AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬದಲಾಯಿತು ಸುಶಾಂತ್ ಸಿಂಗ್ ರಜಪೂತ್ ಫೇಸ್​ಬುಕ್ ಖಾತೆಯ ಡಿಪಿ; ಗಾಬರಿ ಬಿದ್ದ ಫ್ಯಾನ್ಸ್​, ಏನಿದು ಸಮಾಚಾರ?

Sushant Singh Rajput: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನಗೊಂಡು ವರ್ಷ ಕಳೆದ ಮೇಲೆ ಅವರ ಫೇಸ್​ಬುಕ್ ಖಾತೆಯ ಡಿಪಿ ಬದಲಾಯಿಸಲಾಗಿದೆ. ಈ ಘಟನೆಯಿಂದ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ವಾಸ್ತವವಾಗಿ ಅಲ್ಲಿ ನಡೆದಿದ್ದೇನು ಎಂಬ ಸಂಪೂರ್ಣ ವರದಿ ಇಲ್ಲಿದೆ.

ಬದಲಾಯಿತು ಸುಶಾಂತ್ ಸಿಂಗ್ ರಜಪೂತ್ ಫೇಸ್​ಬುಕ್ ಖಾತೆಯ ಡಿಪಿ; ಗಾಬರಿ ಬಿದ್ದ ಫ್ಯಾನ್ಸ್​, ಏನಿದು ಸಮಾಚಾರ?
ಸುಶಾಂತ್ ಸಿಂಗ್ ರಜಪೂತ್ ಫೇಸ್​ಬುಕ್ ಖಾತೆಯ ಹೊಸ ಚಿತ್ರ
Follow us
TV9 Web
| Updated By: shivaprasad.hs

Updated on: Aug 21, 2021 | 3:50 PM

ಬಾಲಿವುಡ್​ ನಟ ಸುಶಾಂತ್ ಸಿಂಗ್ ರಜಪೂತ್ ಅಭಿಮಾನಿಗಳಿಗೆ ತಲೆಕೆಡಿಸಿಕೊಳ್ಳುವ ಪ್ರಕರಣವೊಂದು ಫೇಸ್​ಬುಕ್ ಅಂಗಳದಲ್ಲಿ ಜರುಗಿದೆ. ಸುಶಾಂತ್ ಸಿಂಗ್​ರ ಅಧಿಕೃತ ಫೇಸ್​ಬುಕ್ ಖಾತೆಯ ಪ್ರೊಫೈಲ್ ಬದಲಾಯಿಸಲಾಗಿದ್ದು, ಅಭಿಮಾನಿಗಳು ಗಾಬರಿ ಬಿದ್ದಿದ್ದಾರೆ. ಸುಶಾಂತ್ ಸಿಂಗ್ ಇಹಲೋಕ ತ್ಯಜಿಸಿ ವರ್ಷ ಕಳೆದ ಮೇಲೆ ಅವರ ಅಧಿಕೃತ ಫೇಸ್​ಬುಕ್ ಖಾತೆಯಲ್ಲಿ ಬದಲಾವಣೆಗಳು ಏಕೆ ನಡೆಯುತ್ತಿವೆ ಎಂಬುದು ತಿಳಿಯದೇ, ಅಭಿಮಾನಿಗಳು ನಾನಾವಿಧದ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಈ ಕುರಿತ ಕುತೂಹಲಕರ ವರದಿ ಇಲ್ಲಿದೆ.

ಸುಶಾಂತ್ ಸಿಂಗ್ ಫೇಸ್​ಬುಕ್ ಖಾತೆಯಲ್ಲಿ ಏನೇನು ಬದಲಾವಣೆಯಾಗಿದೆ?: ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅಧಿಕೃತ ಫೇಸ್​ಬುಕ್ ಖಾತೆಯಲ್ಲಿನ ಅವರ ಪ್ರೊಫೈಲ್ ಬದಲಿಸಲಾಗಿದೆ. ಅವರ ಪ್ರೊಫೈಲ್ ಬದಲಿಸಿದ ನಂತರ ಗೊಂದಲಗೊಂಡ ಅಭಿಮಾನಿಗಳು ಅವರ ಹಳೆಯ ಪೋಸ್ಟ್​ಗಳಿಗೂ ಹೋಗಿ ಕಾಮೆಂಟ್ ಹಾಕುತ್ತಿದ್ದು, ಈ ಖಾತೆಯನ್ನು ಯಾರು ಹ್ಯಾಂಡಲ್ ಮಾಡುತ್ತಿದ್ದೀರಿ ಎಂದು ಪ್ರಶ್ನೆ ಕೇಳಿದ್ದಾರೆ.

