Shah Rukh Khan: ಅಂದುಕೊಂಡಂತೆ ನಡೆಯಲೇ ಇಲ್ಲ ಶಾರುಖ್ ಖಾನ್ ಪ್ಲಾನ್; ‘ಜವಾನ್​’ಗೆ ಹಿನ್ನಡೆ

Jawan Movie: ಶಾರುಖ್ ಖಾನ್ ನಟನೆಯ ಈ ಚಿತ್ರಕ್ಕೆ ನಯನತಾರಾ ನಾಯಕಿ. ವಿಜಯ್ ಸೇತುಪತಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಕೆಲಸಗಳು ವಿಳಂಬ ಆಗಿವೆ.

Shah Rukh Khan: ಅಂದುಕೊಂಡಂತೆ ನಡೆಯಲೇ ಇಲ್ಲ ಶಾರುಖ್ ಖಾನ್ ಪ್ಲಾನ್; ‘ಜವಾನ್​’ಗೆ ಹಿನ್ನಡೆ
ಶಾರುಖ್ ಖಾನ್

Updated on: May 05, 2023 | 7:18 AM

ದೊಡ್ಡ ಬಜೆಟ್​ ಚಿತ್ರಗಳನ್ನು ಅಂದುಕೊಂಡ ಡೇಟ್​ಗೆ ರಿಲೀಸ್ ಮಾಡೋದು ದೊಡ್ಡ ಚಾಲೆಂಜ್​. ಹೀರೋಗಳಿಗೆ ಇರುವ ಬೇರೆ ಕಮಿಟ್​ಮೆಂಟ್, ಶೂಟಿಂಗ್ ವೇಳೆ ಆಗುವ ತೊಂದರೆ ಮತ್ತಿತ್ಯಾದಿ ವಿಚಾರಗಳಿಂದ ರಿಲೀಸ್ ಡೇಟ್ ಮುಂದಕ್ಕೆ ಹಾಕಿಕೊಳ್ಳಬೇಕಾದ ಅನಿವಾರ್ಯತೆ ಬರುತ್ತದೆ. ಈಗ ಶಾರುಖ್ ಖಾನ್ (Shah Rukh Khan) ನಟನೆಯ ‘ಜವಾನ್’ (Jawan Movie) ಚಿತ್ರಕ್ಕೂ ಹಾಗೆಯೇ ಆಗಿದೆ. ಈ ಚಿತ್ರವನ್ನು ಜೂನ್ 2ರಂದು ತೆರೆಗೆ ತರಬೇಕು ಎಂದು ತಂಡ ಟಾರ್ಗೆಟ್ ಇಟ್ಟುಕೊಂಡಿತ್ತು. ಆದರೆ, ಅದು ತಲೆಕೆಳಗಾಗಿದೆ. ‘ಜವಾನ್​’ ಸಿನಿಮಾ ಅಂದುಕೊಂಡ ಡೇಟ್​ಗೆ ರಿಲೀಸ್ ಆಗುತ್ತಿಲ್ಲ.

ತಮಿಳಿನಲ್ಲಿ ದಳಪತಿ ವಿಜಯ್ ಜೊತೆ ಬ್ಯಾಕ್​ ಟು ಬ್ಯಾಕ್ ಸಿನಿಮಾ ಮಾಡಿ ಜನಪ್ರಿಯತೆ ಪಡೆದವರು ಅಟ್ಲೀ. ಅವರು ‘ಜವಾನ್’ ಸಿನಿಮಾ ಮೂಲಕ ಇದೇ ಮೊದಲ ಬಾರಿಗೆ ಬಾಲಿವುಡ್​ಗೆ ಕಾಲಿಡುತ್ತಿದ್ದಾರೆ. ಶಾರುಖ್ ಖಾನ್ ನಟನೆಯ ಈ ಚಿತ್ರಕ್ಕೆ ನಯನತಾರಾ ನಾಯಕಿ. ವಿಜಯ್ ಸೇತುಪತಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಾರುಖ್ ಒಡೆತನದ ರೆಡ್ ಚಿಲ್ಲೀಸ್​ ಎಂಟರ್​ಟೇನ್​ಮೆಂಟ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಈ ಸಿನಿಮಾದ ಕೆಲಸಗಳು ವಿಳಂಬ ಆಗಿವೆ.

