AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Anurag Kashyap: ‘ಕಾಂತಾರ’ ಚಿತ್ರದ ಯಶಸ್ಸಿನ ಬಳಿಕ ಆ ಒಂದು ತಪ್ಪು ಮಾಡಬೇಡಿ; ರಿಷಬ್​ ಶೆಟ್ಟಿಗೆ ಸಲಹೆ ನೀಡಿದ ಅನುರಾಗ್ ಕಶ್ಯಪ್

ಬಾಲಿವುಡ್​ ನಿರ್ಮಾಪಕ ಅನುರಾಗ್ ಕಶ್ಯಪ್ ಅವರು ಕಾಂತಾರ ಚಿತ್ರದ ಕುರಿತು ಮಾತನಾಡಿದ್ದು, ನಟ, ನಿರ್ದೇಶಕ ರಿಷಬ್​ ಶೆಟ್ಟಿಗೆ ಸಲಹೆ ನೀಡಿದ್ದಾರೆ.

Anurag Kashyap: 'ಕಾಂತಾರ' ಚಿತ್ರದ ಯಶಸ್ಸಿನ ಬಳಿಕ ಆ ಒಂದು ತಪ್ಪು ಮಾಡಬೇಡಿ; ರಿಷಬ್​ ಶೆಟ್ಟಿಗೆ ಸಲಹೆ ನೀಡಿದ ಅನುರಾಗ್ ಕಶ್ಯಪ್
ರಿಷಬ್​ ಶೆಟ್ಟಿ, ಅನುರಾಗ್ ಕಶ್ಯಪ್
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Dec 10, 2022 | 11:05 PM

Share

ಬಾಲಿವುಡ್​ ನಿರ್ಮಾಪಕ ಅನುರಾಗ್ ಕಶ್ಯಪ್ (Anurag Kashyap)​ ಇತ್ತೀಚೆಗೆ ‘ಗಲಟ್ಟಾ ಪ್ಲಸ್’ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ಚಲನಚಿತ್ರೋದ್ಯಮವನ್ನು ಬಾಧಿಸುತ್ತಿರುವ ಕೆಲ ಸಮಸ್ಯೆಗಳ ಕುರಿತಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ನಾಗರಾಜ ಮಂಜುಳೆ ನಿರ್ದೇಶನದಲ್ಲಿ ತೆರೆಗೆ ಬಂದು ಸೂಪರ್​ ಹಿಟ್​ ಆದ ಚಿತ್ರ ‘ಸೈರಾಟ್’. ಈ ಚಿತ್ರದ ಯಶಸ್ಸು ಬಹುಶಃ ಮರಾಠಿ ಸಿನಿಮಾವನ್ನು ನಾಶಗೊಳಿಸಬಹುದು ಎಂದು ಈ ಹಿಂದೆ ತಾವು ಹೇಳಿದ್ದನ್ನು  ಅನುರಾಗ್ ಕಶ್ಯಪ್​ ನೆನಪಿಸಿಕೊಂಡರು. ಸದ್ಯ ಸ್ಯಾಂಡಲ್​ವುಡ್​ನಲ್ಲಿ ‘ಕಾಂತಾರ’ (Kantara) ಚಿತ್ರ ಹಿಟ್​ ಆಗಿದೆ. ಹಾಗಾಗಿ ನಟ, ನಿರ್ದೇಶಕ ರಿಷಬ್​ ಶೆಟ್ಟಿ ಅವರಿಗೆ ಅನುರಾಗ್ ಕಶ್ಯಪ್ ಸಲಹೆ ನೀಡಿದ್ದಾರೆ.