ಅಭಿಮಾನಿಗಳ ಗೊಂದಲಗಳೇನು? ಅಭಿಮಾನಿಗಳು ತಮ್ಮ ಅಚ್ಚರಿಯನ್ನು ನಾನಾ ವಿಧವಾಗಿ ಕಾಮೆಂಟ್ ಮೂಲಕ ತಿಳಿಸುತ್ತಿದ್ದಾರೆ. ಕೆಲವರು ‘ಓ ದೇವರೇ! ನನಗೊಮ್ಮೆ ಶಾಕ್ ಆಯ್ತು’ ಎಂದರೆ, ಮತ್ತೆ ಕೆಲವರು ‘ಈ ಖಾತೆಯನ್ನು ಯಾರು ನಿರ್ವಹಿಸುತ್ತಿದ್ದೀರಿ? ದಯವಿಟ್ಟು ತಿಳಿಸಿ’ ಎಂದು ಕಾಮೆಂಟ್ ಮಾಡಿದ್ದಾರೆ. ಹಲವಾರು ಅಭಿಮಾನಿಗಳಿಗೆ ಈ ನಡೆ ಹಿಡಿಸಿಲ್ಲ. ನೇರವಾಗಿ ಅಸಮಾಧಾನ ತೋಡಿಕೊಳ್ಳುತ್ತಿರುವ ಅವರು, ‘ಈ ಖಾತೆಯನ್ನು ನಿರ್ವಹಿಸುತ್ತಿರುವವರು ಯಾರು? ಹೀಗೆ ಚಿತ್ರಗಳನ್ನು ಅಪ್​ಲೋಡ್ ಮಾಡುವ ಮೂಲಕ ನೀವು ಏನನ್ನು ಸಾಧಿಸಲು ಹೊರಟಿದ್ದೀರಿ?’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

Sushant Singh Rajput

ಅಭಿಮಾನಿಗಳ ಪ್ರತಿಕ್ರಿಯೆ

ವಾಸ್ತವವಾಗಿ ಆಗಿರುವುದೇನು?

ಸುಶಾಂತ್ ಸಿಂಗ್ ರಜಪೂತ್ ನಿಧನಾನಂತರ ಅವರ ಎಲ್ಲಾ ಸಾಮಾಜಿಕ ಜಾಲತಾಣಗಳು ತಟಸ್ಥವಾಗಿದ್ದವು. ನಿಧನದ ಎರಡು ದಿನದ ನಂತರ ಅವರ ಫೇಸ್​ಬುಕ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿತ್ತು. ಅದರಲ್ಲಿ ಬರೆದಿದ್ದ ಪ್ರಕಾರ, ‘ಸುಶಾಂತ್ ಸಿಂಗ್ ಅವರಿಗೆ ಅಭಿಮಾನಿಗಳೇ ಗಾಡ್​ಫಾದರ್​ಗಳು. ಸುಶಾಂತ್​ಗೆ ಈ ಹಿಂದೆ ಮಾತು ಕೊಟ್ಟಂತೆ, ಈ ಖಾತೆಯಲ್ಲಿ ಅವರ ಯೋಚನೆಗಳು, ಕನಸುಗಳು, ಹಾರೈಕೆಗಳು, ಕಲಿಕೆಗಳನ್ನು ಹಂಚಿಕೊಳ್ಳುತ್ತೇವೆ. ಈ ಮೂಲಕ ಸುಶಾಂತ್ ಬಿಟ್ಟುಹೋಗಿರುವ ಧನಾತ್ಮಕ ಚಿಂತನೆಗಳನ್ನು ಸೇರಿಸಿ ಅವರ ಸುಂದರ ಕಲೆಕ್ಷನ್ ಮಾಡುತ್ತೇವೆ’ ಎಂದು ಪೋಸ್ಟ್ ಹಂಚಿಕೊಳ್ಳಲಾಗಿತ್ತು. ಅದರಂತೆ ಈಗ ಸುಶಾಂತ್ ಅವರ ಹೊಸ ಚಿತ್ರವನ್ನು ಅಪ್​ಲೋಡ್ ಮಾಡಲಾಗಿದೆ.