‘ಪಠಾಣ್’ ಸಿನಿಮಾ ಗೆದ್ದ ಬಳಿಕ ಶಾರುಖ್ ‘ಜವಾನ್​’ ಸಿನಿಮಾ ಚಿತ್ರೀಕರಣವನ್ನು ಪೂರ್ಣಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ. ಆದರೆ, ಈ ಚಿತ್ರದ ವಿಎಫ್​ಎಕ್ಸ್ ಕೆಲಸಗಳು ಬಾಕಿ ಉಳಿದಿವೆ. ಅವನ್ನು ಇನ್ನೊಂದು ತಿಂಗಳಲ್ಲಿ ಪೂರ್ಣಗೊಳಿಸೋದು ಅಸಾಧ್ಯ. ಇಷ್ಟೇ ಅಲ್ಲ, ಈ ಮಧ್ಯೆ ಟ್ರೇಲರ್, ಸಾಂಗ್​ಗಳನ್ನು ರಿಲೀಸ್ ಮಾಡೋಕೆ ಆಗುವುದಿಲ್ಲ. ಹೀಗಾಗಿ, ರಿಲೀಸ್ ದಿನಾಂಕ ಮುಂದಕ್ಕೆ ಹೋಗುತ್ತಿದೆ. ‘ಪಠಾಣ್’ ರೀತಿಯೇ ‘ಜವಾನ್’ ಸಿನಿಮಾದಲ್ಲೂ ಭರ್ಜರಿ ಆ್ಯಕ್ಷನ್ ಇರಲಿದೆ.

ಇದನ್ನೂ ಓದಿ: Shah Rukh Khan: ಸೆಲ್ಫಿ ಕೇಳಲು ಬಂದ ಅಭಿಮಾನಿಯನ್ನು ತಳ್ಳಿದ ಶಾರುಖ್​ ಖಾನ್​; ‘ಪಠಾಣ್​’ ಗೆದ್ದ ಮೇಲೆ ಸೊಕ್ಕು ಬಂತಾ?

‘ಪಠಾಣ್​’ ದೇಶಪ್ರೇಮ ಇರುವ ಸಿನಿಮಾ ಆಗಿತ್ತು. ಗಣರಾಜ್ಯೋತ್ಸವದ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಆಗಿದ್ದು ಚಿತ್ರಕ್ಕೆ ಸಹಕಾರಿ ಆಗಿತ್ತು. ಈಗ ‘ಜವಾನ್’ ಸಿನಿಮಾ ಕೂಡ ಆಗಸ್ಟ್ 15ರ ಸಂದರ್ಭದಲ್ಲಿ ರಿಲೀಸ್ ಮಾಡಿದರೆ ಉತ್ತಮ ಅನ್ನೋದು ಶಾರುಖ್ ಖಾನ್ ಪ್ಲ್ಯಾನ್. ಈ ಸಂದರ್ಭದಲ್ಲಿ ಹಲವು ಸಿನಿಮಾಗಳು ರಿಲೀಸ್​ಗೆ ರೆಡಿ ಇರುತ್ತವೆ. ಅವುಗಳ ಜೊತೆ ‘ಜವಾನ್​’ ಸ್ಪರ್ಧೆಗೆ ಇಳಿಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

‘ಜವಾನ್’ ಸಿನಿಮಾ ದೊಡ್ಡ ಬಜೆಟ್​ನಲ್ಲಿ ಸಿದ್ಧಗೊಳ್ಳುತ್ತಿದೆ. ಈ ಚಿತ್ರದಲ್ಲಿ ಶಾರುಖ್ ಅವರು ಸೈನಿಕನ ಪಾತ್ರ ಮಾಡಿದ್ದಾರೆ. ಈ ಸಿನಿಮಾದಿಂದ ಶಾರುಖ್ ಖಾನ್ ಮತ್ತೊಂದು ಗೆಲುವು ಕಾಣುವ ಕನಸು ಕಾಣುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us