ದಕ್ಷಿಣ ಭಾರತದ ಹಿಟ್ ಚಿತ್ರಗಳಾದ ‘ಕಾಂತಾರ’, ‘ಪುಷ್ಪ: ದಿ ರೈಸ್’ ಮತ್ತು ‘ಕೆಜಿಎಫ್’ ಚಿತ್ರಗಳ ಯಶಸ್ಸಿನ ಬಗ್ಗೆ ಮಾತನಾಡಿದ ಅನುರಾಗ್ ಕಶ್ಯಪ್, ‘ಒಂದು ಚಿತ್ರದ ಯಶಸ್ಸಿನಿಂದ ನಿರ್ಮಾಪಕರು ಏನು ಕಲಿಯುತ್ತಾರೆ ಎಂಬುವುದು ಬಹಳ ಮುಖ್ಯವಾಗುತ್ತದೆ’ ಎಂದು ಹೇಳಿದ್ದಾರೆ. ಪ್ಯಾನ್ ಇಂಡಿಯಾ ಚಿತ್ರಗಳನ್ನು ಮಾಡುವುದರಿಂದ ಇದೀಗ ಏನಾಗುತ್ತಿದೆ ಎಂದರೆ ಎಲ್ಲರೂ ಪ್ಯಾನ್-ಇಂಡಿಯನ್ ಚಲನಚಿತ್ರವನ್ನು ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವುಗಳಲ್ಲಿ 5% ಅಥವಾ 10% ಯಶಸ್ಸು ಗಳಿಸುತ್ತವೆ.

ಇದನ್ನೂ ಓದಿ: Kantara: ಎಲ್ಲಾ ಭಾಷೆಗಳಲ್ಲಿ ಬರುವ ದೈವದ ಧ್ವನಿ ನನ್ನದೆ: ‘ಕಾಂತಾರ’ ಚಿತ್ರದ ಕ್ಲೈಮ್ಯಾಕ್ಸ್‌ ರಹಸ್ಯ ಬಿಚ್ಚಿಟ್ಟ ರಿಷಬ್​ ಶೆಟ್ಟಿ

‘ಕಾಂತಾರ, ಪುಷ್ಪದಂತಹ ಚಿತ್ರವು ಹೊರಗಿನ ಪ್ರಪಂಚಕ್ಕೆ ನಿಮ್ಮ ಕಥೆಯನ್ನು ಹೇಳಲು ನಿಮಗೆ ಧೈರ್ಯವನ್ನು ನೀಡುತ್ತದೆ. ಆದರೆ ಕೆಜಿಎಫ್​ನಂತಹ ಎಷ್ಟೇ ದೊಡ್ಡ ಯಶಸ್ಸು ಪಡೆಯಲು ನೀವು ಯೋಜನೆಯನ್ನು ಹೊಂದಿ ಪ್ರಯತ್ನಿಸಿದರೆ, ಅದು ಅವನತಿಯತ್ತ ಸಾಗಲು ಪ್ರಾರಂಭಿಸುತ್ತದೆ. ಈ ರೀತಿಯಾಗಿಯೇ ಬಾಲಿವುಡ್​ ತನ್ನನ್ನು ತಾನೇ ನಾಶಪಡಿಸಿಕೊಂಡಿದೆ’ ಎಂದರು.

‘ನಟ ರಿಷಬ್ ಶೆಟ್ಟಿ ಅವರು ತಮ್ಮ ಸೊಗಡಿಗೆ ತಕ್ಕಂತೆ ಚಿತ್ರವನ್ನು ಮಾಡಿ ಗೆದಿದ್ದಾರೆ. ಅದೇ ಒಂದು ವೇಳೆ ಸಿನಿಮಾ ವೈಖರಿಯನ್ನು ಬದಲಾಯಿಸದೆ ಮತ್ತು ಬಾಕ್ಸ್‌ ಆಫೀಸ್‌ನ್ನು ಗಮನದಲ್ಲಿಟ್ಟುಕೊಂಡು ದೊಡ್ಡ ಬಜೆಟ್ ಚಿತ್ರಗಳನ್ನು ಮಾಡಲು ಪ್ರಾರಂಭಿಸಿದರೆ ಅದು ಸರಿಯಲ್ಲ. ಅದು ಅವರಿಗೆ ಸಂಕಷ್ಟ ತಂದೊಡ್ಡಬಹುದು. ಸಿನಿಮಾ ಮಾಡುವ ಅವರ ವಿಧಾನ ಮೊದಲಿನಂತೆಯೇ ಇದ್ದರೆ ಉತ್ತಮ’ ಎಂದು ರಿಷಬ್‌ ಶೆಟ್ಟಿಗೆ ಸಲಹಾ ನೀಡಿದ್ದಾರೆ.