ಸುಶಾಂತ್ ಸಿಂಗ್ ನೂತನ ಡಿಪಿ:

ಬಹಳಷ್ಟು ಅಭಿಮಾನಿಗಳಿಗೆ ಈ ವಿಷಯ ತಿಳಿಯದ ಕಾರಣ ಮತ್ತು ಇದ್ದಕ್ಕಿದ್ದಂತೆ ಸುಶಾಂತ್ ಖಾತೆ ಆಕ್ಟೀವ್ ಆದ ಕಾರಣ ಗೊಂದಲಗೊಂಡಿದ್ದಾರೆ. ಆದರೆ ಈ ಕುರಿತು ಸುಶಾಂತ್ ಖಾತೆಯಿಂದ ಮತ್ಯಾವ ಹೊಸ ಸ್ಪಷ್ಟನೆಯನ್ನೂ ನೀಡಲಾಗಿಲ್ಲ.

ಇದನ್ನೂ ಓದಿ:

Raksha Bandhan: ‘ಡಾಲಿ’ ಧನಂಜಯ ಜೊತೆ ಮಂಗಳಮುಖಿಯರ ರಕ್ಷಾ ಬಂಧನ ಹಬ್ಬದ ಸಂಭ್ರಮ

ಎಸ್​.ಪಿ. ಬಾಲಸುಬ್ರಹ್ಮಣ್ಯಂ ನೆನೆದು ಹಾಡುವಾಗಲೇ ಕಣ್ಣೀರಿಟ್ಟ ರಾಜೇಶ್​ ಕೃಷ್ಣನ್​

(Sushant Singh Rajput fb account profile is updated and fans are shocked)

ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ
ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ
ಮದ್ವೆಯಲ್ಲಿ ಡಾನ್ಸ್ ಮಾಡುತ್ತಿರುವಾಗಲೇ ಕುಸಿದುಬಿದ್ದು ಯುವಕ ಸಾವು
ಮದ್ವೆಯಲ್ಲಿ ಡಾನ್ಸ್ ಮಾಡುತ್ತಿರುವಾಗಲೇ ಕುಸಿದುಬಿದ್ದು ಯುವಕ ಸಾವು
ಮುಡಾವನ್ನು ಎಂಡಿಎ ಆಗಿ ಪರಿವರ್ತಿಸಿದ್ದಕ್ಕೆ ಸಿಂಎಂರನ್ನು ಶ್ವಾಘಿಸಿದ ಜಿಟಿಡಿ
ಮುಡಾವನ್ನು ಎಂಡಿಎ ಆಗಿ ಪರಿವರ್ತಿಸಿದ್ದಕ್ಕೆ ಸಿಂಎಂರನ್ನು ಶ್ವಾಘಿಸಿದ ಜಿಟಿಡಿ
ಸಿಂಧೂ ಜಲ ಒಪ್ಪಂದ ರದ್ದತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪಾಕಿಸ್ತಾನಿ ರೈತರು
ಸಿಂಧೂ ಜಲ ಒಪ್ಪಂದ ರದ್ದತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪಾಕಿಸ್ತಾನಿ ರೈತರು
16 ವರ್ಷದ ಬಳಿಕ ವಾಡಿಕೆಗಿಂತ ಮೊದಲೇ ಮುಂಗಾರು ಮಳೆ..ಏನು ನಿನ್ನ ಲೀಲೆ...!
16 ವರ್ಷದ ಬಳಿಕ ವಾಡಿಕೆಗಿಂತ ಮೊದಲೇ ಮುಂಗಾರು ಮಳೆ..ಏನು ನಿನ್ನ ಲೀಲೆ...!
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ: ಹವಾಮಾನ ಇಲಾಖೆ
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ: ಹವಾಮಾನ ಇಲಾಖೆ