ಕನ್ನಡ ಚಿತ್ರರಂಗದ ಮೇರು ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ (Dwarakish) ಇಂದು ನಿಧನರಾಗಿದ್ದಾರೆ. ಒಂದು ಕಾಲದಲ್ಲಿ ದಕ್ಷಿಣ ಭಾರತದ ಚಿತ್ರರಂಗವನ್ನು ಆಳಿದ ಈ ನಿರ್ದೇಶಕನ ಬದುಕಿನ ಹಿಂದೆ ಅನೇಕ ಕಹಿ ಘಟನೆಗಳು ಇದೆ. ದ್ವಾರಕೀಶ್ ಅವರು ವಿಷ್ಣುವರ್ಧನ ಅವರ ಮೆಚ್ಚಿನ ನಿರ್ದೇಶಕ ಕೂಡ ಆಗಿದ್ದರು. ಅನೇಕ ದೊಡ್ಡ ನಟರ ಜತೆಗೆ ಇವರು ಪರದೆಯನ್ನು ಕೂಡ ಹಂಚಿಕೊಂಡಿದ್ದಾರೆ. ಇದರ ಜತೆಗೆ ಕೆಲವು ಊಹಾಪೋಹಗಳು ಕೂಡ ಸೃಷ್ಟಿಯಾಗಿತ್ತು. ನಟ ದ್ವಾರಕೀಶ್ ಅವರು ಮನೆ ಮಾರಾಟದ್ದಾರೆ ಹಾಗೂ ಎರಡು ಮದುವೆಯಾಗಿದ್ದರು ಎಂಬ ವಿಚಾರ ಸಂಚಲನವನ್ನು ಮೂಡಿಸಿತ್ತು. ಆದರೆ ಹಿಂದೆ ಇರುವ ಸತ್ಯ ಏನು? ಈ ಎಲ್ಲ ಗೊಂದಲಕ್ಕೆ ದ್ವಾರಕೀಶ್ ಅವರು ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡಿದ್ದರು. ದ್ವಾರಕೀಶ್ ಅವರ ವಿಶೇಷ ಸಂದರ್ಶನವನ್ನು ಬಿ. ಗಣಪತಿಯವರು ತಮ್ಮ ಯೂಟ್ಯೂಬ್ ಚಾನಲ್ನಲ್ಲಿ ಮಾಡಿದ್ದರು. ಈ ಸಂದರ್ಶನದಲ್ಲಿ ಅವರು ಮನೆ ಮಾರಾಟದ ಬಗ್ಗೆ ದ್ವಾರಕೀಶ್ ಅವರ ಬಳಿ ಕೇಳಿದ್ದಾರೆ. ಬೆಂಗಳೂರಿನ ಎಚ್ಆರ್ಎಸ್ ಲೇಔಟ್ನಲ್ಲಿರುವ ಮನೆಯನ್ನು ಮಾರಾಟದ ಹಿಂದಿರುವ ಸತ್ಯವನ್ನು ಈ ಸಂದರ್ಶನದಲ್ಲಿ ತಿಳಿಸಿದ್ದಾರೆ. ಬೆಂಗಳೂರಿನ ಎಚ್ಆರ್ಎಸ್ ಲೇಔಟ್ನಲ್ಲಿರುವ ಸೈಟ್ನ್ನು ಮಾಜಿ ಮುಖ್ಯಮಂತ್ರಿ ಎಸ್.ಎಮ್ ಕೃಷ್ಣ ಅವರ ಸರ್ಕಾರ ನೀಡಿತ್ತು. ಅಲ್ಲಿಯೇ ಮನೆ ನಿರ್ಮಾಣ ಮಾಡಲಾಗಿತ್ತು. ಆದರೆ ಅದು ತುಂಬಾ ದೊಡ್ಡದಾಗಿತ್ತು. ನಾವು ಇದ್ದೇದೆ ಮೂರು. ನಮ್ಗೆ ಮೂರು ಜನಕ್ಕೆ ಅಷ್ಟು ದೊಡ್ಡ ಮನೆ ಬೇಕಾಗಿರಲಿಲ್ಲ. ಇದರ ಜತೆಗೆ ಆ ಮನೆ ನಿರ್ಮಾಣಕ್ಕೆ ಬ್ಯಾಂಕ್ ಲೋನ್ ಕೂಡ ಮಾಡಲಾಗಿತ್ತು. ಜತೆಗೆ ಇತರ ಸಾಲಗಳು ಇದ್ದ ಕಾರಣ ನಾನು ಆ ಮನೆಯನ್ನು ಮಾರಾಟ ಮಾಡಬೇಕಿತ್ತು ಎಂದು ಹೇಳಿದ್ದಾರೆ. ನಮಗೆ...
Published On - 12:39 pm, Tue, 16 April 24