಿ ನೀತು ಕಪೂರ್ ಮತ್ತು ಸಹೋದರಿ ರಿದ್ಧಿಮಾ ಕಪೂರ್ ಸಾಹ್ನಿ ನಟಿಸಿರುವ ‘ದಾದಿ ಕಿ ಶಾದಿ’ ಸಿನಿಮಾದ ವಿಶೇಷ ಪ್ರದರ್ಶನಕ್ಕಾಗಿ ದಂಪತಿ ಆಗಮಿಸಿದ್ದರು. ರಣಬೀರ್ ಮತ್ತು ಆಲಿಯಾ ಅವರು ಕಾರಿನಿಂದ ಇಳಿಯುತ್ತಿದ್ದಂತೆಯೇ, ಪಾಪರಾಜಿಗಳು ಅಕ್ಷರಶಃ ಅವರನ್ನು ಸುತ್ತುವರಿದು ಫೋಟೋ ತೆಗೆಯಲು ಮುಗಿಬಿದ್ದರು.

ಕಾರಿನ ಬಾಗಿಲಿನವರೆಗೂ ಕ್ಯಾಮೆರಾಗಳು ಬಂದಿದ್ದರಿಂದ ರಣಬೀರ್ ಅವರು ಕ್ಷಣಕಾಲ ತಾಳ್ಮೆ ಕಳೆದುಕೊಂಡರು. ವಿಡಿಯೋದಲ್ಲಿ ಕಂಡುಬಂದಂತೆ, ರಣಬೀರ್ ಅವರು ಪಾಪರಾಜಿಗಳನ್ನು ಹಿಂದಕ್ಕೆ ಸರಿಯುವಂತೆ ಕೇಳಿಕೊಂಡರು. ಅವರು ಗರಂ ಆಗಿಯೇ ಈ ಮಾತು ಹೇಳಿದರು. ‘ನಿಮಗೆ ಫೋಟೋ ಬೇಕಲ್ವಾ? ಬನ್ನಿ’ ಎಂದು ಹೇಳುತ್ತಾ ಸ್ವಲ್ಪ ದೂರ ಹೋಗಿ ಪೋಸ್ ನೀಡಲು ಸ್ಥಳಾವಕಾಶ ಮಾಡಿಕೊಡುವಂತೆ ಕೇಳಿದರು. ನಂತರ ಪಾಪರಾಜಿಗಳು ಕೂಡ ಒಬ್ಬರಿಗೊಬ್ಬರು ‘ಹಿಂದಕ್ಕೆ ಸರಿಯಿರಿ’ ಎಂದು ಹೇಳುತ್ತಾ ದಾರಿ ಮಾಡಿಕೊಟ್ಟರು.

ರಣಬೀರ್ ಕಪೂರ್ ವೈರಲ್ ವಿಡಿಯೋ:

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಅನೇಕ ನೆಟ್ಟಿಗರು ರಣಬೀರ್ ಕಪೂರ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ‘ಸೆಲೆಬ್ರಿಟಿಗಳ ಖಾಸಗಿತನಕ್ಕೆ ಗೌರವ ನೀಡಬೇಕು. ಫೋಟೋ ತೆಗೆಯುವ ನೆಪದಲ್ಲಿ ಮುಖದ ಹತ್ತಿರ ಕ್ಯಾಮೆರಾ ಹಿಡಿಯುವುದು ಸರಿಯಲ್ಲ’ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಈ ರೀತಿಯ ಸನ್ನಿವೇಶಗಳು ಈ ಮೊದಲು ಬೇರೆ ಸೆಲೆಬ್ರಿಟಿಗಳಿಗೂ ಎದುರಾಗಿತ್ತು.

ಇದನ್ನೂ ಓದಿ: ‘ರಾಮಾಯಣ’ ಸಿನಿಮಾದಲ್ಲಿ ರಣಬೀರ್ ಕಪೂರ್ ದ್ವಿಪಾತ್ರ: ಶ್ರೀರಾಮನ ಜೊತೆಗೆ ಪರಶುರಾಮನ ದರ್ಶನ

ಸಿನಿಮಾ ವಿಚಾರಕ್ಕೆ ಬರುವುದಾದರೆ, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ‘ಲವ್ ಆ್ಯಂಡ್ ವಾರ್’ ಚಿತ್ರದಲ್ಲಿ ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ವಿಕ್ಕಿ ಕೌಶಲ್ ಜೊತೆಯಾಗಿ ನಟಿಸುತ್ತಿದ್ದಾರೆ. ಅಲ್ಲದೇ, ನಿತೇಶ್ ತಿವಾರಿ ಅವರ ಮಹತ್ವಾಕಾಂಕ್ಷೆಯ ‘ರಾಮಾಯಣ’ ಚಿತ್ರದಲ್ಲಿ ರಣಬೀರ್ ಕಪೂರ್ ನಟಿಸಿದ್ದು, ಆ ಸಿನಿಮಾದ ಬಿಡುಗಡೆಗೆ ಫ್ಯಾನ್ಸ್ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us