‘ಗಲಟ್ಟಾ ಪ್ಲಸ್’ ಕಾರ್ಯಕ್ರಮದಲ್ಲಿ ಅನುರಾಗ್ ಕಶ್ಯಪ್, ನಿಪುನ್ ಧರ್ಮಾಧಿಕಾರಿ, ಶ್ರೀನಿಧಿ ಶೆಟ್ಟಿ, ಪೂಜಾ ಹೆಗ್ಡೆ, ಕರಣ್ ಜೋಹರ್, ಕಾರ್ತಿ, ದುಲ್ಕರ್ ಸಲ್ಮಾನ್ ಮತ್ತು ವರುಣ್ ಧವನ್ ಮುಂತಾದವರು ಉಪಸ್ಥಿತರಿದ್ದರು.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:59 pm, Sat, 10 December 22

ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಬೆಳಗ್ಗೆಯಿಂದ ಬ್ಯೂಸಿ, ಮೊಗಸಾಲೆಗೆ ಬಂದಾಗಲೇ ವಿಷಯ ಗೊತ್ತಾಗಿದ್ದು: ಸಚಿವೆ
ಬೆಳಗ್ಗೆಯಿಂದ ಬ್ಯೂಸಿ, ಮೊಗಸಾಲೆಗೆ ಬಂದಾಗಲೇ ವಿಷಯ ಗೊತ್ತಾಗಿದ್ದು: ಸಚಿವೆ
ಮತಗಳ್ಳತನ, ಕಾಲ್ತುಳಿತ ಪ್ರಕರಣಗಳನ್ನೂ ಸದನದಲ್ಲಿ ಚರ್ಚಿಸುತ್ತೇವೆ: ಬಿವೈವಿ
ಮತಗಳ್ಳತನ, ಕಾಲ್ತುಳಿತ ಪ್ರಕರಣಗಳನ್ನೂ ಸದನದಲ್ಲಿ ಚರ್ಚಿಸುತ್ತೇವೆ: ಬಿವೈವಿ
ಇವತ್ತು ರಾಯರ ದರ್ಶನ ಮಾಡುವ ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತಿ
ಇವತ್ತು ರಾಯರ ದರ್ಶನ ಮಾಡುವ ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತಿ
ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು
ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು
ಬಿಜೆಪಿ ಸಂಸದರಿಗೆ ಖಾಲಿ ಡಬ್ಬಗಳಂತೆ ಸದ್ದು ಮಾಡೋದು ಮಾತ್ರ ಗೊತ್ತು: ಡಿಕೆಎಸ್
ಬಿಜೆಪಿ ಸಂಸದರಿಗೆ ಖಾಲಿ ಡಬ್ಬಗಳಂತೆ ಸದ್ದು ಮಾಡೋದು ಮಾತ್ರ ಗೊತ್ತು: ಡಿಕೆಎಸ್
ಬಿಹಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿರುದ್ಧ ರಾಹುಲ್ ಜಾಥಾ
ಬಿಹಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿರುದ್ಧ ರಾಹುಲ್ ಜಾಥಾ
ಧರ್ಮಸ್ಥಳ ಪ್ರಕರಣದ ಹಿಂದೆ ಮತಾಂತರ ಮಾಫಿಯಾ, ನಗರ ನಕ್ಸಲರು: ಸಿಟಿ ರವಿ ಆರೋಪ
ಧರ್ಮಸ್ಥಳ ಪ್ರಕರಣದ ಹಿಂದೆ ಮತಾಂತರ ಮಾಫಿಯಾ, ನಗರ ನಕ್ಸಲರು: ಸಿಟಿ ರವಿ ಆರೋಪ