ಎಂಎಸ್ ಸುಬ್ಬುಲಕ್ಷ್ಮಿ ಪಾತ್ರಕ್ಕೆ ರಶ್ಮಿಕಾ ಆಯ್ಕೆಗೆ ಟೀಕೆ: ಕಾರಣ?

ಎಂಎಸ್ ಸುಬ್ಬುಲಕ್ಷ್ಮಿ ಅವರ ಜೀವನ ಆಧರಿತ ಸಿನಿಮಾದ ನಿರ್ದೇಶನವನ್ನು ಗೌತಮ್ ತಿನರೂರಿ ಮಾಡಲಿದ್ದಾರೆ. ಗೌತಮ್ ತಿನರೂರಿ ನಿರ್ದೇಶನ ಮಾಡಲಿರುವ ಈ ಸಿನಿಮಾನಲ್ಲಿ ಎಂಎಸ್ ಸುಬ್ಬುಲಕ್ಷ್ಮಿ ಅವರ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟನೆ ಮಾಡಲಿದ್ದಾರೆ. ಆದರೆ ಸುಬ್ಬುಲಕ್ಷ್ಮಿ ಅವರ ಪಾತ್ರಕ್ಕೆ ರಶ್ಮಿಕಾ ಮಂದಣ್ಣ ಅವರನ್ನು ಆಯ್ಕೆ ಮಾಡಿರುವ ಬಗ್ಗೆ ಕೆಲ ಟೀಕೆಗಳು ವ್ಯಕ್ತವಾಗುತ್ತಿವೆ.

ಎಂಎಸ್ ಸುಬ್ಬುಲಕ್ಷ್ಮಿ ಪಾತ್ರಕ್ಕೆ ರಶ್ಮಿಕಾ ಆಯ್ಕೆಗೆ ಟೀಕೆ: ಕಾರಣ?
Rashmika Ms Subbulakshmi

Updated on: Sep 20, 2026 | 5:33 PM

ಮುಖ್ಯಾಂಶಗಳು

  • ರಶ್ಮಿಕಾ ಮಂದಣ್ಣ ನಟನೆಯ ಸಿನಿಮಾ
  • ಎಂ ಎಸ್ ಸುಬ್ಬುಲಕ್ಷ್ಮಿ ಪಾತ್ರದಲ್ಲಿ ರಶ್ಮಿಕಾ
  • ಎಂ ಎಸ್ ಸುಬ್ಬುಲಕ್ಷ್ಮಿ ಪಾತ್ರದಲ್ಲಿ ರಶ್ಮಿಕಾ ಆಯ್ಕೆಗೆ ಟೀಕೆ

ಭಾರತ ಸಂಗೀತ ಕ್ಷೇತ್ರದ ಲಿಜೆಂಡರಿ ಗಾಯಕಿ, ಭಾರತ ರತ್ನ ಎಂಎಸ್ ಸುಬ್ಬುಲಕ್ಷ್ಮಿ ಅವರ ಜೀವನ ಆಧರಿಸಿದ ಸಿನಿಮಾ ನಿರ್ಮಾಣ ಆಗುತ್ತಿದ್ದು, ಇತ್ತೀಚೆಗಷ್ಟೆ ಸಿನಿಮಾದ ಮುಹೂರ್ತ ಕಾರ್ಯಕ್ರಮ ಚೆನ್ನೈನಲ್ಲಿ ಬಲು ಅದ್ಧೂರಿಯಾಗಿ ನೆರವೇರಿತು. ಗೌತಮ್ ತಿನರೂರಿ ನಿರ್ದೇಶನ ಮಾಡಲಿರುವ ಈ ಸಿನಿಮಾನಲ್ಲಿ ಎಂಎಸ್ ಸುಬ್ಬುಲಕ್ಷ್ಮಿ ಅವರ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟನೆ ಮಾಡಲಿದ್ದಾರೆ. ಆದರೆ ಸುಬ್ಬುಲಕ್ಷ್ಮಿ ಅವರ ಪಾತ್ರಕ್ಕೆ ರಶ್ಮಿಕಾ ಮಂದಣ್ಣ ಅವರನ್ನು ಆಯ್ಕೆ ಮಾಡಿರುವ ಬಗ್ಗೆ ಕೆಲ ಟೀಕೆಗಳು ವ್ಯಕ್ತವಾಗುತ್ತಿವೆ.

ಎಂಎಸ್ ಸುಬ್ಬುಲಕ್ಷ್ಮಿ ಅವರು ಭಾರತ ಕಂಡ ಕೆಲವೇ ಕೆಲವು ಅದ್ಭುತ ಗಾಯಕಿಯರಲ್ಲಿ ಒಬ್ಬರು. ಅವರ ಜೀವನ ಅವರ ಗಾಯನದಷ್ಟು ಮಧುರವಾಗಿರಲಿಲ್ಲ, ಸಾಕಷ್ಟು ಏಳು-ಬೀಳುಗಳನ್ನು ಕಂಡವರು ಅವರು. ಅಂಥಹಾ ಮಹಾನ್ ಕಲಾವಿದೆಯ ಪಾತ್ರದಲ್ಲಿ ನಟಿಸುವ ಅವಕಾಶ ರಶ್ಮಿಕಾ ಮಂದಣ್ಣ ಅವರಿಗೆ ದೊರೆತಿದೆ. ಸಿನಿಮಾದ ಮುಹೂರ್ತ ಕಾರ್ಯಕ್ರಮದಲ್ಲಿ ಖುದ್ದು ರಶ್ಮಿಕಾ ಮಂದಣ್ಣ ಈ ಬಗ್ಗೆ ಭಾವುಕವಾಗಿ ಮಾತನಾಡಿದ್ದರು. ಆದರೆ ರಶ್ಮಿಕಾರನ್ನು ಆ ಪಾತ್ರಕ್ಕೆ ಆಯ್ಕೆ ಮಾಡಿರುವುದಕ್ಕೆ ಕೆಲವರು ತಕರಾರು ತೆಗೆದಿದ್ದಾರೆ.

ತಕರಾರಿಗೆ ಮುಖ್ಯ ಕಾರಣ ರಶ್ಮಿಕಾ ಅವರ ಭಾಷೆ. ಸುಬ್ಬುಲಕ್ಷ್ಮಿ ಅವರು ಅದ್ಭುತವಾದ ಗಾಯಕಿ, ಅವರ ಭಾಷೆ ಬಲು ಸ್ಪಷ್ಟ, ನಿರರ್ಗಳವಾದುದು. ಆದರೆ ರಶ್ಮಿಕಾ ಅವರಿಗೆ ಯಾವುದೇ ಒಂದು ಭಾಷೆಯ ಮೇಲೂ ಸಹ ಸ್ಪಷ್ಟವಾದ ಹಿಡಿತ ಇಲ್ಲ, ಅವರೇ ಖುದ್ದು ಹೇಳಿಕೊಂಡಿರುವಂತೆ ಅವರಿಗೆ ಭಾಷೆಯ ಸಮಸ್ಯೆ ಇದೆ. ಮುಹೂರ್ತ ಕಾರ್ಯಕ್ರಮದಲ್ಲಿಯೂ ಸಹ ಅವರು ತಮಿಳು ಮಾತನಾಡಿದ್ದು ಹಲವರಿಗೆ ಮೂಗು ಮುರಿಯುವಂತಾಗಿತ್ತು. ಅವರ ಭಾಷೆಯಲ್ಲಿ ಸ್ಪಷ್ಟತೆ ಇಲ್ಲದೇ ಇರುವ ಕಾರಣ, ಸುಬ್ಬುಲಕ್ಷ್ಮಿ ಅವರ ಪಾತ್ರಕ್ಕೆ ಅವರು ನ್ಯಾಯ ಒದಗಿಸಬಲ್ಲರಾ ಎಂಬ ಅನುಮಾನ ಕೆಲವರಿಗೆ ಮೂಡಿದೆ.

ಇದನ್ನೂ ಓದಿ:ಬಾಲಿವುಡ್​​ ಜನಪ್ರಿಯ ಟಾಕ್ ಶೋಗೆ ರಶ್ಮಿಕಾ ಮಂದಣ್ಣ ಅತಿಥಿ: ಯಾವುದದು?

ರಶ್ಮಿಕಾ ಅವರ ನಟನಾ ಪ್ರತಿಭೆಯ ಬಗ್ಗೆಯೂ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಸುಬ್ಬುಲಕ್ಷ್ಮಿ ಅವರ ಜೀವನ ಆಧರಿತ ಪಾತ್ರದಲ್ಲಿ ನಟಿಸಲು ನಟನೆಯಲ್ಲಿ ಪ್ರೌಢಿಮೆ ಉಳ್ಳ ನಟಿ ಬೇಕಿತ್ತು, ರಶ್ಮಿಕಾ ಅವರು ಒಳ್ಳೆಯ ನಟಿಯಾದರೂ, ಅವರ ನಟನೆಯ ಕಮರ್ಶಿಯಲ್ ಸಿನಿಮಾಗಳಿಗೆ ಸೂಕ್ತವಾಗಿದೆ ಆದರೆ ಮಹತ್ತರವಾದ ಪಾತ್ರಕ್ಕೆ ಸೂಕ್ತವಲ್ಲ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎಂಎಸ್ ಸುಬ್ಬುಲಕ್ಷ್ಮಿ ಅವರ ಜೀವನ ಆಧರಿತ ಸಿನಿಮಾದ ನಿರ್ದೇಶನವನ್ನು ಗೌತಮ್ ತಿನರೂರಿ ಮಾಡಲಿದ್ದಾರೆ. ಸಿನಿಮಾಕ್ಕೆ ಅಲ್ಲು ಅರವಿಂದ್ ಬಂಡವಾಳ ಹೂಡಿದ್ದಾರೆ. ಜೊತೆಗೆ ಕನ್ನಡಿಗ ರಾಕ್​ಲೈನ್ ವೆಂಕಟೇಶ್ ಸಹ ನಿರ್ಮಾಣ ಮಾಡಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us